ಕೆ.ಆರ್.ಮಾರ್ಕೆಟ್ ನಲ್ಲಿ ಮೂರು ದಿನಗಳಿಂದ ಕೊಳೆಯುತ್ತಿರುವ ದನದ ಹೆಣ-ಬಿಬಿಎಂಪಿ ಡೋಂಟ್ ಕೇರ್!
ಬೆಂಗಳೂರು: ಇಡೀ ಬೆಂಗಳೂರಿಗೇ ಹಣ್ಣು ಮತ್ತು ತರಕಾರಿ ಸರಬರಾಜು ಮಾಡುವ ಕೃಷ್ಣ ರಾಜ ಮಾರುಕಟ್ಟೆಯಲ್ಲಿ ಸ್ವಚ್ಛತೆಯದ್ದೇ ಸಮಸ್ಯೆ ಇದಕ್ಕೆ ಕಲಶವಿಟ್ಟಂತೆ ಬಿಬಿಎಂಪಿಯ ನಿರ್ಲಕ್ಷ್ಯ ಈಗ ಸಾರ್ವಜನಿಕರು ಮನೆಗೆ ಕೊಂಡೊಯ್ಯುವ ಆಹಾರ ವಸ್ತುಗಳನ್ನು ಮಾರುವ ಕಳೆದ ಮೂರು ದಿನಗಳಿಂದ ದುವಾಸನೆಯ ಜಾಗವಾಗಿದೆ.
ದನದ ಕರುವೊಂದು ಸತ್ತು ಬಿದ್ದು ಅದರ ಹೆಣ ಕೊಳೆತು ನಾರುತ್ತಿದ್ದರೂ ಸಹ ಬಿಬಿಎಂಪಿ ಅಧಿಕಾರಿಗಳನ್ನು ಅದನ್ನು ತೆರವು ಮಾಡಿಸದೇ ನಿರ್ಲಕ್ಷ್ಯ ಮೆರೆದಿದ್ದಾರೆ, ಇಡೀ ಕೆ ಆರ್ ಮಾರುಕಟ್ಟೆಯ ಸಂಕೀರ್ಣ ದುರ್ವಾಸನೆಯಿಂದ ಸಹಿಸಲಸಾಧ್ಯ ವಾತಾವರಣದಲ್ಲಿದ್ದರೂ ಬಿಬಿಎಂಪಿ ಕಣ್ಣು ಹಾಗೂ ಮೂಗು ಮುಚ್ಚಿಕೊಂಡು ಕುಳಿತಿದೆ,
ಇಲ್ಲಿನ ಸ್ಧಳೀಯ ವರ್ತಕರು ಸಾರ್ವಜನಿಕರು ಬಿಬಿಎಂಪಿ ಗೆ ಹಿಡಿಶಾಪ ಹಾಗಿದ್ದಾರೆ,
