Home Blog Page 86

ಶ್ರೀ ಚಾಮರಾಜೇಂದ್ರ ಕಬ್ಬನ್ ಉದ್ಯಾನವನದಲ್ಲಿ ಪಾಲಿಸಬೇಕಾದ ಅಗತ್ಯ ನಿಯಮಗಳ ಕುರಿತು ಸರ್ಕಾರದಿಂದ ಆದೇಶ

ಬೆಂಗಳೂರಿನ ಶ್ರೀ ಚಾಮರಾಜೇಂದ್ರ ಕಬ್ಬನ್ ಉದ್ಯಾನವನದಲ್ಲಿ ಸ್ವಚ್ಛತೆಯನ್ನು ಕಾಪಾಡಲು ಹಾಗೂ ಉದ್ಯಾನವನದ ಸಂರಕ್ಷಣಾ ಹಿತದೃಷ್ಟಿಯಿಂದ ಉದ್ಯಾನವನದ ಆವರಣದಲ್ಲಿ ಅನುಮತಿಸಬಹುದಾದ ಚಟುವಟಿಕೆಗಳು, ನಿಷಧಿಸಿದ ಚಟುವಟಿಕೆಗಳು ಹಾಗೂ ಪಾಲಿಸಬೇಕಾದ ಇತರೆ ಅವಶ್ಯಕ ನಿಯಮಗಳನ್ನು ಸರ್ಕಾರವು 2025ನೇ ಏಪ್ರಿಲ್ 23 ರಂದು ಜಾರಿ ಮಾಡಿ ಆದೇಶಿಸಿದೆ.

Photo of Band Stand

ಕಬ್ಬನ್ ಉದ್ಯಾನವನದ ಸಂರಕ್ಷಣಾ ಹಿತದೃಷ್ಟಿಯಿಂದ ರಚಿಸಲಾಗಿರುವ ನಿಯಮಗಳನ್ನು ಉಲ್ಲಂಘಿಸಿದ ಪ್ರತಿ ಒಬ್ಬರಿಗೆ ಗರಿಷ್ಠ ರೂ.500/- ಗಳವರೆಗೆ ದಂಡ ವಿಧಿಸಲು ಹಾಗೂ ಪದೇ ಪದೇ ಉಲ್ಲಂಘಿಸಿದಲ್ಲಿ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ತೋಟಗಾರಿಕೆ ನಿರ್ದೇಶಕರು, ಬೆಂಗಳೂರು ಇವರು ತೋಟಗಾರಿಕೆ ಉಪ ನಿರ್ದೇಶಕರು, ಶ್ರೀ ಚಾಮರಾಜೇಂದ್ರ (ಕಬ್ಬನ್) ಉದ್ಯಾನವನ, ಬೆಂಗಳೂರು ರವರಿಗೆ ಅಥವಾ ಸಂಬಂಧಿಸಿದ ಸೂಕ್ತ ಅಧಿಕಾರಿಗೆ ಅವಕಾಶ ಕಲ್ಪಿಸಿಕೊಡುವಂತೆ ಆದೇಶಿಸಿದೆ.

ಉಲ್ಲಂಘಿಸಿದ ದಂಡದ ಮೊತ್ತ ಹಾಗೂ ಷರತ್ತಿಗೊಳಪಟ್ಟು ಅನುಮತಿಸಲು ವಿಧಿಸಿರುವ ಮೊತ್ತವನ್ನು ಸುವರ್ಣ ಕರ್ನಾಟಕ ಉದ್ಯಾನವನ ಪ್ರತಿμÁ್ಠನದ ಖಾತೆಗೆ ಜಮೆ ಮಾಡುವುದು.  ಅನುಮತಿಸಬಹುದಾದ ಚಟುವಟಿಕೆಗಳು, ನಿಷಧಿಸಿದ ಚಟುವಟಿಕೆಗಳು ಹಾಗೂ ಪಾಲಿಸಬೇಕಾದ ಇತರೆ ಅವಶ್ಯಕ ನಿಯಮಗಳನ್ನು ವ್ಯಾಪಕ ಪ್ರಚಾರ ಪಡಿಸಲು ತೋಟಗಾರಿಕೆ ನಿರ್ದೇಶಕರು, ಬೆಂಗಳೂರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಕ್ರಮವಹಿಸುವಂತೆ ಆದೇಶಿಸಿದೆ.

ಅನುಮತಿ ಸಬಹುದಾದ ಚಟುವಟಿಕೆಗಳು :

ತೋಟಗಾರಿಕೆ ಇಲಾಖೆಯ ಪೂರ್ವಾನುಮತಿ ಪಡೆದು ವಿವಿಧ ಸರ್ಕಾರಿ/ಖಾಸಗಿ ಸಂಸ್ಥೆಗಳು ಆಯೋಜಿಸುವ ವಾಕಾಥಾನ್ ಮತ್ತು ಮ್ಯಾರಾಥಾನ್ ಕಾರ್ಯಕ್ರಮಗಳು. ತೋಟಗಾರಿಕೆ ಇಲಾಖೆಯ ಪೂರ್ವಾನುಮತಿ ಪಡೆದು ಸರ್ಕಾರದ ವಿವಿಧ ಇಲಾಖೆಗಳು ಆಯೋಜಿಸುವ ಅರಿವು ಮೂಡಿಸುವ ಕಾರ್ಯಕ್ರಮಗಳು.

ವಾಯು ವಿಹಾರದ ಸಮಯ ಬೆಳಿಗ್ಗೆ 5.30 ಗಂಟೆಯಿಂದ ಬೆಳಿಗ್ಗೆ 9.00 ಗಂಟೆಯವರೆಗೆ ಹಾಗೂ ಸಂಜೆ 4.30 ಗಂಟೆಯಿಂದ ಸಂಜೆ 6.30 ಗಂಟೆಯವರೆಗೆ ನಿಗಧಿಪಡಿಸಿದೆ.

ಉದ್ಯಾನವನದ ಸ್ವಚ್ಛತೆಯನ್ನು ಕಾಪಾಡುವ ಷರತ್ತಿಗೊಳಪಟ್ಟು ತೋಟಗಾರಿಕೆ ಇಲಾಖೆಯ ಪೂರ್ವಾನುಮತಿ ಪಡೆದು ಬ್ಯಾಂಡ್ ಸ್ಟ್ಯಾಂಡ್ ಆವರಣದಲ್ಲಿ ಆಯೋಜಿಸುವ ಕಾರ್ಯಕ್ರಮಗಳು.

ತೋಟಗಾರಿಕೆ ಇಲಾಖೆಯ ಪೂರ್ವಾನುಮತಿ ಪಡೆದು ಕೈಗೊಳ್ಳುವ ಸಸ್ಯ/ವನ್ಯಜೀವಿ/ಪ್ರಾಕೃತಿಕ ಹವ್ಯಾಸಿ ಛಾಯಾಗ್ರಹಣಕ್ಕೆ ಅನುಮತಿಸಿದೆ.  ಯಾವುದೇ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶವಿಲ್ಲದ ಹಾಗೂ ಸ್ವಚ್ಛತೆಯನ್ನು ಕಾಪಾಡುವ ಷರತ್ತಿಗೊಳಪಟ್ಟು ತೋಟಗಾರಿಕೆ ಇಲಾಖೆಯ ಪೂರ್ವಾನುಮತಿ ಪಡೆದು ಯೋಗ/ಮೆಡಿಟೇಷನ್ ಹಾಗೂ ಪೂರಕ ಕಾರ್ಯಚಟುವಟಿಕೆಗಳು ಸಂಖ್ಯೆ ಗರಿಷ್ಠ 20 ಜನರಿರುವ ಪ್ರತಿತಂಡಕ್ಕೆ ಮಿತಿಗೊಳಿಸಿ ಆಯೋಜಿಸುವ ಕಾರ್ಯಚಟುವಟಿಕೆಗಳಿಗೆ ಅನುಮತಿಸಬಹುದು.

ತೋಟಗಾರಿಕೆ ಇಲಾಖೆಯ ಪೂರ್ವಾನುಮತಿ ಪಡೆದು ಗರಿಷ್ಠ 20 ಜನರಿರುವ ಹವ್ಯಾಸಿ ಓದುಗರು / ಬರವಣಿಗೆಗಾರರು ಆಸನಗಳನ್ನು ಬಳಸಿಕೊಳ್ಳವುದು. ಉದ್ಯಾನವನಕ್ಕೆ ಆಗಮಿಸುವ ಸಾರ್ವಜನಿಕರು, ಪ್ರವಾಸಿಗರು ಕ್ಯಾಮರಾಗಳನ್ನು ಬಳಸಬಹುದು ಆದರೆ Photo Shoot  (ಪ್ರೀ/POST ವೆಡ್ಡಿಂಗ್ ಶೂಟ್ಸ್, ಬೇಬಿ, ಮಾಡಲಿಂಗ್ ಶೂಟ್ಸ್) ವೀಡಿಯೋ ಚಲನಚಿತ್ರ ಚಿತ್ರೀಕರಣ ನಿಷಧಿಸಿದೆ. ಕಿರು ಚಿತ್ರಗಳು/ ರೀಲ್ಸ್/ವಿಡಿಯೋ ಚಲನಚಿತ್ರ ಚಿತ್ರೀಕರಣ ನಿಷಧಿಸಲಾಗಿದೆ.

ಸÀರ್ಕಾರಿ/ಅಧಿಕೃತ ನೋಂದಾಯಿತ ಚಾರಿಟಬಲ್ ಟ್ರಸ್ಟ್‍ಗಳ ವತಿಯಿಂದ ಮಾತ್ರ ಆಯೋಜಿಸಲ್ಪಡುವ ಆರೋಗ್ಯ ತಪಾಸಣಾ ಶಿಬಿರಗಳು. ಬೆಳಿಗ್ಗೆ 8.00 ಗಂಟೆಯ ನಂತರ ಸಂಜೆ 6.00 ಗಂಟೆಯವರೆಗೆ ಉದ್ಯಾನವನಕ್ಕೆ ಆಗಮಿಸುವ ಬೈಸಿಕಲ್ ಸವಾರರು, ಬೈಸಿಕಲ್ ಬಳಸಬಹುದು. ತರಬೇತಿದಾರರಿಗೆ ಅವಕಾಶವಿರುವುದಿಲ್ಲ.

ಸ್ವತಃ ಸ್ಕೇಟಿಂಗ್ ಮಾಡುವವರು / ಕುಟುಂಬದ ಸದಸ್ಯರೊಂದಿಗೆ ಸ್ಕೇಟಿಂಗ್ ಮಾಡುವವರು ವಾಹನ ಸಂಚಾರ ನಿಷಧಿಸಿರುವ ದಿನಗಳಂದು ಕಬ್ಬನ್ ಉದ್ಯಾನವನದ ಎನ್.ಜಿ.ಓ ಪ್ರವೇಶ ದ್ವಾರದಿಂದ ಇಂದಿರಾ ಪ್ರಿಯದರ್ಶಿನಿ ಮಕ್ಕಳ ಗ್ರಂಥಾಲಯದ ಎದುರಿಗಿರುವ ರಸ್ತೆಯನ್ನು ಸೈಟಿಂಗ್ ಗಾಗಿ ಬೆಳಗ್ಗೆ 6.00 ರಿಂದ ಸಂಜೆ 6.00 ಗಂಟೆಯವರೆಗೆ ಬಳಸಲು ಸೀಮಿತಗೊಳಿಸಿದೆ. ಸ್ಕೇಟಿಂಗ್ ತರಬೇತಿ, ಸ್ಟಂಟ್ ಇತ್ಯಾದಿಗಳನ್ನು ಕೈಗೊಳ್ಳಲು ಅವಕಾಶವಿರುವುದಿಲ್ಲ.

ಕಬ್ಬನ್ ಉದ್ಯಾನವನದ ಆವರಣದಲ್ಲಿ ನಡೆಯುವ ಮ್ಯಾರಾಥಾನ್, ವಾಕಾಥಾನ್ ಸಂಬಂಧ 2023ನೇ ಮೇ 17ರ ಎಸ್.ಕೆ.ಯು.ಪಿ.ಎಫ್ ಸಭೆಯ ನಿರ್ಣಯದಂತೆ ಕಾರ್ಯಕ್ರಮ ಒಂದಕ್ಕೆ ರೂ. 30,000/- ಗಳ ಶುಲ್ಕ ನಿಗಧಿಪಡಿಸಿದ್ದು ಹಾಗೂ ಕಾರ್ಯಕ್ರಮ ಸಂಬಂಧ ರೂ. 20,000/- ಗಳ ಮುಂಗಡ ಠೇವಣಿಯನ್ನು ಪಾವತಿ ಮಾಡಿದರೆ ಕೆ.ಎಸ್.ಎಲ್.ಟಿ.ಎ ಹಿಂಭಾಗದ ಜಾವಾಫಿಗ್ ಅವಿನ್ಯೂ ರಸ್ತೆಯಲ್ಲಿ ಕಾರ್ಯಕ್ರಮಕ್ಕೆ ಪೂರಕವಾಗಿ 1 ಅಡಿ ಎತ್ತರದ ವೇದಿಕೆ ನಿರ್ಮಾಣ ಮಾಡಲು, ಕಡಿಮೆ ಶಬ್ದವುಳ್ಳ ಧ್ವನಿವರ್ದಕ ಬಳಕೆ ಹಾಗೂ ಪ್ಯಾಕ್ ಮಾಡಿದ ಫುಡ್ ವಿತರಿಸಿ ಸ್ವಚ್ಛತೆಯನ್ನು ಕಾಪಾಡುವ ಷರತ್ತಿಗೊಳಪಟ್ಟು ಅನುಮತಿ ನೀಡುವುದು.

ತೋಟಗಾರಿಕೆ ಇಲಾಖೆಯ ಪೂರ್ವಾನುಮತಿ ಪಡೆದು ವೈಯಕ್ತಿಕವಾಗಿ ಕೈಗೊಳ್ಳುವ ಪರಿಸರ ಪೂರಕ ಚಿತ್ರಕಲೆ ಕೈಗೊಳ್ಳುವುದು (ಯಾವುದೇ ರೀತಿಯ ವಾಣಿಜ್ಯ ಚಿತ್ರಕಲೆ / ಮಾರಾಟವನ್ನು ನಿಷಧಿಸಿದೆ) ಕಬ್ಬನ್ ಉದ್ಯಾನವನದ ಬಿ.ಎಸ್.ಎನ್.ಎಲ್. ಪ್ರವೇಶ ದ್ವಾರದಿಂದ ಗಜಿಬೋ, ನಾಲಾ ಬದುವಿಗೆ ಹೊಂದಿಕೊಂಡಂತೆ. ನಾಲಾ ಬದುವಿನ ಸೇತುವೆಯಿಂದ ಹೈಕೋರ್ಟ್ ಗೆ ಹೊಂದಿಕೊಂಡಂತಿರುವ ವಾಹನ ನಿಲ್ಯಾಣದ ಸರಹದ್ಧಿನ ಬೇಲಿವರೆಗಿನ ಸುಮಾರು 15 ಎಕರೆ ವಿಸ್ತೀರ್ಣ ಪ್ರದೇಶವನ್ನು ವಾಣಿಜ್ಯ ಚಟುವಟಿಕೆಗಳು / ಪ್ರಾಯೋಜಕತ್ವ ಚಟುವಟಿಕೆಗಳನ್ನು ಹೊರತುಪಡಿಸಿ, ಪುಸ್ತಕ ಓದುವುದು, ಯೋಗ ಮಾಡುವುದು. ಧ್ಯಾನ ಮಾಡುವುದು, ಪೈಂಟಿಂಗ್, ಗೆಟ್ ಟುಗೇದರ್ ಚಟುವಟಿಕೆಗಳನ್ನು ಕೈಗೊಳ್ಳುವ ಸಲುವಾಗಿ ಮೀಸಲಿಡಬಹುದಾಗಿದ್ದು, ಮೇಲಿನ ಎಲ್ಲಾ ಚಟುವಟಿಕೆಗಳಿಗೆ 20 ಜನರಿಗಿಂತ ಹೆಚ್ಚಿಗೆ ಜನರು ಸೇರಿ ಆಯೋಜಿಸುವಂತ ಕಾರ್ಯಕ್ರಮಗಳಿಗೆ. ತೋಟಗಾರಿಕೆ ಉಪನಿರ್ದೇಶಕರು, ಕಬ್ಬನ್ ಉದ್ಯಾನವನ ರವರಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ.

ನಿಷಧಿಸಿದ ಚಟುವಟಿಕೆಗಳು:

ಉದ್ಯಾನವನದ ಒಳ ರಸ್ತೆಗಳಲ್ಲಿ ಭಾರಿ ವಾಹನಗಳಾದ ಬಸ್ಸು, ಲಾರಿ, ಗೂಡ್ಸ್ ವಾಹನ ಹಾಗೂ ಆಟೋ ಗಾಡಿಗಳನ್ನು ನಿಭರ್ಂಧಿಸಿದೆ. ಉದ್ಯಾನವನದ ಆವರಣದಲ್ಲಿ ಮಾರಾಟಗಾರರು / ತಿರುಗು ಮಾರಾಟಗಾರರನ್ನು ನಿಷಧಿಸಿದೆ.

ಉದ್ಯಾನವನದ ಆವರಣದಲ್ಲಿ ದೂಮಪಾನ, ಮದ್ಯಪಾನ ಮತ್ತು ಮಾದಕ ವಸ್ತುಗಳ ಬಳಕೆಯನ್ನು ಸಂಪೂರ್ಣವಾಗಿ ನಿಷಧಿಸಿದೆ. ಉದ್ಯಾನವನದ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ವಸ್ತುಗಳು, ಬಾಟಲಿ, ಪ್ಲಾಸ್ಟಿಕ್ ಚೀಲ. ಪೂಜಾ ಸಾಮಗ್ರಿ ಹಾಗೂ ಇತರೆ ಯಾವುದೇ ತ್ಯಾಜ್ಯಗಳನ್ನು ಉದ್ಯಾನವನಕ್ಕೆ ತರುವುದು, ಎಲ್ಲೆಂದರಲ್ಲಿ ಹಾಕುವುದು/ ಎಸೆಯುವುದನ್ನು ನಿಷಧಿಸಿದೆ.

ಪಾರ್ಸೆಲ್ ಊಟ / ತಿಂಡಿ ಪದಾರ್ಥಗಳನ್ನು ಉದ್ಯಾನವನದ ಒಳಗಡೆ ಸೇವಿಸುವುದನ್ನು ನಿಷದಿಸಿದೆ. ಉದ್ಯಾನವನದ ನಿಗಧಿತ ವಾಹನ ನಿಲುಗಡೆ ಪ್ರದೇಶಗಳಲ್ಲಿ ಮಾತ್ರ ವಾಹನಗಳನ್ನು ನಿಲ್ಲಿಸುವುದು. ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುವುದನ್ನು ನಿಷೇಧಿಸಿದೆ. ಉದ್ಯಾನವನದ ರಸ್ತೆಗಳಲ್ಲಿ ವಾಹನಗಳು ಹಾರ್ನ್ ಮಾಡುವುದನ್ನು ನಿಷಧಿಸಿದೆ. ಉದ್ಯಾನವನದ ಹುಲ್ಲುಹಾಸುಗಳ ಮೇಲೆ ಆಟ ಆಡುವುದುನ್ನು ನಿಷಧಿಸಿದೆ.

ಉದ್ಯಾನವನದಲ್ಲಿ ಮರಗಳನ್ನು ಹತ್ತುವುದು, ಮರದ ರೆಂಬೆ ಹಿಡಿದು ಜೋಕಾಲಿ ಆಡುವುದು, ಮರ/ಗಿಡಗಳಿಂದ ಎಲೆ/ಕಾಯಿ/ಹೂಗಳನ್ನು ಕೀಳುವುದನ್ನು ಮರಗಳ ತೊಗಟೆಯ ಮೇಲೆ ಕೆತ್ತನೆ ಮಾಡುವುದನ್ನು ನಿμÉೀಧಿಸಿದೆ. ಉದ್ಯಾನವನದ ಯಾವುದೇ ಸ್ವತ್ತುಗಳಿಗೆ ಬೆಂಕಿ ಹಚ್ಚುವಂತಿಲ್ಲ. ಬಲೂನು ಹಾಗೂ ಇತರೆ ಆಟದ ಸಾಮಾನುಗಳನ್ನು ಬಳಸುವುದು, ಗಾಳಿಪಟ ಹಾರಿಸುವುದು, ಬ್ರಿಸ್‍ಬಿ ಆಡುವುದನ್ನು ಹಾಗೂ ಇತರೆ ಆಟಗಳನ್ನು ಆಡುವುದನ್ನು ನಿμÉೀಧಿಸಿದೆ. ಕೆರೆ/ ಕಲ್ಯಾಣಿಗೆ ಇಳಿಯಬಾರದು, ಮರದ ಕಲಾಕೃತಿಗಳನ್ನು ಮುಟ್ಟಬಾರದು.

ಉದ್ಯಾನವನದ ಆವರಣದಲ್ಲಿ ಅಸಭ್ಯ ವರ್ತನೆ ನಿμÉೀಧಿಸಿದೆ. ಉದ್ಯಾನವನದಲ್ಲಿರುವ ಅಲಂಕಾರಿಕ ವಿನ್ಯಾಸ ಮತ್ತು ಪರ್ಗೋಲಗಳ ಮೇಲೆ ಹತ್ತುವುದನ್ನು ನಿμÉೀಧಿಸಿದೆ. ಸಾರ್ವಜನಿಕರು/ ಸಂಘಸಂಸ್ಥೆಗಳು ಉದ್ಯಾನವನದ ಒಳಗಡೆ ಯಾವುದೇ ಬ್ಯಾನರ್ /ಪೆÇೀಸ್ಟ್ ಗಳನ್ನು ಹಾಕುವಂತಿಲ್ಲ. ಉದ್ಯಾನವನದ ಒಳಗಡೆ ನಿರ್ದಿಷ್ಟವಾದ / ನಿಗಧಿತ ಶೌಚಾಲಯಗಳನ್ನು ಹೊರತುಪಡಿಸಿ, ಇನ್ನಿತರೆ ಸ್ಥಳಗಳಲ್ಲಿ ಮಲಮೂತ್ರ ವಿಸರ್ಜಿಸುವುದು ಹಾಗೂ ಉಗುಳುವುದನ್ನು ನಿμÉೀಧಿಸಿದೆ.

ಉದ್ಯಾನವನದ ಆವರಣಕ್ಕೆ ಮಾರಕಾಸ್ತ್ರ / ಸ್ಫೋಟಕ ವಸ್ತುಗಳು, ಇನ್ನಿತರೆ ಅಪಾಯಕಾರಿ ವಸ್ತುಗಳನ್ನು ತರುವುದು ನಿμÉೀಧಿಸಿದೆ. ಉದ್ಯಾನವನದ ಆವರಣದಲ್ಲಿ ಪಟಾಕಿ ಹಚ್ಚುವುದು. ಶಬ್ದಮಾಲಿನ್ಯ ವಾಯುಮಾಲಿನ್ಯ ಮತ್ತು ಜಲಮಾಲಿನ್ಯಕ್ಕೆ ಕಾರಣವಾಗುವ ಚಟುವಟಿಕೆಗಳನ್ನು ನಿμÉೀಧಿಸಿದೆ. ಉದ್ಯಾನವನದ ಆವರಣದಲ್ಲಿ ಭಿಕ್ಷಾಟನೆ ಮಾಡುವುದು, ಶಾಸ್ತ್ರ / ಭವಿಷ್ಯ ಹೇಳುವುದು, ಹಣ / ಚಂದಾ ವಸೂಲಿ ಮಾಡುವುದನ್ನು ನಿμÉೀಧಿಸಿದೆ.

ಸಭೆ ಸಮಾರಂಭ, ಸೌಹಾರ್ದ ಕಾರ್ಯಕ್ರಮ, ಸುದ್ದಿಗೋಷ್ಠಿ, ಹುಟ್ಟುಹಬ್ಬ ಹಾಗೂ ಇತರೆ ಯಾವುದೇ ಆಚರಣೆಗಳನ್ನು ಉದ್ಯಾನವನದ ಆವರಣದಲ್ಲಿ ನಿμÉೀಧಿಸಿದೆ. (ಕಬ್ಬನ್ ಉದ್ಯಾನವನಕ್ಕೆ ಸಂಬಂಧಿಸಿದಂತೆ ಹಾಗೂ ರಾಷ್ಟ್ರೀಯ ಹಬ್ಬಗಳು / ಸರ್ಕಾರಿ ಕಾರ್ಯಕ್ರಮಗಳನ್ನು ಹೊರತುಪಡಿಸಿ) ಉದ್ಯಾನವನದ ಸಸ್ಯ ಪ್ರಾಣಿ ಸಂಕುಲ, ಸಂಕುಲಗಳಿಗೆ ಉಂಟುಮಾಡುವ ಯಾವುದೇ ತರಹದ ಚಟುವಟಿಕೆಗಳನ್ನು ನಿಷಧಿಸಿದೆ.

ಪಾಲಿಸಬೇಕಾದ ಇತರೆ ಅವಶ್ಯ ನಿಯಮಗಳು :

ಮಳೆ, ಗಾಳಿಯ ಸಂದರ್ಭದಲ್ಲಿ ಮರದ ಕೆಳಗೆ ನಿಲ್ಲಬಾರದು. ಉದ್ಯಾನವನದ ಆವರಣದಲ್ಲಿರುವ ವಿದ್ಯುತ್ ಕಂಬ, ಪ್ಯಾನಲ್ ಬೋರ್ಡ್ ಹಾಗೂ ವಿದ್ಯತ್ ಜಂಕ್ಷನ್ ಬಾಕ್ಸ್ ಗಳಿಂದ ದೂರವಿರತಕ್ಕದ್ದು. ಉದ್ಯಾನವನದ ಮರದ ಪೆÇಟರೆ, ಬಿಲಗಳು, ಪೆÇದೆಗಳಲ್ಲಿ ಹಾಗೂ ಇತರೆ ಜಾಗಗಳಲ್ಲಿ ಹಾವುಗಳು ಇರುವ ಸಂಭವ ಇರುತ್ತದೆ ಎಚ್ಚರ ವಹಿಸುವುದು.

ಪೆÇೀಷಕರು ತಮ್ಮ ಮಕ್ಕಳ ಬಗ್ಗೆ ಸದಾ ಎಚ್ಚರವಹಿಸುವುದು, ಯಾವುದೇ ಕಾರಣಕ್ಕೂ ಮಕ್ಕಳನ್ನು ಆಟವಾಡಲು ಒಂಟಿಯಾಗಿ ಬಿಡಬಾರದು ಮತ್ತು ನಿಧಿತ ಪ್ರದೇಶಗಳಲ್ಲಿ ಓಡಾಡಲು ಬಿಡಬಾರದು. ಬೆಂಚುಗಳು, ವಿದ್ಯುತ್ ಕಂಬಗಳು ಇತ್ಯಾದಿ ಉದ್ಯಾನವನದ ಮೂಲಭೂತ ಸೌಕರ್ಯಗಳನ್ನು ಉಪಯೋಗಿಸಿಕೊಂಡು ಆಟವಾಡುವುದು / ವ್ಯಾಯಾಮ ಮಾಡುವುದನ್ನು ನಿಷಧಿಸಿದೆ. ಜೇನುನೊಣಗಳ ಬಗ್ಗೆ ಎಚ್ಚರವಹಿಸುವುದು. ಕಬ್ಬನ್ ಉದ್ಯಾನವನದ ಸೂಚನೆಗಳನ್ನು ಉಲ್ಲಂಘಿಸಿ ಸಂಭವಿಸಬಹುದಾದ ಅನಾಹುತಗಳಿಗೆ ಅವರೇ ಜವಾಬ್ದಾರರು ಎಂದು ತೋಟಗಾರಿಕಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2026ನೇ ಸಾಲಿನ ಪದ್ಮ ಶ್ರೇಣಿಯ ಪ್ರಶಸ್ತಿಗಳಿಗೆ ಹೆಸರುಗಳ ಶಿಫಾರಸ್ಸಿಗೆ ಆಹ್ವಾನ

ಸಮಾಜದ ಯಾವುದೇ ಕ್ಷೇತ್ರಗಳಲ್ಲಿ ಅಂದರೆ ಕಲೆ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ, ವೈದ್ಯಕೀಯ, ಸಮಾಜ ಸೇವೆ, ವಿಜ್ಞಾನ ಮತ್ತು ಇಂಜಿನಿಯರಿಂಗ್, ಸಾರ್ವಜನಿಕ ವ್ಯವಹಾರಗಳು, ನಾಗರೀಕ ಸೇವೆ, ವ್ಯಾಪಾರ ಮತ್ತು ಕೈಗಾರಿಕೆ, ಇತ್ಯಾದಿಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ವ್ಯಕ್ತಿಗಳಿಗೆ 2026ನೇ ಸಾಲಿನ ಪದ್ಮ ಶ್ರೇಣಿಯ ಪ್ರಶಸ್ತಿಗಳಾದ ‘ಪದ್ಮ ವಿಭೂಷಣ’, ‘ಪದ್ಮ ಭೂಷಣ’ ಮತ್ತು ‘ಪದ್ಮಶ್ರೀ ಪ್ರಶಸ್ತಿ’ಗಳಿಗೆ ಸಾಧಕರ ಹೆಸರುಗಳನ್ನು ಶಿಫಾರಸ್ಸು ಮಾಡಲು ಆಹ್ವಾನಿಸಲಾಗಿದೆ.
2026ನೇ ಸಾಲಿನ ಪದ್ಮ ಶ್ರೇಣಿಯ ಪ್ರಶಸ್ತಿಗಳಿಗೆ ಅನ್ವಯಿಸುವ ನಿಯಮಾವಳಿಗಳು https://padmaawards.gov.in  ರಲ್ಲಿ ಲಭ್ಯವಿದ್ದು, ಅರ್ಹ ಹೆಸರುಗಳನ್ನು ಶಿಫಾರಸ್ಸು ಮಾಡುವಾಗ ಕೇಂದ್ರ ಸರ್ಕಾರ ಸೂಚಿಸಿರುವ ಅಂಶಗಳನ್ನು ಪರಿಗಣಿಸುವುದು.
ಮೇಲೆ ಸೂಚಿಸಿದ ಕ್ಷೇತ್ರಗಳಲ್ಲಿ ನೀಡಬಹುದಾದ ಪದ್ಮಶ್ರೇಣಿ ಪ್ರಶಸ್ತಿಗಳಿಗೆ ಸಂಬಂಧಿಸಿದ ಶಿಫಾರಸ್ಸಿನ ಪ್ರಸ್ತಾವನೆಗಳನ್ನು ಸಲ್ಲಿಸುವ ಪ್ರಕ್ರಿಯೆಯು 2025 ನೇ ಜುಲೈ 31 ರಂದು ಮುಕ್ತಾಯಗೊಳ್ಳುತ್ತದೆ ಎಂದು ಕೇಂದ್ರ ಸರ್ಕಾರವು ತಿಳಿಸಿದೆ.
ರಾಜ್ಯ ಸರ್ಕಾರವು ಪ್ರಸ್ತಾವನೆಗಳು ಪರಿಶೀಲಿಸಿ 2025ನೇ ಜುಲೈ 31 ರೊಳಗಾಗಿ ಕೇಂದ್ರ ಸರ್ಕಾರಕ್ಕೆ ಆನ್‍ಲೈನ್ ಮೂಲಕ ಮಾತ್ರ ಕಳುಹಿಸಬೇಕಾಗಿರುವುದರಿಂದ ಪದ್ಮ ಪ್ರಶಸ್ತಿಗಳಿಗೆ ಶಿಫಾರಸು ಮಾಡುವ ಪ್ರಸ್ತಾವನೆಗಳನ್ನು ಸಂಬಂಧಿಸಿದ ಇಲಾಖೆಗಳು 2025ನೇ ಜುಲೈ 15 ರೊಳಗೆ ಸಲ್ಲಿಸುವುದು ಹಾಗೂ ಸಾಫ್ಟ್ ಪ್ರತಿಗಳನ್ನು     ಇ-ಮೇಲ್ ವಿಳಾಸ: uspolitical-dpar@kamataka.gov.in ಕ್ಕೆ ಕಳುಹಿಸುವುದು. 2025ನೇ ಜುಲೈ 15 ರ ನಂತರ ಬರುವ ಯಾವುದೇ ಪ್ರಸ್ತಾವನೆ /ಮನವಿಗಳನ್ನು ಪರಿಗಣಿಸಲು ಸಾಧ್ಯವಾಗುವುದಿಲ್ಲವೆಂದು ಪ್ರಕಟಣೆಯಲ್ಲಿ ತಿಳಿಸಿದೆ.

ಕರ್ನಾಟಕ ನಾಟಕ ಅಕಾಡೆಮಿಯಿಂದ ಪುಸ್ತಕ ಬಹುಮಾನಕ್ಕೆ ಅರ್ಜಿ ಆಹ್ವಾನ

ಕರ್ನಾಟಕ ನಾಟಕ ಅಕಾಡೆಮಿಯು ರಂಗಭೂಮಿಗೆ ಸಂಬಂಧಿಸಿದಂತೆ ಪ್ರಕಟವಾಗಿರುವ ರಂಗಭೂಮಿಯ ಆಕರ ಗ್ರಂಥಗಳಿಗೆ ಬಹುಮಾನ ನೀಡಲು ತೀರ್ಮಾನಿಸಿದೆ. ಕನ್ನಡ ರಂಗಭೂಮಿಯ ಬೆಳವಣಿಗೆ, ವೈವಿದ್ಯತೆ ಹಾಗೂ ರಂಗಭೂಮಿಯ ಇತಿಹಾಸವನ್ನು ತಿಳಿಸುವಂತಹ ವಿಮರ್ಶಾತ್ಮಕ ಕೃತಿಗಳಿಗೆ 2024-25ನೇ ಸಾಲಿನಲ್ಲಿ ಪ್ರಕಟವಾದ ಕೃತಿಗಳನ್ನು ಬಹುಮಾನಕ್ಕಾಗಿ ಆಹ್ವಾನಿಸಲಾಗಿದೆ.

ಪ್ರತಿ ಸಾಲಿಗೆ ತಲಾ ಒಂದು ಪುಸ್ತಕ ಬಹುಮಾನವನ್ನು ನೀಡಲಾಗುವುದು. ಬಹುಮಾನದ ಮೊತ್ತ ರೂ. 25,000/-ಗಳಾಗಿರುತ್ತದೆ. ಕೃತಿಗಳನ್ನು ಲೇಖಕರೇ ನೇರವಾಗಿ ಅಕಾಡೆಮಿಗೆ ಕಳುಹಿಸಿಕೊಡುವುದು.

ಕೃತಿಗಳು ಜನವರಿ 2024ರಿಂದ ಡಿಸೆಂಬರ್ 2024ರೊಳಗೆ ಮುದ್ರಣವಾಗಿ ಪ್ರಕಟಣೆಯಾಗಿರಬೇಕು. ಅನುವಾದಿತ ಕೃತಿಗಳಿಗೆ ಅವಕಾಶವಿರುವುದಿಲ್ಲ. ಪುಸ್ತಕಗಳು ಯಾವುದೇ ಪದವಿಗಾಗಿ, ಪಿಹೆಚ್.ಡಿ. ಮತ್ತು ಪಠ್ಯ ಪುಸ್ತಕಕ್ಕೆ ಸಿದ್ದಪಡಿಸಲಾದ ವಿಷಯವಾಗಿರಬಾರದು. ಬಹುಮಾನಕ್ಕಾಗಿ ಕಳುಹಿಸಲ್ಪಡುವ ಕೃತಿಗಳು ನಾಟಕವಾಗಿರಬಾರದು, ರಂಗಸಂಬಂಧಿ ವಸ್ತುವುಳ್ಳದ್ದಾಗಿರಬೇಕು.
ಕೃತಿಯ ತಾಂತ್ರಿಕ ಪುಟದಲ್ಲಿ ಮುದ್ರಣ ವರ್ಷವನ್ನು ನಮೂದಿಸಿರಬೇಕು. ಮರು ಮುದ್ರಣ ಪುಸ್ತಕವಾಗಿರಬಾರದು. ಅಕಾಡೆಮಿಯ ಸದಸ್ಯರು ರಚಿಸಿರುವ ಕೃತಿಗಳಾಗಿರಬಾರದು ಹಾಗೂ ಸಂಪಾದಿತ ಕೃತಿಗಳು ಸಹ ಆಗಿರಬಾರದು.

ಕೃತಿಯು ಕನಿಷ್ಠ 60 ಪುಟಗಳನ್ನು ಹೊಂದಿರಬೇಕು. ಪುಸ್ತಕ ಬಹುಮಾನಕ್ಕೆ ಲೇಖಕರು ಮಾತ್ರ ಅರ್ಹರಾಗಿರುತ್ತಾರೆ. ಯಾವುದೇ ಕಾರಣಕ್ಕೂ ಬಹುಮಾನಕ್ಕಾಗಿ ಸಲ್ಲಿಸಲಾಗುವ ಕೃತಿಗಳನ್ನು ಹಿಂತಿರುಗಿಸಲಾಗುವುದಿಲ್ಲ. ಅಕಾಡೆಮಿಯ ತೀರ್ಮಾನವೇ ಅಂತಿಮವಾಗಿರುತ್ತದೆ.

ಆಸಕ್ತ ಲೇಖಕರು, ಹೆಸರು, ವಿಳಾಸ, ಪ್ರಕಟಣೆ ವರ್ಷದೊಂದಿಗೆ ನಾಲ್ಕು ಪ್ರತಿಗಳನ್ನು ರಿಜಿಸ್ಟ್ರಾರ್, ಕರ್ನಾಟಕ ನಾಟಕ ಅಕಾಡೆಮಿ, ನೆಲಮಹಡಿ, ಚಾಲುಕ್ಯ ವಿಭಾಗ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು – 560 002, ದೂರವಾಣಿ ಸಂ. 080-22244176 ಇಲ್ಲಿಗೆ 2025ನೇ ಜೂನ್ 25 ರೊಳಗಾಗಿ ಸಲ್ಲಿಸುವಂತೆ ಕರ್ನಾಟಕ ನಾಟಕ ಅಕಾಡೆಮಿಯ ರಿಜಿಸ್ಟ್ರಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜವಾಹರ ನವೋದಯ ವಿದ್ಯಾಲಯಗಳಲ್ಲಿ 6ನೇ ತರಗತಿಗೆ ಪ್ರವೇಶಕ್ಕೆ ಅರ್ಜಿ ಆಹ್ವಾನ

ಶಿಕ್ಷಣ ಸಚಿವಾಲಯದ ಅಧೀನ ಸ್ವಾಯತ್ತ ಸಂಸ್ಥೆ, ಕೇಂದ್ರ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ವಿಭಾಗದ ವತಿಯಿಂದ ಜವಾಹರ ನವೋದಯ ವಿದ್ಯಾಲಯಗಳಲ್ಲಿ 2026-27ನೇ ಸಾಲಿಗೆ ಆಯ್ಕೆ ಪರೀಕ್ಷೆಯ ಮೂಲಕ 6ನೇ ತರಗತಿಗೆ ಪ್ರವೇಶಕ್ಕಾಗಿ ಅರ್ಹ ವಿದ್ಯಾರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು 2025 ನೇ ಜುಲೈ 29 ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಸಬಯಸುವ ವಿದ್ಯಾರ್ಥಿಗಳು ಕಾರ್ಯನಿರ್ವಹಿಸುತ್ತಿರುವ ಸಂಬಂಧಿಸಿದ ಜವಾಹರ ನವೋದಯ ವಿದ್ಯಾಲಯಗಳ ಆಯಾ ಜಿಲ್ಲೆಯ ನಿವಾಸಿಗಳು ಆಗಿರಬೇಕು ಮತ್ತು 2025-26 ನೇ ಶೈಕ್ಷಣಿಕ ವರ್ಷದಲ್ಲಿ ಅದೇ ಜಿಲ್ಲೆಯ ಸರ್ಕಾರಿ/ ಸರ್ಕಾರದಿಂದ ಮಾನ್ಯತೆ ಪಡೆದಿರುವ ಶಾಲೆಯಲ್ಲಿ 5ನೇ ತರಗತಿಯಲ್ಲಿ ಓದುತ್ತಿರಬೇಕು.

ವಿದ್ಯಾರ್ಥಿಯು 3 ಮತ್ತು 4 ನೇ ತರಗತಿಯ ಪೂರ್ಣ ಶೈಕ್ಷಣಿಕ ವರ್ಷವನ್ನು ಸರ್ಕಾರಿ/ಸರ್ಕಾರದಿಂದ ಮಾನ್ಯತೆ ಪಡೆದಿರುವ ಶಾಲೆಯಲ್ಲಿ ಪೂರ್ಣಾವಧಿ ಶಾಲಾ ಶಿಕ್ಷಣ ಪಡೆದು ತೇರ್ಗಡ ಹೊಂದಿರಬೇಕು. ದಿನಾಂಕ:01-05-2014 ರಿಂದ ದಿನಾಂಕ: 31-07-2016 ಮಧ್ಯೆ ಜನಿಸಿದವರಾಗಿರಬೇಕು.

ಪ್ರತಿ ಜಿಲ್ಲೆಯಲ್ಲಿ ಸಹ ಶಿಕ್ಷಣ ವಸತಿ ಶಾಲೆಗಳು, ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ವಸತಿ ವ್ಯವಸ್ಥೆ, ಉಚಿತ ಶಿಕ್ಷಣ, ಆಹಾರ ಮತ್ತು ವಸತಿ ವ್ಯವಸ್ಥೆ, ವಲಸೆ ಯೋಜನೆಯ ಮೂಲಕ ವೈವಿಧ್ಯಮಯ ಸಾಂಸ್ಕøತಿಕ ವಿನಿಮಯ, ಕ್ರೀಡೆ ಮತ್ತು ಆಟೋಟಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಎನ್.ಸಿ.ಸಿ., ಸ್ಕೌಟ್ಸ್ ಮತ್ತು ಗೈಡ್ಸ್ ಎನ್.ಎಸ್.ಎಸ್. ತರಬೇತಿ ನೀಡಲಾಗುವುದು.

ಜಿಲ್ಲೆಯಲ್ಲಿ ಕನಿಷ್ಠ ಶೇ. 75% ರಷ್ಟು ಸ್ಥಾನಗಳು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಂದ ತುಂಬಲಾಗುವುದು.

ಸರ್ಕಾರದ ನಿಯಮದನ್ವಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಒಬಿಸಿ ಮತ್ತು ದಿವ್ಯಾಂಗ ವಿದ್ಯಾರ್ಥಿಗಳಿಗೆ  ಮೀಸಲಾತಿ ಇದೆ. ಕನಿಷ್ಠ 1/3 ರಷ್ಟು ಸ್ಥಾನಗಳು ಬಾಲಕಿಯರಿಗೆ ಮೀಸಲಾಗಿರುತ್ತವೆ.

ಆಯ್ಕೆ ಪರೀಕ್ಷೆ ದಿನಾಂಕ ಬೇಸಿಗೆಕಾಲ 2025 ನೇ ಡಿಸೆಂಬರ್ 13 ಹಾಗೂ ಚಳಿಗಾಲದಲ್ಲಿ 2026 ಏಪ್ರಿಲ್ 11 ರಂದು ಆಯ್ಕೆ ಪರೀಕ್ಷೆಗಳು ನಡೆಯುತ್ತವೆ ನೋಂದಣಿ ಮತ್ತು ವಿವರಗಳಿಗಾಗಿ ವೆಬ್‍ಸೈಟ್ https://navodava.gov.in ನ್ನು ಸಂಪರ್ಕಿಸಬಹುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಪ್ರಥಮ ವರ್ಷದ ಪದವಿ ಕೋರ್ಸುಗಳಿಗೆ ಅರ್ಜಿ ಆಹ್ವಾನ

ಕೊಪ್ಪಳ ವಿಶ್ವವಿದ್ಯಾಲಯದ ಅಧೀನದಲ್ಲಿ ಬರುವ ಎಲ್ಲಾ ಸಂಯೋಜಿತ ಸರ್ಕಾರಿ, ಖಾಸಗಿ ಅನುದಾನಿತ ಮತ್ತು ಅನುದಾನೇತರ ಮಹಾವಿದ್ಯಾಲಯಗಳಲ್ಲಿ 2025-26ನೇ ಶೈಕ್ಷಣಿಕ ಸಾಲಿನ ಬಿ.ಎ., ಬಿ.ಕಾಂ., ಬಿ.ಕಾಂ (ಎಇಡಿಪಿ), ಬಿ.ಎಸ್ಸಿ, ಬಿ.ಬಿ.ಎ. ಮತ್ತು ಬಿ.ಸಿ.ಎ. ಕೋರ್ಸುಗಳಿಗೆ ಪ್ರಥಮ ವರ್ಷದ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿಗಳನ್ನು ಯುಯುಸಿಎಂಎಸ್  https://uucms.karnataka.gov.in/  ತಂತ್ರಾಂಶದ ಮುಖಾಂತರ 2025 ರ ಆಗಸ್ಟ್ 31 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಎಲ್ಲಾ ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡೆಸಿಕೊಂಡು ನಿಗದಿತ ದಿನಾಂಕದ ಒಳಗೆ ಪ್ರವೇಶಾತಿಯನ್ನು ಪಡೆದುಕೊಳ್ಳಬೇಕು.

ಹೆಚ್ಚಿನ ವಿವರಗಳಿಗಾಗಿ ಕೊಪ್ಪಳ ವಿಶ್ವವಿದ್ಯಾಲಯದ ಜಾಲತಾಣ www.koppaluniversity.ac.in ಗೆ ಸಂಪರ್ಕಿಸಬಹುದು ಎಂದು ಕೊಪ್ಪಳ ವಿಶ್ವವಿದ್ಯಾಲಯದ ಆಡಳಿತ ವಿಭಾಗದ ಪ್ರಭಾರ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದ್ಯಾರ್ಥಿಗಳು ಪ್ರವೇಶ ಪತ್ರದೊಂದಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ

ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳ ಪರೀಕ್ಷೆ-03 ಬೇರೆ ಬೇರೆ ಕಾಲೇಜುಗಳಲ್ಲಿ ಇರುವುದರಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ವಿದ್ಯಾರ್ಥಿಗಳ ಹಿತವನ್ನು ಗಮನದಲ್ಲಿಟ್ಟುಕೊಂಡು 2025 ನೇ ಜೂನ್ 9 ರಿಂದ 20 ರವರೆಗೆ ಪರೀಕ್ಷೆಗಳು ನಡೆಯುವ ದಿನಾಂಕಗಳಂದು ಪರೀಕ್ಷೆಗೆ ಹಾಜರಾಗಲು ವಾಸಸ್ಥಳದಿಂದ ನಿಯೋಜಿತ ಪರೀಕ್ಷಾ ಕೇಂದ್ರದವರೆಗೆ ಹೋಗುವಾಗ ಮತ್ತು ಹಿಂದಿರುಗುವಾಗ ಸಂಸ್ಥೆಯ ಸಾಮಾನ್ಯ ಸೇವೆಗಳಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷಾ ಪ್ರವೇಶ ಪತ್ರವನ್ನು ತೋರಿಸಿ, ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.

ದ್ವಿತೀಯ ಪಿ.ಯು.ಸಿ ಪರೀಕ್ಷಾ ದಿನಾಂಕಗಳಂದು ಪರೀಕ್ಷಾ ಕೇಂದ್ರಗಳ ಮಾರ್ಗಗಳಲ್ಲಿ ಕಡ್ಡಾಯವಾಗಿ ಎಲ್ಲಾ ಮಾರ್ಗಗಳನ್ನು, ಸುತ್ತುವಳಿಗಳನ್ನು ಕಾರ್ಯಾಚರಣೆಗೊಳಿಸಲಾಗುವುದು.

ಹೆಚ್ಚುವರಿ ಸುತ್ತುವಳಿಗಳ ಕಾರ್ಯಾಚರಣೆಯ ಅಗತ್ಯತೆ ಕಂಡುಬಂದಲ್ಲಿ ಕಾರ್ಯಾಚರಣೆ ಮಾಡಲಾಗುವುದು. ಪರೀಕ್ಷಾ ಕೇಂದ್ರಗಳ ಬಳಿ ವಿದ್ಯಾರ್ಥಿಗಳು/ಪೆÇೀಷಕರು ಕೋರಿಕೆ ನಿಲುಗಡೆ ಕೋರಿದಲ್ಲಿ, ಕೋರಿಕೆ ನಿಲುಗಡೆ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಗೌತಮ ಬುಧ್ಧ ಸೇವಾ ಶಾಂತಿ  ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ ಕುವೆಂಪು ಸಭಾಂಗಣ ಚಾಮರಾಜಪೇಟೆನಲ್ಲಿ ನಡೆದ ‘ ನದಿ ತಟದ ವೃಕ್ಷ ‘ ಡಾ ಪ್ರವೀಣ್ ರಾಜ್ ಕವನ ಸಂಕಲನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಂ ಪ್ರಕಾಶ್ ಮೂರ್ತಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾದ ಮತ್ತು  ಉದಂತ ಶಿವಕುಮಾರ್ ರಾಜರಾಜೇಶ್ವರಿ ನಗರದ ವಿಧಾನಸೌಧದ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರು ಮತ್ತು ಡಾ ನಾಗರಾಜ್ ತಂಬ್ರಹಳ್ಳಿ ಹಾಗೂ ಅನೇಕ ವಿದ್ವಾಂಸರು ಭಾಗವಹಿಸಿ ಈ ಕಾರ್ಯಕ್ರಮದಲ್ಲಿ ಮಾನಮ್ ಫೌಂಡೇಷನ್ ಹೈದರಾಬಾದ್ ರವರ  ಗೌತಮ್ ಬುಧ್ಧ ಸೇವಾ ಶಾಂತಿ  ರಾಷ್ಟ್ರೀಯ ಪ್ರಶಸ್ತಿ 2025 ಪ್ರಶಸ್ತಿ ಪ್ರಧಾನ  ಮಾಡಿದರು.
ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು  ಡಾ ಗಣೇಶ್ ಗೌಡ್ರು  ಸಂಸ್ಥಾಪಕ ಅಧ್ಯಕ್ಷರು ಕರ್ನಾಟಕ ಮಾನವ ಹಕ್ಕುಗಳ ಸಂರಕ್ಷಣಾ ಸಂಸ್ಥೆಯ ಮತ್ತು ಡಾ ಮಲ್ಕಪ್ಪ ಅಲಿಯಾಸ್ ಮಹೇಶ್ ಪ್ರಧಾನ ಕಾರ್ಯದರ್ಶಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ರಿ ಬೆಂಗಳೂರು ಘಟಕ ಮತ್ತು ಡಾ ಎಂ ಎಸ್ ಗಿರೀಶ್  ಮುಖ್ಯಸ್ಥರು ಚರ್ಮರೋಗ ತಜ್ಞ ಇಎಸ್ಐ ಆಸ್ಪತ್ರೆ ರಾಜಾಜಿನಗರ ಬೆಂಗಳೂರು ರವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಶ್ರೀ ರಾಮ ಕಥಾ ಜ್ಞಾನ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಭಾಗಿ

ಬೆಂಗಳೂರು 09.06.2025: ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಬೆಂಗಳೂರಿನಲ್ಲಿ ಶ್ರೀ ರಾಮ ಪರಿವಾರ ದುರ್ಗಾ ಪೂಜಾ ಸಮಿತಿ ವತಿಯಿಂದ ಆಯೋಜಿಸಿದ್ದ ಶ್ರೀ ರಾಮ ಕಥಾ ಜ್ಞಾನ ಕಾರ್ಯಕ್ರಮದ ಶುಭಾರಂಭದಲ್ಲಿ ಭಾಗಾವಹಿಸಿದರು. ಪೂಜ್ಯ ಜಗದ್ಗುರು ಶ್ರೀ ರಾಮಭದ್ರಾಚಾರ್ಯರು ಸಾನಿಧ್ಯವಹಿಸಿದ್ದರು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, “ಇಡೀ ಜಗತ್ತಿನಲ್ಲಿರುವ ಎಲ್ಲಾ ಜೀವಿಗಳ ಕಲ್ಯಾಣ ಮತ್ತು ಜಗತ್ತಿನಲ್ಲಿ ಶಾಂತಿ ಸ್ಥಾಪನೆಯ ಆಶಯದೊಂದಿಗೆ, ಶ್ರೀ ರಾಮ ಪರಿವಾರ್ ದುರ್ಗಾ ಪೂಜಾ ಸಮಿತಿಯು ಶ್ರೀ ರಾಮ ಕಥಾ ಜ್ಞಾನ ಯಜ್ಞವನ್ನು ಆಯೋಜಿಸಿರುವುದು ಬಹಳ ಉತ್ತಮ ಕಾರ್ಯವಾಗಿದೆ. ಜಗದ್ಗುರು ಶ್ರೀ ರಾಮಭದ್ರಾಚಾರ್ಯ ಅವರು ರಾಮಕಥೆಯನ್ನು ಆಯೋಜಿಸಿದಾಗ, ಅದು ಕೇವಲ ಕಥೆಯ ನಿರೂಪಣೆಯಾಗಿರುವುದಿಲ್ಲ, ಬದಲಾಗಿ ಅದು ಭಕ್ತರಿಗೆ ಆತ್ಮಶುದ್ಧಿ, ಭಕ್ತಿ ಮತ್ತು ಸಂಸ್ಕಾರಗಳ ದೈವಿಕ ಹರಿವಾಗಿ ಪರಿಣಮಿಸುತ್ತದೆ. ಶಾಸ್ತ್ರೀಯತೆ, ಆಧುನಿಕ ಪ್ರಸ್ತುತತೆ ಮತ್ತು ಆಧ್ಯಾತ್ಮಿಕ ಶಕ್ತಿಯು ಅವರ ಭಾಷಣದಲ್ಲಿ ಏಕಕಾಲದಲ್ಲಿ ಕಾಣಿಸಿಕೊಳ್ಳುತ್ತದೆ” ಎಂದರು.”ಪರಮ ಪೂಜ್ಯ ಜಗದ್ಗುರು ಶ್ರೀ ರಾಮಭದ್ರಾಚಾರ್ಯ ಮಹಾರಾಜ್ ಅವರು ಪ್ರಸಿದ್ಧ ಸಂತ, ವಿದ್ವಾಂಸ, ಕವಿ, ಆಧ್ಯಾತ್ಮಿಕ ಗುರು ಮತ್ತು ಸಮಾಜ ಸೇವಕ. ಅವರು ಮಹಾನ್ ವಿದ್ವಾಂಸರು ಮತ್ತು ವೇದಗಳು, ಪುರಾಣಗಳು, ಸಂಸ್ಕೃತ, ಹಿಂದಿ ಸಾಹಿತ್ಯ ಮತ್ತು ಸನಾತನ ಧರ್ಮದ ಸ್ಫೂರ್ತಿಯ ಮೂಲ. ಚಿಕ್ಕ ವಯಸ್ಸಿನಲ್ಲಿಯೇ ದೃಷ್ಟಿ ಕಳೆದುಕೊಂಡಿದ್ದರೂ, ನಿಮ್ಮ ಆತ್ಮವಿಶ್ವಾಸ ಮತ್ತು ಆಧ್ಯಾತ್ಮಿಕ ಅಭ್ಯಾಸದ ಮೂಲಕ ನೀವು ಅನೇಕ ವಿಷಯಗಳನ್ನು ಸಾಧಿಸಿದ್ದಾರೆ. ಅವರು ಅಸಾಧಾರಣ ಸ್ಮರಣಶಕ್ತಿ, ವಾಗ್ಮಿ ಕೌಶಲ್ಯ ಮತ್ತು ಸೃಜನಶೀಲತೆಗೆ ನೀವು ಪ್ರಸಿದ್ಧರಾಗಿದ್ದೀರಿ. ನೀವು ಅನೇಕ ಭಾಷೆಗಳಲ್ಲಿ ಪ್ರವೀಣರು. ಸಾರ್ವಜನಿಕ ಹಿತಾಸಕ್ತಿ ಮತ್ತು ರಾಷ್ಟ್ರೀಯ ಹಿತಾಸಕ್ತಿಗೆ ನೀಡಿದ ಕೊಡುಗೆಗಾಗಿ ಅವರಿಗೆ ಪದ್ಮವಿಭೂಷಣ ಸೇರಿದಂತೆ ಹಲವು ಗೌರವಗಳು ಸಂದಿವೆ. ಅವರ ಜೀವನ ನಮಗೆಲ್ಲರಿಗೂ ಸ್ಫೂರ್ತಿಯ ಮೂಲವಾಗಿದೆ” ಎಂದು ಹೇಳಿದರು.

“ತುಳಸಿ ಸಾಹಿತ್ಯದ ಉತ್ತಮ ವ್ಯಾಖ್ಯಾನಕಾರರು ಮತ್ತು “ಶ್ರೀ ರಾಮಚರಿತಮಾನಸ”ದ ಮೇಲೆ ಅತ್ಯುತ್ತಮ ವ್ಯಾಖ್ಯಾನವನ್ನು ರಚಿಸಿದ್ದಾರೆ. ಅವರು ಅಂಗವಿಕಲರಿಗಾಗಿ “ಜಗದ್ಗುರು ರಾಮಭದ್ರಾಚಾರ್ಯ ದಿವ್ಯಾಂಗ ವಿಶ್ವವಿದ್ಯಾಲಯ”ವನ್ನು ಸ್ಥಾಪಿಸಿದ್ದಾರೆ. ಅಂಗವಿಕಲ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ಒದಗಿಸಲು ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿರುವ ದೇಶದ ಮೊದಲ ವಿಶ್ವವಿದ್ಯಾಲಯ ಇದಾಗಿದೆ. ಜಗದ್ಗುರು ಶ್ರೀ ರಾಮಭದ್ರಾಚಾರ್ಯ ಅವರು ರಾಮಕಥೆಯನ್ನು ಆಯೋಜಿಸಿದಾಗ, ಅದು ಕೇವಲ ಕಥೆಯ ನಿರೂಪಣೆಯಾಗಿರುವುದಿಲ್ಲ, ಬದಲಾಗಿ ಅದು ಭಕ್ತರಿಗೆ ಆತ್ಮಶುದ್ಧಿ, ಭಕ್ತಿ ಮತ್ತು ಸಂಸ್ಕಾರಗಳ ದೈವಿಕ ಹರಿವಾಗಿ ಪರಿಣಮಿಸುತ್ತದೆ. ಶಾಸ್ತ್ರೀಯತೆ, ಆಧುನಿಕ ಪ್ರಸ್ತುತತೆ ಮತ್ತು ಆಧ್ಯಾತ್ಮಿಕ ಶಕ್ತಿಯು ಅವರ ಭಾಷಣದಲ್ಲಿ ಏಕಕಾಲದಲ್ಲಿ ಕಾಣಿಸಿಕೊಳ್ಳುತ್ತದೆ” ಎಂದು ತಿಳಿಸಿದರು.

“ಶ್ರೀ ರಾಮಭದ್ರಾಚಾರ್ಯ ಅವರು ತುಳಸಿದಾಸರ ರಾಮಚರಿತಮಾನಸಗಳ ಕುರಿತು ಆಳವಾದ ವ್ಯಾಖ್ಯಾನವನ್ನು ಮಾಡುತ್ತಾರೆ. ಇದು ಭಕ್ತರನ್ನು ಆಧ್ಯಾತ್ಮಿಕತೆಯ ಆಳಕ್ಕೆ ಕೊಂಡೊಯ್ಯುತ್ತದೆ. ಅವರ ಹೇಳಿಕೆಗಳು ಸಂಸ್ಕೃತ ಶ್ಲೋಕಗಳು, ಹಿಂದಿ ಶ್ಲೋಕಗಳು ಮತ್ತು ಜಾನಪದ ಭಾಷೆಯ ವಿಶಿಷ್ಟ ಸಂಯೋಜನೆಯನ್ನು ಹೊಂದಿವೆ. ಅವರು ನಿರೂಪಿಸುವ ರಾಮಕಥೆಯ ಪ್ರತಿಯೊಂದು ಕಂತಿನಲ್ಲಿಯೂ, ಜೀವನದ ನೈತಿಕ ಮತ್ತು ಸಾಮಾಜಿಕ ಸಂದೇಶಗಳು ಅಡಗಿರುತ್ತವೆ. ರಾಮಕಥೆಯನ್ನು ಕೇಳುವಾಗ, ಕೇಳುಗರ ಕಣ್ಣುಗಳು ಕಣ್ಣೀರು ಸುರಿಸುತ್ತವೆ. ಅಯೋಧ್ಯೆ, ಚಿತ್ರಕೂಟ ಮತ್ತು ಲಂಕಾದ ದೃಶ್ಯಗಳಲ್ಲಿ ಭಕ್ತರು ತಮ್ಮನ್ನು ತಾವು ಅನುಭವಿಸುವ ನಂಬಿಕೆ, ಕರುಣೆ ಮತ್ತು ಭಕ್ತಿಯ ಸಂಗಮವಿದೆ” ಎಂದು ಹೇಳಿದರು.

“ಶ್ರೀ ರಾಮಭದ್ರಾಚಾರ್ಯರು ನಿರೂಪಿಸಿದ ರಾಮಕಥೆಯು ಧಾರ್ಮಿಕ ಆಚರಣೆಯಲ್ಲದೆ, ಮಾನವ ಜೀವನವನ್ನು ಧರ್ಮ, ಕರುಣೆ ಮತ್ತು ಕರ್ತವ್ಯದ ಹಾದಿಯಲ್ಲಿ ಕೊಂಡೊಯ್ಯುವ ದೈವಿಕ ಸ್ಫೂರ್ತಿಯಾಗಿದೆ. ನಮ್ಮ ಸಾಂಸ್ಕೃತಿಕ ಸಂಪ್ರದಾಯವು ಬಹಳ ಪ್ರಾಚೀನವಾಗಿದೆ ಮತ್ತು ಪ್ರಾಚೀನ ಕಾಲದಿಂದಲೂ “ವಸುದೇವಂ ಕುಟುಂಬಕಂ” ತತ್ವಶಾಸ್ತ್ರ ಮತ್ತು ಧ್ಯಾನದ ಮೇಲೆ ಕೇಂದ್ರೀಕೃತವಾಗಿದೆ ಮತ್ತು “ಸರ್ವೇ ಭವಂತು ಸುಖಿನೋ, ಸರ್ವೇ ಸಂತು ನಿರಾಮಯ” ಎಂಬ ಮನೋಭಾವದಿಂದ ಪ್ರೇರಿತವಾಗಿದೆ ಮತ್ತು ಯಾವಾಗಲೂ ವಿಶ್ವ ಸಹೋದರತ್ವ, ವಿಶ್ವ ಶಾಂತಿ ಮತ್ತು ಸಮಾನತೆ ಮತ್ತು ಸಾಮರಸ್ಯವನ್ನು ಪ್ರೇರೇಪಿಸುತ್ತದೆ. ಇಂದು ಇಡೀ ಜಗತ್ತು ಸ್ವ-ಕಲ್ಯಾಣ, ಆಂತರಿಕ ಶಾಂತಿ ಮತ್ತು ಆಧ್ಯಾತ್ಮಿಕ ಅಭಿವೃದ್ಧಿಗಾಗಿ ಭಾರತದ ಕಡೆಗೆ ನೋಡುತ್ತಿದೆ. ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಧಾರ್ಮಿಕ ಪ್ರಜ್ಞೆ, ನೈತಿಕ ಜಾಗೃತಿ ಮತ್ತು ಸಾಂಸ್ಕೃತಿಕ ಸಂರಕ್ಷಣೆಯ ಬಲವಾದ ಸ್ತಂಭಗಳನ್ನು ಸೃಷ್ಟಿಸುತ್ತವೆ. ಇದು ವಿಶ್ವ ಶಾಂತಿ ಮತ್ತು ವಿಶ್ವ ಕಲ್ಯಾಣದ ದಿಕ್ಕಿನಲ್ಲಿ ಅರ್ಥಪೂರ್ಣವಾಗಿರುತ್ತದೆ” ಎಂದು ಅಭಿಪ್ರಾಯಪಟ್ಟರು.

ಒತ್ತಡಕ್ಕೆ ಮಣಿದು ಶರಣಾದ ಪತ್ನಿ , ಮೇಘಾಲಯಕ್ಕೆ ವಾಪಸ್ ಕರೆತಂದ ಪೊಲೀಸರು

ಮೇಘಾಲಯದಲ್ಲಿ ಹನಿಮೂನ್‌ಗೆ ಹೋದಾಗ ಪತಿ ಇಂದೋರ್ ಮೂಲದ ರಾಜಾ ರಘುವಂಶಿ ಹ*ತ್ಯೆಯಲ್ಲಿ ಭಾಗಿಯಾಗಿದ್ದಾಳೆಂದು ಶಂಕಿಸಲಾಗಿರುವ ಸೋನಮ್ ರಘುವಂಶಿ “ಒತ್ತಡದ ಮೇರೆಗೆ ಶರಣಾಗಿದ್ದಾರೆ” ಎಂದು ಪೊಲೀಸರು ತಿಳಿಸಿದ್ದಾರೆ.

ಜೂನ್ 2 ರಂದು ಪೂರ್ವ ಖಾಸಿ ಬೆಟ್ಟಗಳಲ್ಲಿರುವ ವೈಸಾವ್ಡಾಂಗ್ ಜಲಪಾತದ ಪಾರ್ಕಿಂಗ್ ಸ್ಥಳದ ಕೆಳಗಿನ ಕಮರಿಯಲ್ಲಿ ಪತಿಯ ಶವ ಪತ್ತೆಯಾದ ನಂತರ ನಾಪತ್ತೆಯಾಗಿದ್ದ ಸೋನಮ್ ಅವರನ್ನು ಉತ್ತರ ಪ್ರದೇಶದ ಘಾಜಿಪುರ ಜಿಲ್ಲೆಯಿಂದ ಪತ್ತೆ ಮಾಡಿ ವಶಕ್ಕೆ ಪಡೆಯಲಾಗಿದೆ. ಅವರು ಭಾನುವಾರ ತಡರಾತ್ರಿ ನಂದಗಂಜ್ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾರೆ.
ಐಎಎನ್‌ಎಸ್‌ಗೆ ಪ್ರತ್ಯೇಕವಾಗಿ ಮಾತನಾಡಿದ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಡಾಲ್ಟನ್ ಪಿ ಮರಕ್, “ಸೋನಮ್ ನಿನ್ನೆ ರಾತ್ರಿ ಒತ್ತಡಕ್ಕೆ ಮಣಿದು ಶರಣಾಗಿದ್ದಾರೆ, ಇದರಿಂದಾಗಿ ಪ್ರಕರಣದಲ್ಲಿ ಒಟ್ಟು ಬಂಧನಗಳ ಸಂಖ್ಯೆ ನಾಲ್ಕಕ್ಕೆ ತಲುಪಿದೆ. ಒಬ್ಬ ಆರೋಪಿ ಇನ್ನೂ ನಾಪತ್ತೆಯಾಗಿದ್ದಾನೆ. ನ್ಯಾಯಾಲಯದ ವಿಚಾರಣೆಗಾಗಿ ಸೋನಮ್‌ನನ್ನು ಮೇಘಾಲಯಕ್ಕೆ ಕರೆತರಲಾಗುವುದು” ಎಂದು ಹೇಳಿದರು.

ಸೋನಮ್ ಸೇರಿದಂತೆ ಪೊಲೀಸರು ಇಲ್ಲಿಯವರೆಗೆ ನಾಲ್ವರನ್ನು ಬಂಧಿಸಿದ್ದಾರೆ. ಇತರ ಮೂವರನ್ನು ವಿವಿಧ ರಾಜ್ಯಗಳಿಂದ ಬಂಧಿಸಲಾಗಿದೆ;

ಪೊಲೀಸರ ಪ್ರಕಾರ, ಗುತ್ತಿಗೆ ಕೊಲೆಗಾರರನ್ನು ನೇಮಿಸಿಕೊಳ್ಳುವ ಮೂಲಕ ಸೋನಮ್ ತನ್ನ ಪತಿಯ ಹತ್ಯೆಯನ್ನು ಸಂಘಟಿಸಿದ ಆರೋಪ ಹೊರಿಸಲಾಗಿದೆ. ಈ ಪ್ರಕರಣವನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ನಿರ್ವಹಿಸುತ್ತಿದೆ, ಇದು ಶಂಕಿತರನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಬಹು ರಾಜ್ಯಗಳಲ್ಲಿ ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಿತು.
ಸೋನಂ ಕುಟುಂಬವು ಕೊಲೆ ಆರೋಪಗಳನ್ನು ಬಲವಾಗಿ ನಿರಾಕರಿಸಿದೆ. ಆಕೆಯ ತಂದೆ ದೇವಿ ಸಿಂಗ್, ತಮ್ಮ ಮಗಳು ನಿರಪರಾಧಿ ಎಂದು ಸಮರ್ಥಿಸಿಕೊಂಡಿದ್ದಾರೆ ಮತ್ತು ಕೇಂದ್ರ ತನಿಖಾ ದಳ (ಸಿಬಿಐ)ದಿಂದ ಸ್ವತಂತ್ರ ತನಿಖೆಗೆ ಒತ್ತಾಯಿಸಿದ್ದಾರೆ.

ಚಾಮರ ವಜ್ರ – ಮರಕಟ ಸಭಾಂಗಣದಲ್ಲಿ ರಂಗಾಭಿವಂದನೆ

ಬೆಂಗಳೂರಿನ ಚಾಮರ ವಜ್ರ – ಮರಕಟ ಸಭಾಂಗಣದಲ್ಲಿ ದಿನಾಂಕ ೧೪೨೦೨೫ ರಂದು ಸಂಜೆ

೫: ೩೦ಕ್ಕೆ ಕುಮಾರಿ. ಮಾನ್ಯ ಮತ್ತು ಕುಮಾರಿಪ್ರಗ್ಯಾ ರಂಗಾಭಿವಂದನೆ ಕಾರ್ಯಕ್ರಮ ಏರ್ಪಡಿಸಲಾಗಿದೆ.

ನೃತ್ಯೋಮ ಅಕಾಡೆಮಿಯ  ನಿರ್ದೇಶಕರಾದ ಗುರು ಶ್ರೀಮತಿ ರಾಧಿಕ ಎಂ.ಕೆಸ್ವಾಮಿ ಅವರ ವಿದ್ಯಾರ್ಥಿಗಳು  ನೃತ್ಯ ಪ್ರದರ್ಶನ ನೀಡುತ್ತಿದ್ದಾರೆ,

ಎಲ್ಲರಿಗೂ ಸ್ವಾಗತ.

ರಾಧಿಕಾ ಎಂ ಕೆ ಸ್ವಾಮಿ

ನೃತ್ಯೋಮ ಅಕಾಡೆಮಿ ನಿರ್ದೇಶಕಿ.