‘ಜನಮುಖಿ ಸಾಹಿತ್ಯ’ (Janamukhi Sahithya) ಕುರಿತಂತೆ 200 ಯುವ ಬರಹಗಾರರಿಗೆ ರಾಜ್ಯಮಟ್ಟದ (Workshop) ಕಾರ್ಯಾಗಾರವನ್ನು ‘ಕರ್ನಾಟಕ ಸಾಹಿತ್ಯ ಅಕಾಡೆಮಿ’ (Karnataka Sahithya Academy) ಮತ್ತು ‘ಸೌಹಾರ್ದ ಕರ್ನಾಟಕ’ (Souharda Karnataka) ಜಂಟಿಯಾಗಿ ಮೇ 30-31, 2026 ರಂದು ಆಯೋಜಿಸಿವೆ. ಬೆಂಗಳೂರಿನ ಕಬ್ಬನ್ ಪಾರ್ಕಿನಲ್ಲಿರುವ ಕರ್ನಾಟಕ ಸರಕಾರ ಸಚಿವಾಲಯ ಕ್ಲಬ್ನ ‘ಚನ್ನಬಸವಪ್ಪ ಸಭಾಂಗಣ’ದಲ್ಲಿ ನಡೆಯಲಿದೆ.
ಈ ಕಾರ್ಯಾಗಾರದಲ್ಲಿ ನಮ್ಮ ನಾಡಿನ ಹಿರಿಯ ಸಾಹಿತಿಗಳು ಪಾಲ್ಗೊಂಡು ವಿಚಾರ ಮಂಡಿಸಿ ಯುವ ಬರಹಗಾರರೊಂದಿಗೆ ಸಂವಾದ ನಡೆಸಲಿದ್ದಾರೆ. ಭಾಗವಹಿಸುವ ಯುವಬರಹಗಾರರಿಗೆ ಪ್ರಶಂಸಾ ಪತ್ರ, ಲೇಖನ ಸಾಮಾಗ್ರಿ, ಊಟದ ವ್ಯವಸ್ಥೆ ಹಾಗೂ ಅಗತ್ಯ ಇರುವವರಿಗೆ ವಸತಿ ವ್ಯವಸ್ಥೆಯನ್ನು ನೀಡಲಾಗುವುದು.
ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಯುವ ಬರಹಗಾರರು 100 ರೂ.ಗಳ ಪ್ರತಿನಿಧಿ ಶುಲ್ಕವನ್ನು ಮೇ 25, 2026 ರೊಳಗೆ ಪಾವತಿಸಿ ನೊಂದಾವಣೆ ಮಾಡಿಕೊಳ್ಳಲು ಈ ಮೂಲಕ ಕೋರಲಾಗಿದೆ. ಯುವ ಬರಹಗಾರರು 9449505789, 9632329955 ಮೊಬೈಲ್ ನಂಬರ್ಗಳನ್ನು ಸಂಪರ್ಕಿಸಿ ನೋಂದಾವಣೆ ಮಾಡಿಕೊಳ್ಳಬಹುದಾಗಿದೆ.

