ಬೆಂಗಳೂರು : ಕನ್ನಡದ ಖ್ಯಾತ ಸಾಹಿತಿ ಹಾಗೂ ಚಿಂತಕ ಕೆ.ಪಿ. ಪೂರ್ಣಚಂದ್ರ ತೇಜಸ್ವಿ(K.P.Purnachandra Tejaswi) ಅವರ 88ನೇ ಜನ್ಮದಿನೋತ್ಸವದ ಅಂಗವಾಗಿ, ಕೊಟ್ಟಿಗೆಹಾರದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ವತಿಯಿಂದ ತೇಜಸ್ವಿ ಅವರ ಪ್ರಸಿದ್ಧ ಕಾದಂಬರಿ “ಕರ್ವಾಲೊ”(Karvalo) ಆಧಾರಿತ ರಾಜ್ಯಮಟ್ಟದ ಡಿಜಿಟಲ್ ಚಿತ್ರಕಲಾ ಸ್ಪರ್ಧೆಯನ್ನು(Digital Art Competition) ಆಯೋಜಿಸಲಾಗಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ನಡೆಯುತ್ತಿರುವ ಈ ವಿನೂತನ ಸ್ಪರ್ಧೆಯಲ್ಲಿ, ತೇಜಸ್ವಿ ಅವರ ‘ಕರ್ವಾಲೊ’ ಕಾದಂಬರಿಯ ಯಾವುದೇ ಒಂದು ಸನ್ನಿವೇಶ, ಪ್ರಮುಖ ಪಾತ್ರ, ಸಂಭಾಷಣೆ, ಭಾವನೆ ಅಥವಾ ದೃಶ್ಯವನ್ನು ಆಧರಿಸಿ ಸ್ಪರ್ಧಿಗಳು ಡಿಜಿಟಲ್ ಚಿತ್ರಗಳನ್ನು ರಚಿಸಿ ಕಳುಹಿಸಬೇಕಾಗಿದೆ.
ಎರಡು ವಿಭಾಗಗಳಲ್ಲಿ ಸ್ಪರ್ಧೆ :
ಸ್ಪರ್ಧೆಯನ್ನು 18 ವರ್ಷದೊಳಗಿನವರು ಹಾಗೂ 18 ವರ್ಷ ಮೇಲ್ಪಟ್ಟವರು ಎಂದು ಎರಡು ಪ್ರತ್ಯೇಕ ವಯೋಮಾನದ ವಿಭಾಗಗಳಲ್ಲಿ ಆಯೋಜಿಸಲಾಗಿದೆ. ಎರಡೂ ವಿಭಾಗಗಳಲ್ಲಿ ಅತ್ಯುತ್ತಮವಾಗಿ ಮೂಡಿಬರುವ ಚಿತ್ರಗಳಿಗೆ, ಪ್ರಥಮ ಬಹುಮಾನ: ರೂ. 20,000/- ದ್ವಿತೀಯ ಬಹುಮಾನ: ರೂ.10,000/- ಮತ್ತು ತೃತೀಯ ಬಹುಮಾನ: ರೂ. 5,000/- ಗಳ ನಗದು ಬಹುಮಾನ ನೀಡಲಾಗುವುದು. ಅಲ್ಲದೇ ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಭಾಗವಹಿಸುವಿಕೆಯ ಪ್ರಮಾಣಪತ್ರ ನೀಡಲಾಗುವುದು.
ಚಿತ್ರ ಸಲ್ಲಿಸಲು 2026 ನೇ ಆಗಸ್ಟ್ 29 ಕೊನೆಯ ದಿನಾಂಕವಾಗಿದ್ದ, ಸೆಪ್ಟೆಂಬರ್ 5 ರಂದು ಪ್ರತಿಷ್ಠಾನದ ಅಧಿಕೃತ ಜಾಲತಾಣದಲ್ಲಿ ವಿಜೇತರ ಹೆಸರು ಪ್ರಕಟಣೆ ಮಾಡಲಾಗುವುದು ಸೆಪ್ಟೆಂಬರ್ 8 ರಂದು ಬಹುಮಾನ ವಿತರಣೆಯನ್ನು ಕೊಟ್ಟಿಗೆಹಾರದಲ್ಲಿ ನಡೆಯುವ ತೇಜಸ್ವಿ ಅವರ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ನೀಡಿ ಗೌರವಿಸಲಾಗುವುದು.
ಸ್ಪರ್ಧೆಗೆ ಸಂಬಂಧಿಸಿದ ಹೆಚ್ಚಿನ ವಿವರಗಳಿಗಾಗಿ ಹಾಗೂ ಚಿತ್ರಗಳನ್ನು ಸಲ್ಲಿಸಲು ಇಮೇಲ್: kpptrust.r@gmail.com ಅಥವಾ
ದೂರವಾಣಿ ಸಂಖ್ಯೆ. 9663098873 / 9449309067 ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

