Home Blog Page 10

ಸೋಲಿನ ಭಯದಿಂದ GBA ಚುನಾವಣೆ ಮುಂದೂಡುವ ಕಾಂಗ್ರೆಸ್: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ಗ್ರೇಟರ್ ಬೆಂಗಳೂರು (ಜಿಬಿಎ) GBA ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಗೆಲ್ಲುವ ಭರವಸೆ ಇಲ್ಲದ ಕಾರಣ ಪದೇ ಪದೇ ಚುನಾವಣೆಯನ್ನು ಮುಂದಕ್ಕೆ ಹಾಕುವ ನಾಟಕವಾಡುತ್ತಿದೆ ಎಂದು ವಿಧಾನ ಪರಿಷತ್ತಿನ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Naryanaswamy) ಅವರು ಟೀಕಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಬಿಎ ಚುನಾವಣೆಗೆ 2 ತಿಂಗಳು ಕಾಲಾವಕಾಶವನ್ನು ಸುಪ್ರೀಂ ಕೋರ್ಟ್ (Supreme Court) ನೀಡಿದೆ.

ಮೂರು ತಿಂಗಳು ಕಾಲಾವಕಾಶವನ್ನು ಸರ್ಕಾರ ಕೇಳಿತ್ತು. ಆದರೆ ಎರಡು ತಿಂಗಳು ಮಾತ್ರ ನೀಡಿದೆ. ಚುನಾವಣೆಯ ಬಗ್ಗೆ ಸಮೀಕ್ಷೆ ಮಾಡಿಸಿದ್ದಾರೆ. ಆದರೆ ಅವರಿಗೆ ಗೆಲುವಿನ ವರದಿ ಸಿಕ್ಕಿಲ್ಲ. ಆದ್ದರಿಂದ ಹೇಗಾದರೂ ಮಾಡಿ ಚುನಾವಣೆಯನ್ನು ಮುಂದಕ್ಕೆ ಹಾಕಲು ನೋಡಿದ್ದರು ಎಂದು ದೂರಿದರು.
ಈಗಾಗಲೇ ಚುನಾವಣೆ ನಡೆಸಬೇಕು ಎಂದು ಸರ್ಕಾರಕ್ಕೆ ಸೂಚನೆ ಇತ್ತು. ಆದರೂ ಇವರು ಕೋರ್ಟ್ ಮೊರೆ ಹೋಗಿದ್ದರು. ಮತ್ತೆ ಮತ್ತೆ ಮನವಿ ಸಲ್ಲಿಸಿ ಮುಂದಕ್ಕೆ ಹಾಕಲು ನೋಡಿದ್ದರು ಎಂದು ಟೀಕಿಸಿದರು.
ಸೋಲು- ಗೆಲುವು ರಾಜಕೀಯದಲ್ಲಿ ಇದ್ದಿದ್ದೇ. ಒಂದು ಸಾರಿ ನಾವು ಗೆಲ್ಲಬಹುದು. ಇನ್ನೊಂದು ಬಾರಿ ಬೇರೆಯವರು ಗೆಲ್ಲಬಹುದು. ಆದರೆ ಯಾರೂ ವ್ಯವಸ್ಥೆಯನ್ನು ಕೆಡಿಸುವ ಕೆಲಸವನ್ನು ಮಾಡಬಾರದು. ಆದ್ದರಿಂದ ಕೋರ್ಟ್ ಆದೇಶವನ್ನು ಗೌರವಿಸಬೇಕು. ಇಲ್ಲದೇ ಹೋದರೆ ಮತ್ತಷ್ಟು ಸೋಲು ಕಾಂಗ್ರೆಸ್‍ಗೆ ಕಟ್ಟಿಟ್ಟ ಬುತ್ತಿ ಎಂದು ಹೇಳಿದರು.

ಕರ್ನಾಟಕವನ್ನೇ ತೆಗೆದು ಬೆಂಗಳೂರು ಮಾಡಿ…
ರಾಮನಗರವನ್ನು ಬೆಂಗಳೂರು ದಕ್ಷಿಣ ಮಾಡಿದರು. ಕೋಲಾರ ಮತ್ತು ಚಿಕ್ಕಬಳ್ಳಾಪುರವನ್ನೂ ಬೆಂಗಳೂರಿಗೆ ಸೇರಿಸುವ ಮಾತು ನಡೆಯುತ್ತಿದೆ. ಈಗ ತುಮಕೂರನ್ನು ಬೆಂಗಳೂರಿಗೆ ಸೇರಿಸಲು ಸರ್ಕಾರ ಹುನ್ನಾರ ನಡೆಸಿದೆ. ನಾಡಪ್ರಭು ಕೆಂಪೇಗೌಡ ಅವರ ನಿರ್ಮಿಸಿದ ಬೆಂಗಳೂರನ್ನು ಐದು ತುಂಡು ಮಾಡಿದ್ದೀರಿ. ಈ ರೀತಿ ಎಲ್ಲವನ್ನೂ ಬದಲಾಯಿಸುವ ಬದಲು ಇಡೀ ಕರ್ನಾಟಕವನ್ನೇ ತೆಗೆದು ಬೆಂಗಳೂರು ಅಂತ ಮಾಡಿದರೆ ಒಳ್ಳೆಯದು. ಆಗ ಯಾವುದನ್ನೂ ಯಾವುದಕ್ಕೆ ಸೇರಿಸುವ ಪ್ರಮೇಯವೇ ಇರುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಅಖಂಡ ಕರ್ನಾಟಕ ಎಂಬುದು ನಮ್ಮ ಅಸ್ಮಿತೆ. ಅದರಲ್ಲಿ ಜಿಲ್ಲೆಯ ಹೆಸರುಗಳು, ತಾಲೂಕುಗಳು ಸಹಜವಾಗಿ ಇರುತ್ತವೆ. ಅದನ್ನು ಒಪ್ಪಿಕೊಳ್ಳುವುದನ್ನು ಬಿಟ್ಟು ಅದನ್ನು ಇದನ್ನು ಬೆಂಗಳೂರಿಗೆ ಸೇರಿಸುತ್ತೇವೆ ಎಲ್ಲಾ ಯಾಕೆ. ಇದೆಲ್ಲ ಮೂಗಿಗೆ ತುಪ್ಪ ಸವರುವ ಕೆಲಸ ಎಂದು ಕೇಳಿದರು.
ಬೆಂಗಳೂರನ್ನು ವಿಸ್ತಾರವಾಗಿ ಬೆಳೆಸುವ ಬದಲು ತುಮಕೂರು, ಕೋಲಾರ ಮೈಸೂರನ್ನು ಬೆಳೆಸಲು ಮೂಲಸೌಕರ್ಯ ಮತ್ತು ಸೌಲಭ್ಯ ನೀಡಿ. ಆನೇಕಲ್‍ನಲ್ಲಿ ರೈತರ ಫಲವತ್ತಾದ ಜಮೀನನ್ನು ಗೃಹ ಮಂಡಳಿ ಹೆಸರಲ್ಲಿ ಕ್ರಿಕೆಟ್ ಸ್ಟೇಡಿಯಂ ಮಾಡ್ತಾ ಇದ್ದಾರೆ. ಮನೆಗಳನ್ನು ನಿರ್ಮಿಸಲು ರೈತರಿಂದ ಜಮೀನು ಪಡೆದು ಬೇರೆ ಉದ್ದೇಶಕ್ಕೆ ಬಳಸುತ್ತಿದ್ದಾರೆ. ಇದು ಲೂಟಿಗಾಗಿ ಮಾಡುತ್ತಿರುವುದೇ ಹೊರತು ಬೆಂಗಳೂರಿನ ಅಭಿವೃದ್ಧಿಗಾಗಿ ಅಲ್ಲ. ದೂರ ಇರುವ ತುಮಕೂರು ಬೆಳೆಸುವ ಬದಲು ಹತ್ತಿರದ ಪಟ್ಟಣಗಳನ್ನು ಬೆಳೆಸಿ. ಎಲ್ಲಕ್ಕೂ ಬೆಂಗಳೂರು ಹೆಸರು ಕೊಡುವುದು ಹಾಸ್ಯಾಸ್ಪದ ಎಂದು ಗೇಲಿ ಮಾಡಿದರು.

ಸೆಂಟ್ರಲ್ ಕಾಲೇಜಿನ ಜ್ಞಾನ ಜ್ಯೋತಿ ಸಭಾಂಗಣದಲ್ಲಿ  ಎರಡು ದಿನಗಳ ರಾಜ್ಯ ಮಟ್ಟದ ಕಾರ್ಯಾಗಾರ

BENGALURU : ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗದ ವತಿಯಿಂದ ಸೆಂಟ್ರಲ್ ಕಾಲೇಜಿನ ಜ್ಞಾನ ಜ್ಯೋತಿ (JnanaJyothi Sabhangana) ಸಭಾಂಗಣದಲ್ಲಿ  ಎರಡು ದಿನಗಳ ರಾಜ್ಯ ಮಟ್ಟದ ಕಾರ್ಯಾಗಾರ (Workshop) ವನ್ನು ವಿಧಾನ ಪರಿಷತ್ತಿನ ಸದಸ್ಯರಾದ ಪುಟ್ಟಣ್ಣ  (MLC Puttanna) ರವರು ಉದ್ಘಾಟಣೆ ಮಾಡಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ನಿರ್ಮಲ. ಎಂ. ಪ್ರಾಸ್ತಾವಿಕ. ವಿದ್ಯಾವಿಷಯಕ ಪರಿಷತ್ತಿನ ಸದಸ್ಯರಾದ ಡಾ.ಕೃಷ್ಣ ಮೂರ್ತಿ ಜಿ. ಉಪನ್ಯಾಸಕರಾದ ಆರ್.ಕೆ. ನಾಗರಾಜ್  ಉಪಸ್ಥಿತರಿದ್ದರು.

1ನೇ ತರಗತಿ ದಾಖಲಾತಿಗಾಗಿ ವಯೋಮಿತಿ ಸಡಿಲಿಕೆ ಕುರಿತು ವಾರದಲ್ಲಿ ಸೂಕ್ತ ತೀರ್ಮಾನಕ್ಕೆ ಆದೇಶ

ಆರು ಮಂದಿ ಅಪ್ರಾಪ್ತ ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿದ ನ್ಯಾಯಾಲಯ
BENGALURU: ಬರುವ 2026-27 ನೇ ಶೈಕ್ಷಣಿಕ ಸಾಲಿಗೆ ಒಂದನೇ ತರಗತಿಗೆ ದಾಖಲಾಗಲು ವಯೋಮಿತಿ ಸಡಲಿಕೆ ವಿಚಾರವನ್ನು ಮರು ಪರಿಶೀಲಿಸಿ ತಮ್ಮ ಅಭಿಪ್ರಾಯ, ಶಿಫಾರಸ್ಸನ್ನು ಒಂದು ವಾರದೊಳಗೆ ಸಲ್ಲಿಸುವಂತೆ ರಾಜ್ಯ ಹೈಕೋರ್ಟ್ (HighCourt) ಶಾಲಾ ಶಿಕ್ಷಣ (Education Dept.) ಇಲಾಖೆಗೆ ಆದೇಶಿಸಿದೆ.
ವಯೋಮಿತಿ ವಿಚಾರದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ತೊಂದರೆ ಎದುರಿಸುತ್ತಿದ್ದು, ಈ ಸಂಬಂಧ ಒಂದು ವಾರದೊಳಗೆ ಎಲ್ಲಾ ಆಯಾಮಗಳಲ್ಲೂ ಪರಿಶೀಲಿಸಿ ಆದೇಶ ಹೊರಡಿಸುವಂತೆ ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ನೇತೃತ್ವದ ನ್ಯಾಯಪೀಠ ಆದೇಶ ನೀಡಿದೆ.
6 ಮಂದಿ ಅಪ್ರಾಪ್ತ ವಿದ್ಯಾರ್ಥಿಗಳು ಹಾಗೂ ಅವರ ಪರವಾಗಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಅಪ್ರಾಪ್ತರ ಮನವಿಗೆ ಸ್ಪಂದಿಸಿದೆ. ವಯೋಮಿತಿ ನಿಗದಿಪಡಿಸಿ ಶಾಲಾ ಶಿಕ್ಷಣ ಇಲಾಖೆ ಇದೇ ವರ್ಷದ ಮಾರ್ಚ್ 28 ರಂದು ಹೊರಡಿಸಿರುವ ಆದೇಶ ಪ್ರಶ್ನಿಸಿ ಇವರು ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು.
ಅರ್ಜಿದಾರರು 6 ವರ್ಷ ಪೂರ್ಣಗೊಂಡಿಲ್ಲ. ಆದರೆ 2025-26 ನೇ ಸಾಲಿನ ಪೂರ್ವ ಪ್ರಾಥಮಿಕ ಶಿಕ್ಷಣ ಪೂರೈಸಿದ್ದಾರೆ. ಸರ್ಕಾರದ ಆದೇಶದಿಂದ ಸುಮಾರು 4.5 ಲಕ್ಷ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ. 4.5 ಲಕ್ಷ ವಿದ್ಯಾರ್ಥಿಗಳು ಮತ್ತೆ ಯು.ಕೆ.ಜಿ ಅಧ್ಯಯನ ಮಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಹೀಗಾಗಿ ಮುಂದಿನ ಶೈಕ್ಷಣಿಕ ವರ್ಷಕ್ಕೆ ವಯೋಮಿತಿ ಸಡಿಲಿಸಿ ಶಾಲಾ ದಾಖಲಾತಿಗೆ ಅವಕಾಶ ಕಲ್ಪಿಸಬೇಕೆಂದು ನ್ಯಾಯಪೀಠದ ಗಮನ ಸೆಳೆದಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠಕ್ಕೆ ಪ್ರತಿವಾದಿಗಳ ಪರ ವಕೀಲರು, ನ್ಯಾಯಸಮ್ಮತ ಸಮಯ ನೀಡಿದಲ್ಲಿ ಪ್ರತಿವಾದಿಗಳು ಆ ಮನವಿಯನ್ನು ಪರಿಗಣಿಸಿ ಅಗತ್ಯ ಆದೇಶವನ್ನು ಹೊರಡಿಸುವುದಾಗಿ ನ್ಯಾಯಾಲಯಕ್ಕೆ ತಿಳಿಸಿದರು.
2026–27ನೇ ಶೈಕ್ಷಣಿಕ ವರ್ಷದ ಪ್ರಥಮ ತರಗತಿ ಪ್ರವೇಶಕ್ಕಾಗಿ ಕಳೆದ ಶೈಕ್ಷಣಿಕ ವರ್ಷದಲ್ಲಿ ನೀಡಿದ ಮಾದರಿಯಲ್ಲಿ ಕನಿಷ್ಠ ವಯೋಮಿತಿಯಲ್ಲಿ ಒಮ್ಮೆ ಸಡಿಲಿಕೆ ನೀಡಿ 5 ವರ್ಷ 5 ತಿಂಗಳು ವಯಸ್ಸಿನ ಮಕ್ಕಳಿಗೂ ಪ್ರವೇಶ ಅವಕಾಶ ಕಲ್ಪಿಸಬೇಕೆಂದು ನ್ಯಾಯಪೀಠವನ್ನು ಕೋರಿದ್ದರು.
ಕಳೆದ ಹಲವಾರು ವರ್ಷಗಳಿಂದ ಶಾಲೆಗಳು ಅನುಸರಿಸುತ್ತಿದ್ದ ಪ್ರವೇಶ ಪದ್ಧತಿ ಮತ್ತು ಅರ್ಹತಾ ಮಾನದಂಡಗಳ ಆಧಾರದ ಮೇಲೆ ಶಾಲಾ ಶಿಕ್ಷಣ ವ್ಯವಸ್ಥೆಗೆ ಸೇರ್ಪಡೆಯಾಗಿದ್ದಾರೆ. ಪೋಷಕರು ತಮ್ಮ ಮಕ್ಕಳನ್ನು ಉತ್ತಮ ನಂಬಿಕೆಯಿಂದ ಹಾಗೂ 2026–27ನೇ ಶೈಕ್ಷಣಿಕ ವರ್ಷದಲ್ಲಿ ಅವರು ಪ್ರಥಮ ತರಗತಿಗೆ ಮುಂದುವರಿಯುತ್ತಾರೆ ಎಂಬ ನಿರೀಕ್ಷೆಯೊಂದಿಗೆ ಪೂರ್ವ ಪ್ರಾಥಮಿಕ ಶಾಲೆಗೆ ದಾಖಲಿಸಿದ್ದರು. ಪ್ರೀ-ಸ್ಕೂಲ್ ಶಿಕ್ಷಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ಮಾನಸಿಕವಾಗಿ ಪ್ರಥಮ ತರಗತಿಗೆ ಸಿದ್ಧರಾಗಿರುವ ಅನೇಕ ಮಕ್ಕಳು ಈಗ ಒಂದು ಸಂಪೂರ್ಣ ಶೈಕ್ಷಣಿಕ ವರ್ಷ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ ಎಂದು ಅರ್ಜಿದಾರರು ನ್ಯಾಯಪೀಠದ ಗಮನ ಸೆಳದಿದ್ದರು.

ಹೈಕೋರ್ಟ್ ಆದೇಶದಂತೆ ನಮ್ಮ ಮಕ್ಕಳ ಮುಂದಿನ ವರ್ಷದ ಶಾಲಾ ದಾಖಲಾತಿಗೆ ಧಕ್ಕೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅಪ್ರಾಪ್ತ ವಿದ್ಯಾರ್ಥಿಗಳ ಪಾಲಕರು ಮುಖ್ಯಕಾರ್ಯದರ್ಶಿ, ಪ್ರಾಥಮಿಕ ಶಾಲಾ ಶಿಕ್ಷಣ ಇಲಾಖೆಯ ಉನ್ನತಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಈ ಕುರಿತು ಪತ್ರ ಬರೆದಿರುವ ಪೋಷಕರು, ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಸರ್ಕಾರವು 5 ವರ್ಷ 5 ತಿಂಗಳು ವಯೋಮಿತಿವರೆಗೆ ಸಡಿಲಿಕೆ ನೀಡಿದ್ದನ್ನು ಪರಿಗಣಿಸಿ, 2026–27ನೇ ಶೈಕ್ಷಣಿಕ ವರ್ಷದ ಪ್ರಥಮ ತರಗತಿ ಪ್ರವೇಶಕ್ಕೂ ಇದೇ ರೀತಿಯ ಒಮ್ಮೆಯ ಸಡಿಲಿಕೆಯನ್ನು ನೀಡುವಂತೆ ವಿನಮ್ರವಾಗಿ ಮನವಿ ಮಾಡುತ್ತೇವೆ. ಇದರಿಂದ ಮಕ್ಕಳ ಶೈಕ್ಷಣಿಕ ನಿರಂತರತೆಯನ್ನು ಕಾಪಾಡುತ್ತದೆ. ಅನಗತ್ಯ ಭಾವನಾತ್ಮಕ ಮತ್ತು ಶೈಕ್ಷಣಿಕ ವ್ಯತ್ಯಯವನ್ನು ತಪ್ಪಿಸುತ್ತದೆ. ಪೋಷಕರು ಹಾಗೂ ಶಾಲೆಗಳಿಗೆ ಸ್ಪಷ್ಟತೆ ಮತ್ತು ನೆಮ್ಮದಿಯನ್ನು ಒದಗಿಸುತ್ತದೆ. ಭವಿಷ್ಯದಲ್ಲಿ ಪರಿಷ್ಕೃತ ನಿಯಮಗಳ ಸುಗಮ ಜಾರಿಗೆ ಸಹಕಾರಿಯಾಗುತ್ತದೆ ಎಂದು ಕೋರಿದ್ದಾರೆ.

ನಿತ್ಯ ಪಂಚಾಂಗ 21.05.2026 THURSDAY.ಗುರುವಾರ

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 21.05.2026 THURSDAY.ಗುರುವಾರ*ಸಂವತ್ಸರ: ಪರಾಭವ
SAMVATSARA : PARABHAVA.
ಆಯಣ:ಉತ್ತರಾಯಣ
AYANA: UTTARAYANA.
ಋತು:ಗ್ರೀಷ್ಮ
RUTHU: GREESHMA.
ಮಾಸ: ಅಧಿಕ ಜೇಷ್ಠ
MAASA: ADHIKA
JYESHTHA.
ಪಕ್ಷ:ಶುಕ್ಲ
PAKSHA: SHUKLA.
ತಿಥಿ: ಪಂಚಮಿ
TITHI: PANCHAMI.
ಶ್ರದ್ದಾತಿಥಿ: ಪಂಚಮಿ-ಷಷ್ಟಿ
SHRADDHA TITHI: PANCHAMI – SHASHTI.
ವಾಸರ: ಬೃವಾಸ್ಪತಿವಾಸರ
VAASARA: BRUVASPATIVASARA
ನಕ್ಷತ್ರ: ಪುನರ್ವಸು
NAKSHATRA: PUNARVASU.
ಯೋಗ: ಗಂಡ
YOGA: GANDA.
ಕರಣ:ಬಾಲವ
KARANA: BALAVA.
ಸೂರ್ಯೋದಯ (Sunrise): 05:54
ಸೂರ್ಯಸ್ತ (Sunset): 06:53
ರಾಹುಕಾಲ (RAHU KAALA) : 01:30PM To 03:00PM.
ದಿನವಿಶೇಷ SPECIAL EVENT
21.05.2026.
ಗುರುಪುಷ್ಯಾಮೃತ ಯೋಗ .

ಬದುಕಿನ ಸಾರ್ಥಕತೆ ಸಾರುವ “ಆತ್ಮೋದ್ಧಾರಕ್ಕೆ ಅಮೃತ ಮಾರ್ಗ ಭಾಗವತ” ಕೃತಿ ಲೋಕಾರ್ಪಣೆ

Bengaluru : ಶ್ರೀಮದ್ಭಾಗವತದ ತತ್ತ್ವಗಳ ಮೂಲಕ ಭಕ್ತಿ, ಜ್ಞಾನ ಹಾಗೂ ಜೀವನಮೌಲ್ಯಗಳನ್ನು ಸರಳ ಕನ್ನಡದಲ್ಲಿ ಪರಿಚಯಿಸುವ ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ (Gururaj PoshettiHally) ಅವರ “ಆತ್ಮೋದ್ಧಾರಕ್ಕೆ ಅಮೃತ ಮಾರ್ಗ ಭಾಗವತ” ನೂತನ ಕೃತಿ (Souvenir) ಯನ್ನು ಎಂ. ಜೆ. ಚಂದ್ರಶೇಖರ್, ನಿವೃತ್ತ ದಾವಣಗೆರೆ ಕಾಟನ್ ಮಿಲ್ಸ್ ಮ್ಯಾನೇಜರ್ ಹಾಗೂ ಜಯಲಕ್ಷ್ಮಿ ಚಂದ್ರಶೇಖರ್, ಅಧ್ಯಕ್ಷರು, ರಾಜರಾಜೇಶ್ವರಿ ಸಂಘ, ದಾವಣಗೆರೆ ಅವರು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪರಾಭವ ಸಂವತ್ಸರದ ಅಧಿಕ ಜ್ಯೇಷ್ಠ – ಪುರುಷೋತ್ತಮ ಮಾಸದಲ್ಲಿ ಭಾಗವತದಂತಹ ಆಧ್ಯಾತ್ಮಿಕ ಗ್ರಂಥಗಳನ್ನು “ಗ್ರಂಥ ತಾಂಬೂಲ” ರೂಪದಲ್ಲಿ ವಿತರಿಸುವುದು ಪರಮ ಪುಣ್ಯಕರ ಕಾರ್ಯವೆಂದು ಪರಿಗಣಿಸಲ್ಪಟ್ಟಿದೆ ಎಂದು ಹೇಳಿದರು. “ಜ್ಞಾನ ದಾನವೇ ಶ್ರೇಷ್ಠ ದಾನ” ಎಂಬ ಶಾಶ್ವತ ಸಂದೇಶವನ್ನು ಈ ಕೃತಿ ಮತ್ತಷ್ಟು ಬಲಪಡಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾದ ಡಾ. ಎಂ. ಸಿ. ಶಶಿಕಾಂತ್, ಅಧ್ಯಕ್ಷರು, ತಾಲೂಕು ಬ್ರಾಹ್ಮಣ ಸಮಾಜ, ದಾವಣಗೆರೆ ಅವರು, ಭಾಗವತದ ತತ್ವಗಳು ಇಂದಿನ ಜೀವನಕ್ಕೆ ದಾರಿದೀಪವಾಗಿದ್ದು, ಆಧ್ಯಾತ್ಮಿಕ ಚಿಂತನೆಗೆ ಹೊಸ ಆಯಾಮ ನೀಡುತ್ತವೆ ಎಂದರು.
ಕೃತಿಗೆ ಬೆನ್ನುಡಿ ಬರೆದಿರುವ ಡಾ. ರೂಪ ಶ್ರೀ ಶಶಿಕಾಂತ್, ಕವಯತ್ರಿ ಹಾಗೂ ದಂತ ವೈದ್ಯರು, ಕೃತಿ ಪರಿಚಯ ಮಾಡಿ ಮಾತನಾಡುತ್ತ ಈ ಕೃತಿ ಭಕ್ತಿ, ಸಂಸ್ಕಾರ ಮತ್ತು ಜೀವನಮೌಲ್ಯಗಳನ್ನು ಮನಮುಟ್ಟುವ ಶೈಲಿಯಲ್ಲಿ ಪರಿಚಯಿಸುತ್ತಿದ್ದು, ಓದುಗರಲ್ಲಿ ಆಧ್ಯಾತ್ಮಿಕ ಚಿಂತನೆಗೆ ಪ್ರೇರಣೆ ನೀಡುತ್ತದೆ, ಶ್ರೀಮದ್ಭಾಗವತದ ಆಧ್ಯಾತ್ಮಿಕ ಸಾರವನ್ನು ಜೀವನಸ್ಪರ್ಶಿಯಾಗಿ ನಿರೂಪಿಸಿರುವ ಲೇಖಕರು, ಭಕ್ತಿ ಕೇವಲ ಆಚರಣೆಗಷ್ಟೇ ಸೀಮಿತವಲ್ಲ; ಅದು ಬದುಕನ್ನು ಪರಿವರ್ತಿಸುವ ಆಂತರಿಕ ಶಕ್ತಿಯಾಗಿದೆ ಎಂಬುದನ್ನು ವಿವಿಧ ಲೇಖನಗಳ ಮೂಲಕ ಪರಿಣಾಮಕಾರಿಯಾಗಿ ಮನದಟ್ಟುಗೊಳಿಸಿದ್ದಾರೆ ಎಂದು ತಿಳಿಸಿದರು.

 

ನಿತ್ಯ ಪಂಚಾಂಗ 19.05.2026 ಮಂಗಳವಾರ TUESDAY

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 19.05.2026 ಮಂಗಳವಾರ TUESDAY.
ಸಂವತ್ಸರ: ಪರಾಭವ.
SAMVATSARA : PARABHAVA.
ಆಯಣ: ಉತ್ತರಾಯಣ.
AYANA: UTTARAYANA.
ಋತು: ಗ್ರೀಷ್ಮ.
RUTHU: GREESHMA.
ಮಾಸ: ಅಧಿಕ ಜ್ಯೇಷ್ಠ.
MAASA: ADHIKA JYESHTHA.
ಪಕ್ಷ: ಶುಕ್ಲ.
PAKSHA: SHUKLA.
ತಿಥಿ: ತ್ರಿತೀಯ
TITHI: TRITIYA.
ಶ್ರಾದ್ಧ ತಿಥಿ: ತ್ರಿತೀಯ.
SHRADDHA TITHI: TRITIYA.
ವಾಸರ: ಬೌಮವಾಸರ.
VAASARA: BOWMAVAASARA.
ನಕ್ಷತ್ರ: ಮೃಗಶಿರ.
NAKSHATRA: MRUGASHIRA.
ಯೋಗ: ದೃತಿ .
YOGA: DRUTI.
ಕರಣ: ತೈತಿಲ .
KARANA: TAITILA.
ಸೂರ್ಯೋದಯ (Sunrise): 05:55
ಸೂರ್ಯಾಸ್ತ (Sunset): 06:52
ರಾಹು ಕಾಲ (RAHU KAALA) : 03:00 PM To 04:30 PM.

ಜನಮುಖಿ ಸಾಹಿತ್ಯ – ರಾಜ್ಯಮಟ್ಟದ ಕಾರ್ಯಾಗಾರ

‘ಜನಮುಖಿ ಸಾಹಿತ್ಯ’ (Janamukhi Sahithya) ಕುರಿತಂತೆ 200 ಯುವ ಬರಹಗಾರರಿಗೆ ರಾಜ್ಯಮಟ್ಟದ (Workshop) ಕಾರ್ಯಾಗಾರವನ್ನು ‘ಕರ್ನಾಟಕ ಸಾಹಿತ್ಯ ಅಕಾಡೆಮಿ’ (Karnataka Sahithya Academy) ಮತ್ತು ‘ಸೌಹಾರ್ದ ಕರ್ನಾಟಕ’ (Souharda Karnataka) ಜಂಟಿಯಾಗಿ ಮೇ 30-31, 2026 ರಂದು ಆಯೋಜಿಸಿವೆ. ಬೆಂಗಳೂರಿನ ಕಬ್ಬನ್ ಪಾರ್ಕಿನಲ್ಲಿರುವ ಕರ್ನಾಟಕ ಸರಕಾರ ಸಚಿವಾಲಯ ಕ್ಲಬ್‌ನ ‘ಚನ್ನಬಸವಪ್ಪ ಸಭಾಂಗಣ’ದಲ್ಲಿ ನಡೆಯಲಿದೆ.
ಈ ಕಾರ್ಯಾಗಾರದಲ್ಲಿ ನಮ್ಮ ನಾಡಿನ ಹಿರಿಯ ಸಾಹಿತಿಗಳು ಪಾಲ್ಗೊಂಡು ವಿಚಾರ ಮಂಡಿಸಿ ಯುವ ಬರಹಗಾರರೊಂದಿಗೆ ಸಂವಾದ ನಡೆಸಲಿದ್ದಾರೆ. ಭಾಗವಹಿಸುವ ಯುವಬರಹಗಾರರಿಗೆ ಪ್ರಶಂಸಾ ಪತ್ರ, ಲೇಖನ ಸಾಮಾಗ್ರಿ, ಊಟದ ವ್ಯವಸ್ಥೆ ಹಾಗೂ ಅಗತ್ಯ ಇರುವವರಿಗೆ ವಸತಿ ವ್ಯವಸ್ಥೆಯನ್ನು ನೀಡಲಾಗುವುದು.
ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಯುವ ಬರಹಗಾರರು 100 ರೂ.ಗಳ ಪ್ರತಿನಿಧಿ ಶುಲ್ಕವನ್ನು ಮೇ 25, 2026 ರೊಳಗೆ ಪಾವತಿಸಿ ನೊಂದಾವಣೆ ಮಾಡಿಕೊಳ್ಳಲು ಈ ಮೂಲಕ ಕೋರಲಾಗಿದೆ. ಯುವ ಬರಹಗಾರರು 9449505789, 9632329955 ಮೊಬೈಲ್ ನಂಬರ್‌ಗಳನ್ನು ಸಂಪರ್ಕಿಸಿ ನೋಂದಾವಣೆ ಮಾಡಿಕೊಳ್ಳಬಹುದಾಗಿದೆ.

ಒಂದು ದೇಶ ಒಂದೇ ಚುನಾವಣೆಗೆ ಬಿಜೆಪಿ ವತಿಯಿಂದ ಮನವಿ

ಬೆಂಗಳೂರು: ಲೋಕಸಭಾ ಕಾರ್ಯಾಲಯದ ಜಂಟಿ ಸಂಸದೀಯ ಸಮಿತಿಯು ಇಂದು ನಗರದ ತಾಜ್ ವೆಸ್ಟ್ ಎಂಡ್ ಗೆ ಭೇಟಿ ನೀಡಿತ್ತು. ಒಂದು ದೇಶ ಒಂದೇ ಚುನಾವಣೆ ಕುರಿತ ಸಾಂವಿಧಾನಿಕ ತಿದ್ದುಪಡಿ ವಿಚಾರದಲ್ಲಿ ರಾಜಕೀಯ ಪಕ್ಷಗಳ ಜೊತೆ ಸಮಿತಿಯು ಚರ್ಚೆ ನಡೆಸಿತು. ‘ಒಂದು ದೇಶ ಒಂದೇ ಚುನಾವಣೆ’ ಜಾರಿಗೆ ತರುವಂತೆ ಬಿಜೆಪಿ ವತಿಯಿಂದ ಮನವಿ ಸಲ್ಲಿಸಲಾಯಿತು.

ಈ ಕುರಿತ ಚರ್ಚೆಯಲ್ಲಿ ರಾಜ್ಯ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್, ಉಪ ನಾಯಕ ಅರವಿಂದ ಬೆಲ್ಲದ, ಮಾಜಿ ಡಿಸಿಎಂ ಮತ್ತು ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ್, ವಿಧಾನಪರಿಷತ್ ಸದಸ್ಯ ಗೋಪಿನಾಥ್ ರೆಡ್ಡಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು

ಮುಂಬೈನಲ್ಲಿ ಆಧ್ಯಾತ್ಮಿಕ ಕವಚ ಲಭಿಸಲು ‘ಶ್ರೀ ರಾಜಮಾತಂಗಿ ಮಹಾಯಜ್ಞ’ ಸಂಪನ್ನ!

ಮುಂಬೈ: ಪ್ರಸ್ತುತ ಜಾಗತಿಕ ಅಶಾಂತಿ ಮತ್ತು ಯುದ್ಧದ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಭಾರತಕ್ಕೆ ನಾಲ್ಕೂ ದಿಕ್ಕುಗಳಿಂದ ಅಭೇದ್ಯ ಆಧ್ಯಾತ್ಮಿಕ ರಕ್ಷಣಾ ಕವಚ ಲಭಿಸಬೇಕೆಂಬ ಮುಖ್ಯ ಉದ್ದೇಶದಿಂದ ಮುಂಬೈನಲ್ಲಿ (Mumbai) ‘ಶ್ರೀ ರಾಜಮಾತಂಗಿ ಮಹಾಯಜ್ಞ’ (SriRajamathangi Mahayajna) ಅತ್ಯಂತ ಚೈತನ್ಯಮಯ ವಾತಾವರಣದಲ್ಲಿ ಸಂಪನ್ನಗೊಂಡಿತು. ಸನಾತನ ಸಂಸ್ಥೆಯ ವತಿಯಿಂದ ಪ್ರಭಾದೇವಿ, ಮುಂಬೈನ ನರ್ದುಲ್ಲಾ ಟ್ಯಾಂಕ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಈ ಮಹಾಯಜ್ಞದಲ್ಲಿ (Mahayajna) 7000 ಕ್ಕೂ ಹೆಚ್ಚು ಭಕ್ತರು ಭಾಗವಹಿಸಿದ್ದರು. ರಾಷ್ಟ್ರರಕ್ಷಣೆ, ದೇಶದ ಸರ್ವಾಂಗೀಣ ಪ್ರಗತಿ ಮತ್ತು  (RAMARAJYA)‘ರಾಮರಾಜ್ಯ’ದ ಸಂಕಲ್ಪವನ್ನು ಪ್ರತ್ಯಕ್ಷವಾಗಿ ತರುವುದು ಈ ಆಯೋಜನೆಯ ಮುಖ್ಯ ಸಂಕಲ್ಪವಾಗಿತ್ತು.
     ಈ ಸಂದರ್ಭದಲ್ಲಿ ಶಾಸಕರಾದ ಶ್ರೀ. ರಮೇಶ್ ಮ್ಹಾತ್ರೆ, ಶಾಸಕರಾದ ಶ್ರೀ. ಜ್ಞಾನೇಶ್ವರ್ ಮ್ಹಾತ್ರೆ, ಶಾಸಕಿ ಡಾ. ಮನೀಷಾ ಕಾಯಂದೆ, ಶ್ರೀ. ಸಿದ್ಧಿವಿನಾಯಕ ಮುಂಬೈ ಮಂದಿರದ ಕೋಶಾಧ್ಯಕ್ಷರಾದ ಶ್ರೀ. ಆಚಾರ್ಯ ತ್ರಿಪಾಠಿ, ಸ್ವಾತಂತ್ರ್ಯವೀರ ಸ್ಮಾರಕದ ಅಧ್ಯಕ್ಷರಾದ ಶ್ರೀ. ರಣಜಿತ್ ಸಾವರ್ಕರ್, ಪೀತಾಂಬರಿ ಉದ್ಯಮ ಸಮೂಹದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ. ರವೀಂದ್ರ ಪ್ರಭುದೇಸಾಯಿ ಅವರೂ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಮತ್ತು ಸಂತರು ಉಪಸ್ಥಿತರಿದ್ದರು. ಈ ಮಹಾಯಜ್ಞದ ನೇರ ಪ್ರಸಾರವನ್ನು ಸನಾತನ ಸಂಸ್ಥೆಯ ಯೂಟ್ಯೂಬ್ ವಾಹಿನಿಯ ಮೂಲಕ ಜಗತ್ತಿನಾದ್ಯಂತ ವೀಕ್ಷಿಸಲು ಅನುಕೂಲ ಮಾಡಿಕೊಡಲಾಗಿತ್ತು. ಇದರ ಲಾಭವನ್ನು ಭಾರತದ ಅನೇಕ ರಾಜ್ಯಗಳು ಸೇರಿದಂತೆ ಅಮೆರಿಕ, ಕೆನಡಾ, ಜಪಾನ್, ಜರ್ಮನಿ, ಚೀನಾ, ಅರ್ಜೆಂಟೀನಾ, ಪೋಲೆಂಡ್, ಥೈಲ್ಯಾಂಡ್, ಬ್ರಜಿಲ್ ಮುಂತಾದ 40 ದೇಶಗಳ ಸಾವಿರಾರು ಭಕ್ತರು ಪಡೆದುಕೊಂಡರು.
ಸನಾತನ ಸಂಸ್ಥೆಯ ವಕ್ತಾರರಾದ ಶ್ರೀ. ಅಭಯ್ ವರ್ತಕ್ ಅವರು ಮಾತನಾಡಿ, “ಇಂದು ದೇಶವು ನಾಲ್ಕೂ ದಿಕ್ಕುಗಳಿಂದ ವಿವಿಧ ಸವಾಲುಗಳಿಂದ ಸುತ್ತುವರಿದಿದ್ದು, ಭಾರತದ ರಕ್ಷಣೆಗಾಗಿ ಕೇವಲ ಭೌತಿಕ ಸಾಮರ್ಥ್ಯ ಸಾಲದು, ಇದರ ಜೊತೆಗೆ ಆಧ್ಯಾತ್ಮಿಕ ಬಲವೂ ಇರಬೇಕು. ಆದಿಶಕ್ತಿಯ ‘ದಶಮಹಾವಿದ್ಯಾ’ಗಳಲ್ಲಿ ಅತ್ಯಂತ ಶಕ್ತಿಶಾಲಿ ಎಂದು ನಂಬಲಾದ ಶ್ರೀ ರಾಜಮಾತಂಗಿ ದೇವಿಯ ಈ ಮಹಾಯಜ್ಞವು ಭಾರತಕ್ಕೆ ಒಂದು ಅಭೇದ್ಯ ಆಧ್ಯಾತ್ಮಿಕ ಕವಚವನ್ನು ಪ್ರದಾನ ಮಾಡುತ್ತದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ್ ಆಠವಲೆ ಅವರು ಯಾವ ಮುಂಬಾಪುರಿಯಿಂದ (ಮುಂಬೈನಿಂದ) ಧರ್ಮಕಾರ್ಯದ ಶ್ರೀಗಣೇಶ (ಪ್ರಾರಂಭ) ಮಾಡಿದ್ದರೋ, ಅದೇ ಭೂಮಿಯಿಂದ ರಾಷ್ಟ್ರನಿರ್ಮಾಣದ ಈ ಒಂದು ಐತಿಹಾಸಿಕ ಹೆಜ್ಜೆ ಇಡಲಾಗಿದೆ,” ಎಂದರು.
     ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ್ ಆಠವಲೆ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ್ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡ್ಗೀಳ್ ಅವರು ಮುಖ್ಯ ಯಜಮಾನರಾಗಿ, ನೂರಾರು ಸಹ-ಯಜಮಾನರ ಜೊತೆಗೂಡಿ ಈ ಶಕ್ತಿಶಾಲಿ ವೈದಿಕ ಅನುಷ್ಠಾನವನ್ನು ನೆರವೇರಿಸಿದರು. ಶಂಖನಾದ ಮತ್ತು ರಾಷ್ಟ್ರಕಲ್ಯಾಣದ ಮಹಾಸಂಕಲ್ಪದೊಂದಿಗೆ ಯಜ್ಞಕ್ಕೆ ಚಾಲನೆ ನೀಡಲಾಯಿತು. ಶ್ರೀಮಹಾಲಕ್ಷ್ಮಿ ಅಷ್ಟೋತ್ತರ ನಾಮಾವಳಿಯ ಉಚ್ಚಾರಣೆಯೊಂದಿಗೆ ಕುಂಕುಮಾರ್ಚನೆ ಮತ್ತು ಶ್ರೀ ರಾಜಮಾತಂಗಿ ದೇವಿಯ ಮೂಲಮಂತ್ರಗಳೊಂದಿಗೆ ಯಜ್ಞಕುಂಡದಲ್ಲಿ ಆಹುತಿಗಳನ್ನು ಸಮರ್ಪಿಸಲಾಯಿತು. ‘ಮಹಿಷಾಸುರಮರ್ದಿನಿ ಸ್ತೋತ್ರದ’ ಸಾಮೂಹಿಕ ಪಾಠದೊಂದಿಗೆ ವಿಧಿಕ್ರಿಯೆಗಳು ಮುಕ್ತಾಯಗೊಂಡವು. ಈ ಯಜ್ಞದ ಪೌರೋಹಿತ್ಯವನ್ನು ಇರೋಡ್, ತಮಿಳುನಾಡಿನ ಶಿವಾಗಮ ವಿದ್ಯಾನಿಧಿ ಆಗಮಾಚಾರ್ಯ ಶ್ರೀ. ಅರುಣ್‌ಕುಮಾರ್ ಗುರುಮೂರ್ತಿ ಅವರು ನೆರವೇರಿಸಿದರು, ಹಾಗೂ ಶಿವಾಚಾರ್ಯ ಶ್ರೀ ಗುರುಮೂರ್ತಿ ಅವರು ಯಜ್ಞದ ಮುಖ್ಯ ಆಚಾರ್ಯರಾಗಿದ್ದರು.
   ಪ್ರಸ್ತುತ ಸೋಮನಾಥ ಜ್ಯೋತಿರ್ಲಿಂಗ ಮಂದಿರದ ಪುನರ್ನಿರ್ಮಾಣಕ್ಕೆ 75 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ದೇಶದಾದ್ಯಂತ ‘ಸೋಮನಾಥ ಸ್ವಾಭಿಮಾನ ಪರ್ವ’ವನ್ನು ಆಚರಿಸಲಾಗುತ್ತಿದೆ. ಈ ಐತಿಹಾಸಿಕ ಪರ್ವದ ಔಚಿತ್ಯವನ್ನು ಪಡೆದು 1 ಸಾವಿರ ವರ್ಷಗಳ ಹಿಂದೆ ಪರಕೀಯ ಆಕ್ರಮಣಕಾರ ಮಹಮ್ಮದ್ ಗಜನಿಯಿಂದ ಭಗ್ನಗೊಂಡ, ಸಾಕ್ಷಾತ್ ಭಗವಾನ್ ಚಂದ್ರದೇವರಿಂದ ಸ್ಥಾಪಿಸಲ್ಪಟ್ಟ ಸೋರಟಿ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶದ ನೇರ ದರ್ಶನ ಪಡೆಯುವ ಅಭೂತಪೂರ್ವ ಸುವರ್ಣ ಅವಕಾಶವನ್ನು ಈ ಯಜ್ಞಸ್ಥಳದಲ್ಲಿ ಭಕ್ತರಿಗೆ ಕಲ್ಪಿಸಲಾಗಿತ್ತು; ಇದರ ಲಾಭವನ್ನು ಸಾವಿರಾರು ಭಕ್ತರು ಅತ್ಯಂತ ಭಾವಪೂರ್ಣವಾಗಿ ಪಡೆದುಕೊಂಡರು. ಈ ಆಧ್ಯಾತ್ಮಿಕ ಸಡಗರದ ಜೊತೆಗೆ ಯಜ್ಞಸ್ಥಳದಲ್ಲಿ ಸನಾತನ ನಿರ್ಮಿತ ಆಧ್ಯಾತ್ಮ, ರಾಷ್ಟ್ರರಕ್ಷಣೆ, ಆಯುರ್ವೇದ ಮತ್ತು ಧರ್ಮಶಾಸ್ತ್ರ ವಿಷಯಗಳ ಕುರಿತಾದ ಅಮೂಲ್ಯ ಗ್ರಂಥ ಹಾಗೂ ಫಲಕ ಪ್ರದರ್ಶನಕ್ಕೆ ಮುಂಬೈಕರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಯಿತು.
ಈ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು, ಸಂತ-ಮಹಂತರು, ಹಿಂದುತ್ವನಿಷ್ಠರು ಮತ್ತು ಮಂದಿರದ ಟ್ರಸ್ಟಿಗಳು ಸೇರಿದಂತೆ ಸಾವಿರಾರು ಭಕ್ತರು ಭಾಗವಹಿಸಿದ್ದರು. ಎಲ್ಲರೂ ಒಮ್ಮತದಿಂದ ಭಾರತದ ಸರ್ವಾಂಗೀಣ ವಿಕಾಸ ಮತ್ತು ಶತ್ರುಗಳ ನಾಶಕ್ಕಾಗಿ ಸಾಮೂಹಿಕ ಪ್ರಾರ್ಥನೆ ಮಾಡಿದರು.