ಹಳೆ ಪ್ರೆಂಡ್ಶಿಪ್ ನೆನಪಿಸೋ ಹೊಸ ಕತೆ- “ಗೆಳತಿ ಗಾಯತ್ರಿ”

ವೈವಿಧ್ಯಮಯ ಕಥಾಹಂದರಗಳ ಮೂಲಕ ಕನ್ನಡ ಪ್ರೇಕ್ಷಕರ ಮನಗೆದ್ದಿರುವ ಸನ್ ಉದಯ, ಇತ್ತೀಚೆಗಷ್ಟೇ ‘ಭಾಗ್ಯವಂತರು’ (Bhagyavantaru) ಧಾರವಾಹಿ ಯಶಸ್ಸಿನ ಬಳಿಕ ಮತ್ತೊಂದು ವಿಭಿನ್ನ ಕಥೆಯೊಂದಿಗೆ ವೀಕ್ಷಕರ ಮುಂದೆ ಬರಲು ಸಜ್ಜಾಗಿದೆ. ಸ್ನೇಹದ ನಿಜವಾದ ಅರ್ಥ, ಗೆಳತನದ ಬಾಂಧವ್ಯ ಮತ್ತು ಅದರ ಮಹತ್ವವನ್ನು ಹೃದಯಸ್ಪರ್ಶಿಯಾಗಿ ಬಿಂಬಿಸುವ ‘ಗೆಳತಿ ಗಾಯತ್ರಿ’ (Gelathi Gayathri) ಧಾರವಾಹಿ (Serial) ಇದೇ ಆಗಸ್ಟ್ 17ರಿಂದ ಸೋಮವಾರದಿಂದ ಶನಿವಾರ ಸಂಜೆ 7ಕ್ಕೆ ಪ್ರಸಾರವಾಗುತ್ತಿದೆ
‘ಗೆಳತಿ ಗಾಯತ್ರಿ’ ಇಬ್ಬರು ಆತ್ಮೀಯ ಗೆಳತಿಯರ ಭಾವನಾತ್ಮಕ ಪಯಣದ ಕಥೆ.
ಬಾಲ್ಯದಲ್ಲಿ ಪಾರ್ವತಿಗೆ ಸಿಕ್ಕ ಮೊದಲ ಸ್ನೇಹಿತೆ ಗಾಯತ್ರಿ. ಎರಡು ಜಡೆ ಹುಡುಗಿಯರು ಕೈತುತ್ತಿನಿಂದ ಕನವರಿಕೆಯವರೆಗೆ ಜೊತೆಗೆ ಆಡಿ ನಲಿದವರು. ಕಾಲ ಸರಿದಂತೆ ಕಾರಣಾಂತರದಿಂದ ದೂರವಾದಾಗ ಪಾರ್ವತಿಗೆ ಕಾಡುವಂತೆ ನೆನಪಾಗುತ್ತಿರುವವಳು ಗಾಯತ್ರಿ. ಶ್ರೀಮಂತ ಕುಟುಂಬದಲ್ಲಿ ಸುಖಸಂಸಾರ ನಡೆಸುತ್ತಿರುವ ಪಾರ್ವತಿಗೆ ಪ್ರೀತಿಯ ಪತಿ, ಮುದ್ದಾದ ಮಗಳು ಎಲ್ಲವೂ ಇದ್ದರೂ, ಗಾಯತ್ರಿಯನ್ನು ಕಾಣುವ ಹಂಬಲ ಕಡಿಮೆಯಾಗೇ ಇಲ್ಲ.
ತನ್ನ ಜೊತೆ ಬಾಲ್ಯದಲ್ಲಿ ಕಣ್ಣಾಮುಚ್ಚಾಲೆಯಾಡಿದ ಗೆಳತಿಯನ್ನು ಹುಡುಕಲು ಒದ್ದಾಡುತ್ತಿರುವ ಪಾರ್ವತಿಯ ಒದ್ದಾಟಕ್ಕೆ ಉತ್ತರವಾಗಿ ಗಾಯತ್ರಿ ವಾಪಸ್ಸು ಬರುತ್ತಾಳಾ? ತನ್ನ ಗೆಳತಿ ತನಗೆ ಮತ್ತೆ ಸಿಗ್ತಾಳೆ ಅನ್ನೋ ಪಾರ್ವತಿಯ ನಂಬಿಕೆ ಕೊನೆಗೂ ಫಲ ನೀಡುತ್ತದೆಯಾ? ವರ್ಷಗಳ ಬಳಿಕ ಈ ಇಬ್ಬರು ಗೆಳತಿಯರು ಮತ್ತೆ ಒಂದಾಗುತ್ತಾರಾ? ಅವರ ಅನನ್ಯ ಸ್ನೇಹಕ್ಕೆ ವಿಧಿ ಯಾವ ಹೊಸ ತಿರುವು ನೀಡಲಿದೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಲಿದೆ ‘ಗೆಳತಿ ಗಾಯತ್ರಿ’.
ಪಾರ್ವತಿಯಾಗಿ, ಹೆಸರಾಂತ ನಟಿ ವೈಷ್ಣವಿ ಗೌಡ, ಗಾಯತ್ರಿಯಾಗಿ ಕೃತ್ತಿಕಾ ನಟಿಸುತ್ತಿದ್ದಾರೆ. ಬಹುಮುಖ ಪ್ರತಿಭೆ ನಾಗಾರ್ಜುನ ನಾಯಕನಾಗಿ ನಟಿಸುತ್ತಿದ್ದು, ಪದ್ಮಿನಿ ಮತ್ತು ರಾಘು ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಹೆಸರಾಂತ ನಿರ್ಮಾಣ ಸಂಸ್ಥೇ, ಶ್ರೀ ಜೈ ಮಾತಾ ಕಂಬೈನ್ಸ್ ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಧಾರಾವಾಹಿಗೆ ಯಶವಂತ ಪಾಂಡು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಜೆ.ಜಯಮ್ಮ, ಮಿಲನ ಪ್ರಕಾಶ್‌ ಮತ್ತು ತಶ್ವಿನಿ ನಿರ್ಮಾಪಕರಾಗಿ, ಡಿ.ಓ.ಪಿಯಾಗಿ ಅನಂತ ಗೌಡ ಕಾರ್ಯನಿರ್ಹಿಸಲಿದ್ದಾರೆ. ವಿಕಾಸ ನೇಗಿಲೋಣಿ ಚಿತ್ರಕಥೆ ಮತ್ತು ಅಭಿಜ್ಞಾ ಸಂಭಾಷಣೆ ಹೊಣೆ ಹೊತ್ತಿದ್ದಾರೆ.
ಸ್ನೇಹ, ನೆನಪು, ಪ್ರೀತಿ, ನಿರೀಕ್ಷೆ, ಕನವರಿಕೆ ಮತ್ತು ಭಾವನೆಗಳ ಸಂಗಮವಾಗಿ, ಪ್ರತಿಯೊಬ್ಬರ ಹೃದಯ ತಟ್ಟುವ ‘ಗೆಳತಿ ಗಾಯತ್ರಿ’ ಸನ್ ಉದಯದಲ್ಲಿ ಇದೇ ಆಗಸ್ಟ್ 17 ಸೋಮವಾರದಿಂದ ಸಂಜೆ 7ಕ್ಕೆ ಪ್ರಸಾರವಾಗುತ್ತಿದೆ

Hot this week

‘ಆಸ್ಟ್ರಲ್ ಪೇಜೆಂಟ್ಸ್’ 10ನೇ ಆವೃತ್ತಿ ಯಶಸ್ವಿ: ದಶಕದ ಸಂಭ್ರಮ

ಬೆಂಗಳೂರು : ಕಳೆದ ಒಂಬತ್ತು ವರ್ಷಗಳಿಂದ ವೈಶಿಷ್ಟ್ಯಪೂರ್ಣವಾಗಿ ಹಾಗೂ ಅದ್ಧೂರಿಯಾಗಿ ಆಯೋಜನೆಗೊಳ್ಳುತ್ತಾ...

“ಪ್ರೋಷ್ಟಪದಿ ಭಾಗವತ” ಧಾರ್ಮಿಕ ಪ್ರವಚನ

ಸುಧೀಂದ್ರನಗರ : ಶ್ರೀ ರಾಘವೇಂದ್ರ ಸೇವಾ ಸಮಿತಿಯ (Raghavendra Seva Samithi)...

ಶ್ರೀ ವರಸಿದ್ಧಿ ವಿನಾಯಕ ದೇವಾಲಯದಲ್ಲಿ ಗಣೇಶೋತ್ಸವ

ಬೆಂಗಳೂರು : ನಾಗರಬಾವಿ (Nagarabhavi) ಮುಖ್ಯರಸ್ತೆಯಲ್ಲಿರುವ ಕೆನರಾ ಬ್ಯಾಂಕ್ (Canara Bank...

ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ನಿಷೇಧಿತ ಮೊಬೈಲ್ ಬಳಕೆ: 9 ಆರೋಪಿಗಳ ಬಂಧನ

ಪರಪ್ಪನ ಅಗ್ರಹಾರ (Parappana Agrahara) ಠಾಣೆಯಲ್ಲಿ (Station) 13/01/2026 ರಂದು ಬೆಂಗಳೂರು...

20 ಮಂದಿಗೆ ಉಚಿತ ಕಾಶಿ–ಪ್ರಯಾಗ್ ಯಾತ್ರೆ : ಉಚಿತ ವಿಮಾನ ಪ್ರಯಾಣದ ಸೌಭಾಗ್ಯ

ಬೆಂಗಳೂರು, ಸೆ. 10: ಮಹಾ ಶಿವರಾತ್ರಿ  (Shivarathri) ಅಂಗವಾಗಿ ವಿಜಯನಗರದಲ್ಲಿ ಆಯೋಜಿಸಲಾಗಿದ್ದ...

Topics

‘ಆಸ್ಟ್ರಲ್ ಪೇಜೆಂಟ್ಸ್’ 10ನೇ ಆವೃತ್ತಿ ಯಶಸ್ವಿ: ದಶಕದ ಸಂಭ್ರಮ

ಬೆಂಗಳೂರು : ಕಳೆದ ಒಂಬತ್ತು ವರ್ಷಗಳಿಂದ ವೈಶಿಷ್ಟ್ಯಪೂರ್ಣವಾಗಿ ಹಾಗೂ ಅದ್ಧೂರಿಯಾಗಿ ಆಯೋಜನೆಗೊಳ್ಳುತ್ತಾ...

“ಪ್ರೋಷ್ಟಪದಿ ಭಾಗವತ” ಧಾರ್ಮಿಕ ಪ್ರವಚನ

ಸುಧೀಂದ್ರನಗರ : ಶ್ರೀ ರಾಘವೇಂದ್ರ ಸೇವಾ ಸಮಿತಿಯ (Raghavendra Seva Samithi)...

ಶ್ರೀ ವರಸಿದ್ಧಿ ವಿನಾಯಕ ದೇವಾಲಯದಲ್ಲಿ ಗಣೇಶೋತ್ಸವ

ಬೆಂಗಳೂರು : ನಾಗರಬಾವಿ (Nagarabhavi) ಮುಖ್ಯರಸ್ತೆಯಲ್ಲಿರುವ ಕೆನರಾ ಬ್ಯಾಂಕ್ (Canara Bank...

ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ನಿಷೇಧಿತ ಮೊಬೈಲ್ ಬಳಕೆ: 9 ಆರೋಪಿಗಳ ಬಂಧನ

ಪರಪ್ಪನ ಅಗ್ರಹಾರ (Parappana Agrahara) ಠಾಣೆಯಲ್ಲಿ (Station) 13/01/2026 ರಂದು ಬೆಂಗಳೂರು...

20 ಮಂದಿಗೆ ಉಚಿತ ಕಾಶಿ–ಪ್ರಯಾಗ್ ಯಾತ್ರೆ : ಉಚಿತ ವಿಮಾನ ಪ್ರಯಾಣದ ಸೌಭಾಗ್ಯ

ಬೆಂಗಳೂರು, ಸೆ. 10: ಮಹಾ ಶಿವರಾತ್ರಿ  (Shivarathri) ಅಂಗವಾಗಿ ವಿಜಯನಗರದಲ್ಲಿ ಆಯೋಜಿಸಲಾಗಿದ್ದ...

ನಿತ್ಯ ಪಂಚಾಂಗ 11.09.2026 FRIDAY.ಶುಕ್ರವಾರ

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 11.09.2026 FRIDAY.ಶುಕ್ರವಾರ ಸಂವತ್ಸರ: ಪರಾಭವ SAMVATSARA : PARABHAVA. ಆಯಣ: ದಕ್ಷಿಣಾಯನ AYANA:...

ರಾಜಕೀಯ ರಂಗದಲ್ಲಿ ಆಧುನಿಕತೆ ಮತ್ತು ಹೋರಾಟಕ್ಕೆ ಇನ್ನೊಂದು ಹೆಸರೇ ಡಿ.ಕೆ.ಶಿವಕುಮಾರ್ : DCM ಜಿ. ಪರಮೇಶ್ವರ

ಬೆಂಗಳೂರು: ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್(CM D.K.Shivakumar) ಅವರ ನೇತೃತ್ವದ ರಾಜ್ಯ...

“ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸರ್ಕಾರ ಸರಿಯಾದ ಹಾದಿಯಲ್ಲಿ ನಡೆಯುತ್ತಿದೆ” : ಮಾಜಿ ಸಿ ಎಂ ಸಿದ್ದರಾಮಯ್ಯ ಪ್ರಶಂಸೆ.

ಬೆಂಗಳೂರು: ನಮ್ಮ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಮುಂದುವರೆಸಿಕೊಂಡು ಹೋಗುತ್ತಿರುವುದರ ಜೊತೆಗೆ,...

Related Articles