ಡಾ ರಾಜಕುಮಾರ್ ಉದ್ಯಾನವನ ಅಭಿವೃದ್ಧಿ ಸಮಿತಿ, ಕಮ್ಮನಹಳ್ಳಿ ಕಲ್ಯಾಣನಗರ (Kalyan Nagar) ವಾರ್ಡ್ ಮತ್ತು ಡಾ. ರಾಜಯೋಗ ವಿದ್ಯಾಲಯ (Dr. RajaYoga Vidyalaya) ಕಾಚರಕನಹಳ್ಳಿ ಸಹಯೋಗದೊಂದಿಗೆ 21/06 .2026 ನೇ ಭಾನುವಾರದಂದು ಡಾ ರಾಜ್ ಕುಮಾರ್ ಉದ್ಯಾನವನ ದಲ್ಲಿ 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ (Yoga Day) 2026 ನೆರವೇರಿತು. ಯೋಗಶ್ರೀ ವರ್ಧಮಾನ ಕಳಸೂರು (Vardhaman Kalasur) ಯೋಗ ಗುರುಗಳ ಮಾರ್ಗದರ್ಶನದಲ್ಲಿ ಸ್ಥಳೀಯ ಹಿರಿಯ ನಾಗರಿಕರು ಮಾರುತಿ ವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಡಾ ರಾಜ್ ಯೋಗವಿದ್ಯಾಲಯದ ಯೋಗಾಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಮುಖ್ಯ ಅತಿಥಿಗಳಾಗಿ ಓಂ ಶಕ್ತಿ ದೇವಾಲಯದ ಧರ್ಮದರ್ಶಿಗಳಾದ ಡಿ ಬಾಬು, ಸ್ಥಳೀಯ ಮಹಿಳಾ ಮುಖಂಡರಾದ ಕವಿತಾ ರವೀಂದ್ರ, ಶ್ರೀಮತಿ ವರ್ಧಮಾನ್ ಓಂ ಶಕ್ತಿ ರಾಜು ಕಮಲೇಶ್, ನಾಗರಾಜ್ ಅನನ್ಯ ಸೇವಾ ಸಂಸ್ಥೆಯ ಮರಿಸ್ವಾಮಿ ಸುಬ್ರಮಣಿ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.. ಶ್ರೀಮತಿ ಪ್ರೇಮಾವತಿ ಬಾಬು ಅಧ್ಯಕ್ಷರು ಕಲ್ಯಾಣ ನಗರ ವಾರ್ಡ್ ನಂಬರ್ 31 ಕಾರ್ಯಕ್ರಮ ವನ್ನು ಉದ್ಘಾಟಿಸಿ ಪಾಲ್ಗೊಂಡ ಯೋಗಾರ್ಥಿಗಳಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಿದರು.
ಶ್ರೀಯುತ ರಾಜುರವರು ಕಾರ್ಯಕ್ರಮಕ್ಕೆ ಸರ್ವರನ್ನು ಸ್ವಾಗತಿಸಿ ಕೊನೆಯಲ್ಲಿ ಯೋಗ ಗುರುಗಳಿಗೆ ವಂದಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರಿಗೂ ಉಪಹಾರದ ವ್ಯವಸ್ಥೆಯನ್ನು ಓಂ ಶಕ್ತಿ ಬಾಬುರವರು ಮಾಡಿದ್ದರು. ಉದ್ಯಾನವನದ ವೇದಿಕೆಯನ್ನು ನಿರ್ಮಿಸಿ ಕೊಡುಗೆಯನ್ನು ನೀಡಿದ ಇಂಧನ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವರಾದ ಕೆ.ಜೆ ಜಾರ್ಜ್ ರವರನ್ನು ಈ ಸಂದರ್ಭದಲ್ಲಿ ಶ್ರೀಯುತ ಬಾಬುರವರು ಸ್ವರಿಸಿಕೊಂಡು ವಂದನೆಗಳನ್ನು ಅರ್ಪಿಸಿದರು.

