ಪ್ರತಿಭಾನ್ವಿತ ಸೈಕ್ಲಿಸ್ಟ್‍ ಗಳಿಗೆ ಬಂಪರ್ ಕೊಡುಗೆ ವಿತರಿಸಿದ DCM ಡಾ.ಜಿ. ಪರಮೇಶ್ವರ್

ರಾಜ್ಯದ ಪ್ರತಿಭಾನ್ವಿತ ಸೈಕ್ಲಿಸ್ಟ್‍ಗಳಿಗೆ (Cyslist) ಬಂಪರ್ ಕೊಡುಗೆ – 14 ಲಕ್ಷ ರೂಪಾಯಿ ಮೌಲ್ಯದ ಅಂತರರಾಷ್ಟ್ರೀಯ ಮಟ್ಟದ ಸೈಕಲ್ (CYCLES) ವಿತರಿಸಿದ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ (DCM Dr.G.Parameshwar).

ಬೆಂಗಳೂರು: ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ವತಿಯಿಂದ 2025-26ನೇ ಸಾಲಿನ ಪರಿಶಿಷ್ಟ ಜಾತಿ ವಿಶೇಷ ಘಟಕ ಯೋಜನೆಯಡಿ ರಾಜ್ಯದ ಪರಿಶಿಷ್ಟ ಜಾತಿಯ ಸೈಕಲ್ ಕ್ರೀಡಾಪಟುಗಳನ್ನು(Cyclist) ಪ್ರೋತ್ಸಾಹಿಸುವ ಉದ್ದೇಶದಿಂದ ಅಂತರರಾಷ್ಟ್ರೀಯ ಗುಣ ಮಟ್ಟದ ಸ್ಪರ್ಧಾತ್ಮಕ ಸೈಕಲ್ ಗಳನ್ನು ಹಾಗೂ ಸೈಕಲ್ ಬಿಡಿಭಾಗಗಳನ್ನು(Cycle Spare Parts) ಸರ್ಕಾರದಿಂದ ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿಗಳು ಹಾಗೂ ಕಂದಾಯ ಮತ್ತು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಚಿವರಾದ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಇಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ನಗರದ ಯವನಿಕ ಸಭಾಂಗಣದಲ್ಲಿ ನಡೆದ ಸರಳ ಹಾಗೂ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಈ ಸೈಕಲ್ ಗಳನ್ನು ಸಾಂಕೇತಿಕವಾಗಿ ಹಸ್ತಾಂತರಿಸಿ ಮಾತನಾಡಿದ ಉಪ ಮುಖ್ಯಮಂತ್ರಿಗಳು, ರಾಜ್ಯದ ಪರಿಶಿಷ್ಟ ಜಾತಿ ಜನಾಂಗಕ್ಕೆ ಸೇರಿದ ಆಯ್ದ 36 ಜನ ಪ್ರತಿಭಾನ್ವಿತ ಸೈಕ್ಲಿಂಗ್ ಕ್ರೀಡಾಪಟುಗಳಿಗೆ ಅತ್ಯಾಧುನಿಕ ಹಾಗೂ ಅಂತರರಾಷ್ಟ್ರೀಯ ಗುಣಮಟ್ಟದ ಸೈಕಲ್ ಗಳನ್ನು ಹಾಗೂ ಸೈಕಲ್ ಬಿಡಿ ಭಾಗಗಳನ್ನು ಇಲಾಖೆವತಿಯಿಂದ ಉಚಿತವಾಗಿ ವಿತರಿಸಲಾಗಿದೆ ಎಂದರು.

ರಾಜ್ಯದ ಕ್ರೀಡಾಪಟುಗಳನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯು ಒಂದು ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ಒಲಂಪಿಕ್ಸ್, ಏಷ್ಯನ್ ಗೇಮ್ಸ್ ಹಾಗೂ ಕಾಮನ್ ವೆಲ್ತ್ ನಂತಹ ಜಾಗತಿಕ ಕ್ರೀಡಾಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸುವ ಗುರಿ ಹೊಂದಿರುವ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ಈ ಸೌಲಭ್ಯ ಕಲ್ಪಿಸಲಾಗಿದೆ ಎಂದು ಹೇಳಿದರು.

ಅಂತರರಾಷ್ಟ್ರೀಯ ಮಟ್ಟದ ಸೈಕಲ್ ಗಳನ್ನು ಒಟ್ಟು 36 ಕ್ರೀಡಾಪಟುಗಳ ವಿತರಿಸಲಾಗುತ್ತಿದ್ದು, ಈ ಪೈಕಿ 21 ಜನರಿಗೆ ಜಾಗತಿಕ ಸ್ಪರ್ಧೆಗಳಲ್ಲಿ (Competitions) ಭಾಗವಹಿಸಲು ಅನುವಾಗುವಂತಹ ಸೈಕಲ್ ಗಳು ಮತ್ತು 15 ಜನರಿಗೆ ತರಬೇತಿಗಾಗಿ (Practice) ವಿವಿಧ ಮಾದರಿಯ ಹೈ-ಎಂಡ್ ಸೈಕಲ್ ಗಳನ್ನು(High-end cycle) ನೀಡಲಾಗಿದೆ. ಕ್ರೀಡಾಪಟುಗಳ ಉನ್ನತ ಸಾಧನೆಗಾಗಿ ಅತ್ಯಂತ ದುಬಾರಿ ಸೈಕಲ್ ಗಳನ್ನು ಒದಗಿಸಲಾಗಿದ್ದು, ಅಂತರರಾಷ್ಟ್ರೀಯ ಸ್ಪರ್ಧೆಗೆ(International Competition) ಬಳಸುವ ಲುಕ್ ಕಂಪನಿಯ ಟ್ರ್ಯಾಕ್ ಸೈಕಲ್ ಒಂದರ ಬೆಲೆ ರೂ.14 ಲಕ್ಷ ಆಗಿದೆ. ಹಾಗೆಯೇ, ತರಬೇತಿಗಾಗಿ ಬಳಸುವ ರೋಡ್ ಸೈಕಲ್ನ ಬೆಲೆ ಸುಮಾರು ರೂ.7 ಲಕ್ಷ ಆಗಿದೆ ಎಂದು ಹೇಳಿದರು.

ಉತ್ತರ ಕರ್ನಾಟಕದ ವೆಲೋಡ್ರೋಮ್ ಗಳಿಗೆ(Velodrome) ಆದ್ಯತೆ:
ಪ್ರಸ್ತುತ ಸೈಕ್ಲಿಂಗ್ ಕ್ರೀಡೆಯಲ್ಲಿ ಮುಂಚೂಣಿಯಲ್ಲಿರುವ ಉತ್ತರ ಕರ್ನಾಟಕದ ವಿಜಯಪುರ, ಬಾಗಲಕೋಟೆ ಮತ್ತು ಗದಗ ಜಿಲ್ಲೆಗಳ ವೆಲೋಡ್ರೋಮ್ ಗಳಲ್ಲಿ (Velodrome) ಅಭ್ಯಾಸ ಮಾಡುತ್ತಿರುವ ಕ್ರೀಡಾಪಟುಗಳಿಗೆ ಹಾಗೂ ಅಲ್ಲಿನ ಮುಖ್ಯ ತರಬೇತುದಾರರಿಗೆ (Coaches) ಈ ಸೈಕಲ್ ಗಳನ್ನು ಹಸ್ತಾಂತರಿಸಲಾಗಿದೆ.
ನಮ್ಮ ಇಲಾಖೆಯು ಗ್ರಾಮೀಣ ಹಾಗೂ ಪ್ರತಿಭಾವಂತ ಕ್ರೀಡಾಪಟುಗಳಿಗೆ ಸೂಕ್ತ ವೇದಿಕೆ ಮತ್ತು ಜಾಗತಿಕ ಮಟ್ಟದ ಸೌಲಭ್ಯಗಳನ್ನು ಒದಗಿಸಲು ಬದ್ಧವಾಗಿದೆ. ಈ ಸೈಕಲ್ ಗಳ ಸದ್ಬಳಕೆ ಮಾಡಿಕೊಂಡು ನಮ್ಮ ಕ್ರೀಡಾಪಟುಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶ ಮತ್ತು ರಾಜ್ಯಕ್ಕೆ ಪದಕಗಳನ್ನು ತರಬೇಕು ಎಂದು ಇದೇ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿಗಳು ಹಾರೈಸಿದರು.
ಕಾರ್ಯಕ್ರಮದಲ್ಲಿ ಕ್ರೀಡಾ ಇಲಾಖೆಯ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಆಯುಕ್ತರಾದ ಎಮ್.ಎನ್. ಅನುಚೇತ್ ಹಾಗೂ ಇಲಾಖೆಯ ಉನ್ನತ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಸ್ಪರ್ಧಾತ್ಮಕ ಸೈಕಲ್ ಗಳ ಹಂಚಿಕೆ ವಿವರ:
ಖರೀದಿಸಲಾದ ಒಟ್ಟು 21 ಸ್ಪರ್ಧಾತ್ಮಕ ಸೈಕಲ್ ಗಳಲ್ಲಿ, ವಿಜಯಪುರ ಜಿಲ್ಲೆಗೆ 3 ರೋಡ್ ಸೈಕಲ್ ಗಳು (Time Trial), 2 ಎಮ್.ಟಿ.ಬಿ (MTB) ಸೈಕಲ್ ಗಳು ಮತ್ತು 2 ಟ್ರ್ಯಾಕ್ ಸೈಕಲ್ ಗಳು ಸೇರಿದಂತೆ ಒಟ್ಟು 7 ಸೈಕಲ್ ಗಳನ್ನು ನೀಡಲಾಗಿದೆ.

ಬಾಗಲಕೋಟೆ ಜಿಲ್ಲೆಗೆ 3 ರೋಡ್ ಸೈಕಲ್ಗಳು, 1 ಮಾಸ್ ಸ್ಟಾರ್ಟ್ ಸೈಕಲ್, 3 ಎಮ್.ಟಿ.ಬಿ ಸೈಕಲ್ ಗಳು ಮತ್ತು 1 ಟ್ರ್ಯಾಕ್ ಸೈಕಲ್ ಒಳಗೊಂಡಂತೆ ಒಟ್ಟು 8 ಸೈಕಲ್ ಗಳನ್ನು ಹಂಚಿಕೆ ಮಾಡಲಾಗಿದೆ.

ಗದಗ ಜಿಲ್ಲೆಗೆ 2 ರೋಡ್ ಸೈಕಲ್ ಗಳು, 1 ಮಾಸ್ ಸ್ಟಾರ್ಟ್ ಸೈಕಲ್, 2 ಎಮ್.ಟಿ.ಬಿ ಸೈಕಲ್ ಗಳು ಮತ್ತು 1 ಟ್ರ್ಯಾಕ್ ಸೈಕಲ್ ಸೇರಿದಂತೆ ಒಟ್ಟು 6 ಸೈಕಲ್ ಗಳನ್ನು ವಿತರಿಸಲಾಗಿದೆ.

ಒಟ್ಟಾರೆಯಾಗಿ ಮೂರೂ ಜಿಲ್ಲೆಗಳಿಗೆ ಸೇರಿ 8 ರೋಡ್ ಸೈಕಲ್ ಗಳು, 2 ಮಾಸ್ ಸ್ಟಾರ್ಟ್ ಸೈಕಲ್ ಗಳು, 7 ಎಮ್.ಟಿ.ಬಿ ಸೈಕಲ್ ಗಳು, ಮತ್ತು 4 ಟ್ರ್ಯಾಕ್ ಸೈಕಲ್ ಗಳನ್ನು ಸರಬರಾಜು ಮಾಡಲಾಗಿದೆ.

ತರಬೇತಿ ಸೈಕಲ್ ಗಳು, ಮತ್ತು ಬಿಡಿಭಾಗಗಳ ಹಂಚಿಕೆ ವಿವರ:
ತರಬೇತಿ ವಿಭಾಗಕ್ಕೆ ಸಂಬಂಧಿಸಿದಂತೆ, ವಿಜಯಪುರ ಜಿಲ್ಲೆಗೆ 4 ರೋಡ್ ಸೈಕಲ್ ಗಳು, 1 ಎಮ್.ಟಿ.ಬಿ ಸೈಕಲ್, 3 ಸ್ಪರ್ಧಾತ್ಮಕ ಚಕ್ರಗಳು (Competition Wheel), 3 ಜೋಡಿ ಕೊರಿಮಾ ಹಾಫ್ ಡಿಸ್ಕ್‍ಗಳು, 3 ಇಂಡೋರ್ ಟ್ರೈನಿಂಗ್ ಹೋಮ್ ರೋಲರ್ ಗಳು ಮತ್ತು 2 ಸ್ಮಾರ್ಟ್ ಟ್ರೈನರ್ ಗಳನ್ನು ನೀಡಲಾಗಿದೆ.

ಬಾಗಲಕೋಟೆ ಜಿಲ್ಲೆಗೆ 4 ರೋಡ್ ಸೈಕಲ್ ಗಳು, 1 ಎಮ್.ಟಿ.ಬಿ ಸೈಕಲ್, 3 ಸ್ಪರ್ಧಾತ್ಮಕ ಚಕ್ರಗಳು, 3 ಜೋಡಿ ಕೊರಿಮಾ ಹಾಫ್ ಡಿಸ್ಕ್ ಗಳು, 3 ಇಂಡೋರ್ ಟ್ರೈನಿಂಗ್ ಹೋಮ್ ರೋಲರ್ ಗಳು ಹಾಗೂ 3 ಸ್ಮಾರ್ಟ್ ಟ್ರೈನರ್ ಗಳನ್ನು ಹಂಚಿಕೆ ಮಾಡಲಾಗಿದೆ.

ಗದಗ ಜಿಲ್ಲೆಗೆ 2 ರೋಡ್ ಸೈಕಲ್ ಗಳು, 3 ಎಮ್.ಟಿ.ಬಿ ಸೈಕಲ್ ಗಳು, 2 ಸ್ಪರ್ಧಾತ್ಮಕ ಚಕ್ರಗಳು, 2 ಜೋಡಿ ಕೊರಿಮಾ ಹಾಫ್ ಡಿಸ್ಕ್ ಗಳು, 2 ಇಂಡೋರ್ ಟ್ರೈನಿಂಗ್ ಹೋಮ್ ರೋಲರ್ ಗಳು ಮತ್ತು 3 ಸ್ಮಾರ್ಟ್ ಟ್ರೈನರ್ ಗಳನ್ನು ವಿತರಿಸಲಾಗಿದೆ.

ಇವೆಲ್ಲವುಗಳ ಒಟ್ಟು ಪ್ರಮಾಣವು 10 ರೋಡ್ ಸೈಕಲ್ ಗಳು, 5 ಎಮ್.ಟಿ.ಬಿ ಸೈಕಲ್ ಗಳು, 8 ಸ್ಪರ್ಧಾತ್ಮಕ ಚಕ್ರಗಳು, 8 ಜೋಡಿ ಕೊರಿಮಾ ಹಾಫ್ ಡಿಸ್ಕ್ ಗಳು, 8 ಇಂಡೋರ್ ಟ್ರೈನಿಂಗ್ ಹೋಮ್ ರೋಲರ್ ಗಳು ಮತ್ತು 8 ಸ್ಮಾರ್ಟ್ ಟ್ರೈನರ್ ಗಳಾಗಿವೆ.

 ವೆಚ್ಚ ಹಾಗೂ ದರಗಳ ವಿವರ:
ಸ್ಪರ್ಧಾತ್ಮಕ ಸೈಕಲ್ ಗಳ ವಿಭಾಗದಲ್ಲಿ ‘ಲುಕ್’ ಬ್ರ್ಯಾಂಡ್‍ನ 4 ಟ್ರ್ಯಾಕ್ ಸೈಕಲ್ ಗಳನ್ನು ತಲಾ 14,00,000 ರೂಪಾಯಿಗಳಂತೆ ಒಟ್ಟು 56,00,000 ರೂಪಾಯಿಗಳಿಗೆ ಖರೀದಿಸಲಾಗಿದೆ.

‘ಮೆರಿಡಾ’ ಬ್ರ್ಯಾಂಡ್ ನ 8 ರೋಡ್ ಸೈಕಲ್ ಗಳನ್ನು ತಲಾ 7,66,666 ರೂಪಾಯಿಗಳಂತೆ ಒಟ್ಟು 61,33,333 ರೂಪಾಯಿಗಳಿಗೆ, 2 ಮಾಸ್ ಸ್ಟಾರ್ಟ್ ಸೈಕಲ್ ಗಳನ್ನು ತಲಾ 3,94,104 ರೂಪಾಯಿಗಳಂತೆ ಒಟ್ಟು 7,88,209 ರೂಪಾಯಿಗಳಿಗೆ ಹಾಗೂ 7 ಎಮ್.ಟಿ.ಬಿ ಸೈಕಲ್ ಗಳನ್ನು ತಲಾ 2,24,761 ರೂಪಾಯಿಗಳಂತೆ ಒಟ್ಟು 15,73,333 ರೂಪಾಯಿಗಳಿಗೆ ಕೊಳ್ಳಲಾಗಿದೆ. ಇದರ ಮೂಲ ಒಟ್ಟು ವೆಚ್ಚ 1,40,94,876 ರೂಪಾಯಿಗಳಾಗಿದ್ದು, ಇದಕ್ಕೆ 7,04,743 ರೂಪಾಯಿಗಳ ಜಿ.ಎಸ್.ಟಿ ಸೇರಿದಂತೆ ಸ್ಪರ್ಧಾತ್ಮಕ ಸೈಕಲ್ ಗಳ ಒಟ್ಟು ವೆಚ್ಚ 1,47,99,620 ರೂಪಾಯಿಗಳಾಗಿದೆ.

ತರಬೇತಿ ಸೈಕಲ್ ಮತ್ತು ಬಿಡಿಭಾಗಗಳ ವಿಭಾಗದಲ್ಲಿ, ‘ಮೆರಿಡಾ’ ಬ್ರ್ಯಾಂಡ್ ನ 10 ರೋಡ್ ಸೈಕಲ್ ಗಳನ್ನು ತಲಾ 3,00,000 ರೂಪಾಯಿಗಳಂತೆ ಒಟ್ಟು 30,00,000 ರೂಪಾಯಿಗಳಿಗೆ ಮತ್ತು 5 ಎಮ್.ಟಿ.ಬಿ ಸೈಕಲ್ ಗಳನ್ನು ತಲಾ 2,79,047 ರೂಪಾಯಿಗಳಂತೆ ಒಟ್ಟು 13,95,238 ರೂಪಾಯಿಗಳಿಗೆ ಖರೀದಿಸಲಾಗಿದೆ.

‘ಕೊರಿಮಾ’ ಬ್ರ್ಯಾಂಡ್ ನ 8 ಸ್ಪರ್ಧಾತ್ಮಕ ಚಕ್ರಗಳನ್ನು ತಲಾ 3,52,380 ರೂಪಾಯಿಗಳಂತೆ ಒಟ್ಟು 28,19,047 ರೂಪಾಯಿಗಳಿಗೆ ಹಾಗೂ 8 ಜೋಡಿ ಕೊರಿಮಾ ಹಾಫ್ ಡಿಸ್ಕ್ ಗಳನ್ನು ಪ್ರತಿ ಜೋಡಿಗೆ 2,57,142 ರೂಪಾಯಿಗಳಂತೆ ಒಟ್ಟು 20,57,142 ರೂಪಾಯಿಗಳಿಗೆ ಕೊಳ್ಳಲಾಗಿದೆ.

ಜೊತೆಗೆ, 8 ಇಂಡೋರ್ ಟ್ರೈನಿಂಗ್ ಹೋಮ್ ರೋಲರ್ಗಳನ್ನು ತಲಾ 29,750 ರೂಪಾಯಿಗಳಂತೆ ಒಟ್ಟು 2,38,006 ರೂಪಾಯಿಗಳಿಗೆ ಮತ್ತು 8 ಸ್ಮಾರ್ಟ್ ಟ್ರೈನರ್ ಗಳನ್ನು ತಲಾ 46,610 ರೂಪಾಯಿಗಳಂತೆ ಒಟ್ಟು 3,72,881 ರೂಪಾಯಿಗಳಿಗೆ ಖರೀದಿಸಲಾಗಿದೆ. ಈ ವಿಭಾಗದ ಮೂಲ ಒಟ್ಟು ವೆಚ್ಚ 98,82,316 ರೂಪಾಯಿಗಳಾಗಿದ್ದು, ಇದಕ್ಕೆ 5,73,531 ರೂಪಾಯಿಗಳ ಜಿ.ಎಸ್.ಟಿ ಸೇರಿದಂತೆ ತರಬೇತಿ ಸಾಮಗ್ರಿಗಳ ಒಟ್ಟು ವೆಚ್ಚ 1,04,55,848 ರೂಪಾಯಿಗಳಾಗಿದೆ.

ಅಂತಿಮವಾಗಿ, ಸ್ಪರ್ಧಾತ್ಮಕ ಸೈಕಲ್ ಗಳ ಒಟ್ಟು ಮೊತ್ತ 1,47,99,620 ರೂಪಾಯಿಗಳು ಮತ್ತು ತರಬೇತಿ ಸೈಕಲ್ ಹಾಗೂ ಬಿಡಿಭಾಗಗಳ ಒಟ್ಟು ಮೊತ್ತ 1,04,55,848 ರೂಪಾಯಿಗಳನ್ನು ಒಟ್ಟುಗೂಡಿಸಿ, ಇಲಾಖೆಯು ಈ ಯೋಜನೆಗಾಗಿ ಮಾಡಿರುವ ಒಟ್ಟಾರೆ ವೆಚ್ಚ 2,52,55,468-00 ರೂಪಾಯಿಗಳಾಗಿದೆ.

Hot this week

ನಿತ್ಯ ಪಂಚಾಂಗ 14.08.2026ಶುಕ್ರವಾರ FRIDAY.

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 14.08.2026ಶುಕ್ರವಾರ FRIDAY. ಸಂವತ್ಸರ: ಪರಾಭವ. SAMVATSARA : PARABHAVA. ಆಯಣ: ದಕ್ಷಿಣಾಯಣ. AYANA:...

ಸ್ವಾನಂದಾಶ್ರಮ: ಭಕ್ತಿ, ಸಂಸ್ಕೃತಿ, ಸೇವೆ ಮತ್ತು ಹೊಯ್ಸಳ ವೈಭವದ ಸಂಗಮ

ಆಗಸ್ಟ್ 16ರಿಂದ ವರದ ಗಣಪತಿ ವ್ರತಾಚರಣೆ ಬೆಂಗಳೂರು: ಕನಕಪುರ ರಸ್ತೆಯ ಅಗರ–ತಾತಗುಣಿಯಲ್ಲಿ(Thathaguni) ನೆಲೆಗೊಂಡಿರುವ...

ಮೇಕೆದಾಟು ಯೋಜನೆಗೆ ವೇಗ ನೀಡಲು ಅಧಿಕಾರಿಗಳಿಗೆ ಸಚಿವ ಎನ್.ಚಲುವರಾಯಸ್ವಾಮಿ ಸೂಚನೆ

ಬೆಂಗಳೂರು: ನೂತನವಾಗಿ ಜಲಸಂಪನ್ಮೂಲ ಸಚಿವರಾಗಿ(New Minister of Water Resources) ಅಧಿಕಾರ...

ತೇಜಸ್ವಿ ಜನ್ಮದಿನೋತ್ಸವ ಅಂಗವಾಗಿ ‘ಕರ್ವಾಲೊ’ ಕೃತಿ ಆಧಾರಿತ ಡಿಜಿಟಲ್ ಚಿತ್ರಕಲಾ ಸ್ಪರ್ಧೆಗೆ ಅರ್ಜಿ ಆಹ್ವಾನ

ಬೆಂಗಳೂರು : ಕನ್ನಡದ ಖ್ಯಾತ ಸಾಹಿತಿ ಹಾಗೂ ಚಿಂತಕ ಕೆ.ಪಿ. ಪೂರ್ಣಚಂದ್ರ ತೇಜಸ್ವಿ(K.P.Purnachandra...

ಗಣ್ಯರ ನಿಧನಕ್ಕೆ ವಿಧಾನಸಭೆಯಲ್ಲಿ ಸಂತಾಪ

ಬೆಂಗಳೂರು : ಇಂದು ವಿಧಾನಸಭೆಯ ಅಧಿವೇಶನದಲ್ಲಿ(Legislative Assembly Session) ಇತ್ತೀಚೆಗೆ ನಿಧನರಾದ...

Topics

ನಿತ್ಯ ಪಂಚಾಂಗ 14.08.2026ಶುಕ್ರವಾರ FRIDAY.

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 14.08.2026ಶುಕ್ರವಾರ FRIDAY. ಸಂವತ್ಸರ: ಪರಾಭವ. SAMVATSARA : PARABHAVA. ಆಯಣ: ದಕ್ಷಿಣಾಯಣ. AYANA:...

ಸ್ವಾನಂದಾಶ್ರಮ: ಭಕ್ತಿ, ಸಂಸ್ಕೃತಿ, ಸೇವೆ ಮತ್ತು ಹೊಯ್ಸಳ ವೈಭವದ ಸಂಗಮ

ಆಗಸ್ಟ್ 16ರಿಂದ ವರದ ಗಣಪತಿ ವ್ರತಾಚರಣೆ ಬೆಂಗಳೂರು: ಕನಕಪುರ ರಸ್ತೆಯ ಅಗರ–ತಾತಗುಣಿಯಲ್ಲಿ(Thathaguni) ನೆಲೆಗೊಂಡಿರುವ...

ಮೇಕೆದಾಟು ಯೋಜನೆಗೆ ವೇಗ ನೀಡಲು ಅಧಿಕಾರಿಗಳಿಗೆ ಸಚಿವ ಎನ್.ಚಲುವರಾಯಸ್ವಾಮಿ ಸೂಚನೆ

ಬೆಂಗಳೂರು: ನೂತನವಾಗಿ ಜಲಸಂಪನ್ಮೂಲ ಸಚಿವರಾಗಿ(New Minister of Water Resources) ಅಧಿಕಾರ...

ತೇಜಸ್ವಿ ಜನ್ಮದಿನೋತ್ಸವ ಅಂಗವಾಗಿ ‘ಕರ್ವಾಲೊ’ ಕೃತಿ ಆಧಾರಿತ ಡಿಜಿಟಲ್ ಚಿತ್ರಕಲಾ ಸ್ಪರ್ಧೆಗೆ ಅರ್ಜಿ ಆಹ್ವಾನ

ಬೆಂಗಳೂರು : ಕನ್ನಡದ ಖ್ಯಾತ ಸಾಹಿತಿ ಹಾಗೂ ಚಿಂತಕ ಕೆ.ಪಿ. ಪೂರ್ಣಚಂದ್ರ ತೇಜಸ್ವಿ(K.P.Purnachandra...

ಗಣ್ಯರ ನಿಧನಕ್ಕೆ ವಿಧಾನಸಭೆಯಲ್ಲಿ ಸಂತಾಪ

ಬೆಂಗಳೂರು : ಇಂದು ವಿಧಾನಸಭೆಯ ಅಧಿವೇಶನದಲ್ಲಿ(Legislative Assembly Session) ಇತ್ತೀಚೆಗೆ ನಿಧನರಾದ...

ಸಚಿವಾಲಯ ಗ್ರಂಥಾಲಯದಲ್ಲಿ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ: ಮಾಸಿಕ ರೂ. 10,900 ಸ್ಟೈಫಂಡ್

ಬೆಂಗಳೂರು: ಕರ್ನಾಟಕ ಸರ್ಕಾರದ ಸಚಿವಾಲಯ ಗ್ರಂಥಾಲಯದಲ್ಲಿ(Karnataka Government Secretariat Library) 'ಅಪ್ರೆಂಟಿಸ್...

Related Articles