Home Blog Page 87

Craftizen’s ToT Empowers 101 NGOs to Support Persons with Intellectual Disabilities

We am excited to share a story of transformation and empowerment from Craftizen Foundation. Our recently concluded Training of Trainers (ToT) program, held from June 5th to 7th, 2025, at Basavanagudi Bangalore, has made a significant impact by supporting 15 NGOs and special schools. This initiative is helping transform the lives of persons with intellectual disabilities by equipping trainers with practical, eco-friendly livelihood skills.
Through this program, 30 trainers learned to create a variety of upcycled and sustainable crafts—including silicone mould flowers, wax tablets, incense sticks, MDF and flow-dust rakhis, torans, paper crafts, popcorn and fabric tassels, paper flowers, and Akash kandils. In addition to craft skills, the training covered vital topics such as cost management, packaging, product display, quality assurance, and market linkage—empowering trainers to build sustainable income-generation opportunities for their beneficiaries.
With this successful ToT, Craftizen Foundation has expanded its partnership network to 101 NGOs across India, all working towards inclusive and meaningful livelihoods for persons with intellectual disabilities.
We believe this inspiring story of transformation and inclusion will resonate with your readers. We kindly request you to consider publishing the press note below in your esteemed publication. Should you need further information, or photographs, please feel free to reach out.

A Platform Celebrating Culinary Art – FOCUS ON THE AGE-OLD LOST REMOTE RECIPES

World of Hospitality offers the next generation of culinary talents an opportunity to explore their culinary art abilities

Hundreds of culinary talents from South of India
will display their masterly skills

Brace yourself to witness the culinary extravaganza
from across the world over, all under one roof

The one-of-its-kind competition that brings together the industry’s best professional chefs and academia. World of Hospitality [WOH], is all set to unveil it’s live chef’s competition in Bengaluru. In association with South India Chef’s Association (SICA), the prestigious culinary arts competition will see over 250+ professional chefs representing Bengaluru’s food service industry present their culinary skills at Tripura Vasini, Palace Ground from 12 to 14 June 2025 @ 11 AM to 7 PM.


The competition is a highly sought-after platform for several chefs in the city to bag accreditation for their skills and also to improve by listening to the detailed feedback from the internationally acclaimed chef jury panel. The dedicated masterclasses hosted by partner brands further help them choose their ingredients wisely and also open vivid networking opportunities, hence bolstering the industry-supplier relations. As everything around us is transforming, the culinary arts keep changing in real-time to meet the contemporary palate needs of the patron. Innovation has led the industry to thrive time and again and some latest trends showcase chefs are pushing the boundaries in bringing to the table unexplored dishes. Some focus on the age-old lost remote recipes intending to revive the historic cuisines while the others strive to rewrite history by birthing a brainchild of their own. Did you hear about vegan sushi or roti pizza before? That’s the kind of dynamism you can witness at this power-packed chef’s competition.
sica.co.in | Ph : 98440 06736

“ಹರಿದಾಸ ಸಾಹಿತ್ಯ ಹರಿಕಾರ” ಶ್ರೀ  ಶ್ರೀಪಾದರಾಜರು

“ಹರಿದಾಸ ಸಾಹಿತ್ಯ ಹರಿಕಾರ” ಶ್ರೀ  ಶ್ರೀಪಾದರಾಜರು
(ಜೂನ್ 10, ಗುರುಗಳ ಆರಾಧನೆ ಪ್ರಯುಕ್ತ ಈ ಲೇಖನ)
ಗುರುಭ್ಯೋ ನಮಃ, ಪರಮ ಗುರುಭ್ಯೋನಮಃ ಶ್ರೀಮದಾನಂದತೀರ್ಥ ಭಗವತ್ ಪಾದಾಚಾರ್ಯ ಗುರುಭ್ಯೋನಮಃ
ತಂ ವಂದೇ ನೃಸಿಂಹತೀರ್ಥನಿಲಯಂ ಶ್ರೀ ವ್ಯಾಸರಾಟ್ ಪೂಜಿತಂ ಧ್ಯಾಯಂತಂ ಮನಸಾನೃಸಿಂಹ ಚರಣಂ ಶ್ರೀಪಾದರಾಜಂ ಗುರುಂ.
,
ಜೇಷ್ಠ ಬಹುಳ ಚತುರ್ದಶಿ ಶ್ರೀ ಶ್ರೀಪಾದರಾಜರ ಆರಾಧನೆ.
ಇದರ ನಿಮಿತ್ತ ಪ್ರಸ್ತುತ ಶ್ರೀಪಾದರಾಜರ ಮಠದ ಪ್ರಸ್ತುತ  ಪೀಠಾಧಿಪತಿಗಳಾದ ಶ್ರೀ ೧೦೮ ಶ್ರೀ ಸುಜಯನಿಧಿತೀರ್ಥ ಶ್ರೀಪಾದಂಗಳವರು ಒಂದು ತಿಂಗಳ ಕಾಲ ವಿಶೇಷವಾದ ಕಾರ್ಯಕ್ರಮವನ್ನು ಶ್ರೀಪಾದರಾಜರ ಮೂಲಮಠದಲ್ಲಿ ಹಮ್ಮಿಕೊಂಡಿದ್ದು ವಿಶೇಷವಾದ ಜ್ಞಾನ  ಕಾರ್ಯವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಅವರಿಗೆ ಹೃತ್ಪೂರ್ವಕವಾಗಿ ನಮಿಸುತ್ತಾ ಶ್ರೀಪಾದರಾಜರ ಬಗ್ಗೆ ಪುಟ್ಟ ಲೇಖನವನ್ನು ಬರೆಯುವ ಪ್ರಯತ್ನ ಮಾಡುತ್ತಿದ್ದೇನೆ.
ಮಹನೀಯರು ಮತ್ತು ಧ್ರುವಾಂಶ ಸಂಭೂತರಾದ ಶ್ರೀಪಾದರಾಜರು  ಹೆಸರಿಗೆ ತಕ್ಕಂತೆ  ಶ್ರೀಪಾದರುಗಳಿಗೆ ರಾಜರು, ಮಹಾಪುಣ್ಯ ಪುರುಷರು. ಪ್ರಾತಃಕಾಲದಲ್ಲಿ ನಾವು ನಿತ್ಯ ಅವರ ಸ್ಮರಣೆ ಮಾಡಿದರೆ ನಮಗೆ ಸಕಾಲದಲ್ಲಿ ಮೃಷ್ಟಾನ್ನ ಭೋಜನ ದೊರೆಯುವುದೆಂಬ ಭಾವನೆ ಇನ್ನೂ ಜನರಲ್ಲಿ ನೆಲೆಗೊಂಡಿದೆ. ಹರಿದಾಸ ಪೀಳಿಗೆಯಲ್ಲಿ ಪ್ರಥಮತ: ಶ್ರೀಪಾದರಾಜಾಯ ನಮಃ ಎಂಬ ಪುಣ್ಯ ನಾಮವನ್ನು ಸ್ಮರಿಸಬೇಕಾಗುತ್ತದೆ. ಕೃತಿಯಿಂದಲೂ ಆಕೃತಿ (ಶಾಸ್ತ್ರಗ್ರಂಥ)ಯಿಂದಲೂ ಶ್ರೀಪಾದರಾಜರು ಶ್ರೀಪಾದರಾಜರೇ ಎಂದು  ಹೊಗಳುತ್ತದೆ. ಇವರ ಪಾಂಡಿತ್ಯದ ಪರಮಾವಧಿಯನ್ನು ತಿಳಿಯಬೇಕಾದರೆ ಇವರು ರಚಿಸಿದ “ವಾಗ್ವಜ್ರ” ಎಂಬ ಗ್ರಂಥವನ್ನು ತಿಳಿಯಬೇಕು.
ಶ್ರೀಪಾದರಾಜರ ಪರಿಚಯ :
ಇವರ ತಂದೆ ಶೇಷಗಿರಿ ಆಚಾರ್ಯರು, ತಾಯಿ ಗಿರಿಯಮ್ಮ.ಮೈಸೂರು ಸೀಮೆಯ ಚನ್ನಪಟ್ಟಣದ ತಾಲ್ಲೂಕಿನ ಅಬ್ಬೂರು ಸಮೀಪದಲ್ಲಿ ಶೇಷಗಿರಿ ದಂಪತಿಗಳು ತೋಟವನ್ನು ಬೆಳಸಿಕೊಂಡು ವ್ಯವಸಾಯ ಮಾಡುತ್ತಾ ಬಡತನ ಜೀವನದಿಂದಲೇ ತೃಪ್ತರಾಗಿದ್ದರು. ಇಂತಹ ಬಡದಂಪತಿಗೆ ಜನಿಸಿ ಲಕ್ಷ್ಮೀನಾರಾಯಣ ಎಂದು ಕರೆಸಿಕೊಳ್ಳುತ್ತಿದ್ದ ಬಾಲಕ ಪರಮಾತ್ಮನ ವಿಶೇಷ ಅನುಗ್ರಹದಿಂದ ಲೋಕ ವಿಖ್ಯಾತರಾದ ಶ್ರೀಪಾದರಾಜರಾದರು. ಈ ಬಾಲಕ ತಂದೆಯ ಬಳಿಯಲ್ಲಿ ಅಷ್ಟಿಷ್ಟು ವಿದ್ಯಾಭ್ಯಾಸ ಮಾಡಿ ಮನೆಯ ಕೆಲಸ ಮಾಡಿ ದನಗಳನ್ನು  ಗುಡ್ಡದ ಬಳಿಯಲ್ಲಿ ಮೇಯಿಸಿಕೊಂಡು ಬರುವ ಕೆಲಸ ಮಾಡುತ್ತಿದ್ದನು.
ಕಿಮಲಾಭ್ಯಂ ಭಗವತಿ ಪ್ರಸನ್ನೇ ಶ್ರೀನಿಕೇತನೆ ಎಂಬಂತೆ  ಒಂದು ದಿನ ಶ್ರೀರಂಗಪಟ್ಟಣದಿಂದ ಹೊರಟು ಸಂಚಾರ ಮಾಡಿಕೊಂಡು ಬರುತ್ತಿದ್ದ ಸ್ವರ್ಣವರ್ಣತೀರ್ಥರ ಮೇನೆಯು ಆ ಗುಡ್ಡಗಾಡಿನ ಕಾಲುಧಾರಿಯಲ್ಲಿ ಸಾಗುತ್ತಾ ಬರುತ್ತಿತ್ತು. ದನ ಕಾಯುತ್ತಿದ್ದ ಲಕ್ಷ್ಮೀನಾರಾಯಣನನ್ನು ಕರೆದು ಅಬ್ಬೂರು ಎಷ್ಟು ದೂರವಿದೆ ಎಂದು ಕೇಳಿದಾಗ ಆ ಬಾಲಕ ನನ್ನನ್ನು ನೋಡಿ ದನಗಳನ್ನು ನೋಡಿ  ಸೂರ್ಯನನ್ನು ನೋಡಿ ಎಷ್ಟು ದೂರವು ಗೊತ್ತಾಗುತ್ತೆ ಎಂದು ಚಮತ್ಕಾರದಿಂದ ಹೇಳಿದನು. ಆ ಬಾಲಕನ ಮಾತಿಗೆ ಸ್ವಾಮಿಗಳು ತುಂಬಾ ಸಂತೋಷಪಟ್ಟು ಅವನ ತಲೆಯ ಮೇಲೆ ಕೈ ಆಡಿಸಿ ಮಂತ್ರಾಕ್ಷತೆಯನ್ನು ಹಾಕಿದರು. ಮುಂದೆ ಪುರುಷೋತ್ತಮತೀರ್ಥರ ಮಠದಲ್ಲಿ ಸ್ವರ್ಣವರ್ಣತೀರ್ಥರ ಬಿಡಾರವಾಯಿತು. ಶ್ರೀಪಾದರೀರ್ವರ ಸಮಾಗಮ ಗಂಗಾ ಯಮುನಾ ಸಂಗಮದಂತಾಯಿತು. ಉಭಯ ಯತಿಗಳು ದೇವರ ಮಹಾಭಕ್ತರು. ಲಕ್ಷ್ಮೀನಾರಾಯಣನಿಗೆ ಮುಂದೆ ಉಪನಯನ ಸಂಸ್ಕಾರವಾಯಿತು. ಲಕ್ಷ್ಮೀನಾರಾಯಣನಿಗೆ ಸ್ವರ್ಣವರ್ಣತೀರ್ಥರು ಸನ್ಯಾಸತ್ವವನ್ನು ಕೊಟ್ಟು ಲಕ್ಷ್ಮೀನಾರಾಯಣಮುನಿ ಎಂದು ಆಶ್ರಮ ನಾಮವನ್ನು ಕೊಟ್ಟರು. ಪೀಠಾರೋಹಣ ಆದ ತಕ್ಷಣ ರಾಯರ ಮಠದ ಪೂರ್ವಪೀಳಿಗೆಯ ವಿಭುದೇಂದ್ರತೀರ್ಥರಲ್ಲಿ ವಿದ್ಯಾಭ್ಯಾಸವನ್ನು ಮಾಡಿದರು. ನಂತರ ವಿಭುದೇಂದ್ರತೀರ್ಥರು ಮತ್ತು ಶ್ರೀಪಾದರಾಜರು ಸಂಚಾರ ಮಾಡುತ್ತಾ ಕೃಷ್ಣಾ ತೀರದಲ್ಲಿದ್ದ ಕಾರ್ಪರ ನರಸಿಂಹ ಕ್ಷೇತ್ರದಲ್ಲಿ ಚಾತುರ್ಮಾಸ ಸಂಕಲ್ಪ ಕೈಗೊಂಡರು. ಇದೇ ಕಾಲದಲ್ಲಿ ಉತ್ತರಾದಿಮಠದ ಶ್ರೀ ರಘುನಾಥತೀರ್ಥರು ಅಲ್ಲಿಗೆ ಬಂದರು. ಲಕ್ಷ್ಮೀನಾರಾಯಣತೀರ್ಥರ ಪಾಂಡಿತ್ಯ ಪರೀಕ್ಷೆ ಮಾಡಬೇಕೆಂದು ನ್ಯಾಯಸುಧೆಯಲ್ಲಿ ಕಠಿಣವಾದ ವಾಕ್ಯವನ್ನು ವಿಮರ್ಶೆಗೆ ತಂದರು. ಅಷ್ಟೇ ಸಾಕೆಂದು ಲಕ್ಷ್ಮೀನಾರಾಯಣ ಮುನಿಗಳು ಇಡೀ ಸುಧಾ ಗ್ರಂಥವನ್ನು ವಿಚಿತ್ರ ರೀತಿಯಿಂದ ಅನುವಾದ ಮಾಡಿ ತೋರಿಸಿದರು. ರಘುನಾಥತೀರ್ಥರು ಲಕ್ಷ್ಮೀನಾರಾಯಣತೀರ್ಥರ ಪಾಂಡಿತ್ಯಕ್ಕೆ ಬೆರಗಾಗಿ ಅವರನ್ನು ಪ್ರಶಂಸಿಸಿದರು. ಲಕ್ಷ್ಮೀನಾರಾಯಣತೀರ್ಥರು ರಘುನಾಥತೀರ್ಥರಿಗೆ ತಾವು ಮಹಾಸಂಸ್ಥಾನಾಧೀಶರಾದ ಶ್ರೀಪಾದಂಗಳು ನಾನಾದರೋ ಬಾಲಸನ್ಯಾಸಿ ನನ್ನಂಥವರ ಪ್ರಶಂಸೆ ಮಾಡಬಾರದು ಎಂದಾಗ ರಘುನಾಥತೀರ್ಥರು ಆ ಮಾತಿನ ಮರ್ಮವನ್ನು ಅರಿತು ನಾವು ಬರೀ ಶ್ರೀಪಾದರು. ತಾವಾದರೋ ಶ್ರೀಪಾದರುಗಳಿಗೆ ರಾಜರು ಎಂದು ಮನಪೂರ್ವಕವಾಗಿ ಆಶೀರ್ವದಿಸಿ ಇದಕ್ಕೆ ಶ್ರೀರಾಮಚಂದ್ರ ದೇವರೇ ಸಾಕ್ಷಿ ಎಂದು ಕೊಂಡಾಡಿದರು. ಅಂದಿನಿಂದ ಲಕ್ಷ್ಮೀನಾರಾಯಣತೀರ್ಥರು  ಶ್ರೀಪಾದರಾಜರು ಎಂಬ ಹೆಸರಿನಿಂದ ಲೋಕ ವಿಖ್ಯಾತರಾದರು. ಶ್ರೀಪಾದರಾಜರು ಸಂಚಾರವನ್ನು ಮುಗಿಸಿ ಶ್ರೀರಂಗಕ್ಕೆ ಬಂದ ಸ್ವಲ್ಪ ದಿನಗಳಲ್ಲಿ ಸ್ವರ್ಣವರ್ಣತೀರ್ಥರು ಬೃಂದಾವನಸ್ಥರಾದರು. ಪದ್ಮನಾಭತೀರ್ಥರ ಮಠದ ಸರ್ವಾಧಿಪತ್ಯವು ಶ್ರೀಪಾದರಾಜರದಾಯಿತು.
ಶ್ರೀಪಾದರಾಜರು ವ್ಯಾಸ ಸಾಹಿತ್ಯ ಮತ್ತು  ದಾಸ ಸಾಹಿತ್ಯಕ್ಕೆ  ಅಪಾರವಾದ ಕೊಡುಗೆಯನ್ನು ಕೊಟ್ಟಿದ್ದಾರೆ.
ಪೂಜಾ ಕಾಲದಲ್ಲಿ ವೈದಿಕ ಪಂಡಿತರಿಂದ ವೇದ ಪಾರಾಯಣ ಮಾಡಿಸುವಂತೆ ದಾಸ ಸಾಹಿತ್ಯಕ್ಕೆ ಹೆಚ್ಚು ಮನ್ನಣೆ ಕೊಟ್ಟು ಭಾಗವತರ ಮುಖದಿಂದ ಕನ್ನಡ ದೇವರ ನಾಮಗಳನ್ನೂ ಹಾಡಿಸಿದರು. ಶ್ರೀಪಾದರಾದರು ಪೂಜಾ ಕಾಲದಲ್ಲಿ ಹಾಡುತ್ತಿದ್ದ ಹಾಡುಗಳು ಎಂದರೆ ಬ್ರಹ್ಮರ ಗೀತೆ, ವೇಣು ಗೀತೆ, ಗೋಪಿ ಗೀತೆಗಳು ‌ಸುಂದರ ಸಾಹಿತ್ಯದ ದಿವ್ಯ ಹಾಡುಗಳು ಶ್ರೀಪಾದರಾಯರ ಕಾಲದಲ್ಲಿ ಕನ್ನಡ ಸಾಹಿತ್ಯಕ್ಕೆ ಸನ್ಮಾನ ದೊರೆಯಿತು.
ಕನ್ನಡ ವಾಯುಸ್ತುತಿ ಎಂದೇ ಪ್ರಖ್ಯಾತವಾದ ಮಧ್ವನಾಮ ಎಲ್ಲರ ನರನಾಡಿಗಳಲ್ಲೂ ಇಂದಿಗೂ ಪ್ರಚಲಿತವಾಗಿದೆ.
ಶ್ರೀಪಾದರಾಜರ ಮಹಿಮೆಗಳು :
ಸಾಳ್ವ ನರಸಿಂಹರಾಜನಿಗೆ ಬಂದ ಬ್ರಹ್ಮಹತ್ಯಾ ದೋಷವನ್ನು ಶಂಖೋದಕದಿಂದ ಪರಿಹಾರ ಮಾಡಿದರು.
ವ್ಯಾಸರಾಯರು ಬಾಲಕರಾಗಿದ್ದಾಗ ಪುರುಷೋತ್ತಮತೀರ್ಥರ ಗುಹೆಯಲ್ಲಿ ಮಲಗಿರಲು ದೊಡ್ಡ ಅಜಗರ ಅವರನ್ನು ಸುತ್ತಿತ್ತು. ಶ್ರೀಪಾದರಾಜರು ಸರ್ಪ ಭಾಷೆಯಲ್ಲಿ ಮಾತನಾಡಿ ಸರ್ಪವನ್ನು ಬಿಡಿಸಿದರು.
ಸ್ವಪ್ನ ಸೂಚನೆಯಂತೆ ಭೀಮರತಿ ತೀರದಲ್ಲಿ ಭೂ ಸ್ಥಾಪಿತವಾಗಿದ್ದ ಸ್ವರ್ಣ ಪೀಠಿಕೆಯನ್ನು ತೆಗೆಸಿ ಅಲ್ಲಿ ದೊರೆತ ರಂಗವಿಠಲ ದೇವರನ್ನು ತಮ್ಮಲ್ಲಿ ಪೂಜೆಗಾಗಿ ಇಟ್ಟುಕೊಂಡರು. ಇದರ ದ್ಯೋತಕವಾಗಿ ಶ್ರೀಪಾದರಾಜರು  “ರಂಗವಿಠಲ” ಎಂಬ ಅಂಕಿತದಿಂದ ದೇವರನಾಮಗಳನ್ನು ರಚಿಸಿದ್ದಾರೆ.
ಇವರಿಗೆ ಪರಮಾತ್ಮನ ಅನುಗ್ರಹದಿಂದ ಸುಖ ಪ್ರಾರಭ್ಧವಿದೆ. ಇವರು ಎಲ್ಲಿದ್ದರೂ 64 ಭಕ್ಷ್ಯಗಳನ್ನು ಪರಮಾತ್ಮನಿಗೆ ನೈವೇದ್ಯ ಮಾಡಿ ಬಿಕ್ಷ ಸ್ವೀಕರಿಸುತ್ತಿದ್ದರು. ಒಂದು ಬಾರಿ ಒಬ್ಬ ವ್ಯಾಪಾರಿ ತಿರುಪತಿಗೆ ಸಾಮಾನುಸರಂಜಾಮಗಳನ್ನು ಕೊಂಡೊಯ್ಯುತ್ತಿದ್ದನು ಅವನಿಗೆ ತಿರುಪತಿಯ ಶ್ರೀನಿವಾಸನು ಸ್ವಪ್ನದಲ್ಲಿ ದರ್ಶನವಿತ್ತು ಆ ಕಾಡಿನಲ್ಲಿದ್ದ ಶ್ರೀಪಾದರಾಜರಿಗೆ ಎಲ್ಲವನ್ನು ಸಮರ್ಪಿಸುವಂತೆ ಸೂಚಿಸಿದನು. ಆಗ ಆ ವ್ಯಾಪಾರಿ ತಿರುಪತಿಗೆ ಹೋಗುತ್ತಿದ್ದ ದಾರಿಯಲ್ಲಿ ಶ್ರೀಪಾದರಾಜರು ಇರುವುದನ್ನು ತಿಳಿದು ಅವರಲ್ಲಿಗೆ ಬಂದು ತಾನು ತಂದಿದ್ದ ಎಲ್ಲಾ ಸಾಮಾನು ‌ಸರಂಜಾಮುಗಳನ್ನು ಅವರಿಗೆ ಅರ್ಪಿಸಿದನು. ಹೀಗಾಗಿ ಕಾಡಿನಲ್ಲಿದ್ದರೂ ಕೂಡ ಅವರು 64 ಬಗೆಯ ಭಕ್ಷಗಳನ್ನು ದೇವರಿಗೆ ಸಮರ್ಪಿಸಿದರು. ಈಗಲೂ ಶ್ರೀಪಾದರಾಜರನ್ನು ನೆನೆದವರಿಗೆ ಆಹಾರದ ಕೊರತೆ ಇರುವುದಿಲ್ಲ. ಶ್ರೀಪಾದರಾಜರ ಅನುಗ್ರಹದಿಂದ ವ್ಯಾಸರಾಜರು ತಿರುಪತಿಯ ಶ್ರೀನಿವಾಸನಿಗೆ 12 ವರ್ಷ ಪೂಜಿಸುವ  ಸೌಭಾಗ್ಯ ಲಭಿಸಿತು.
ಶ್ರೀ ಪಾದರಾಜರು ತಮ್ಮ ಸಾಧನ ಕ್ಷೇತ್ರವಾದ ಮುಳುಬಾಗಿಲಿನಲ್ಲಿ ಜೇಷ್ಠ ಶುದ್ಧ ಚತುರ್ದಶಿ ದಿನದಂದು ಬೃಂದಾವನಸ್ಥರಾದರು ಇಂದಿಗೂ ಎಲ್ಲರ ಮನೆ ಮನಗಳಲ್ಲಿ ಶಾಶ್ವತವಾಗಿ ಉಳಿದುಕೊಂಡಿದ್ದಾರೆ.
ವಿಜಯದಾಸರು ‘ನರಕ ನರಕದಲ್ಲಿ ಹೊರಳುವ ಮನುಜನೆ ಧರೆಯೊಳಿವರ ಚರಿತೆ ಅದಭುತ ಒಂದೊಂದು. ನಿರುತದಲಿ  ನೋಡು ತುಂಬಿ ಸೂಸುತಲಿದೆ ಅರುಣೋದಯದಲೆದ್ದು ಶ್ರೀಪಾದರಾಯರ ಸ್ಮರಿಸಿದ ಮಾನವನಿಗೆ ಸರ್ವಸಂಪದವು ಪರಮಗತಿಯಾಗುವುದು ಪರಿಹಾಸವಲ್ಲ ಕೇಳು. ಸುರಭೂಸುರ ಪ್ರಿಯ ವಿಜಯವಿಠಲನು ಕರುಣದಿಂದಲಿ ಮಹಾ ಉನ್ನತ ಪದವೀವ.’ ಎಂದಿದ್ದಾರೆ.
ಈ ಎರಡು ವಾಕ್ಕುಸುಮಗಳನ್ನು ಪತ್ಯಂತರ್ಗತ ಶ್ರೀಪಾದರಾಜ ಗುರ್ವಂತರ್ಗತ, ಗುರು ಮಧ್ವಂತರ್ಗತ ಅಂಭೃಣಿ ಪತಿ ವೇದವ್ಯಾಸ ದೇವರಲ್ಲಿ ಸಮರ್ಪಣೆ ಮಾಡುತ್ತಿದ್ದೇನೆ.

ಶ್ರೀ ಕೃಷ್ಣಾರ್ಪಣಮಸ್ತು

ನಹಂಕರ್ತಾ ಹರಿ:ಕರ್ತಾ

ಹೇಮಾಮಾಲಿನಿ ಶ್ರೀಧರಾಚಾರ್

ಉಪ ರಾಷ್ಟ್ರಪತಿ ಜಗದೀಪ್‌ ಧನಕರ್ ರನ್ನು ಬೀಳ್ಕೊಟ್ಟ ರಾಜ್ಯಪಾಲರು

ಬೆಂಗಳೂರು, ಜೂ. 8 :ಬೆಂಗಳೂರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಲುವಾಗಿ ನಿನ್ನೆ ಜೂನ್ 07 ರಂದು  ಬೆಂಗಳೂರಿಗೆ ಆಗಮಿಸಿದ್ದ ಗೌರವಾನ್ವಿತ  ಉಪ ರಾಷ್ಟ್ರಪತಿಗಳಾದ ಜಗದೀಪ್‌ ಧನಕರ್ ಅವರನ್ನು ಇಂದು ಬೆಂಗಳೂರಿನ ಹೆಚ್.ಎ.ಎಲ್. ವಿಮಾನ ನಿಲ್ದಾಣದಲ್ಲಿ ರಾಜ್ಯದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು  ಆತ್ಮೀಯವಾಗಿ ಬೀಳ್ಕೊಟ್ಟರು.

ಈ ಸಮಯದಲ್ಲಿ ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ. ಸುಧಾಕರ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್. ವೀರಯ್ಯ, ಸರ್ಕಾರದ  ಅಪರ ಮುಖ್ಯ ಕಾರ್ಯದರ್ಶಿಗಳಾದ ಗೌರವ್ ಗುಪ್ತ, ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕರಾದ ಡಾ. ಎಂ.ಎ. ಸಲೀಂ, ‌ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್,‌ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿಗಳಾದ ಶ್ರೀಮತಿ ಸತ್ಯವತಿ ಜಿ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಗದೀಶ್. ಜಿ. ಉಪಸ್ಥಿತರಿದ್ದರು.

ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ 2025 – ಅವಧಿ ವಿಸ್ತರಣೆ

ಕರ್ನಾಟಕ ರಾಜ್ಯದಲ್ಲಿ ಶಿಕ್ಷಣ ಮತ್ತು ಸರ್ಕಾರಿ ಸೇವೆಗಳಲ್ಲಿ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ 101 ಜಾತಿಗಳಿಗೆ ಸೇರಿದವರ ಪ್ರಾತಿನಿಧ್ಯತೆ ಕುರಿತು Empirical Data ಪಡೆದು ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ (ಉಪ ವರ್ಗೀಕರಣ) ಕುರಿತಾಗಿ ವರದಿ ಸಲ್ಲಿಸಲು ಮಾನ್ಯ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಡಾ.
ಹೆಚ್.ಎನ್.ನಾಗಮೋಹನ್ ದಾಸ್ ಇವರ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಆಯೋಗವನ್ನು ರಚಿಸಲಾಗಿದ್ದು,  ಸದರಿ ಆಯೋಗವು,  2025ನೇ ಮಾರ್ಚ್ ರಂದು ಸರ್ಕಾರಕ್ಕೆ ಮಧ್ಯಂತರ ವರದಿಯನ್ನು ಸಲ್ಲಿಸಿದ ಆಧಾರದ ಮೇರೆಗೆ ವೈಜ್ಞಾನಿಕವಾದ ದತ್ತಾಂಶವನ್ನು (Empirical Data) ಸಂಗ್ರಹಿಸಲು ಪರಿಶಿಷ್ಟ ಜಾತಿ ಕುಟುಂಬಗಳ ಸಮಗ್ರ ಸಮೀಕ್ಷೆಯನ್ನು ಏಪ್ರಿಲ್  05 ರಿಂದ ಕೈಗೊಳ್ಳಲಾಗುತ್ತಿದೆ.
ಪ್ರಸ್ತುತ ಕರ್ನಾಟಕ ರಾಜ್ಯಾದ್ಯಂತ ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷೆ – 2025 ರನ್ನು  2025 ನೇ ಜೂನ್ 08 ರವರೆಗೆ ವಿಶೇಷ ಶಿಬಿರಗಳು ಹಾಗೂ online ನಲ್ಲಿ ಸ್ವಯಂ ಘೋಷಣೆಗಳನ್ನು ಒಳಗೊಂಡಂತೆ ಒಟ್ಟು 2 ವಿಧಾನಗಳಲ್ಲಿ ಸಮೀಕ್ಷೆಯನ್ನು ನಡೆಸಲಾಗುತ್ತಿದೆ.
ಈಗಾಗಲೇ 2025ನೇ ಜೂನ್ 06 ವರೆಗೆ ರಾಜ್ಯಾದ್ಯಂತ ನಡೆಸಲಾದ ಸಮೀಕ್ಷೆಯಲ್ಲಿ ಶೇ.90.00 ರಷ್ಟು ಪ್ರಗತಿಯನ್ನು ಸಾಧಿಸಲಾಗಿರುತ್ತದೆ.  ಉಳಿದಂತೆ ಸುಮಾರು ಶೇ. 10 ರಷ್ಟು ಪ್ರಗತಿಯನ್ನು ಸಾಧಿಸಬೇಕಾಗಿರುತ್ತದೆ.
ಕೆಲವು ಪರಿಶಿಷ್ಟ ಜಾತಿಗೆ ಸೇರಿದ ಸಂಘ ಸಂಸ್ಥೆಗಳು ಸಮೀಕ್ಷೆಯ ಅವಧಿಯನ್ನು ಪುನಃ ವಿಸ್ತರಿಸಬೇಕೆಂದು ಮನವಿಯನ್ನು ಸಲ್ಲಿಸಿರುತ್ತಾರೆ. ಆದರೆ, ರಾಜ್ಯದಲ್ಲಿ ಶಾಲೆಗಳು ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಸಮೀಕ್ಷೆಗೆ ಗಣತಿದಾರರನ್ನಾಗಿ ನೇಮಕ ಮಾಡಲಾಗಿದ್ದ ಶಿಕ್ಷಕರನ್ನು ಸಮೀಕ್ಷೆ ಕಾರ್ಯದಿಂದ ಬಿಡುಗಡೆಗೊಳಿಸಲಾಗಿದೆ.
ಹೀಗಾಗಿ, ಪರಿಶಿಷ್ಟ ಜಾತಿ ಸಮೀಕ್ಷೆಯಲ್ಲಿ ಇವರೆಗೂ ಭಾಗವಹಿಸದೇ ಇರುವ ಕರ್ನಾಟಕ ರಾಜ್ಯಕ್ಕೆ ಸೇರಿದ ಪರಿಶಿಷ್ಟ ಜಾತಿ ಕುಟುಂಬದವರು 2025 ಜೂನ್ ರಿಂದ ರಾಜ್ಯದಲ್ಲಿನ ಒಟ್ಟು 9400 ನಾಗರೀಕ ಸೇವಾ ಕೇಂದ್ರಗಳಾದ, “ಕರ್ನಾಟಕ ಒನ್” (Karnataka one) ‘ಬೆಂಗಳೂರು ಒನ್” (Bengaluru one) ” ” (Grama one)  ಹಾಗೂ 198  ಬಿ.ಬಿ.ಎಂ. ಪಿ ವಾರ್ಡ್ ಕಚೇರಿ” (BBMP ward offices) ಗಳಿಗೆ ಭೇಟಿ ನೀಡಿ 2025ನೇ ಜೂನ್ 22 ರವರೆಗೂ ತಮ್ಮ ಮಾಹಿತಿಯನ್ನು ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ.
ಇದಲ್ಲದೆ ಬಾಪೂಜಿ ಸೇವಾ ಕೇಂದ್ರಗಳಲ್ಲಿಯೂ ಸಹ ಸದರಿ ಅವಕಾಶವನ್ನು ಕಲ್ಪಿಸಲಾಗುವುದು. ಸದರಿ ಮಾಹಿತಿಯನ್ನು ನಮೂದಿಸಲು ಸಾರ್ವಜನಿಕರಿಗೆ, ತಮ್ಮ ಆಧಾರ್ ಕಾರ್ಡ್ ಅಥವಾ ಪಡಿತರ ಚೀಟಿ ಸಂಖ್ಯೆಯ ಅವಶ್ಯಕತೆಯಿರುತ್ತದೆ.
ಮುಂದುವರೆದು, online ನಲ್ಲಿ ಪರಿಶಿಷ್ಟ ಜಾತಿ ಕುಟುಂಬದವರು ಸ್ವಯಂ ಘೋಷಣೆ ಮಾಡಿಕೊಳ್ಳಲು https://schedulecastesurvey.karnataka.gov.in/selfdeclaration  ಲಿಂಕ್ ಮೂಲಕ  2025ನೇ ಜೂನ್ 22 ರವರೆಗೆ ಕಾಲಾವಕಾಶವನ್ನು ವಿಸ್ತರಿಸಲಾಗಿದೆ.

“ಸಮಾಜ ಸೇವೆಯನ್ನು ನಮ್ಮ ಜೀವನದ ಒಂದು ಭಾಗವನ್ನಾಗಿ ಮಾಡಿಕೊಳ್ಳೋಣ”:  ಜೈನ ಸಮಾವೇಶದಲ್ಲಿ ರಾಜ್ಯಪಾಲರ ಕರೆ

ಬೆಳಗಾವಿ : “ಪ್ರಸ್ತುತ ಇಡೀ ಜಗತ್ತು ಸ್ವ-ಕಲ್ಯಾಣ, ಆಂತರಿಕ ಶಾಂತಿ ಮತ್ತು ಆಧ್ಯಾತ್ಮಿಕ ಅಭಿವೃದ್ಧಿಗಾಗಿ ಭಾರತದ ಕಡೆಗೆ ನೋಡುತ್ತಿದೆ. ಮಹಾವೀರ ಸ್ವಾಮಿಗಳ ಜೀವನ-ತತ್ವ ಮತ್ತು ಬೋಧನೆಗಳನ್ನು ಅಳವಡಿಸಿಕೊಳ್ಳುವ ಮೂಲಕ ನಾವು ಸಮಾಜ ಮತ್ತು ಜಗತ್ತಿನಲ್ಲಿ ಶಾಂತಿ, ಸಾಮರಸ್ಯ ಮತ್ತು ಸಹಾನುಭೂತಿಯ ವಾತಾವರಣವನ್ನು ಸೃಷ್ಟಿಸಬಹುದು.” ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದ್ದಾರೆ.

1008 ಭಟ್ಟಾರಕ ಶ್ರೀ ಆದಿನಾಥ ದಿಗಂಬರ ಜೈನ ಸಮಾಜ ಟ್ರಸ್ಟ್   ಆಯೋಜಿಸಿದ್ದ “ಜೈನ ಸಮ್ಮೇಳನ”ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

“ನಮ್ಮ ಸಾಂಸ್ಕೃತಿಕ ಸಂಪ್ರದಾಯವು ಬಹಳ ಪ್ರಾಚೀನವಾಗಿದೆ ಮತ್ತು ಪ್ರಾಚೀನ ಕಾಲದಿಂದಲೂ “ವಾಸುದೇವಂ ಕುಟುಂಬಕಂ” ತತ್ವಶಾಸ್ತ್ರ ಮತ್ತು ಧ್ಯಾನದ ಮೇಲೆ ಕೇಂದ್ರೀಕೃತವಾಗಿದೆ ಮತ್ತು “ಸರ್ವೇ ಭವಂತು ಸುಖಿನೋ, ಸರ್ವೇ ಸಂತು ನಿರಾಮಯ” ಎಂಬ ಮನೋಭಾವದಿಂದ ಪ್ರೇರಿತವಾಗಿದೆ ಮತ್ತು ಯಾವಾಗಲೂ ವಿಶ್ವ ಸಹೋದರತ್ವ, ವಿಶ್ವ ಶಾಂತಿ ಮತ್ತು ಸಮಾನತೆ ಮತ್ತು ಸಾಮರಸ್ಯವನ್ನು ಪ್ರೇರೇಪಿಸುತ್ತದೆ” ಎಂದರು.

ಈ ಸಮ್ಮೇಳನದಿಂದ, ಹೊಸ ಆಲೋಚನೆಗಳು, ಹೊಸ ನಿರ್ಣಯಗಳು ಮತ್ತು ಹೊಸ ಪ್ರಯಾಣ ಪ್ರಾರಂಭವಾಗಲಿದೆ. ನಾವು ಜೀವನದಲ್ಲಿ ಸತ್ಯ, ಅಹಿಂಸೆ ಮತ್ತು ಅನಿಯಂತ್ರಿತತೆಯನ್ನು ಅಳವಡಿಸಿಕೊಳ್ಳುವ. ಮಕ್ಕಳು ಮತ್ತು ಯುವಕರಿಗೆ ಧಾರ್ಮಿಕ ಶಿಕ್ಷಣವನ್ನು ನೀಡುವ. ಸಮಾಜ ಸೇವೆಯನ್ನು ನಮ್ಮ ಜೀವನದ ಒಂದು ಭಾಗವನ್ನಾಗಿ ಮಾಡಿಕೊಳ್ಳುವ. ನಾವು ತೀರ್ಥಯಾತ್ರೆಯ ಸ್ಥಳಗಳನ್ನು ರಕ್ಷಿಸುವ ಮತ್ತು ನಿಯಮಿತವಾಗಿ ಸತ್ಸಂಗದಲ್ಲಿ ಭಾಗವಹಿಸುವ ನಿರ್ಣಯವನ್ನು ಒಟ್ಟಾಗಿ ತೆಗೆದುಕೊಳ್ಳೋಣ ಎಂದು ಕರೆ ನೀಡಿದರು.

“ಇಂದಿನ ವೇಗದ ಜೀವನದಲ್ಲಿ, ಧಾರ್ಮಿಕ ಮತ್ತು ನೈತಿಕ ಮೌಲ್ಯಗಳು ಕ್ಷೀಣಿಸುತ್ತಿವೆ. ಅಂತಹ ಪರಿಸ್ಥಿತಿಯಲ್ಲಿ, ಈ ಸಮ್ಮೇಳನಗಳು ಒಬ್ಬ ವ್ಯಕ್ತಿಯು ಆತ್ಮಾವಲೋಕನ ಮಾಡಿಕೊಳ್ಳಲು ಮತ್ತು ತನ್ನ ಜೀವನವನ್ನು ಧರ್ಮದ ಕಡೆಗೆ ತಿರುಗಿಸಲು ಪ್ರಯತ್ನಿಸುವ ಅವಕಾಶವಾಗುತ್ತವೆ. ಈ ಸಮ್ಮೇಳನಗಳು ನಮ್ಮನ್ನು ನಮ್ಮ ಬೇರುಗಳಿಗೆ ಸಂಪರ್ಕಿಸುತ್ತವೆ ಮತ್ತು ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸುತ್ತವೆ. ಜೈನ ಧರ್ಮದ ಅನುಯಾಯಿಗಳು ಕಾಲಕಾಲಕ್ಕೆ ವಿವಿಧ ಸಮ್ಮೇಳನಗಳು, ಧಾರ್ಮಿಕ ಸಭೆಗಳು ಮತ್ತು ಸಮಾರಂಭಗಳ ಮೂಲಕ ತಮ್ಮ ಆಲೋಚನೆಗಳು ಮತ್ತು ನಂಬಿಕೆಗಳನ್ನು ಹಂಚಿಕೊಳ್ಳುತ್ತಾರೆ. ಅಂತಹ ಒಂದು ಸಮಾರಂಭವನ್ನು ಇಲ್ಲಿ ಯಶಸ್ವಿಯಾಗಿ ಆಯೋಜಿಸಲಾಗಿದೆ. ಇಂದಿನ ಜೈನ ಸಮ್ಮೇಳನವು ಧಾರ್ಮಿಕ ದೃಷ್ಟಿಕೋನದಿಂದ ಹಾಗೂ ಸಾಮಾಜಿಕ ಮತ್ತು ಸಾಂಸ್ಕೃತಿಕ ದೃಷ್ಟಿಕೋನದಿಂದ ಅತ್ಯಂತ ಮುಖ್ಯವಾಗಿದೆ” ಎಂದು ತಿಳಿಸಿದರು.

“ಈ ಜೈನ ಸಮ್ಮೇಳನದ ಮೂಲಕ, ಧರ್ಮ, ಸಂಸ್ಕೃತಿ ಮತ್ತು ಸಾಮಾಜಿಕ ಸೇವೆಯ ದಿಕ್ಕಿನಲ್ಲಿ ಅರ್ಥಪೂರ್ಣ ಹೆಜ್ಜೆ ಇಡಲಾಗಿದೆ ಮತ್ತು ಜೈನ ಸಮುದಾಯ ಮತ್ತು ಸಂತರು ಎದುರಿಸುತ್ತಿರುವ ಸಮಸ್ಯೆಗಳನ್ನು ಪ್ರತಿಬಿಂಬಿಸಲಾಗಿದೆ. ಜೈನ ಧರ್ಮವು ಯಾವಾಗಲೂ ಸೇವೆಗೆ ಆದ್ಯತೆ ನೀಡಿದೆ. ಹಸಿದವರಿಗೆ ಆಹಾರ ನೀಡುವುದು, ನಿರ್ಗತಿಕರಿಗೆ ಸಹಾಯ ಮಾಡುವುದು, ಗೋಶಾಲೆಗಳನ್ನು ನಡೆಸುವುದು, ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವುದು, ಆಸ್ಪತ್ರೆಗಳು ಮತ್ತು ವೃದ್ಧಾಶ್ರಮಗಳನ್ನು ವ್ಯವಸ್ಥೆ ಮಾಡುವುದು, ಇವೆಲ್ಲವೂ ಜೈನ ಸಮುದಾಯದ ಸೇವಾ ಮನೋಭಾವಕ್ಕೆ ಸಾಕ್ಷಿಯಾಗಿದೆ” ಎಂದು ಹೇಳಿದರು.

“ಧರ್ಮೋ ರಕ್ಷತಿ ರಕ್ಷತಃ ಎಂದರೆ ನಾವು ಧರ್ಮದಿಂದ ರಕ್ಷಿಸಲ್ಪಟ್ಟಿದ್ದೇವೆ. ಧರ್ಮದ ಸಂಪ್ರದಾಯವನ್ನು ಧಾರ್ಮಿಕ ಗುರುಗಳು ಮುಂದಕ್ಕೆ ಕೊಂಡೊಯ್ಯುತ್ತಾರೆ. ಸಮಾಜವನ್ನು ವ್ಯವಸ್ಥಿತವಾಗಿಡುವಲ್ಲಿ ಧರ್ಮವು ಪ್ರಮುಖ ಪಾತ್ರ ವಹಿಸುತ್ತದೆ. ಸನಾತನ ಧರ್ಮ ಮತ್ತು ಜೈನ ಧರ್ಮಗಳು ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಪ್ರಮುಖ ಸ್ತಂಭಗಳಾಗಿವೆ. ಅವುಗಳ ಬೇರುಗಳು ಸಾವಿರಾರು ವರ್ಷಗಳಷ್ಟು ಹಳೆಯವು. ಎರಡೂ ಧರ್ಮಗಳು ಆತ್ಮಶುದ್ಧಿ, ನೈತಿಕತೆ ಮತ್ತು ಮೋಕ್ಷದ ಕಡೆಗೆ ಸ್ಫೂರ್ತಿ ನೀಡುತ್ತವೆ ಮತ್ತು ಸಮಾಜಕ್ಕೆ ಅಹಿಂಸೆ ಮತ್ತು ಸತ್ಯದ ಮಾರ್ಗವನ್ನು ಅನುಸರಿಸಲು ಕಲಿಸುತ್ತವೆ” ಎಂದು ಹೇಳಿದರು.

“ಭಗವಾನ್ ಮಹಾವೀರರು ಸತ್ಯ, ಅಹಿಂಸೆ, ಆಸ್ತೇಯ, ಬ್ರಹ್ಮಚರ್ಯ ತತ್ವಗಳ ಮೂಲಕ ಶಾಂತಿಯುತ ಸಹಬಾಳ್ವೆ ಮತ್ತು ಸಾರ್ವತ್ರಿಕ ಸಹೋದರತ್ವದ ಮಾರ್ಗವನ್ನು ಬೆಳಗಿಸಿದ್ದಾರೆ. “ಅಹಿಂಸಾ ಪರಮ ಧರ್ಮಃ” ಅಂದರೆ ಅಹಿಂಸೆಯೇ ಶ್ರೇಷ್ಠ ಧರ್ಮ. ನಮ್ಮ ಆಲೋಚನೆಗಳು, ಮಾತುಗಳು ಮತ್ತು ನಡವಳಿಕೆಯಲ್ಲಿಯೂ ಸಹ ಕರುಣೆ ಇರಬೇಕೆಂದು ಅವರು ನಮಗೆ ಕಲಿಸಿದರು. ಇಂದಿನ ಕಾಲದಲ್ಲಿ, ಸಮಾಜದಲ್ಲಿ ಉದ್ವಿಗ್ನತೆ, ಕೋಪ ಮತ್ತು ಹಿಂಸೆ ಹೆಚ್ಚುತ್ತಿರುವಾಗ, ಮಹಾವೀರ ಸ್ವಾಮಿಯ ಈ ಸಂದೇಶವು ನಮ್ಮನ್ನು ಶಾಂತಿ, ಸಹಬಾಳ್ವೆ ಮತ್ತು ಪ್ರೀತಿಯ ಕಡೆಗೆ ಕರೆದೊಯ್ಯುತ್ತದೆ. ಅಹಿಂಸೆಯ ಮನೋಭಾವವನ್ನು ಕಾಪಾಡಿಕೊಳ್ಳಲು ನಾವು ಒಗ್ಗಟ್ಟಿನಿಂದ ಇರಬೇಕು. ಭಗವಾನ್ ಮಹಾವೀರರು “ಬದುಕಿ ಬದುಕಲು ಬಿಡಿ” ಎಂಬ ದೈವಿಕ ಸಂದೇಶವನ್ನು ನಮಗೆ ನೀಡಿದರು. ನಾವು ಅವರ ದೈವಿಕ ಸಂದೇಶಗಳಿಂದ ಸ್ಫೂರ್ತಿ ಪಡೆದು ಅವರು ತೋರಿಸಿದ ಮಾರ್ಗವನ್ನು ಅನುಸರಿಸಿ ವಿಶ್ವ ಶಾಂತಿ ಮತ್ತು ಲೋಕ ಕಲ್ಯಾಣಕ್ಕಾಗಿ ಶ್ರಮಿಸಬೇಕು ಎಂದು ಅವರು ಮನವಿ ಮಾಡಿದರು.

ಈ ವೇಳೆ ಆಚಾರ್ಯ ಶ್ರೀ ಗುಣಧರನಂದಿ ಮಹರಾಜ, ಮಾಜಿ ಉಪಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಲಕ್ಷ್ಮಣ್ ಸಾವದಿ ಮತ್ತು ಮುಂತಾದ ಗಣ್ಯರು ಉಪಸ್ಥಿತರಿದ್ದರು.

ವಿಶ್ವಪರಿಸರ ದಿನಾಚರಣೆ: ಪರಿಸರ ಸ್ನೇಹಿ ಗಿಡ ನೆಡುವ ಕಾರ್ಯಕ್ರಮ, ಅಲಂಕಾರಿಕ ಸಸಿಗಳ ವಿತರಣೆ 

ಮಹಾಲಕ್ಷ್ಮಿಲೇಔಟ್ ವಿಧಾನಸಭಾ ಕ್ಷೇತ್ರ: ಕಮಲನಗರ: ಶಕ್ತಿಗಣಪತಿನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಗಿಡ

ಜೂ. 9ರಂದು ಪ್ರಕಾಶನಗರ ರಾಯರ ಮಠದ 67ನೇ ಪ್ರತಿಷ್ಠಾಪನಾ ವರ್ಧಂತಿ

ಶ್ರೀ ಸುವಿದ್ಯೇಂದ್ರತೀರ್ಥರ ಸಾನ್ನಿಧ್ಯದಲ್ಲಿ ವಿವಿಧ ಕಾರ್ಯಕ್ರಮ

ಪವನ ಪರಿಮಳ ಪ್ರಸಾರಿಣೀ ಸಮಿತಿಯ 40ನೇ ವಾರ್ಷಿಕೋತ್ಸವ

ಬೆಂಗಳೂರು: ಪ್ರಕಾಶನಗರದ 10ನೇ ಮುಖ್ಯರಸ್ತೆ ಆರನೇ ಅಡ್ಡರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನ ಸನ್ನಿಧಾನದ
67ನೇ ಪ್ರತಿಷ್ಠಾಪನಾ
ವರ್ಧಂತಿ ಮಹೋತ್ಸವ ಜೂನ್ 9ರಂದು ಆಯೋಜನೆಗೊಂಡಿದೆ.
ಇದೇ ಸಂದರ್ಭದಲ್ಲಿ ಶ್ರೀ ಮಠದ ಪವನ ಪರಿಮಳ ಪ್ರಸಾರಿಣಿ ಸಮಿತಿಯ 40ನೇ ವಾರ್ಷಿಕೋತ್ಸವವೂ ನೆರವೇರಲಿದೆ.
ಶ್ರೀ ಸುವಿದ್ಯೇಂದ್ರತೀರ್ಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ.

ಅಂದು ಬೆಳಗ್ಗೆ 6 ಗಂಟೆಗೆ ರಾಯರ ಬೃಂದಾವನಕ್ಕೆ ಮಧು ಅಭಿಷೇಕ, ವಿಶೇಷ ಫಲ ಪಂಚಾಮೃತ ಅಭಿಷೇಕ ನಂತರ ಶ್ರೀ ರಾಘವೇಂದ್ರ ಅಷ್ಟಾಕ್ಷರ ಹೋಮ ನೆರವೇರಲಿದೆ.

ಬೆಳಗ್ಗೆ 10 ಗಂಟೆಗೆ ಶ್ರೀ ಸುವಿದ್ಯೇಂದ್ರತೀರ್ಥ ಸ್ವಾಮೀಜಿ ಅವರಿಂದ ಸಂಸ್ಥಾನ ಪೂಜೆ 12-30ಕ್ಕೆ ಶ್ರೀಗಳಿಂದ ಶ್ರೀ ಗುರುರಾಯರಿಗೆ ಕನಕ ಅಭಿಷೇಕ ನೆರವೇರಲಿದೆ.

ವಿವಿಧ ಕ್ಷೇತ್ರದ ಗಣ್ಯರಿಗೆ ಗೌರವಾರ್ಪಣೆ:
ಶ್ರೀ ಮಠದ ಆವರಣದಲ್ಲಿ ಸಂಜೆ ಆರು ಮೂವತ್ತಕ್ಕೆ ವರ್ಧಂತಿ ಉತ್ಸವದ ಅಂಗವಾಗಿ ವಿವಿಧ ರಂಗದ ಸಾಧಕರಿಗೆ ಗೌರವಾರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ತತ್ವಜ್ಞಾನ ಕ್ಷೇತ್ರದ ಪಂಡಿತ ಆರ್. ವೆಂಕಟೇಶ ಆಚಾರ್ಯ, ಸಾಹಿತ್ಯ ಮತ್ತು ಸಂಸ್ಕೃತಿ ಕ್ಷೇತ್ರದ ಡಾ. ಅರಳುಮಲ್ಲಿಗೆ
ಪಾರ್ಥಸಾರಥಿ, ವೈದ್ಯಕೀಯ ಕ್ಷೇತ್ರದ ಡಾ.ಕೆ .ಎಂ . ಸೋಮಶೇಖರಮೂರ್ತಿ, ಶಿಕ್ಷಣ ಕ್ಷೇತ್ರದ ಸಾಧಕ ಬಿ. ಕೆ. ಜಯಸಿಂಹ ಅವರನ್ನು ಗೌರವಿಸಲಾಗುವುದು.

ನಂತರ ವಿದ್ಯಾರ್ಥಿ ಮತ್ತು ಆರೋಗ್ಯನಿಧಿ ವಿತರಣೆ, ಶ್ರೀ ಸುವಿದ್ಯೇಂದ್ರತೀರ್ಥರಿಂದ ಅನುಗ್ರಹ ಸಂದೇಶವಿದೆ. ಭಕ್ತಾದಿಗಳು ಆಗಮಿಸಬೇಕು ಎಂದು ಶ್ರೀ ಗುರು ರಾಘವೇಂದ್ರ ಸೇವಾ ಸಮಿತಿ ಅಧ್ಯಕ್ಷ ಎನ್. ಜಿ. ವೆಂಕಟೇಶಮೂರ್ತಿ ಪತ್ರಿಕಾ ಹೇಳಿಕೆಯಲ್ಲಿ ವಿನಂತಿಸಿದ್ದಾರೆ.