ಸನಾತನ ರಾಷ್ಟ್ರ ಸ್ಥಾಪನೆಗಾಗಿ ನೂತನ ದಿಶೆ ಮತ್ತು ಜಾಗೃತಿ ಮೂಡಿಸುವ ಶಂಖನಾದ

ಪ್ರಸ್ತಾವನೆ : ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದಲ್ಲಿ ದೇಶಾದ್ಯಂತದಿಂದ ಬಂದಿರುವ ಸಾಧಕರು, ವಿಚಾರವಂತರು, ಸಂತರು ಮತ್ತು ರಾಷ್ಟ್ರ ನಿಷ್ಠ ನಾಗರಿಕರು ಒಟ್ಟಾಗಿ ಸೇರಿ ‘ ಸನಾತನ ರಾಷ್ಟ್ರ ‘ ಸ್ಥಾಪನೆಯ ಸಂಕಲ್ಪ ಮತ್ತೊಮ್ಮೆ ದೃಢಪಡಿಸಿದರು. ಶತಚಂಡಿ ಯಜ್ಞ, ಧರ್ಮಧ್ವಜಾರೋಹಣ, ಯುದ್ಧ ಕಲೆಯ ಪ್ರಾತ್ಯಕ್ಷಿಕೆಗಳು, ಸಂತರ ಮಾರ್ಗದರ್ಶನ, ಮತ್ತು ರಾಷ್ಟ್ರ ರಕ್ಷಣೆಯ ಬಗ್ಗೆ ವಿಚಾರವಂತರ ವಿಚಾರಗಳು ಮುಂತಾದವು ಈ ಮಹೋತ್ಸವಕ್ಕೆ ಕೇವಲ ಆಧ್ಯಾತ್ಮಿಕ ಅಷ್ಟೇ ಅಲ್ಲ, ವೈಚಾರಿಕ ಮತ್ತು ಕೃತಿ ಶೀಲ ಅಧಿಷ್ಠಾನ ನೀಡಿತು. ಈ ಶಂಖನಾದದಿಂದ ಸಾಧಕರ ಮನಸ್ಸಿನಲ್ಲಿ ‘ ವೈಯಕ್ತಿಕ ಸಾಧನೆಯ ಜೊತೆಗೆ ಸಮಾಜ ರಕ್ಷಣೆಗಾಗಿ ಅವಶ್ಯವಾದ ಸಮಷ್ಟಿ ಸಾಧನೆಯೂ ಮಹತ್ವದ್ದಾಗಿದೆ, ಎಂಬ ಅರಿವನ್ನು ಮೂಡಿಸಿತು. ವಿಶೇಷವಾಗಿ ಯುವಶಕ್ತಿಗೆ ಶೌರ್ಯ, ಸ್ವಸಂಕ್ಷಣೆ ಮತ್ತು ದೇಶಭಕ್ತಿಯ ನೂತನ ಮಂತ್ರ ದೊರೆಯಿತು. ಇಂದು ದೇಶವು ಸಾಂಸ್ಕೃತಿಕ ಸಂಘರ್ಷದ ಹೊಸ್ತಿಲಲ್ಲಿ ನಿಂತಿದೆ. ಇಂತಹ ಸಮಯದಲ್ಲಿ ಈ ಮಹೋತ್ಸವ ಎಂದರೆ ಒಂದು ಚೈತನ್ಯದಾಯಕ ಜ್ಯೋತಿ ಆಗಿದೆ. ಅದು ಪ್ರತಿಯೊಬ್ಬ ಹಿಂದೂವಿನ ಮನಸ್ಸಿನಲ್ಲಿ ಧರ್ಮ, ಸಂಸ್ಕೃತಿ ಮತ್ತು ರಾಷ್ಟ್ರಕ್ಕಾಗಿ ಸಿದ್ದವಾಗಿರಗಲು ತೇಜ  ಜಾಗೃತ ಮಾಡುತ್ತಿದೆ. ಈ ಮಹೋತ್ಸವದ ಮಾಧ್ಯಮದಿಂದ ನಡೆಯುತ್ತಿರುವ ವಿಚಾರ ಮಂಥನವೇ ಇದರ ನಿಜವಾದ ಫಲನಿಷ್ಪತ್ತಿ ಮತ್ತು ರಾಮರಾಜ್ಯದೆಡೆಗೆ ಹಾಕಿರುವ ದೃಢವಾದ ಹೆಜ್ಜೆ ಆಗುವುದು.

ಸಮಾಜದ ವ್ಯಾಪಕ ಪ್ರಭಾವದ ಪ್ರತೀಕ ! : ಈ ಮಹೋತ್ಸವಕ್ಕೆ 23 ದೇಶದಿಂದ 30 ಸಾವಿರಕ್ಕಿಂತಲೂ ಹೆಚ್ಚಿನ ಸಾಧಕರು ಮತ್ತು ಹಿಂದೂ ಧರ್ಮಪ್ರೇಮಿಗಳು ಉಪಸ್ಥಿತರಿದ್ದರು. ಗೋವಾ ರಾಜ್ಯದ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ, ಭಾಗ್ಯನಗರದ ಹಿಂದುತ್ವನಿಷ್ಟ ಶಾಸಕ ಟಿ. ರಾಜಸಿಂಹ , ಗೋವಾದ ಆರೋಗ್ಯ ಸಚಿವ ಶ್ರೀ. ವಿಶ್ವಜೀತ  ರಾಣೆ , ಕೇಂದ್ರ ವಿದ್ಯುತ್ ರಾಜ್ಯ ಸಚಿವ ಶ್ರೀ. ಶ್ರೀಪಾದ ನಾಯಿಕ, ಗೋವಾದ ವಿದ್ಯುತ್ ಸಚಿವ ಶ್ರೀ. ಸುದಿನ  ಢವಳಿಕರ, ಭಾಜಪದ ಗೋವಾ ರಾಜ್ಯದ ಪ್ರದೇಶಾಧ್ಯಕ್ಷ ಶ್ರೀ. ದಾಮೋದರ ನಾಯಿಕ , ಇವರಂತಹ ರಾಜಕೀಯ ಕ್ಷೇತ್ರದ ಗಣ್ಯರ ಸಹಿತ ಗೋವಾದ ಕುಂಡಯಿ ಇಲ್ಲಿಯ ದತ್ತ  ಪದ್ಮನಾಭ ಪೀಠದ ಪದ್ಮಶ್ರೀ ಸದ್ಗುರು ಬ್ರಹ್ಮೇಶಾನಂದ ಸ್ವಾಮೀಜಿ, ಸನಾತನ ಬೋರ್ಡ್ ಪ್ರತಿಪಾದಕರು ಪೂ. ದೇವಕಿ ನಂದನ ಠಾಕೂರ, ಕರ್ನಾಟಕದ ಮೈಸೂರು ರಾಜಮನೆತನದ ಯುವರಾಜ, ಹಾಗೂ ಮೈಸೂರಿನ ಸಂಸದ ಶ್ರೀ. ಯದುವೀರ ಕೃಷ್ಣ ದತ್ತ ಒಡೆಯರ  ‘ಸುದರ್ಶನ ನ್ಯೂಸ್ ‘ ನ ಮುಖ್ಯ ಸಂಪಾದಕರು ಶ್ರೀ. ಸುರೇಶ್ ಚೌಹಾಣಕೆ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಸನಾತನ ಧರ್ಮದ ಕಾರ್ಯಕ್ರಮಕ್ಕೆ ರಾಜಕೀಯ ಬೆಂಬಲ ದೊರೆಯುವುದು, ಇದು  ಸಮಾಜದಲ್ಲಿನ ಅದರ ವ್ಯಾಪಕ ಪ್ರಭಾವದ ಪ್ರತೀಕವಾಗಿದೆ.

ಸನಾತನ ರಾಷ್ಟ್ರಸ್ತಾಪನೆಗಾಗಿ ವೈಚಾರಿಕ ಸಭೆ ! :
ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದಲ್ಲಿ ವಿಚಾರವಂತರು, ಸಂತರು, ಧರ್ಮ ಗುರುಗಳು ಇವರ ಭಾಷಣದಿಂದ ಸನಾತನ ವಿಚಾರಗಳ ರಾಷ್ಟ್ರಸ್ತಾಪನೆಗಾಗಿ ವೈಚಾರಿಕ ಸಭೆ ಗಟ್ಟಿ ಆಯಿತು. ಉಪಸ್ಥಿತರು ಕೃತಿಶೀಲ ರಾಷ್ಟ್ರನಿಷ್ಠ ಸಾಧನೆಗಾಗಿ ಕಟ್ಟಿಬದ್ಧರಾಗಲು ಸಂಕಲ್ಪ ಮಾಡಿದರು. ಯುದ್ಧ ಕಲೆಯ ಪ್ರದರ್ಶನದಿಂದ ಯುವಕ ಯುವತಿಯರಲ್ಲಿ  ಸ್ವಸಂರಕ್ಷಣೆ , ಶೌರ್ಯ ಮತ್ತು ಸಿದ್ದತೆಯ ಕುರಿತು ಅರಿವು ಮೂಡಿತು. ಶಾಸ್ತ್ರದ ಜೊತೆಗೆ ಶಸ್ತ್ರಗಳ ಸಿದ್ಧತೆ ಇದು ಕೂಡ ಧರ್ಮ ರಕ್ಷಣೆಯ ಮಹತ್ವದ ಅಂಶವಾಗಿದೆ. ಗೋರಕ್ಷಣೆ, ಗುರುಕುಲ ವ್ಯವಸ್ಥೆ, ಸಾಂಪ್ರದಾಯಿಕ ವಿಧಿ, ಸನಾತನ ಆಚಾರ ಧರ್ಮ ಇವುಗಳ ಅವಶ್ಯಕತೆ ಮತ್ತೊಮ್ಮೆ ಸಾಬೀತಾಯಿತು. ಅನೇಕ ಸಹಭಾಗಿ ಆಗಿರುವ ಸಂಸ್ಥೆಗಳಿಂದ ಮುಂದಿನ ಕೃತಿಗಳಿಗಾಗಿ ಸಹಯೋಗ ಮತ್ತು ಸಮನ್ವಯದ ಅಡಿಪಾಯ ಹಾಕಲು ನಿರ್ಧರಿಸಲಾಯಿತು. ಸುದರ್ಶನ ನ್ಯೂಸ್ ಅಂತಹ ಮಾಧ್ಯಮದಿಂದ ಈ ಚಳುವಳಿಯನ್ನು ವ್ಯಾಪಕ ಮಟ್ಟದಲ್ಲಿ ತಲುಪಿಸುವ ಸಂಕಲ್ಪ ಮಾಡಲಾಯಿತು. ಸೋಶಿಯಲ್ ಮೀಡಿಯಾ ಮತ್ತು ಸಮಾಚಾರ ಮಾಧ್ಯಮಗಳಿಂದ ಮಹೋತ್ಸವದ ಕುರಿತು ಚರ್ಚೆ ಆರಂಭವಾಯಿತು. ಅದರಿಂದ ಹಿಂದೂ ರಾಷ್ಟ್ರ ಈ ಪರಿಕಲ್ಪನೆಯನ್ನು ಮುಖ್ಯ ವಾಹಿನಿಯಲ್ಲಿ ತರುವ ಪ್ರಯತ್ನ ಎದ್ದು ಕಾಣುತ್ತಿದೆ .

ಜನರ ಮನಸ್ಸಿನಲ್ಲಿನ ಧ್ಯೇಯ !: ಈ ಮಹೋತ್ಸವದಿಂದ ಒಂದು ವಿಷಯ ಸಿದ್ಧವಾಯಿತು ಏನೆಂದರೆ, ‘ ಸನಾತನ ರಾಷ್ಟ್ರ ‘ ಈ ಪರಿಕಲ್ಪನೆ ಈಗ ಕೇವಲ ವಿಚಾರಧಾರೆ ಮಾತ್ರವಲ್ಲ, ಜನರ ಮನಸ್ಸಿನಲ್ಲಿನ. ಧ್ಯೇಯವಾಗುತ್ತಿದೆ . ‌ಏಕೆಂದರೆ ಎಲ್ಲಿ ನ್ಯಾಯಾಲಯದಲ್ಲಿ ಜ್ಞಾನವಾಪಿ, ಶ್ರೀ ಕೃಷ್ಣ ಜನ್ಮ ಭೂಮಿಯ ಮೊಕದ್ದಮೆಗಳು ನಡೆಯುತ್ತಿವೆ, ವಕ್ಫ್ ಬೋರ್ಡ್ ನ ಮಿತಿರಹಿತ ಶಕ್ತಿಗಳ ಮೇಲೆ ಅಂಕುಶ ತರುವ ಸುಧಾರಿತ ವಿಧೇಯಕ ಸಂಸತ್ತಿನಲ್ಲಿ ಅಂಗೀಕಾರವಾಯಿತು, ಕೆಲವು ರಾಜ್ಯಗಳಲ್ಲಿ ಸಮಾನ ನಾಗರಿಕಾನೂನು ಜಾರಿಗೊಳಿಸಲು ಆರಂಭವಾಯಿತು, ಇದೆಲ್ಲವೂ ಸನಾತನ ರಾಷ್ಟ್ರದ ದಿಶೆಯತ್ತ ಧಾಪುಗಾಲು ಹಾಕುತ್ತಿರುವುದರ ದ್ಯೋತಕವಾಗಿದೆ

ಛತ್ರಪತಿಯವರ ಶೌರ್ಯದ ಮತ್ತು ರಣನೀತಿಯ ನೆನಪು ! :
ಗೋವಾದಲ್ಲಿ ನಡೆದಿರುವ ‘ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ ‘ ದ ಒಂದು ಮುಖ್ಯ ಭಾಗ ಛತ್ರಪತಿ ಶಿವಾಜಿ ಮಹಾರಾಜರ ಕಾಲದಲ್ಲಿನ ದುರ್ಲಭ ಮತ್ತು ಪ್ರಾಚೀನ ಶಸ್ತ್ರಾಸ್ತ್ರಗಳ ಪ್ರದರ್ಶನ. ಈ ಶಸ್ತ್ರಾಸ್ತ್ರ ಪ್ರದರ್ಶನ ನೋಡುವಾಗ ಉಪಸ್ಥಿತ ಪ್ರತಿಯೊಬ್ಬರ ಮನಸ್ಸಿನಲ್ಲಿ ಛತ್ರಪತಿಯ ಶೌರ್ಯ ಮತ್ತು ರಣ ನೀತಿಯ ನೆನಪು ಜಾಗೃತವಾಯಿತು. ಇಂದು ಅಂತರಾಷ್ಟ್ರೀಯ ಮತ್ತು ಧಾರ್ಮಿಕ ಮೂಲಭೂತವಾದಿಗಳಿಂದ ಭಾರತದ ಮೇಲೆ ದಾಳಿ ನಡೆಯುತ್ತಿರುವಂತಹ ಸಮಯದಲ್ಲಿ ಛತ್ರಪತಿಯವರ ರಣಕೌಶಲ್ಯದ ಮತ್ತು ಶೌರ್ಯದ ಆದರ್ಶ ‘ ಸನಾತನ ರಾಷ್ಟ್ರ ‘ ಸ್ಥಾಪನೆ ಮಾಡುವುದಕ್ಕಾಗಿ ಶಕ್ತಿ ನೀಡುವಂತಹದ್ದಾಗಿತ್ತು .

ಹಿಂದವಿ ಸ್ವರಾಜ್ಯದ ನವಯುಗದ ಆರಂಭ : ಸನಾತನ ಸಂಸ್ಥೆಯು ಸನಾತನ ಹಿಂದೂ ಸಂಸ್ಕೃತಿಯ ಸಂವರ್ಧನೆ ಮತ್ತು ರಾಷ್ಟ್ರ ರಕ್ಷಣೆಗಾಗಿ ನಿರಂತರವಾಗಿ ಪ್ರಯತ್ನಿಸುತ್ತದೆ. ಭಾರತಕ್ಕೆ ವಿಜಯ ದೊರೆಯಬೇಕು ಮತ್ತು ಪೃಥ್ವಿಯಲ್ಲಿ ಏಕೈಕ ಸನಾತನ ರಾಷ್ಟ್ರವಾಗಿರುವ ಭಾರತದ ರಕ್ಷಣೆಯಾಗಬೇಕು, ಅದಕ್ಕಾಗಿ ಸನಾತನ ಸಂಸ್ಥೆಯ ವತಿಯಿಂದ ಫಾರ್ಮಾಗುಡಿ, ಪೊಂಡಾ, ಗೋವಾದ ಪಾವನ ಭೂಮಿಯಲ್ಲಿ ‘ ಸನಾತನ ರಾಷ್ಟ್ರಶಂಖನಾದ ಮಹೋತ್ಸವ ‘ ದ ‘ಶತಚಂಡಿ  ಯಜ್ಞದ ಆಯೋಜಿಸಲಾಗಿತ್ತು. ಅಲ್ಲಿ ನಡೆದಿರುವ ವೈಚಾರಿಕ ಶಂಖನಾದ ಎಂದರೆ ಹಿಂದುಗಳ ಆತ್ಮವಿಶ್ವಾಸ, ದಿಶೆ ಮತ್ತು ಉದ್ದೇಶ ನೀಡುವ ರಣಕಹಳೆಯಾಗಿತ್ತು . ಇದು ಕೇವಲ ಮಹೋತ್ಸವ ಮಾತ್ರವಲ್ಲ, ಹಿಂದವಿ ಸ್ವರಾಜ್ಯದ ನವಯುಗದ ಆರಂಭವಾಗಿತ್ತು.

ಪ್ರಭು ಶ್ರೀರಾಮನ ಧರ್ಮಯುದ್ಧದ ಸಂದೇಶ ! : ಬಾಂಗ್ಲಾದೇಶದಲ್ಲಿ ಸರಕಾರ ವಿರೋಧಿ ಪ್ರತಿಭಟನೆಯಲ್ಲಿ ಹಿಂದೂಗಳನ್ನು ಕೊಲ್ಲಲಾಯಿತು. ಕಾಶ್ಮೀರ, ಕೇರಳ ಮತ್ತು ಬಂಗಾಳದಿಂದ ಹಿಂದೂಗಳನ್ನೇ ಮುಗಿಸುತ್ತಿದ್ದಾರೆ. ಫಹಲ್ಗಾಮ್ ಇಲ್ಲಿ ಕೂಡ ಧರ್ಮ ಕೇಳಿ ಹಿಂದೂಗಳನ್ನು ಹತ್ಯೆ ಮಾಡಲಾಯಿತು. ಪ್ರತಿಯೊಂದು ಸ್ಥಳದಲ್ಲಿ ಹಿಂದುಗಳನ್ನೇ ಗುರಿ ಮಾಡಲಾಗುತ್ತಿದೆ. ಇಂತಹ ಸಮಯದಲ್ಲಿ ‘ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ ‘ವು  ನಮಗೆ ಪ್ರಭು ಶ್ರೀರಾಮನ ಧರ್ಮಯುದ್ಧದ ಸಂದೇಶ ನೀಡುತ್ತಿದೆ. ಧರ್ಮ ಧೈರ್ಯ ಮತ್ತು ಐಕ್ಯತೆಯಿಂದ ರಾಷ್ಟ್ರ ಮತ್ತು ಸಂಸ್ಕೃತಿ ಉಳಿಯಬಹುದು. ಪ್ರಸ್ತುತ ಸಮಯದಲ್ಲಿ ಭಯೋತ್ಪಾದಕರು ಮತ್ತು ಮೂಲಭೂತವಾದಿಗಳಿಂದ ಉದ್ಭವಿಸಿರುವ ಅಪಾಯವನ್ನು ಎದುರಿಸಲು ಅವಶ್ಯಕವಾದ ದಿವ್ಯ ಶಕ್ತಿಯು ಈ ಮಹೋತ್ಸವದಿಂದ ದೊರೆಯಿತು.

ಹಾಲಾಂಡ್ ನಲ್ಲಿನ ವಿದ್ವಾನ್ ಪೀಟರ್ ಹರ್ಕೋಸ್ ಇವರು ‘ ಭಾರತದಲ್ಲಿ ಸನಾತನ ಧರ್ಮದ ಶಂಖನಾದವಾಗುವುದು ಮತ್ತು ಆಧ್ಯಾತ್ಮದಿಂದ ಅದು ವಿಶ್ವಗುರು ಆಗುವುದು ,’ಎಂದು ಭವಿಷ್ಯ ನುಡಿದಿದ್ದರು. ಈ ಮಹೋತ್ಸವದಿಂದ ಗುರುದೇವರ ಸಂಕಲ್ಪದಿಂದ ಕಾರ್ಯ ಸಿದ್ಧವಾಗುವುದು ಮತ್ತು’ಭಾರತ ಆದಷ್ಟು ಬೇಗನೇ ವಿಶ್ವಗುರು ಆಗುವ ಕಡೆಗೆ ಮುನ್ನಡೆಯುವುದು, ಇದರ ಬಗ್ಗೆ ಈಗ ಎಲ್ಲರಿಗೂ ಖಾತ್ರಿಯಾಗಿದೆ.. ಸನಾತನ ರಾಷ್ಟ್ರದ ಈ ದಿವ್ಯಮಾರ್ಗ ಪ್ರಕಾಶಮಾನವಾಗಬೇಕು ಮತ್ತು ಭಾರತದ ಈ ಧರ್ಮಧ್ವಜ ಎತ್ತರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ರಾರಾಜಿಸುತ್ತಾ ಪರಾಕ್ರಮಶಾಲಿ ರಾಷ್ಟ್ರ ಎಂದು ಎದ್ದು ನಿಲ್ಲಬೇಕು, ಇದಕ್ಕಾಗಿ ಪ್ರತಿಯೊಬ್ಬ ಹಿಂದೂ ಸಿದ್ದರಿರಬೇಕು, ಇದೇ ಶ್ರೀ ಗುರುಗಳ ಚರಣದಲ್ಲಿ ಪ್ರಾರ್ಥನೆ !

ಶ್ರೀ. ಚೇತನ್ ರಾಜಹಂಸ,
ಸಂಪರ್ಕ : 7775858387

Hot this week

ದೇವನಹಳ್ಳಿ ತಾಲೂಕು ಕಚೇರಿಯಲ್ಲಿ ಆಮೆಗತಿಯ ಮಾಹಿತಿ ಹಕ್ಕು ಪ್ರಕ್ರಿಯೆ:

ದೇವನಹಳ್ಳಿ: ಸರ್ಕಾರದ ಆಡಳಿತದಲ್ಲಿ ಪಾರದರ್ಶಕತೆ ತರಲು ಜಾರಿಗೆ ಬಂದ ಮಾಹಿತಿ ಕ್ಕು...

ಜನಿವಾರ ತೆಗೆಸಿದ ಕೃತ್ಯ ‘ಪೆಹಲ್ಗಾಂ’ ಮಾದರಿಯ ದಬ್ಬಾಳಿಕೆ:

ಬ್ರಾಹ್ಮಣ ಮಹಾಸಭಾ ತೀವ್ರ ಖಂಡನೆ ​ಇತ್ತೀಚೆಗೆ ನಡೆದ ಸಿಇಟಿ (CET) ಪರೀಕ್ಷಾ ಸಮಯದಲ್ಲಿ...

ಕಾರ್ಮಿಕ ದಿನಾಚರಣೆ: ವಾಯ್ಸ್ ಆಫ್ ಸದಾಶಿವನಗರದಿಂದ 170ಪೌರ ಕಾರ್ಮಿಕರಿಗೆ ಸನ್ಮಾನ*

ಬೆಂಗಳೂರು,ಮೇ.1: ವಿಶ್ವ ಕಾರ್ಮಿಕರ ದಿನಾಚರಣೆ (Vishva Karmikara dinacharane)  ಪ್ರಯುಕ್ತ ಸದಾಶಿವನಗರ...

ರಂಗಪ್ರವೇಶ — ಕುಮಾರಿ ಲಕ್ಷ್ಮಿ ಅನನ್ಯ ತಾಟವರ್ತಿ

ಭಾರತೀಯ ಶಾಸ್ತ್ರೀಯ ನೃತ್ಯದ ಲೋಕದಲ್ಲಿ ರಂಗಪ್ರವೇಶ ಎಂದರೆ ಕೇವಲ ಒಂದು ಪ್ರದರ್ಶನವಲ್ಲ—ಅದು ಒಂದು ಘೋಷಣೆ....

Topics

ದೇವನಹಳ್ಳಿ ತಾಲೂಕು ಕಚೇರಿಯಲ್ಲಿ ಆಮೆಗತಿಯ ಮಾಹಿತಿ ಹಕ್ಕು ಪ್ರಕ್ರಿಯೆ:

ದೇವನಹಳ್ಳಿ: ಸರ್ಕಾರದ ಆಡಳಿತದಲ್ಲಿ ಪಾರದರ್ಶಕತೆ ತರಲು ಜಾರಿಗೆ ಬಂದ ಮಾಹಿತಿ ಕ್ಕು...

ಜನಿವಾರ ತೆಗೆಸಿದ ಕೃತ್ಯ ‘ಪೆಹಲ್ಗಾಂ’ ಮಾದರಿಯ ದಬ್ಬಾಳಿಕೆ:

ಬ್ರಾಹ್ಮಣ ಮಹಾಸಭಾ ತೀವ್ರ ಖಂಡನೆ ​ಇತ್ತೀಚೆಗೆ ನಡೆದ ಸಿಇಟಿ (CET) ಪರೀಕ್ಷಾ ಸಮಯದಲ್ಲಿ...

ಕಾರ್ಮಿಕ ದಿನಾಚರಣೆ: ವಾಯ್ಸ್ ಆಫ್ ಸದಾಶಿವನಗರದಿಂದ 170ಪೌರ ಕಾರ್ಮಿಕರಿಗೆ ಸನ್ಮಾನ*

ಬೆಂಗಳೂರು,ಮೇ.1: ವಿಶ್ವ ಕಾರ್ಮಿಕರ ದಿನಾಚರಣೆ (Vishva Karmikara dinacharane)  ಪ್ರಯುಕ್ತ ಸದಾಶಿವನಗರ...

ರಂಗಪ್ರವೇಶ — ಕುಮಾರಿ ಲಕ್ಷ್ಮಿ ಅನನ್ಯ ತಾಟವರ್ತಿ

ಭಾರತೀಯ ಶಾಸ್ತ್ರೀಯ ನೃತ್ಯದ ಲೋಕದಲ್ಲಿ ರಂಗಪ್ರವೇಶ ಎಂದರೆ ಕೇವಲ ಒಂದು ಪ್ರದರ್ಶನವಲ್ಲ—ಅದು ಒಂದು ಘೋಷಣೆ....

“ವಿಶ್ವ ನೃತ್ಯ ದಿನಾಚರಣೆ”

ಆರ್ಟ್ ಕಲ್ಚರಲ್ ಎಜುಕೇಶನಲ್ ಎನ್ಲೈಟ್ ಫೌಂಡೇಶನ್ ಸಂಸ್ಥಾಪಕಿ ಅಂಬಿಕಾ ಸಿ(Ambika .c)...

ಶ್ರೀ ಶ್ರೀನಿವಾಸ ದೇವರಿಗೆ ಮಹಾಭಿಷೇಕ ಪವಮಾನಪುರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ

ಬೆಂಗಳೂರು : ಪವಮಾನಪುರ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ...

ತ್ಯಾಗರಾಜನಗರ ರಾಯರ ಮಠದಲ್ಲಿ ಶ್ರೀ ನರಸಿಂಹ ಜಯಂತಿ

ಬೆಂಗಳೂರು : ತ್ಯಾಗರಾಜನಗರದ 11ನೇ ಅಡ್ಡರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ...

Related Articles