ಅಸ್ಸಾಂನ ಕಾಮಾಖ್ಯಾ ದೇವಾಲಯದಲ್ಲಿ ‘ಕಾಮಾಖ್ಯಪ್ರಿಯ’ ಭಕ್ತಿಗೀತೆಗಳ ಆಲ್ಬಮ್ ಬಿಡುಗಡೆ

ಗುವಾಹಾಟಿ (ಅಸ್ಸಾಂ): (Assam) ಅಂತರರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಪ್ರಸಿದ್ಧ ಸಂಗೀತ (Music Director) ಸಂಯೋಜಕ ಮಹೇಶ್ ಮಹದೇವ್ (Mahesh Mahadev) ಸೃಷ್ಟಿಸಿರುವ ನೂತನ ‘ಕಾಮಾಖ್ಯಪ್ರಿಯ’ ರಾಗ ಹಾಗೂ 9 ಭಾಷೆಗಳಲ್ಲಿ ಮೂಡಿಬಂದಿರುವ ಭಕ್ತಿಗೀತೆಗಳ ವಿಶೇಷ ಆಲ್ಬಮ್ ಅನ್ನು ಕ್ರಿಯೇಟಿವ್ ಡಿವೈಸಸ್ ಸಂಸ್ಥೆಯ ಛೇರ್ಮನ್, ಸಹಕಾರ ರತ್ನ ಹಾಗೂ ಕಲಾಪೋಷಕ ಡಾ. ಬಿ. ಎಂ. ಉಮೇಶ್ ಕುಮಾರ್ (BM Umesh Kumar) ಅವರು ಅಸ್ಸಾಂನ ಪ್ರಸಿದ್ಧ ಕಾಮಾಖ್ಯಾ ದೇವಾಲಯದಲ್ಲಿ  ಬಿಡುಗಡೆಗೊಳಿಸಿದರು.

ಈ ವಿಶೇಷ ಆಲ್ಬಮ್‌ನಲ್ಲಿ ಮಹೇಶ್ ಮಹದೇವ್ ಅವರು ಸಂಗೀತ ಸಂಯೋಜಿಸಿರುವ ‘ಜೈ ಜೈ ಮಾ ಕಾಮಾಖ್ಯಾ’, ‘ಕಾಮಾಖ್ಯ ಬೀಜ ಮಂತ್ರ’ ಹಾಗೂ ‘ಕಾಮಾಖ್ಯಾ ಸ್ತೋತ್ರಂ’ ಸೇರಿದಂತೆ ಹಲವು ಕೃತಿಗಳು ಒಳಗೊಂಡಿವೆ.
ದೇವಿ ಕಾಮಾಖ್ಯಯ ಅನುಗ್ರಹದಿಂದ ಸೃಷ್ಟಿಯಾಗಿರುವ ಈ ನೂತನ ಶಾಸ್ತ್ರೀಯ ರಾಗಕ್ಕೆ ‘ಕಾಮಾಖ್ಯಪ್ರಿಯ’ ಎಂದು ಹೆಸರಿಡಲಾಗಿದೆ.

ಇದು ಕರ್ನಾಟಕ ಶಾಸ್ತ್ರೀಯ ಸಂಗೀತದ 20ನೇ ಮೇಳಕರ್ತ ರಾಗ ನಟಭೈರವಿಯ ಜನ್ಯ ರಾಗವಾಗಿದ್ದು, ಶಾಡವ–ಶಾಡವ ರಾಗ ವರ್ಗಕ್ಕೆ ಸೇರಿದೆ.

ಭಕ್ತಿ ಮತ್ತು ಭಾರತೀಯ ಭಾಷಾ ವೈವಿಧ್ಯತೆಯನ್ನು ಒಂದೇ ವೇದಿಕೆಯಲ್ಲಿ ತರುವ ಉದ್ದೇಶದಿಂದ ಕನ್ನಡ, ಅಸ್ಸಾಮಿ, ಸಂಸ್ಕೃತ, ಹಿಂದಿ, ತೆಲುಗು, ಬೆಂಗಾಲಿ, ತಮಿಳು, ನೇಪಾಳಿ ಹಾಗೂ ಒಡಿಯಾ ಸೇರಿದಂತೆ ಒಟ್ಟು ಒಂಬತ್ತು ಭಾಷೆಗಳಲ್ಲಿ ಈ ಕೃತಿಗಳನ್ನು ರಚಿಸಲಾಗಿದೆ.

ಈ ನೂತನ ಗೀತೆಗೆ ಖ್ಯಾತ ಬಹುಭಾಷಾ ಹಿನ್ನೆಲೆ ಗಾಯಕಿ ಡಾ. ಪ್ರಿಯದರ್ಶಿನಿ, ರಾಜ್ ನಸೀಮ್, ಅಜಯ್ ವಾರಿಯರ್ ಹಾಗೂ ಮಹೇಶ್ ಮಹದೇವ್ ಹಾಡಿದ್ದಾರೆ. ಸುಮತಿ ರಾಮ್, ರಿಯಾ ಚೌಧರಿ, ಮಹೇಶ್ ಮಹದೇವ್ ಮತ್ತು ರಾಜ್ ನಸೀಮ್ ಸಾಹಿತ್ಯ ಬರೆದಿದ್ದಾರೆ.
ಶಿವಶಕ್ತಿ ಡಿಜಿಟಲ್ ಮೀಡಿಯಾ ಪ್ರೊಡಕ್ಷನ್ಸ್ ನಿರ್ಮಿಸಿರುವ ಈ ಸಂಗೀತ ಯೋಜನೆಗೆ ಸುನಿಲ್ ಮಹಾದೇವ್ ಹಾಗೂ ತಂಡ ಛಾಯಾಗ್ರಹಣ ಮತ್ತು ಸಂಕಲನ ಮಾಡಿದ್ದಾರೆ.

ಈ ಆಲ್ಬಮ್‌ನ ವೀಡಿಯೋ ಆವೃತ್ತಿಯು ‘PM Audios and Entertainments’ ಯೂಟ್ಯೂಬ್ ಚಾನೆಲ್ ಹಾಗೂ ಪ್ರಮುಖ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿದೆ.

ಕಾಮಾಖ್ಯ ದೇವಿಯ ಆರಾಧನೆಯನ್ನು 9 ಭಾಷೆಗಳ ಮೂಲಕ ಭಕ್ತರ ಮನೆಮನಕ್ಕೆ ತಲುಪಿಸುವ ವಿಶಿಷ್ಟ ಪ್ರಯತ್ನ ಇದಾಗಿದೆ ಎಂದು ತಿಳಿಸಿದರು.

ಕೃಷ್ಣನ ವೇಷದಲ್ಲಿ ಮಿಂಚಿದ ಪುಟಾಣಿ ಕೃಷ್ಣರು: ಸ್ಕಾಲ್ವಿ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಅದ್ಧೂರಿ ಕೃಷ್ಣೋತ್ಸವ

Hot this week

‘ಆಸ್ಟ್ರಲ್ ಪೇಜೆಂಟ್ಸ್’ 10ನೇ ಆವೃತ್ತಿ ಯಶಸ್ವಿ: ದಶಕದ ಸಂಭ್ರಮ

ಬೆಂಗಳೂರು : ಕಳೆದ ಒಂಬತ್ತು ವರ್ಷಗಳಿಂದ ವೈಶಿಷ್ಟ್ಯಪೂರ್ಣವಾಗಿ ಹಾಗೂ ಅದ್ಧೂರಿಯಾಗಿ ಆಯೋಜನೆಗೊಳ್ಳುತ್ತಾ...

“ಪ್ರೋಷ್ಟಪದಿ ಭಾಗವತ” ಧಾರ್ಮಿಕ ಪ್ರವಚನ

ಸುಧೀಂದ್ರನಗರ : ಶ್ರೀ ರಾಘವೇಂದ್ರ ಸೇವಾ ಸಮಿತಿಯ (Raghavendra Seva Samithi)...

ಶ್ರೀ ವರಸಿದ್ಧಿ ವಿನಾಯಕ ದೇವಾಲಯದಲ್ಲಿ ಗಣೇಶೋತ್ಸವ

ಬೆಂಗಳೂರು : ನಾಗರಬಾವಿ (Nagarabhavi) ಮುಖ್ಯರಸ್ತೆಯಲ್ಲಿರುವ ಕೆನರಾ ಬ್ಯಾಂಕ್ (Canara Bank...

ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ನಿಷೇಧಿತ ಮೊಬೈಲ್ ಬಳಕೆ: 9 ಆರೋಪಿಗಳ ಬಂಧನ

ಪರಪ್ಪನ ಅಗ್ರಹಾರ (Parappana Agrahara) ಠಾಣೆಯಲ್ಲಿ (Station) 13/01/2026 ರಂದು ಬೆಂಗಳೂರು...

20 ಮಂದಿಗೆ ಉಚಿತ ಕಾಶಿ–ಪ್ರಯಾಗ್ ಯಾತ್ರೆ : ಉಚಿತ ವಿಮಾನ ಪ್ರಯಾಣದ ಸೌಭಾಗ್ಯ

ಬೆಂಗಳೂರು, ಸೆ. 10: ಮಹಾ ಶಿವರಾತ್ರಿ  (Shivarathri) ಅಂಗವಾಗಿ ವಿಜಯನಗರದಲ್ಲಿ ಆಯೋಜಿಸಲಾಗಿದ್ದ...

Topics

‘ಆಸ್ಟ್ರಲ್ ಪೇಜೆಂಟ್ಸ್’ 10ನೇ ಆವೃತ್ತಿ ಯಶಸ್ವಿ: ದಶಕದ ಸಂಭ್ರಮ

ಬೆಂಗಳೂರು : ಕಳೆದ ಒಂಬತ್ತು ವರ್ಷಗಳಿಂದ ವೈಶಿಷ್ಟ್ಯಪೂರ್ಣವಾಗಿ ಹಾಗೂ ಅದ್ಧೂರಿಯಾಗಿ ಆಯೋಜನೆಗೊಳ್ಳುತ್ತಾ...

“ಪ್ರೋಷ್ಟಪದಿ ಭಾಗವತ” ಧಾರ್ಮಿಕ ಪ್ರವಚನ

ಸುಧೀಂದ್ರನಗರ : ಶ್ರೀ ರಾಘವೇಂದ್ರ ಸೇವಾ ಸಮಿತಿಯ (Raghavendra Seva Samithi)...

ಶ್ರೀ ವರಸಿದ್ಧಿ ವಿನಾಯಕ ದೇವಾಲಯದಲ್ಲಿ ಗಣೇಶೋತ್ಸವ

ಬೆಂಗಳೂರು : ನಾಗರಬಾವಿ (Nagarabhavi) ಮುಖ್ಯರಸ್ತೆಯಲ್ಲಿರುವ ಕೆನರಾ ಬ್ಯಾಂಕ್ (Canara Bank...

ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ನಿಷೇಧಿತ ಮೊಬೈಲ್ ಬಳಕೆ: 9 ಆರೋಪಿಗಳ ಬಂಧನ

ಪರಪ್ಪನ ಅಗ್ರಹಾರ (Parappana Agrahara) ಠಾಣೆಯಲ್ಲಿ (Station) 13/01/2026 ರಂದು ಬೆಂಗಳೂರು...

20 ಮಂದಿಗೆ ಉಚಿತ ಕಾಶಿ–ಪ್ರಯಾಗ್ ಯಾತ್ರೆ : ಉಚಿತ ವಿಮಾನ ಪ್ರಯಾಣದ ಸೌಭಾಗ್ಯ

ಬೆಂಗಳೂರು, ಸೆ. 10: ಮಹಾ ಶಿವರಾತ್ರಿ  (Shivarathri) ಅಂಗವಾಗಿ ವಿಜಯನಗರದಲ್ಲಿ ಆಯೋಜಿಸಲಾಗಿದ್ದ...

ನಿತ್ಯ ಪಂಚಾಂಗ 11.09.2026 FRIDAY.ಶುಕ್ರವಾರ

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 11.09.2026 FRIDAY.ಶುಕ್ರವಾರ ಸಂವತ್ಸರ: ಪರಾಭವ SAMVATSARA : PARABHAVA. ಆಯಣ: ದಕ್ಷಿಣಾಯನ AYANA:...

ರಾಜಕೀಯ ರಂಗದಲ್ಲಿ ಆಧುನಿಕತೆ ಮತ್ತು ಹೋರಾಟಕ್ಕೆ ಇನ್ನೊಂದು ಹೆಸರೇ ಡಿ.ಕೆ.ಶಿವಕುಮಾರ್ : DCM ಜಿ. ಪರಮೇಶ್ವರ

ಬೆಂಗಳೂರು: ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್(CM D.K.Shivakumar) ಅವರ ನೇತೃತ್ವದ ರಾಜ್ಯ...

“ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸರ್ಕಾರ ಸರಿಯಾದ ಹಾದಿಯಲ್ಲಿ ನಡೆಯುತ್ತಿದೆ” : ಮಾಜಿ ಸಿ ಎಂ ಸಿದ್ದರಾಮಯ್ಯ ಪ್ರಶಂಸೆ.

ಬೆಂಗಳೂರು: ನಮ್ಮ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಮುಂದುವರೆಸಿಕೊಂಡು ಹೋಗುತ್ತಿರುವುದರ ಜೊತೆಗೆ,...

Related Articles