GKVKಯಲ್ಲಿ ವಿಭಿನ್ನ ‘ರೈತ ಸಂತೆ’ ಸಂಭ್ರಮ: ಜನಮನ ಸೆಳೆದ ನೇರಳೆ ಜೂಸ್ – ಎತ್ತಿನ ಬಂಡಿ ಸವಾರಿ

BENGALURU : ಬೆಂಗಳೂರಿನ ಜಿ.ಕೆ.ವಿ.ಕೆ (GKVK) ಆವರಣದ ಗಣಪತಿ ದೇವಸ್ಥಾನದ ಸಮೀಪವಿರುವ ಗುಂಡು ತೋಪಿನಲ್ಲಿ ಈ ತಿಂಗಳ ‘ರೈತ ಸಂತೆ’ಯನ್ನು (Raitha Santhe) ಅತ್ಯಂತ ವಿಭಿನ್ನ ಹಾಗೂ ಯಶಸ್ವಿಯಾಗಿ ನಡೆಯಿತು. ಕೃಷಿ ವಿಶ್ವವಿದ್ಯಾನಿಲಯದ ವತಿಯಿಂದ ಆಯೋಜಿಸಲಾಗಿದ್ದ ಈ ಸಂತೆಯು ನವೀನ ಉತ್ಪನ್ನಗಳು ಮತ್ತು ವೈವಿಧ್ಯಮಯ ಗ್ರಾಮೀಣ ಚಟುವಟಿಕೆಗಳ ಮೂಲಕ ನಗರವಾಸಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಗ್ರಾಹಕರನ್ನು ಆಕರ್ಷಿಸಿದ ವಿಶೇಷ ಉತ್ಪನ್ನಗಳು ಈ ಬಾರಿಯ ರೈತ ಸಂತೆಯಲ್ಲಿ ರೈತರು ನೇರವಾಗಿ ತಂದು ಮಾರಾಟ ಮಾಡಿದ ಹಲವು ವಿಶಿಷ್ಟ ಉತ್ಪನ್ನಗಳು ಸಾರ್ವಜನಿಕರ ವಿಶೇಷ ಗಮನ ಸೆಳೆದವು.

GKVK - RAITHA SANTHE, BENGALURU

ನೇರಳೆ ಜೂಸ್ ಶಾಟ್ಸ್: ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ, ನೈಸರ್ಗಿಕ ರುಚಿ ಮತ್ತು ತಾಜಾತನದಿಂದ ಕೂಡಿದ ಈ ಆರೋಗ್ಯಪೂರ್ಣ ಪಾನೀಯ ಬೇಸಿಗೆಗೆ ಉತ್ತಮ ಪೌಷ್ಟಿಕ ಆಹಾರವಾಗಿ ಮೆಚ್ಚುಗೆ ಪಡೆಯಿತು. ಸ್ವೀಟ್ ಕಾರ್ನ್ ಸುಲಿಯುವ ಯಂತ್ರ: ಸಿಹಿ ಜೋಳದ ಕಾಳುಗಳನ್ನು ವೇಗವಾಗಿ ಮತ್ತು ಸುಲಭವಾಗಿ ಬೇರ್ಪಡಿಸುವ ಈ ಯಂತ್ರವು ರೈತರ ಸಮಯ ಮತ್ತು ಶ್ರಮವನ್ನು ಉಳಿಸುವ ತಂತ್ರಜ್ಞಾನವಾಗಿ ಸಾರ್ವಜನಿಕರ ಆಸಕ್ತಿಗೆ ಕಾರಣವಾಯಿತು.

ಮಳ್ಳು ಬದನೆಕಾಯಿ: ದೂರದ ವಿಜಯಪುರದಿಂದ ರೈತ ಮಹಿಳೆಯರು ತಂದಿದ್ದ ಪಾರಂಪರಿಕ ಅಡುಗೆಗಳ ವಿಶೇಷ ತರಕಾರಿಯಾದ ಮಳ್ಳು ಬದನೆಕಾಯಿ ನಾಟಿ ಬೆಳೆಗಳ ಮಹತ್ವವನ್ನು ಪರಿಚಯಿಸಿತು.

ಇತರ ನೈಸರ್ಗಿಕ ಉತ್ಪನ್ನಗಳು: ರಾಸಾಯನಿಕ ಮುಕ್ತ ‘ಪರಿಸರ ಸ್ನೇಹಿ ಆಯುರ್ವೇದಿಕ್ ಹೇರ್ ಡೈ’, ಪೌಷ್ಟಿಕಾಂಶ ಸಮೃದ್ಧ ‘ಮಲ್ಟಿ ಮಿಲೆಟ್ಸ್ ಮಿಶ್ರಣ’, ವಿಟಮಿನ್-ಸಿ ಯುಕ್ತ ‘ಬೆಟ್ಟದ ನೆಲ್ಲಿಕಾಯಿ’, ತಾಜಾ ಮಾವು, ಹಲಸು ಹಾಗೂ ನಾಟಿ ಸೌತೆಕಾಯಿ ಗ್ರಾಹಕರನ್ನು ಭಾರೀ ಪ್ರಮಾಣದಲ್ಲಿ ಸೆಳೆದವು.

ಇವುಗಳೊಂದಿಗೆ ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳು, ಸಾವಯವ ಗೊಬ್ಬರಗಳು, ಜೈವಿಕ ಕೀಟನಾಶಕಗಳು, ಅಲಂಕಾರಿಕ ಗಿಡಗಳು, ಜೇನು ಕೃಷಿ ಉತ್ಪನ್ನಗಳು ಮತ್ತು ಅಲಂಕಾರಿಕ ಮೀನುಗಳ ಪ್ರದರ್ಶನ ಹಾಗೂ ಮಾರಾಟ ವ್ಯವಸ್ಥೆಯೂ ಇಲ್ಲಿದ್ದವು. ಮೃಗಾಲಯ ಪ್ರೇಮಿಗಳ ಸಂತೆ ವಾತಾವರಣದ ನಡುವೆ ಹಮ್ಮಿಕೊಳ್ಳಲಾಗಿದ್ದ ಎತ್ತಿನ ಬಂಡಿ ಸವಾರಿ ನಗರದ ಮಕ್ಕಳನ್ನು ವಿಶೇಷವಾಗಿ ಆಕರ್ಷಿಸಿತು.

‘ಕೃಷಿ ಪರಿಸರದೆಡೆಗೆ ನಮ್ಮ ನಡಿಗೆ’ಗೆ ಅಭೂತಪೂರ್ವ ಯಶಸ್ಸು ರೈತ ಸಂತೆಯ ಅಂಗವಾಗಿ ಆಯೋಜಿಸಲಾಗಿದ್ದ “ಕೃಷಿ ಪರಿಸರದೆಡೆಗೆ ನಮ್ಮ ನಡಿಗೆ” ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಭಾರಿ ಸ್ಪಂದನೆ ವ್ಯಕ್ತವಾಯಿತು.

ವೈದ್ಯರು, ಐಟಿ ಉದ್ಯೋಗಿಗಳು, ಗೃಹಿಣಿಯರು, ಯುವಕರು ಮತ್ತು ಹಿರಿಯರು ಸೇರಿದಂತೆ 150ಕ್ಕೂ ಹೆಚ್ಚು ನಗರವಾಸಿಗಳು ಸ್ವಯಂಪ್ರೇರಿತರಾಗಿ ಭಾಗವಹಿಸಿ, ಜಿ.ಕೆ.ವಿ.ಕೆ.ಯ ಹಸಿರು ಪರಿಸರದಲ್ಲಿ 6 ಕಿಲೋಮೀಟರ್ ನಡಿಗೆ ನಡೆಸಿದರು.

ನಡಿಗೆಯ ಸಂದರ್ಭದಲ್ಲಿ ಕೃಷಿ ಸಂಬಂಧಿತ ವಿಷಯಗಳ ಸಮಗ್ರ ಮಾಹಿತಿಯನ್ನು ಪಡೆದ ಸಾರ್ವಜನಿಕರು, ನಂತರ ರೈತ ಸಂತೆಗೆ ಭೇಟಿ ನೀಡಿ ವೈವಿಧ್ಯಮಯ ಉತ್ಪನ್ನಗಳನ್ನು ಖರೀದಿಸಿ ಸಂಭ್ರಮಿಸಿದರು.

ಕಾರ್ಯಕ್ರಮದಲ್ಲಿ ಕೃಷಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಎಸ್.ವಿ. ಸುರೇಶ, ವಿಸ್ತರಣಾ ನಿರ್ದೇಶಕರಾದ ಡಾ. ವೈ.ಎನ್. ಶಿವಲಿಂಗಯ್ಯ, ಸಂಶೋಧನಾ ನಿರ್ದೇಶಕರಾದ ಡಾ. ಮುಡಲಗಿರಿಯಪ್ಪ ಹಾಗೂ ಸಹ ವಿಸ್ತರಣಾ ನಿರ್ದೇಶಕರಾದ ಡಾ. ಕೆ.ಪಿ. ರಘುಪ್ರಸಾದ್ ಸೇರಿದಂತೆ ಹಲವು ಉನ್ನತಾಧಿಕಾರಿಗಳು ಉಪಸ್ಥಿತರಿದ್ದರು.

ಮಕ್ಕಳಿಗಾಗಿ ವಿನೂತನ ಬೇಸಿಗೆ ಶಿಬಿರ

ಬೆಂಗಳೂರು, ಮೇ 24 (ಕರ್ನಾಟಕ ವಾರ್ತೆ):

ಕೃಷಿ ವಿಶ್ವವಿದ್ಯಾಲಯದ ಸಿಬ್ಬಂದಿ ತರಬೇತಿ ಘಟಕದ ವತಿಯಿಂದ ಮೇ 25 ರಿಂದ 29 ರವರೆಗೆ ಮಕ್ಕಳಿಗಾಗಿ ವಿನೂತನ ಬೇಸಿಗೆ ಶಿಬಿರವನ್ನು ಹಮ್ಮಿಕೊಂಡಿದೆ.

ಈಗಾಗಲೇ ಎರಡು ಬೇಸಿಗೆ ಶಿಬಿರಗಳನ್ನು ಯಶಸ್ವಿಯಾಗಿ ನಡೆಸಲಾಗಿದ್ದು, ಇದೀಗ ಅಂತಿಮ ಬೇಸಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. “ಮಕ್ಕಳಿಗೆ ಬಿತ್ತನೆಯಿಂದ ಬೆಳೆಯವರೆಗೆ-ಕೃಷಿ ಪಯಣ”  ಎಂದು ಶಿಬಿರಕ್ಕೆ ಹೆಸರಿಡಲಾಗಿದೆ. ಈ ಶಿಬಿರದಲ್ಲಿ 8 ರಿಂದ 14 ವರ್ಷ ವಯಸ್ಸಿನ ಮಕ್ಕಳು ಭಾಗವಹಿಸಬಹುದು. ನಗರದ ಮಕ್ಕಳಿಗೆ ಕೃಷಿಯ ನೈಜ ಅನುಭವ ನೀಡಲು ಇದೊಂದು ಉತ್ತಮ ಅವಕಾಶವಾಗಿದೆ.

ಹೆಚ್ಚಿನ ಮಾಹಿತಿಗಾಗಿ 98443 80742 ಮತ್ತು 85532 15997 ಸಂಪರ್ಕಿಸಬಹುದುಎಂದು ಪ್ರಕಟಣೆ ತಿಳಿಸಿದೆ.

Hot this week

ನಿತ್ಯ ಪಂಚಾಂಗ 14.08.2026ಶುಕ್ರವಾರ FRIDAY.

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 14.08.2026ಶುಕ್ರವಾರ FRIDAY. ಸಂವತ್ಸರ: ಪರಾಭವ. SAMVATSARA : PARABHAVA. ಆಯಣ: ದಕ್ಷಿಣಾಯಣ. AYANA:...

ಸ್ವಾನಂದಾಶ್ರಮ: ಭಕ್ತಿ, ಸಂಸ್ಕೃತಿ, ಸೇವೆ ಮತ್ತು ಹೊಯ್ಸಳ ವೈಭವದ ಸಂಗಮ

ಆಗಸ್ಟ್ 16ರಿಂದ ವರದ ಗಣಪತಿ ವ್ರತಾಚರಣೆ ಬೆಂಗಳೂರು: ಕನಕಪುರ ರಸ್ತೆಯ ಅಗರ–ತಾತಗುಣಿಯಲ್ಲಿ(Thathaguni) ನೆಲೆಗೊಂಡಿರುವ...

ಮೇಕೆದಾಟು ಯೋಜನೆಗೆ ವೇಗ ನೀಡಲು ಅಧಿಕಾರಿಗಳಿಗೆ ಸಚಿವ ಎನ್.ಚಲುವರಾಯಸ್ವಾಮಿ ಸೂಚನೆ

ಬೆಂಗಳೂರು: ನೂತನವಾಗಿ ಜಲಸಂಪನ್ಮೂಲ ಸಚಿವರಾಗಿ(New Minister of Water Resources) ಅಧಿಕಾರ...

ತೇಜಸ್ವಿ ಜನ್ಮದಿನೋತ್ಸವ ಅಂಗವಾಗಿ ‘ಕರ್ವಾಲೊ’ ಕೃತಿ ಆಧಾರಿತ ಡಿಜಿಟಲ್ ಚಿತ್ರಕಲಾ ಸ್ಪರ್ಧೆಗೆ ಅರ್ಜಿ ಆಹ್ವಾನ

ಬೆಂಗಳೂರು : ಕನ್ನಡದ ಖ್ಯಾತ ಸಾಹಿತಿ ಹಾಗೂ ಚಿಂತಕ ಕೆ.ಪಿ. ಪೂರ್ಣಚಂದ್ರ ತೇಜಸ್ವಿ(K.P.Purnachandra...

ಗಣ್ಯರ ನಿಧನಕ್ಕೆ ವಿಧಾನಸಭೆಯಲ್ಲಿ ಸಂತಾಪ

ಬೆಂಗಳೂರು : ಇಂದು ವಿಧಾನಸಭೆಯ ಅಧಿವೇಶನದಲ್ಲಿ(Legislative Assembly Session) ಇತ್ತೀಚೆಗೆ ನಿಧನರಾದ...

Topics

ನಿತ್ಯ ಪಂಚಾಂಗ 14.08.2026ಶುಕ್ರವಾರ FRIDAY.

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 14.08.2026ಶುಕ್ರವಾರ FRIDAY. ಸಂವತ್ಸರ: ಪರಾಭವ. SAMVATSARA : PARABHAVA. ಆಯಣ: ದಕ್ಷಿಣಾಯಣ. AYANA:...

ಸ್ವಾನಂದಾಶ್ರಮ: ಭಕ್ತಿ, ಸಂಸ್ಕೃತಿ, ಸೇವೆ ಮತ್ತು ಹೊಯ್ಸಳ ವೈಭವದ ಸಂಗಮ

ಆಗಸ್ಟ್ 16ರಿಂದ ವರದ ಗಣಪತಿ ವ್ರತಾಚರಣೆ ಬೆಂಗಳೂರು: ಕನಕಪುರ ರಸ್ತೆಯ ಅಗರ–ತಾತಗುಣಿಯಲ್ಲಿ(Thathaguni) ನೆಲೆಗೊಂಡಿರುವ...

ಮೇಕೆದಾಟು ಯೋಜನೆಗೆ ವೇಗ ನೀಡಲು ಅಧಿಕಾರಿಗಳಿಗೆ ಸಚಿವ ಎನ್.ಚಲುವರಾಯಸ್ವಾಮಿ ಸೂಚನೆ

ಬೆಂಗಳೂರು: ನೂತನವಾಗಿ ಜಲಸಂಪನ್ಮೂಲ ಸಚಿವರಾಗಿ(New Minister of Water Resources) ಅಧಿಕಾರ...

ತೇಜಸ್ವಿ ಜನ್ಮದಿನೋತ್ಸವ ಅಂಗವಾಗಿ ‘ಕರ್ವಾಲೊ’ ಕೃತಿ ಆಧಾರಿತ ಡಿಜಿಟಲ್ ಚಿತ್ರಕಲಾ ಸ್ಪರ್ಧೆಗೆ ಅರ್ಜಿ ಆಹ್ವಾನ

ಬೆಂಗಳೂರು : ಕನ್ನಡದ ಖ್ಯಾತ ಸಾಹಿತಿ ಹಾಗೂ ಚಿಂತಕ ಕೆ.ಪಿ. ಪೂರ್ಣಚಂದ್ರ ತೇಜಸ್ವಿ(K.P.Purnachandra...

ಗಣ್ಯರ ನಿಧನಕ್ಕೆ ವಿಧಾನಸಭೆಯಲ್ಲಿ ಸಂತಾಪ

ಬೆಂಗಳೂರು : ಇಂದು ವಿಧಾನಸಭೆಯ ಅಧಿವೇಶನದಲ್ಲಿ(Legislative Assembly Session) ಇತ್ತೀಚೆಗೆ ನಿಧನರಾದ...

ಸಚಿವಾಲಯ ಗ್ರಂಥಾಲಯದಲ್ಲಿ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ: ಮಾಸಿಕ ರೂ. 10,900 ಸ್ಟೈಫಂಡ್

ಬೆಂಗಳೂರು: ಕರ್ನಾಟಕ ಸರ್ಕಾರದ ಸಚಿವಾಲಯ ಗ್ರಂಥಾಲಯದಲ್ಲಿ(Karnataka Government Secretariat Library) 'ಅಪ್ರೆಂಟಿಸ್...

Related Articles