Credit Score and Health Loan Tips: ಚಿಕಿತ್ಸೆಗಾಗಿ ಸಾಲ ಬೇಕಾ? ಹಾಗಾದರೆ ನಿಮ್ಮ ಕ್ರೆಡಿಟ್ ಸ್ಕೋರ್ ಆರೋಗ್ಯ ಕಾಪಾಡಿಕೊಳ್ಳಿ!

ನಿಮ್ಮ ಸಾಲದ ಅರ್ಜಿಗೆ ಬ್ಯಾಂಕ್ “ಹೌದು” ಎನ್ನುವುದಕ್ಕೂ ಮುನ್ನ ನೋಡುವ ಮೊದಲ ವಿಷಯವೇ ನಿಮ್ಮ ಕ್ರೆಡಿಟ್ ಸ್ಕೋರ್. ಆದರೆ ಅನೇಕರು ತಮ್ಮ ಸಾಲದ ಅರ್ಜಿ ತಿರಸ್ಕೃತವಾದ ನಂತರವೇ ಅದರ ಮಹತ್ವವನ್ನು ಅರಿಯುತ್ತಾರೆ. ಆ ಮೇಲೆ ಭೂಕಂಪವಾದ ಅನುಭವಕ್ಕೆ ತುತ್ತಾಗುತ್ತಾರೆ.
ಕ್ರೆಡಿಟ್ ಸ್ಕೋರ್ ಎಂದರೇನು?
ಕ್ರೆಡಿಟ್ ಸ್ಕೋರ್ ಎಂದರೆ 300 ರಿಂದ 900 ರವರೆಗಿನ ಸಂಖ್ಯೆ. ಇದು ಸಾಲ ಮರುಪಾವತಿ ಕುರಿತಾದ ನಿಮ್ಮ ಆರ್ಥಿಕ ಶಿಸ್ತನ್ನು ತೋರಿಸುತ್ತದೆ. ಸ್ಕೋರ್ ಹೆಚ್ಚಿದ್ದಷ್ಟೂ, ಬ್ಯಾಂಕ್ ನಿಮಗೆ ಕಡಿಮೆ ಬಡ್ಡಿ ದರದಲ್ಲಿ, ತ್ವರಿತವಾಗಿ ಸಾಲ ನೀಡುವ ವಿಶ್ವಾಸ ವ್ಯಕ್ತಪಡಿಸುತ್ತದೆ.
ಭಾರತದಲ್ಲಿ ಆರ್‌ಬಿಐ ಪರವಾನಗಿ ಪಡೆದ ನಾಲ್ಕು ಕ್ರೆಡಿಟ್ ಬ್ಯೂರೋಗಳಿವೆ: ಸಿಬಿಲ್‌, ಎಕ್ಸ್‌ಪೀರಿಯನ್, ಈಕ್ವಿಫ್ಯಾಕ್ಸ್ ಮತ್ತು ಕ್ರಿಫ್‌ ಹೈ ಮಾರ್ಕ್. ಬ್ಯಾಂಕ್‌ಗಳು ಸಾಮಾನ್ಯವಾಗಿ ಸಿಬಿಲ್‌ ಸ್ಕೋರ್ ಅನ್ನು ಗಣನೆಗೆ ತೆಗೆದುಕೊಳ್ಳುತ್ತವೆ.
ಕ್ರೆಡಿಟ್ ಸ್ಕೋರ್ ಹೇಗೆ ಲೆಕ್ಕ ಹಾಕುವುದು?
ಕ್ರೆಡಿಟ್ ಸ್ಕೋರ್ ಲೆಕ್ಕಾಚಾರ ಹಾಕುವಾಗ ಮೇಲಿನ ನಾಲ್ಕೂ ಬ್ಯೂರೋಗಳು ಈ 5 ಅಂಶಗಳನ್ನು ಮುಖ್ಯವಾಗಿ ನೋಡುತ್ತವೆ:
1. ಸಮಯಕ್ಕೆ ಸರಿಯಾಗಿ ಮಾಸಿಕ ಕಂತು ಕಟ್ಟುವುದಕ್ಕೆ ನಿಗದಿಪಡಿಸುವ ಅಂಕ – 35 % : ತಿಂಗಳ ಕಂತು ಒಂದು ದಿನ ತಡವಾದರೂ ಸ್ಕೋರ್ 50-100 ಅಂಕ ಕಡಿಮೆಯಾಗುತ್ತಾ ಹೋಗುತ್ತದೆ.
2. ಸಾಲದ ಹಸಿವು ಹೆಚ್ಚಾಗಿದ್ದರೆ ಅಪಾಯ – 30% : ಸಾಲ ಪಡೆಯುವ ಮಿತಿ ₹1 ಲಕ್ಷ ಇದ್ದರೆ, ₹ 30,000 ಕ್ಕಿಂತ ಕಡಿಮೆ ಸಾಲ ಪಡೆಯಿರಿ. ಅದೇ 30% ಕ್ಕಿಂತ ಹೆಚ್ಚು ಸಾಲ ಪಡೆದರೆ “ಕ್ರೆಡಿಟ್ ಹಸಿವು ಹೆಚ್ಚು” ಎಂದು ಪರಿಗಣಿಸಲಾಗುತ್ತದೆ.
3. ಕ್ರೆಡಿಟ್ ಇತಿಹಾಸ ಎಷ್ಟು ಹಳೆಯದು – 15% : ಕ್ರೆಡಿಟ್ ಸ್ಕೋರ್ ಎಂಬುದು 10 ವರ್ಷ ಹಳೆಯ ನಿಮ್ಮ ಆರ್ಥಿಕ ಶಿಸ್ತನ್ನು ತೋರಿಸುತ್ತದೆ. ಹಾಗಾಗಿ ಆತುರಕ್ಕೆ ಬಿದ್ದು ನೀವೇನಾದರೂ ಹಳೆಯ ಸಾಲದ ಲೆಕ್ಕ ಚುಕ್ತ ಮಾಡಿಬಿಟ್ಟರೆ ನಿಮ್ಮ ಸ್ಕೋರ್‌ ಜೋಪಾನ ಎಂದಲ್ಲ.
4. ಸಾಲದ ಮಿಶ್ರಣ – 10% : ಗೃಹ ಸಾಲದಂತಹ ಸುರಕ್ಷಿತ ಸಾಲ ಮತ್ತು ವೈಯಕ್ತಿಕ ಸಾಲದಂತಹ ಅಸುರಕ್ಷಿತ ಸಾಲ ಎರಡೂ ಇದ್ದರೆ ಉತ್ತಮ.
5. ಹೊಸ ಸಾಲದ ಅರ್ಜಿಗಳು – 10% : 2–3 ತಿಂಗಳಲ್ಲಿ 4–5 ಬ್ಯಾಂಕುಗಳಲ್ಲಿ ಸಾಲಕ್ಕಾಗಿ ಅರ್ಜಿ ಹಾಕಿದರೆ ಸ್ಕೋರ್ ತಾತ್ಕಾಲಿಕವಾಗಿ ಕಡಿಮೆಯಾಗುತ್ತದೆ.
ಕ್ರೆಡಿಟ್ ಸ್ಕೋರ್ ಎಷ್ಟು ಇದ್ದರೆ ಒಳ್ಳೆಯದು? ಈ ಬಗ್ಗೆ ಡಾ. ಭಾಸ್ಕರ್‌ ಅಧ್ವೆಂತ ಅವರು ನೀಡುವ ಸ್ಕೋರ್‌ ಸಲಹೆ ಹೀಗಿದೆ:
1. 750–900 ಅತ್ಯುತ್ತಮ: ಹೀಗಿದ್ದರೆ ವೈದ್ಯಕೀಯ ಸಾಲ ತಕ್ಷಣವೇ ಮಂಜೂರಾಗುತ್ತದೆ. ಇದರ ಮೇಲೆ ಬಡ್ಡಿಯೂ ಕಡಿಮೆ ಇರುತ್ತದೆ.
2. 700–749 ಉತ್ತಮ: ಸಾಲ ಸಿಗುತ್ತದೆ. ಆದಾಯ ದಾಖಲೆ ಕೇಳಬಹುದು.
3. 650–699 ಸಾಧಾರಣ: ಬಡ್ಡಿ ಹೆಚ್ಚು. ಸಹ-ಅರ್ಜಿದಾರ ಬೇಕಾಗಬಹುದು.
4, 650 ಕ್ಕಿಂತ ಕಡಿಮೆಯಿದ್ದರೆ ಕಳಪೆ: ಸಾಲ ತಿರಸ್ಕಾರ ಸಾಧ್ಯತೆ ಹೆಚ್ಚು.
ಮೊದಲು ನಿಮ್ಮ ಕ್ರೆಡಿಟ್ ಸ್ಕೋರ್ ಸರಿಪಡಿಸಿಕೊಳ್ಳಿ. ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ “ಮೆಡಿಕಲ್ ಲೋನ್” ಅಥವಾ “ಹೆಲ್ತ್ EMI” ಸೌಲಭ್ಯ ಪಡೆಯುವಾಗಲೂ ಬ್ಯಾಂಕ್‌ಗಳು 700+ ಸ್ಕೋರ್‌ ಅನ್ನು ನಿರೀಕ್ಷಿಸುತ್ತವೆ. ವೈದ್ಯಕೀಯ ತುರ್ತು ಸಂದರ್ಭದಲ್ಲಿ ಸ್ಕೋರ್ ಕಡಿಮೆ ಇದ್ದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದಕ್ಕೆ ವಿಳಂಬವಾಗಬಹುದು ಎಂದು ಎಚ್ಚರಿಸುತ್ತಾರೆ ಡಾ. ಭಾಸ್ಕರ್‌ ಅಧ್ವೆಂತ.

ಸ್ಕೋರ್ ಅನ್ನು ಉಚಿತವಾಗಿ ನೋಡುವುದು ಹೇಗೆ?

RBI ನಿಯಮದಂತೆ, ವರ್ಷಕ್ಕೆ ಒಮ್ಮೆ ಕ್ರಿಬಿಲ್‌ ಅಥವಾ ಎಕ್ಸ್‌ಪೀರಿಯನ್ ವೆಬ್‌ಸೈಟ್‌ನಲ್ಲಿ ಉಚಿತವಾಗಿ ನಿಮ್ಮ ಸಂಪೂರ್ಣ ಕ್ರೆಡಿಟ್ ವರದಿಯನ್ನು ಪಡೆಯದುಕೊಳ್ಳಬಹುದು. ಅದಕ್ಕೆ ನಿಮ್ಮ ಪ್ಯಾನ್‌ ನಂಬರ್‌ ಬೇಕಾಗುತ್ತದೆ. ಮತ್ತು ನಿಮ್ಮ ಮೊಬೈಲ್‌ಗೆ ಒಟಿಪಿ ಬರುತ್ತದೆ. ಪ್ರತಿ ತಿಂಗಳು ಉಚಿತ ಸ್ಕೋರ್ ಅಪ್‌ಡೇಟ್ ಸಹ ಲಭ್ಯ.
ಕ್ರೆಡಿಟ್ ಸ್ಕೋರ್ ಕುರಿತಾದ ಸಾಮಾನ್ಯ ತಪ್ಪು ಕಲ್ಪನೆಗಳು:
1. “ಸಾಲವೇ ಮಾಡಿಲ್ಲ, ಹಾಗಾಗಿ ಸ್ಕೋರ್ ಚೆನ್ನಾಗಿದೆ”: ತಪ್ಪು.
ಕ್ರೆಡಿಟ್ ಇತಿಹಾಸ ಇಲ್ಲದಿದ್ದರೆ “NH/NA” ಎಂದು ಬರುತ್ತದೆ. ಬ್ಯಾಂಕ್‌ಗೆ ನಿಮ್ಮನ್ನು ನಂಬಲು ಆಧಾರವೇ ಇರುವುದಿಲ್ಲ.
2. “ಸಂಬಳ ಜಾಸ್ತಿ ಇದ್ದರೆ ಸ್ಕೋರ್ ಜಾಸ್ತಿ”: ಸಂಬಳವನ್ನು ಬ್ಯೂರೋ ನೋಡುವುದೇ ಇಲ್ಲ. ₹20,000 ಸಂಬಳದವರು 800 ಸ್ಕೋರ್ ಹೊಂದಬಹುದು, ₹2 ಲಕ್ಷ ಸಂಬಳದವರು 650 ಸ್ಕೋರ್ ಹೊಂದಿರಬಹುದು.

3. “ಒಂದೇ ಬಾರಿಗೆ ಸಾಲ ಸೆಟಲ್‌ಮೆಂಟ್‌ ಮಾಡಿದರೆ ಮುಗಿಯಿತು”: “ಸೆಟಲ್ಡ್‌” ಎಂಬ ದಾಖಲೆ ನಿಮ್ಮ ಕ್ರೆಡಿಟ್ ಸ್ಕೋರಿನ 7 ವರ್ಷದ ವರದಿಯಲ್ಲಿ ಬಾಕಿ ಉಳಿದಿರುತ್ತದೆ. ಪೂರ್ತಿ ಹಣ ಕಟ್ಟಿ “ಕ್ಲೋಸ್ಡ್” ಮಾಡಿಸಿ.

ಆರೋಗ್ಯ ಮತ್ತು ಹಣಕಾಸು: ಸಂಬಂಧ ಏನು?

1. ವೈದ್ಯಕೀಯ ತುರ್ತು: ನಿಮ್ಮ ಆರೋಗ್ಯ ಹದಗೆಟ್ಟು ಹಠಾತ್ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕೆಂದರೆ ಲಕ್ಷಾಂತರ ರೂಪಾಯಿ ಬೇಕಾಗಬಹುದು. ಅಂತಹ ತುರ್ತು ಸಂದರ್ಭಗಳಲ್ಲಿ 750+ ಕ್ರೆಡಿಟ್ ಸ್ಕೋರ್ ಇದ್ದರೆ ಹತ್ತೇ ನಿಮಿಷದಲ್ಲಿ ಹೆಲ್ತ್ ಲೋನ್‌ ಮಂಜೂರಾಗುತ್ತದೆ.

2. ಮಾನಸಿಕ ಒತ್ತಡ: ಕ್ರೆಡಿಟ್‌ ಸ್ಕೋರ್‌ ಕಳಪೆಯಾಗಿದ್ದು ಸಾಲ ತಿರಸ್ಕಾರವಾದರೆ ಅಥವಾ ಹೆಚ್ಚಿನ ಬಡ್ಡಿದರದ ಸಾಲ ಮಂಜೂರಾದರೆ ಅದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
3. ಉತ್ತಮ ಸ್ಕೋರ್ = ನೆಮ್ಮದಿಯ ನಿದ್ರೆ ಎಂಬುದು ನಿಮ್ಮ ಆರೋಗ್ಯ ಮಂತ್ರವಾಗಿರಲಿ.
4. ವೃದ್ಧಾಪ್ಯ ಯೋಜನೆ: ನಿವೃತ್ತಿಯ ನಂತರ ಧುತ್ತನೆ ಎದುರಾಗುವ ಆರೋಗ್ಯ ಸಮಸ್ಯೆಗಗಳಿಗೆ, ಶಸ್ತ್ರಚಿಕಿತ್ಸೆಗೆ ಹಣ ಉಳಿತಾಯ ಮಾಡಿರುವುದು ಮತ್ತು ಉತ್ತಮ ಕ್ರೆಡಿಟ್ ಸ್ಕೋರ್ ಎರಡೂ ಸಹ ಬೇಕು.

ಡಾ. ಭಾಸ್ಕರ್ ಅಧ್ವೆಂತ ಅವರು ಕೊಡುವ 5 ಆರೋಗ್ಯಕರ ಸಲಹೆಗಳು:

1. ನೀವು ಕಟ್ಟಬೇಕಿರುವ ಸಾಲದ ಕಂತಿಗೆ ಅಲಾರಂ ಇರಿಸಿ: ಶಸ್ತ್ರಚಿಕಿತ್ಸೆ ಆದನಂತರ ಮುಂಚಿನ ಅರೋಗ್ಯ ಸ್ಥಿತಿಗೆ ತಲುಪಲು ಫಿಸಿಯೋಥೆರಪಿ ಅತ್ಯಗತ್ಯ. ಆದರೆ ಫಿಸಿಯೋಥೆರಪಿಯನ್ನು ನಗಣ್ಯ ಎಂದು ಪರಿಭಾವಿಸಿ ಕೆಲವರು ಅದನ್ನು ತಪ್ಪಿಸುತ್ತಾರೆ. ಈ EMI ಎಂಬುದು ಸಹ ನಿಮ್ಮ ಕ್ರೆಡಿಟ್‌ ಸ್ಕೋರ್‌ನಲ್ಲಿ ಜರೂರತ್ತು ಹೊಂದಿರುತ್ತದೆ. ಹಾಗಾಗಿ ಅದನ್ನು ತಪ್ಪಿಸಬೇಡಿ.
2. ಸಾಲ‌ದ ಕಂತನ್ನು ಪೂರ್ತಿಯಾಗಿ ಕಟ್ಟಿ: “ಮಿನಿಮಮ್‌ ಡ್ಯೂ” ಕಟ್ಟಿದರೆ ಬಡ್ಡಿ ಮತ್ತು ಸ್ಕೋರ್ ಎರಡಕ್ಕೂ ಹಾನಿಯುಂಟಾಗುತ್ತದೆ.
3. ವರ್ಷಕ್ಕೆ 2 ಬಾರಿ ಕ್ರೆಡಿಟ್‌ ವರದಿ ನೋಡಿ: ತಪ್ಪು ದಾಖಲೆ ನುಸುಳಿದ್ದರೆ 30 ದಿನದಲ್ಲಿ ಬ್ಯೂರೋಗೆ ದೂರು ನೀಡಿ ಸರಿಪಡಿಸಿಕೊಳ್ಳಿ.
4. ಹಳೆಯ ಕ್ರೆಡಿಟ್‌ ವರದಿಯನ್ನು ಉಳಿಸಿಕೊಳ್ಳಿ: ನೀವು ಪಡೆದ ಮೊದಲ ಸಾಲ ಕುರಿತಾದ ಕ್ರೆಡಿಟ್‌ ವರದಿ ನಿಮ್ಮ “ಹಣಕಾಸಿನ ಜನ್ಮ ಪ್ರಮಾಣಪತ್ರ” ಇದ್ದಂತೆ!
5. ತುರ್ತು ನಿಧಿ ಕ್ರೋಡೀಕರಿಸಿಟ್ಟುಕೊಳ್ಳಿ: 3 ತಿಂಗಳ ಸಾಲದ ಕಂತಿಗೆ ಸಮನಾದ ಹಣವನ್ನು ಎಫ್‌.ಡಿ. ಯಲ್ಲಿಡಿ. ವೈದ್ಯಕೀಯ ತುರ್ತಿನಲ್ಲಿ ಸಾಲ ಪಡೆಯಬೇಕಾದರೆ ಅನಗತ್ಯ ಕಿರಿಕಿರಿ ತಪ್ಪಿಸಬಹುದು.

ಡಾ. ಭಾಸ್ಕರ್ ಅಧ್ವೆಂತ ಅವರ ಬದ್ಧತೆ:

ನಾವು ಕೇವಲ ಭೌತಿಕವಾಗಿ ಶಸ್ತ್ರಚಿಕಿತ್ಸೆ ನೀಡುವುದಲ್ಲ, ರೋಗಿಗಳ ಸಂಪೂರ್ಣ ಯೋಗಕ್ಷೇಮಕ್ಕೆ ಬದ್ಧರು. ಹಣಕಾಸಿನ ಒತ್ತಡವು ರೋಗ ಗುಣವಾಗುವುದನ್ನು ವಿಳಂಬ ಮಾಡುತ್ತದೆ. ಹಾಗಾಗಿ ನಾವು ಹಣಕಾಸಿನ ಆರೋಗ್ಯದ ಬಗ್ಗೆಯೂ ಜಾಗೃತಿ ಮೂಡಿಸುತ್ತೇವೆ.

ನೆನಪಿಡಿ: ದೇಹದ ನೋವಿಗೆ ವೈದ್ಯರು ಇರುತ್ತಾರೆ. ಆದರೆ, ಹಣಕಾಸಿನ ನೋವು ಬರದಂತೆ ನೋಡಿಕೊಳ್ಳುವುದು ನಿಮ್ಮ ಕೈಯಲ್ಲಿದೆ. ಈ ಲೇಖನ ಕೇವಲ ಮಾಹಿತಿ ಮತ್ತು ಜಾಗೃತಿಗಾಗಿ. ವೈಯಕ್ತಿಕ ಹಣಕಾಸು ಸಲಹೆಗೆ ಪ್ರಮಾಣೀಕೃತ ಸಲಹೆಗಾರರನ್ನು ಮತ್ತು ಸಾಲದ ಅರ್ಹತೆಗೆ ನಿಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಿ. ಹಣಕಾಸನ್ನು ಜೋಪಾನವಾಗಿ ನೋಡಿಕೊಳ್ಳಿ.

Hot this week

ಬಾಲಕನ ಶ್ವಾಸಕೋಶದಿಂದ ಪಿನ್ ಹೊರ ತೆಗೆದು ಜೀವ ಉಳಿಸಿದ ವೈದ್ಯರು

ಬೆಂಗಳೂರು: ಭಾರತದಲ್ಲಿ ಅತಿಹೆಚ್ಚು ಆಸ್ತಮಾ ರೋಗಿಗಳು ಇರುವ ನಗರಗಳಲ್ಲಿ ಬೆಂಗಳೂರು ಕೂಡಾ...

ಅರ್ಥರ್ ಓಸ್ ಬರ್ನ್ ಅವರ ನಂಬಲಸಾಧ್ಯವಾದ ಸಾಯಿಬಾಬಾ

ಹಾಸನ:ಗೊರೂರು ಅನಂತ ರಾಜು(Gorur AnanthaRaju) ಯಾರೊಡನೆಯೂ ಮಾತನಾಡದೆ, ದಾಪುಗಾಲು ಹಾಕುತ್ತಾ ರಸ್ತೆಯಲ್ಲಿ...

ಶ್ರೀಲಂಕಾದ ಉಪ ಹೈಕಮಿಷನರ್-ರಾಜ್ಯಪಾಲರ ಸೌಹಾರ್ದಯುತ ಭೇಟಿ

ಶ್ರೀ ಡಾ. ಗಣೇಶನಾಥನ್ ಗೀತೀಶ್ವರನ್,(Shri Dr. Ganesanathan Geathiswaran) ಶ್ರೀಲಂಕಾದ ಉಪ...

ನಿಯೋ ಫ್ರೆಶ್ ಸೂಪರ್ ಮಾರ್ಕೆಟ್‌ಗೆ ನಂಜಾವಧೂತ ಮಹಾಸ್ವಾಮೀಜಿ ಚಾಲನೆ

ಬೆಂಗಳೂರು: ಗ್ರಾಹಕರಿಗೆ ಗುಣಮಟ್ಟದ ದಿನಸಿ ವಸ್ತುಗಳು, ತಾಜಾ ಹಣ್ಣು–ತರಕಾರಿಗಳು ಹಾಗೂ ದಿನಬಳಕೆ...

ನಿತ್ಯ ಪಂಚಾಂಗ 09.06.2026 TUESDAY.ಮಂಗಳವಾರ

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 09.06.2026 TUESDAY.ಮಂಗಳವಾರ*ಸಂವತ್ಸರ:ಪರಾಭವ SAMVATSARA : PARABHAVA. ಆಯಣ: ಉತ್ತರಾಯಣ AYANA: UTTARAYANA. ಋತು:...

Topics

ಬಾಲಕನ ಶ್ವಾಸಕೋಶದಿಂದ ಪಿನ್ ಹೊರ ತೆಗೆದು ಜೀವ ಉಳಿಸಿದ ವೈದ್ಯರು

ಬೆಂಗಳೂರು: ಭಾರತದಲ್ಲಿ ಅತಿಹೆಚ್ಚು ಆಸ್ತಮಾ ರೋಗಿಗಳು ಇರುವ ನಗರಗಳಲ್ಲಿ ಬೆಂಗಳೂರು ಕೂಡಾ...

ಅರ್ಥರ್ ಓಸ್ ಬರ್ನ್ ಅವರ ನಂಬಲಸಾಧ್ಯವಾದ ಸಾಯಿಬಾಬಾ

ಹಾಸನ:ಗೊರೂರು ಅನಂತ ರಾಜು(Gorur AnanthaRaju) ಯಾರೊಡನೆಯೂ ಮಾತನಾಡದೆ, ದಾಪುಗಾಲು ಹಾಕುತ್ತಾ ರಸ್ತೆಯಲ್ಲಿ...

ಶ್ರೀಲಂಕಾದ ಉಪ ಹೈಕಮಿಷನರ್-ರಾಜ್ಯಪಾಲರ ಸೌಹಾರ್ದಯುತ ಭೇಟಿ

ಶ್ರೀ ಡಾ. ಗಣೇಶನಾಥನ್ ಗೀತೀಶ್ವರನ್,(Shri Dr. Ganesanathan Geathiswaran) ಶ್ರೀಲಂಕಾದ ಉಪ...

ನಿಯೋ ಫ್ರೆಶ್ ಸೂಪರ್ ಮಾರ್ಕೆಟ್‌ಗೆ ನಂಜಾವಧೂತ ಮಹಾಸ್ವಾಮೀಜಿ ಚಾಲನೆ

ಬೆಂಗಳೂರು: ಗ್ರಾಹಕರಿಗೆ ಗುಣಮಟ್ಟದ ದಿನಸಿ ವಸ್ತುಗಳು, ತಾಜಾ ಹಣ್ಣು–ತರಕಾರಿಗಳು ಹಾಗೂ ದಿನಬಳಕೆ...

ನಿತ್ಯ ಪಂಚಾಂಗ 09.06.2026 TUESDAY.ಮಂಗಳವಾರ

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 09.06.2026 TUESDAY.ಮಂಗಳವಾರ*ಸಂವತ್ಸರ:ಪರಾಭವ SAMVATSARA : PARABHAVA. ಆಯಣ: ಉತ್ತರಾಯಣ AYANA: UTTARAYANA. ಋತು:...

ಲಲಿತಕಲಾ ಅಕಾಡೆಮಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಚಿತ್ರಕಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿಯು...

ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್: ಅರ್ಜಿ ಆಹ್ವಾನ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ (Information Dept.) ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ...

ನಿತ್ಯ ಪಂಚಾಂಗ 07.06.2026 SUNDAY.ಭಾನುವಾರ

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 07.06.2026 SUNDAY.ಭಾನುವಾರ*ಸಂವತ್ಸರ: ಪರಾಭವ SAMVATSARA : PARABHAVA. ಆಯಣ: ಉತ್ತರಾಯಣ AYANA:...

Related Articles