ಬೆಂಗಳೂರು: ಭಾರತೀಯ ಸಂಸ್ಕೃತಿ, (Culture) ಪರಂಪರೆ ಮತ್ತು ಮಕ್ಕಳ (Childrens) ಪ್ರತಿಭೆಯ ಅನನ್ಯ ಸಂಗಮವಾಗಿ ಜೆ.ಪಿ.ನಗರದ (JP Nagar) ಸ್ಕಾಲ್ವಿ (Skalvi International School) ಇಂಟರ್ನ್ಯಾಷನಲ್ ಶಾಲೆಯಲ್ಲಿ ‘ಕೃಷ್ಣೋತ್ಸವ 2026 – ಕಾನ್ಹಾ ಕೆ ರಂಗ್, ಸ್ಕಾಲ್ವಿ ಕೆ ಸಂಗ್!’ (Krishnotsava) ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಯೋಜಿಸಲಾಯಿತು. ಸಾವಿರಾರು ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರು ಸಂಭ್ರಮದಿಂದ ಪಾಲ್ಗೊಂಡರು.
ಕಳೆದ 8 ವರ್ಷಗಳಿಂದ ಸ್ಕಾಲ್ವಿ ಇಂಟರ್ನ್ಯಾಷನಲ್ ಶಾಲೆಯಲ್ಲಿ ಕೃಷ್ಣೋತ್ಸವವನ್ನು ವಿಶೇಷವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಶ್ರೀಕೃಷ್ಣನ ಬಾಲಲೀಲೆಗಳು, ಕೃಷ್ಣತತ್ವ, ಭಗವದ್ಗೀತೆಯ ಸಂದೇಶ ಹಾಗೂ ಭಾರತೀಯ ಸಂಸ್ಕೃತಿಯ ಮಹತ್ವವನ್ನು ಮಕ್ಕಳಿಗೆ ಪರಿಚಯಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು.
ವಿದ್ಯಾರ್ಥಿಗಳು ಶ್ರೀಕೃಷ್ಣ, ರಾಧೆ ಹಾಗೂ ಗೋಪಿಕೆಯರ ವೇಷಭೂಷಣ ಧರಿಸಿ ನೃತ್ಯ, ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಎಲ್ಲರ ಗಮನ ಸೆಳೆದರು. ಕೃಷ್ಣನ ಬಾಲಲೀಲೆ ಮತ್ತು ರಾಧಾ–ಕೃಷ್ಣರ ಭಕ್ತಿಯನ್ನು ಮಕ್ಕಳ ಮನಮೋಹಕ ಪ್ರದರ್ಶನದ ಮೂಲಕ ಅನಾವರಣಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಪೋಷಕರ ವಿಶೇಷ ಸಹಭಾಗಿತ್ವ, ಆಟಗಳು, ನೃತ್ಯ ಮತ್ತು ಸಂಗೀತ, ಗ್ರ್ಯಾಂಡ್ ದಹಿ ಹಂಡಿ ಹಾಗೂ DJ ಸಂಭ್ರಮ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆದವು. ಪೋಷಕರು ಮತ್ತು ಮಕ್ಕಳು ಒಟ್ಟಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದರು.
ಈ ಸಂದರ್ಭದಲ್ಲಿ ಮಾತನಾಡಿದ ಸ್ಕಾಲ್ವಿ ಇಂಟರ್ನ್ಯಾಷನಲ್ ಶಾಲೆಯ ಅಧ್ಯಕ್ಷ ಸತೀಶ್ ಕಾಕಲ್, “ಕೃಷ್ಣೋತ್ಸವ ಕೇವಲ ಒಂದು ಹಬ್ಬದ ಆಚರಣೆಯಲ್ಲ. ಮಕ್ಕಳಿಗೆ ಶ್ರೀಕೃಷ್ಣನ ಜೀವನ, ಅವರ ಬಾಲಲೀಲೆಗಳು ಹಾಗೂ ಕೃಷ್ಣತತ್ವವನ್ನು ಅರ್ಥಮಾಡಿಸುವುದು ನಮ್ಮ ಉದ್ದೇಶ. ಕೃಷ್ಣನು ನಮಗೆ ಪ್ರೀತಿ, ಸ್ನೇಹ, ಧೈರ್ಯ, ಕರ್ತವ್ಯ ಮತ್ತು ಧರ್ಮದ ಮಹತ್ವವನ್ನು ಕಲಿಸುತ್ತಾನೆ. ಆಧುನಿಕ ಶಿಕ್ಷಣದ ಜೊತೆಗೆ ಮಕ್ಕಳಿಗೆ ನಮ್ಮ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಪರಿಚಯಿಸುವುದು ಅತ್ಯಂತ ಅಗತ್ಯ. ಸಾವಿರಾರು ಮಕ್ಕಳು ಒಟ್ಟಾಗಿ ಈ ಸಂಭ್ರಮದಲ್ಲಿ ಭಾಗವಹಿಸುತ್ತಿರುವುದು ನಮಗೆ ಹೆಮ್ಮೆಯ ಸಂಗತಿ,” ಎಂದರು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಡಾ. ಸುಂದರ್ ರಾಜು, ಪ್ರಾಂಶುಪಾಲೆ ಸುಂಕುರಾತ್ರಿ ಉಷಾ , ಹೆಚ್. ಪಿ. ಮಂಜಪ್ಪ, ಶಿಕ್ಷಣ ತಜ್ಞರು,, ರಾಧಿಕ ಸಿಬ್ಬಂದಿ, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

