ಬಂಜಾರ ಕಲೆ, ಸಾಹಿತ್ಯ -ಸಂಸ್ಕೃತಿ ಹಾಗೂ ಶಿಕ್ಷಣ ಜಾಗೃತಿ ಅಭಿಯಾನ

ʻʻಬಂಜಾರ ಅಕಾಡೆಮಿ ನಡೆ ತಾಂಡಗಳ ಕಡೆ 2025-26ʼʼ ಬಂಜಾರ ಕಲೆ, ಸಾಹಿತ್ಯ -ಸಂಸ್ಕೃತಿ ಹಾಗೂ ಶಿಕ್ಷಣದ ಕುರಿತು ಜಾಗೃತಿ ಅಭಿಯಾನವನ್ನು ಲೋಕನಾಯ್ಕನ ತಾಂಡ, ಮರಳವಾಡಿ ಹೋ|| ಹಾರೋಹಳ್ಳಿ ತಾ|| ರಾಮನಗರ ಜಿಲ್ಲೆಯಲ್ಲಿ ಸಮಾರಂಭವನ್ನು ಅಕಾಡೆಮಿ ಅಧ್ಯಕ್ಷರಾದ ಡಾ. ಎ.ಆರ್‌ ಗೋವಿಂದಸ್ವಾಮಿ ಉದ್ಘಾಟಿಸಿ ಮತನಾಡಿದರು. ಸಮಾರಂಭದಲ್ಲಿ ಡಾ.ಎಂ.ನಾಗರಜ ನಾಯ್ಕ, ಡಾ.ಶಿವಣ್ಣ ನಾಯ್ಕ, ಶ್ರೀಮತಿ ಅನಸೂಯಮ್ಮ ಎಂ, ಶ್ರೀ ರಮೇಶ್‌ ನಾಯ್ಕ, ಶ್ರೀ ಶ್ಯಾಮರಾಜ್‌ ನಾಯ್ಕ ಸ್ವಾಮೀಜಿ, ಶ್ರೀ ಮರಿಯಪ್ಪ ನಾಯ್ಕ, ಶ್ರೀ ಗಿರಿಶ್‌ ನಾಯ್ಕ್ ಉಪಸ್ಥಿತರಿದ್ದರು.

ಡಾ. ಎ.ಆರ್‌ ಗೋವಿಂದಸ್ವಾಮಿ ಅವರು ಮಾತನಾಡಿ ಬಂಜಾರ ಭಾಷೆ  ಕನ್ನಡ ಭಾಷೆಯಷ್ಟೇ ಹಿಂದಿನ ಅಳಿಮೆಯನ್ನು ಹೊಂದಿದ್ದು ಭಾಷೆಯಲ್ಲಿ ಸಾಹಿತ್ಯ ರಚನೆಯು ಅಗತ್ಯವಾಗಿದೆ. ಬಂಜಾರರ ಮೌಖಿಕ ಸಾಹಿತ್ಯ ಹಾಗೂ ಕಲೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಸುವ ನಿಟ್ಟಿನಲ್ಲಿ ಅಕಾಡೆಮಿಗೆ ಬಂಜಾರ ಕಲಾವಿದರು, ಸಾಹಿತಿಗಳ ಸಹಕಾರ ಅಗತ್ಯವಿದೆ. ಅಕಾಡೆಮಿಗೆ ತಮ್ಮ ಮಾನವ ಸಂಪನ್ಮೂಲವನ್ನು ಅಕಾಡೆಮಿ ಜೊತೆಗೆ ಗುರುತಿಸಿಕೊಳ್ಳಬೇಕೆಂದು ಮನವಿ ಮಾಡಿದರು. ಇಂದು ಬಂಜಾರರ ಸಮಗ್ರ ಅಭಿವೃದ್ಧಿಗೆ ಅಕಾಡೆಮಿ ಸಾಹಿತ್ಯ, ಸಂಸ್ಕೃತಿ ಸಮಾಜಿಕ ಶಿಕ್ಷಣ ಇತರೆ ಅಭಿವೃದ್ಧಿಗೆ ಅಕಾಡೆಮಿಯು ಸರ್ವಾಂಗಣವಾಗಿ ಕೆಲಸ ನಿರ್ವಹಿಸುತ್ತಿದೆ. ಹೀಗಾಗಿ ಅಕಾಡೆಮಿಯು ಒಂದು ಅತ್ಯೂತ್ತಮವಾದ ಸಂಸ್ಥೆಯಾಗಿದ್ದು ಇದಕ್ಕೆ ಬಂಜಾರರೆಲ್ಲರಿಗೂ ನನ್ನ ಸಂಸ್ಥೆಯೆಂದು ಪರಿಭಾವಿಸಿ ಸಹಕಾರ ನೀಡಿದರೆ ಅಕಾಡೆಮಿ ಅತ್ಯುತ್ತಮವಾಗಿ ಕೆಲಸಮಾಡಲು ಅನುಕೂಲವಾಗುವುದು. ಎಲ್ಲಾ ಜಿಲ್ಲಾ ವಲಯಗಳಲ್ಲಿ ಇದೇ ರೀತಿ ನಾವು ಜಾಗೃತಿ ಕಾರ್ಯಕ್ರಮಗಳು, ಬಂಜಾರ ಸಂಸ್ಕೃತಿ ಕೋಶ, ಬಂಜಾರರ ಪ್ರಮುಖರ ಸಾಮಾಜಿಕ ಸ್ವಾತಂತ್ರ್ಯ ಹೋರಾಟ ಚಿಂತಕರ 70ಕ್ಕೂ ಹೆಚ್ಚು ಕೃತಿಗಳನ್ನು ಈ ವರ್ಷ ರಚನೆ ಮಾಡುತ್ತಿದ್ದೆವೆ,  ಸಾಕ್ಷ್ಯಾಚಿತ್ರ ಮಾಡುತ್ತಿದ್ದೆವೆ, ತರಬೇತಿ ಮಾಡುತ್ತಿದ್ದೆವೆ, ಸಮೇಳನ ಮಾಡುತ್ತಿದ್ದೆವೆ, ಅಂತರ್ರಾಷ್ಟ್ರೀಯ ಮಟ್ಟದ ಒಂದು ಸಮ್ಮೇಳನಕ್ಕೆ ವಿದೇಶಿ ಬಂಜಾರರಿಂದ ಮೌಖಿಕವಾಗಿ ಒಂದು ಬೇಡಿಕೆ ಬಂದಿದ್ದು, ಸರ್ಕಾರದೊಂದಿಗೆ ಚರ್ಚಿಸಿ ಅಂತರಾಷ್ಟ್ರೀಯ ಬಂಜಾರ ಸಾಹಿತ್ಯ,ಸಂಸ್ಕೃತಿ, ಕಲಾ  ಮಹಾ ಸಮ್ಮೇಳನವನ್ನು ನಡೆಸುವ ಅಲೋಚನೆ ಅಕಾಡೆಮಿಗೆ ಇದೆ.   ನಮಗೆ ಈ ವರ್ಷ ಹೆಚ್ಚಿನ ಬಜೆಟ್‌ ನ ಅಗತ್ಯವಿದೆ  ಇತರೆ ಅಕಾಡೆಮಿಗಳಿಗೆ ಕೊಟ್ಟಿರುವ ಹಾಗೆ ನಮಗೂ ಕನಿಷ್ಠ 5 ಕೋಟಿಗಿಂತ ಹೆಚ್ಚಿನ ಬಜೆಟ್‌ನ್ನು ಆರಂಭದಲ್ಲಿ ಕೊಟ್ಟರೆ ಅಕಾಡೆಮಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಕೆಲಸ ಮಾಡಲು ಸಾಧ್ಯ. ಹೀಗಾಗಲೆ ಸರ್ಕಾರ ನಮಗೆ ಉತ್ತಮ ರೀತಿಯಲ್ಲಿ ಸಹಕಾರ ಕೊಡುತ್ತಿರುವುದಕ್ಕೆ ಧನ್ಯವಾದ ಎಂದು ಹೇಳಿದರು. ಹೀಗಾಗಲೆ ಎಲ್ಲಾ ಕಡೆ ಸಾಹಿತ್ಯ ಸಮ್ಮೇಳನ , ತರಬೇತಿ ಶಿಬಿರಗಳು ಕಾರ್ಯಗಾರಗಳನ್ನು  ಯಶಸ್ವಿಯಾಗಿ ನಡೆಸಿದ್ದೇವೆ.

ಪ್ರೋ. ಶಿವಣ್ಣ ನಾಯಕ್‌ ಅವರು ಅಕಾಡೆಮಿ ನಮ್ಮಂತಹ ಕುಕ್ಕುಗ್ರಾಮದಲ್ಲೂ ಬಂದು ಈ ರೀತಿಯ ಒಂದು ಮಹನ್ನೊತವಾದಂತಹ ನಮ್ಮ ಹಳ್ಳಿ ಗಾಡಿನ ಜನರನ್ನ ಸಾಹಿತ್ಯ, ಸಾಂಸ್ಕೃತಿಕ ಪ್ರಬುದ್ದತೆ ಬೆಳೆಸುವುದಕ್ಕೆ ಜಾಗೃತಿ ಅರಿವು, ತರಬೇತಿ ಕಾರ್ಯಕ್ರಮಗಳನ್ನು ನಡೆಡಸುತ್ತಿರುವುದು ಅಗತ್ಯವಾದ ಕೆಲಸ ಅಕಾಡೆಮಿ ಮಾಡುತ್ತಿರುವ ಕೆಲಸ ಹೆಮ್ಮೆ ಎನಿಸಿದೆ.

Hot this week

ದೇವನಹಳ್ಳಿ ತಾಲೂಕು ಕಚೇರಿಯಲ್ಲಿ ಆಮೆಗತಿಯ ಮಾಹಿತಿ ಹಕ್ಕು ಪ್ರಕ್ರಿಯೆ:

ದೇವನಹಳ್ಳಿ: ಸರ್ಕಾರದ ಆಡಳಿತದಲ್ಲಿ ಪಾರದರ್ಶಕತೆ ತರಲು ಜಾರಿಗೆ ಬಂದ ಮಾಹಿತಿ ಕ್ಕು...

ಜನಿವಾರ ತೆಗೆಸಿದ ಕೃತ್ಯ ‘ಪೆಹಲ್ಗಾಂ’ ಮಾದರಿಯ ದಬ್ಬಾಳಿಕೆ:

ಬ್ರಾಹ್ಮಣ ಮಹಾಸಭಾ ತೀವ್ರ ಖಂಡನೆ ​ಇತ್ತೀಚೆಗೆ ನಡೆದ ಸಿಇಟಿ (CET) ಪರೀಕ್ಷಾ ಸಮಯದಲ್ಲಿ...

ಕಾರ್ಮಿಕ ದಿನಾಚರಣೆ: ವಾಯ್ಸ್ ಆಫ್ ಸದಾಶಿವನಗರದಿಂದ 170ಪೌರ ಕಾರ್ಮಿಕರಿಗೆ ಸನ್ಮಾನ*

ಬೆಂಗಳೂರು,ಮೇ.1: ವಿಶ್ವ ಕಾರ್ಮಿಕರ ದಿನಾಚರಣೆ (Vishva Karmikara dinacharane)  ಪ್ರಯುಕ್ತ ಸದಾಶಿವನಗರ...

ರಂಗಪ್ರವೇಶ — ಕುಮಾರಿ ಲಕ್ಷ್ಮಿ ಅನನ್ಯ ತಾಟವರ್ತಿ

ಭಾರತೀಯ ಶಾಸ್ತ್ರೀಯ ನೃತ್ಯದ ಲೋಕದಲ್ಲಿ ರಂಗಪ್ರವೇಶ ಎಂದರೆ ಕೇವಲ ಒಂದು ಪ್ರದರ್ಶನವಲ್ಲ—ಅದು ಒಂದು ಘೋಷಣೆ....

Topics

ದೇವನಹಳ್ಳಿ ತಾಲೂಕು ಕಚೇರಿಯಲ್ಲಿ ಆಮೆಗತಿಯ ಮಾಹಿತಿ ಹಕ್ಕು ಪ್ರಕ್ರಿಯೆ:

ದೇವನಹಳ್ಳಿ: ಸರ್ಕಾರದ ಆಡಳಿತದಲ್ಲಿ ಪಾರದರ್ಶಕತೆ ತರಲು ಜಾರಿಗೆ ಬಂದ ಮಾಹಿತಿ ಕ್ಕು...

ಜನಿವಾರ ತೆಗೆಸಿದ ಕೃತ್ಯ ‘ಪೆಹಲ್ಗಾಂ’ ಮಾದರಿಯ ದಬ್ಬಾಳಿಕೆ:

ಬ್ರಾಹ್ಮಣ ಮಹಾಸಭಾ ತೀವ್ರ ಖಂಡನೆ ​ಇತ್ತೀಚೆಗೆ ನಡೆದ ಸಿಇಟಿ (CET) ಪರೀಕ್ಷಾ ಸಮಯದಲ್ಲಿ...

ಕಾರ್ಮಿಕ ದಿನಾಚರಣೆ: ವಾಯ್ಸ್ ಆಫ್ ಸದಾಶಿವನಗರದಿಂದ 170ಪೌರ ಕಾರ್ಮಿಕರಿಗೆ ಸನ್ಮಾನ*

ಬೆಂಗಳೂರು,ಮೇ.1: ವಿಶ್ವ ಕಾರ್ಮಿಕರ ದಿನಾಚರಣೆ (Vishva Karmikara dinacharane)  ಪ್ರಯುಕ್ತ ಸದಾಶಿವನಗರ...

ರಂಗಪ್ರವೇಶ — ಕುಮಾರಿ ಲಕ್ಷ್ಮಿ ಅನನ್ಯ ತಾಟವರ್ತಿ

ಭಾರತೀಯ ಶಾಸ್ತ್ರೀಯ ನೃತ್ಯದ ಲೋಕದಲ್ಲಿ ರಂಗಪ್ರವೇಶ ಎಂದರೆ ಕೇವಲ ಒಂದು ಪ್ರದರ್ಶನವಲ್ಲ—ಅದು ಒಂದು ಘೋಷಣೆ....

“ವಿಶ್ವ ನೃತ್ಯ ದಿನಾಚರಣೆ”

ಆರ್ಟ್ ಕಲ್ಚರಲ್ ಎಜುಕೇಶನಲ್ ಎನ್ಲೈಟ್ ಫೌಂಡೇಶನ್ ಸಂಸ್ಥಾಪಕಿ ಅಂಬಿಕಾ ಸಿ(Ambika .c)...

ಶ್ರೀ ಶ್ರೀನಿವಾಸ ದೇವರಿಗೆ ಮಹಾಭಿಷೇಕ ಪವಮಾನಪುರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ

ಬೆಂಗಳೂರು : ಪವಮಾನಪುರ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ...

ತ್ಯಾಗರಾಜನಗರ ರಾಯರ ಮಠದಲ್ಲಿ ಶ್ರೀ ನರಸಿಂಹ ಜಯಂತಿ

ಬೆಂಗಳೂರು : ತ್ಯಾಗರಾಜನಗರದ 11ನೇ ಅಡ್ಡರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ...

Related Articles