ತಂತ್ರಜ್ಞಾನ ಚಾಲಿತ ಮತದಾರರ ನೋಂದಣಿ ಕುರಿತು ಒಂದು ದಿನದ ಅಂತಾರಾಷ್ಟ್ರೀಯ ಕಾರ್ಯಗಾರ

ಭಾರತದ ಚುನಾವಣಾ ಆಯೋಗವು, ಭಾರತೀಯ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ಮತ್ತು ಚುನಾವಣಾ ನಿರ್ವಹಣಾ ಸಂಸ್ಥೆ, ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ಮತ್ತು ಚುನಾವಣಾ ಸಹಾಯ ಸಂಸ್ಥೆ ಹಾಗೂ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ (Chief Election Office)  ಸಹಯೋಗದೊಂದಿಗೆ, ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ “ತಂತ್ರಜ್ಞಾನ ಚಾಲಿತ ಮತದಾರರ ನೋಂದಣಿ” Technology-enabled voter registration) ಕುರಿತ ಒಂದು ದಿನದ ಅಂತಾರಾಷ್ಟ್ರೀಯ ಕಾರ್ಯಾಗಾರವನ್ನು (International Workshop) ಆಯೋಜಿಸಿತ್ತು.

ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ (Chief Election Officer ) ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಾಗಾರವು, ಮತದಾರರ ನೋಂದಣಿ ಪ್ರಕ್ರಿಯೆಯಲ್ಲಿ ತಂತ್ರಜ್ಞಾನದ ಅಳವಡಿಕೆ ಮತ್ತು ನಾವೀನ್ಯತೆಗಳ ಕುರಿತು ಜಾಗತಿಕ ಮಟ್ಟದ ಚರ್ಚೆಗೆ ವೇದಿಕೆಯಾಯಿತು.

ಕಾರ್ಯಾಗಾರದ ಅಂಗವಾಗಿ, “ತಂತ್ರಜ್ಞಾನ-ಚಾಲಿತ ಮತದಾರರ ನೋಂದಣಿಯ ಅಂತಾರಾಷ್ಟ್ರೀಯ ಕಾರ್ಯಾಗಾರ” ಕುರಿತು ವಿಶೇಷ ಸಭೆಯನ್ನು ನಡೆಸಲಾಯಿತು. ಇದರಲ್ಲಿ ಚುನಾವಣಾ ನಿರ್ವಹಣಾ ಅಧಿಕಾರಿಗಳು, ತಂತ್ರಜ್ಞಾನ ತಜ್ಞರು ಮತ್ತು ವಿವಿಧ ಅಂತಾರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಮತದಾರರ ನೋಂದಣಿ ವ್ಯವಸ್ಥೆಗಳಲ್ಲಿನ ಜಾಗತಿಕ ಅತ್ಯುತ್ತಮ ಅಭ್ಯಾಸಗಳು ಮತ್ತು ನವೀನ ವಿಧಾನಗಳ ಕುರಿತಾದ ಸಮಗ್ರ ವಿಷಯಾಧಾರಿತ ವರದಿಯನ್ನು ಈ ಸಭೆಯಲ್ಲಿ ಮೌಲ್ಯೀಕರಿಸಲಾಯಿತು.

ಈ ಕಾರ್ಯಾಗಾರದಲ್ಲಿ ತಜ್ಞರು ವಿವಿಧ ಮಾದರಿಗಳ ಕುರಿತು ಪ್ರಸ್ತುತಿ ನೀಡಿದರು.

ಜನಸಂಖ್ಯಾ ನೋಂದಣಿ ಆಧಾರಿತ ಸ್ವಯಂಚಾಲಿತ ವ್ಯವಸ್ಥೆಗಳ ಮಾದರಿ ವಿಷಯದ ಕುರಿತು ಹಿರಿಯ ಐ.ಎ.ಎಸ್ ಅಧಿಕಾರಿಗಳಾದ ಪಿ.ಎಸ್. ವಸ್ತ್ರದ್, ಶುಭ ಕಲ್ಯಾಣ್, ಭೂಬಲನ್ ಟಿ. ಮತ್ತು ರಾಹುಲ್ ಶಿಂಧೆ ಅವರು ಮಾಹಿತಿ ನೀಡಿದರು.

ಹೈಬ್ರಿಡ್ ಡಿಜಿಟಲ್ ಅಸಿಸ್ಟೆಡ್ ನೋಂದಣಿ ವ್ಯವಸ್ಥೆಗಳ ಮಾದರಿ ವಿಷಯದ ಕುರಿತು ಬಿ.ಎಸ್. ಹಿರೇಮಠ್, ಜುಬೀನ್ ಮೊಹಾಪಟ್ರ, ಡಾ. ಆರ್.ಎಚ್. ಗೌಡರ್ ಮತ್ತು ಡಾ. ಸ್ನೇಹ ಸಿ.ವಿ. ಅವರು ವಿಷಯ ಮಂಡಿಸಿದರು.

ಬಯೋಮೆಟ್ರಿಕ್ ಮತದಾರರ ನೋಂದಣಿ ವ್ಯವಸ್ಥೆಗಳ ವಿಷಯದ ಕುರಿತು ಪಿ.ಎಸ್. ವಸ್ತ್ರದ್, ಶುಭ ಕಲ್ಯಾಣ್, ಕೀರ್ತನಾ ಎಚ್.ಎಸ್. ಮತ್ತು ಜಾಸ್ಮಿನ್ ಜೋಸೆಫ್ ಅವರು ಮಾಹಿತಿ ಹಂಚಿಕೊಂಡರು.

ಡಿಜಿಟಲ್ ಗುರುತು ಸಕ್ರಿಯಗೊಳಿಸುವ ನೋಂದಣಿ ವ್ಯವಸ್ಥೆಗಳ ಎಂಬ ವಿಷಯದ ಕುರಿತು ಬಿ.ಎಸ್. ಹಿರೇಮಠ್, ರಮೇಶ್ ಕೆ.ಎನ್., ಡಾ. ಜಿತಾಮಿತ್ರ, ಡಾ. ಎನ್. ಮಹಂತೇಶ್ ಎನ್. ಬಿರ್ಜೆ ಮತ್ತು ಶರತ್ ಚಂದ್ರ ದೊಡ್ವಾಡ್ ಅವರು ವಿವರಣೆ ನೀಡಿದರು.

ಶಾಶ್ವತ ಗಣಕೀಕೃತ ಮತದಾರರ ನೋಂದಣಿ ವ್ಯವಸ್ಥೆಗಳ ಮಾದರಿಯ ವಿಷಯದ ಕುರಿತು  ಪಿ.ಎಸ್. ವಸ್ತ್ರದ್,  ಯಶವಂತ್ ವಿ. ಗುರುಕರ್, ಡಾ. ಮಹೇಶ್ ಬಾಬು ಎನ್. ಮತ್ತು ಮಹಮ್ಮದ್ ರೋಷನ್ ಅವರು ವಿಷಯ ಮಂಡಿಸಿದರು.

ಈ ಕಾರ್ಯಾಗಾರವು ಭವಿಷ್ಯದ ಚುನಾವಣಾ ಪ್ರಕ್ರಿಯೆಗಳನ್ನು ಹೆಚ್ಚು ಪಾರದರ್ಶಕ, ಸುಲಭ ಮತ್ತು ತಂತ್ರಜ್ಞಾನ ಆಧಾರಿತವಾಗಿ ರೂಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.

Hot this week

ಗೋಸೇವೆಗಾಗಿ ಮಹೇಂದ್ರ ಮುಣೋತ್‌ ಕುಟುಂಬ 56 ಲಕ್ಷ ರೂ. ದೇಣಿಗೆ

ತಮ್ಮ ತಂದೆ ಮೋತಿಲಾಲ್ ಮುಣೋತ್ (Motilal Munnoth) ಅವರ ಸ್ಮರಣಾರ್ಥ ಅವರ...

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಗೌಶುಭಮ್ ಸಹಯೋಗ

ಬೆಂಗಳೂರು: ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು...

ಕರ್ನಾಟಕ ರಾಜ್ಯ ಬರಹಗಾರರ ಸಂಘದ ಕಲಾವಿದರಿಗೆ ಕರ್ನಾಟಕ ಕಲಾ ರತ್ನ ಪ್ರಶಸ್ತಿ

ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನಹಡಗಲಿ(Hoovina Hadagali) ರಾಜ್ಯಮಟ್ಟದ ಸಾಹಿತ್ಯ ಮತ್ತು ಸಾಂಸ್ಕೃತಿಕ...

ದೆಹಲಿಯ ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ಕಚೇರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ದೆಹಲಿಯಲ್ಲಿನ ರಾಷ್ಟ್ರೀಯ ಮಹಿಳಾ...

Topics

ಗೋಸೇವೆಗಾಗಿ ಮಹೇಂದ್ರ ಮುಣೋತ್‌ ಕುಟುಂಬ 56 ಲಕ್ಷ ರೂ. ದೇಣಿಗೆ

ತಮ್ಮ ತಂದೆ ಮೋತಿಲಾಲ್ ಮುಣೋತ್ (Motilal Munnoth) ಅವರ ಸ್ಮರಣಾರ್ಥ ಅವರ...

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಗೌಶುಭಮ್ ಸಹಯೋಗ

ಬೆಂಗಳೂರು: ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು...

ಕರ್ನಾಟಕ ರಾಜ್ಯ ಬರಹಗಾರರ ಸಂಘದ ಕಲಾವಿದರಿಗೆ ಕರ್ನಾಟಕ ಕಲಾ ರತ್ನ ಪ್ರಶಸ್ತಿ

ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನಹಡಗಲಿ(Hoovina Hadagali) ರಾಜ್ಯಮಟ್ಟದ ಸಾಹಿತ್ಯ ಮತ್ತು ಸಾಂಸ್ಕೃತಿಕ...

ದೆಹಲಿಯ ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ಕಚೇರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ದೆಹಲಿಯಲ್ಲಿನ ರಾಷ್ಟ್ರೀಯ ಮಹಿಳಾ...

ನಿತ್ಯ ಪಂಚಾಂಗ 13.06.2026 ಶನಿವಾರ SATURDAY

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 13.06.2026 ಶನಿವಾರ SATURDAY. ಸಂವತ್ಸರ: ಪರಾಭವ. SAMVATSARA : PARABHAVA. ಆಯಣ:...

ಪವಮಾನಪುರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಸಂಗೀತ ಸೇವೆ

ಬೆಂಗಳೂರು ; ಶ್ರೀ ರಾಘವೇಂದ್ರ ಸ್ವಾಮಿಗಳ( Sri Raghavendra Swamy Mutt)...

ಜೂನ್ 14ರಂದು 7ನೇ ಸ್ವಯಂಪ್ರೇರಿತ ರಕ್ತದಾನ ಶಿಬಿರ

ಬೆಂಗಳೂರು: ವಿಶ್ವ ಹಿಂದೂ ಪರಿಷದ್ (ಯಲಹಂಕ ಜಿಲ್ಲೆ), (Vishwa Hindu Parishat)...

Related Articles