ದಿನಾಂಕ 22ರಂದು ಸಂಜೆ, 36 ವರ್ಷದ ವ್ಯಕ್ತಿಯೊಬ್ಬರು ನಮ್ಮ-112 ತುರ್ತು ಸಹಾಯವಾಣಿಗೆ ಕರೆ ಮಾಡಿ,ಕುಟುಂಬದ ಕಲಹ ಹಾಗೂ ಪತ್ನಿಯೊಂದಿಗೆ ನಡೆದ ವಾಗ್ವಾದದಿಂದ ಮನನೊoದು ಠಾಣಾ ವ್ಯಾಪ್ತಿಯ ಸಿದ್ಧಾರ್ಥ ಲೇಔಟ್(Siddartha Layout) ಸಮೀಪವಿರುವ ರೈಲು ಹಳಿಯ ಬಳಿ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಾಹಿತಿಯನ್ನು ನೀಡಿರುತ್ತಾರೆ. ಕೂಡಲೇ ಕಾರ್ಯಪ್ರವೃತ್ತರಾದ ನಮ್ಮ-112
ಸಿಬ್ಬಂದಿಯವರು ಕೂಡಲೆ ಕಾಡುಗೋಡಿ ಪೊಲೀಸ್ ಠಾಣೆಯ(Kadugodi police Station) ಹೊಯ್ಸಳ-234 ರಲ್ಲಿ ಕರ್ತವ್ಯದಲ್ಲಿದ್ದ ಎ.ಎಸ್.ಐ ಶ್ರೀ.ಶಿವರಾಜ್.ಪಿ(ASI Sri Shivaraj.P) ಹಾಗೂ ಪಿ.ಸಿ ಶ್ರೀ.ಪುಂಡಲೀಕ್ ಕಾಮಟೆಗೆ(P.C.Sri.Pundaleek kamate) ಮಾಹಿತಿಯನ್ನು ರವಾನಿಸಿರುತ್ತಾರೆ. ಹೊಯ್ಸಳ-234ರಲ್ಲಿ ಕರ್ತವ್ಯದಲ್ಲಿದ್ದ ಅಧಿಕಾರಿ ಸಿಬ್ಬಂದಿಯವರು ಕರೆಯನ್ನು ಸ್ವೀಕರಿಸಿದ ಕೇವಲ ಮೂರು
ನಿಮಿಷಗಳಲ್ಲಿ ಘಟನಾ ಸ್ಥಳಕ್ಕೆ ಬಂದು ನಮ್ಮ-112ಗೆ ಕರೆಮಾಡಿದ್ದ ವ್ಯಕ್ತಿಗಾಗಿ ಶೋಧ ಕಾರ್ಯ ನಡೆಸಿ, ರೈಲು ಹಳಿಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ಪತ್ತೆಹಚ್ಚಿ, ಅನಾಹುತ ಸಂಭವಿಸುವ ಮುನ್ನವೇ ಸುರಕ್ಷಿತವಾಗಿ ರೈಲು ಹಳಿಯಿಂದ ಹೊರಕ್ಕೆ ಕರೆತಂದು ರಕ್ಷಿಸಿರುತ್ತಾರೆ. ನಂತರ ಆತನನ್ನು ಕಾಡುಗೋಡಿ ಪೊಲೀಸ್ ಠಾಣೆಗೆ ಕರೆತಂದು ಅವರ ಕುಟುಂಬದವರಿಗೆ ಮಾಹಿತಿಯನ್ನು ನೀಡಿ, ಬಳಿಕ ಅವರ ಪತ್ನಿಯನ್ನು ಠಾಣೆಗೆ ಕರೆಸಿ, ಇಬ್ಬರಿಗೂ ಸೂಕ್ತ ಸಮಾಲೋಚನೆ (ಕೌನ್ಸೆಲಿಂಗ್) ಹಾಗೂ ಮಾರ್ಗದರ್ಶನವನ್ನು ನೀಡಿ,
ಮನೆಗೆ ಕಳುಹಿಸಿಕೊಡಲಾಗಿರುತ್ತದೆ
