Umesh Banakar: ಸ್ಯಾಂಡಲ್‌ವುಡ್‌ ನಿರ್ಮಾಪಕ ಉಮೇಶ್ ಬಣಕಾರ್‌ಗೆ ಫಾಸ್ಟ್ ಟ್ಯಾಗ್ ರಗಳೆ! ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ

ಬೆಂಗಳೂರು, ಮೇ 22: ಹೆದ್ದಾರಿಗಳಲ್ಲಿ ಸರಾಗ ಸಂಚಾರಕ್ಕೆ ಅತ್ಯುತ್ತಮ ವ್ಯವಸ್ಥೆ ಎಂಬಂತೆ ಬಿಂಬಿತವಾಗಿರುವ ಫಾಸ್ಟ್ ಟ್ಯಾಗ್ ಬಗ್ಗೆ ದಿನಾಲೂ ಒಂದಲ್ಲ ಒಂದು ರಗಳೆ ಕೇಳಿಬರುತ್ತಿರುತ್ತದೆ. ಈ ಬಾರಿ ಸ್ಯಾಂಡಲ್‌ವುಡ್‌ ಲೋಕದಿಂದ ಅಪಸ್ವರ  ಎದ್ದಿದೆ. ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ (KFPA) ಹಿಂದಿನ ಅಧ್ಯಕ್ಷ, ಸ್ಯಾಂಡಲ್‌ವುಡ್‌ ಪ್ರಮುಖ ನಿರ್ಮಾಪಕ (Sandalwood Producer Umesh Banakar) ಹಾಗೂ ಹಿರಿಯ ನಟ ಉಮೇಶ್ ಬಣಕಾರ್‌ ಅವರಿಗೂ ಫಾಸ್ಟ್ ಟ್ಯಾಗ್ ರಗಳೆ ಕಾಡತೊಡಗಿದೆ. (Fastag Complaint)
ಹಿರಿಯ ನಟ ಉಮೇಶ್ ಬಣಕಾರ್‌ ಅವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಫಾಸ್ಟ್ ಟ್ಯಾಗ್ ರಗಳೆ ಬಗ್ಗೆ ಹೀಗೆ ಬರೆದುಕೊಂಡಿದ್ದಾರೆ: ಜೊತೆಗೆ, ನಿಮಗೂ ಇಂತಹ ಅನುಭವಗಳಾಗಿದ್ದರೆ ಮುಕ್ತವಾಗಿ ಹಂಚಿಕೊಂಡು, ಇದೇ ವೇದಿಕೆಯಲ್ಲಿ ಚರ್ಚೆ ಮಾಡೋಣ ಎಂದು ಕರೆ ನೀಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡುವ ವಾಹನಗಳ ಮಾಲೀಕರ ಗಮನಕ್ಕೆ:

ಫಾಸ್ಟ್ ಟ್ಯಾಗ್ ಹಗಲು ದರೋಡೆಕೋರರು 3,000 ರೂಪಾಯಿ ಹಣವನ್ನು ಕಟ್ಟಿಸಿಕೊಂಡು ವಾರ್ಷಿಕ ಚಂದಾದಾರರು ಎಂದು ಫಾಸ್ಟ್ ಟ್ಯಾಗ್ ನೀಡಿರುತ್ತಾರೆ. ನಾನು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ವಾಸವಾಗಿದ್ದು ನನ್ನ ವಾಹನವು ನನ್ನ ಬಳಿಯೇ ಇದೆ.

ಆದರೆ, ನೆಲಮಂಗಲದ ಟೋಲ್ ನಲ್ಲಿ ಇಂದು (ಮೇ 21) ಮುಂಜಾನೆ  8 ಗಂಟೆ 37 ನಿಮಿಷಕ್ಕೆ ಪ್ರವೇಶಿಸಿದೆ ಎಂದು ಮೆಸೇಜ್ ಬಂದಿರುತ್ತದೆ. ಹಾಗೆಯೇ ಅದೇ ದಿನ ಅಂದರೆ ನಿನ್ನೆ ಗುರುವಾರ ನೆಲಮಂಗಲದಿಂದ ಬೆಂಗಳೂರಿಗೆ ಬಂದ ಸಂದರ್ಭದಲ್ಲಿ 165 ಟ್ರಿಪ್ ಗಳು ಬಾಕಿ ಎಂದೂ ಮೆಸೇಜ್ ಬಂದಿದೆ.
ಫಾಸ್ಟ್ ಟ್ಯಾಗ್ ಎಂಬ ಹಗಲು ದರೋಡೆ ಬಗ್ಗೆ ಅಭಿಪ್ರಾಯ ಹಂಚ್ಕೊಳಿ:

ನನ್ನ ಸದರಿ ವಾಹನವು ಸಂಚರಿಸದೇ ಇರುವ ದಾರಿಯಲ್ಲಿ ಇಂದು 160 ಟ್ರಿಪ್ ಗಳು ಬಾಕಿ ಉಳಿದಿದೆ ಎಂಬ ಮೆಸೇಜ್ ಬಂದಿದೆ. ಇಂತಹ ಹಗಲುದರೋಡೆಗಳನ್ನು ತಡೆಗಟ್ಟಲು ಎಲ್ಲರೂ ಒಂದಾಗಬೇಕಾಗಿದೆ. ಇನ್ನಾರಿಗಾದರೂ ಇಂತಹ ಅನುಭವಗಳು ಆಗಿದ್ದಲ್ಲಿ ಸಂಬಂಧಪಟ್ಟ ಇಲಾಖೆ ಅಥವಾ ಪೊಲೀಸ್ ಕಂಪ್ಲೇಂಟ್ ನೀಡುವ ಮೂಲಕ ಅಕ್ರಮಗಳನ್ನು ತಡೆಗಟ್ಟಬೇಕಾಗಿದೆ. ಸಂಬಂಧಪಟ್ಟ ಮೆಸೇಜ್ ಸ್ಕ್ರೀನ್ ಶಾಟ್‌  ಅನ್ನು ಇದರೊಂದಿಗೆ ಲಗತ್ತಿಸಿದ್ದೇನೆ. ದಯಮಾಡಿ ಜನರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.

ತಕ್ಷಣ ಜನ ಇದಕ್ಕೆ ಪ್ರತಿಕ್ರಿಯಿಸುತ್ತಿದ್ದು, ತಮಗೂ ಕರಾಳ ಅನುಭವ ಆಗಿದೆ. ಇದನ್ನು ಮಟ್ಟಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ: 

Rudresh Nagasandra: ಈ ರೀತಿ ನನಗೂ ಆಗಿದೆ ಸರ್, ಕೇಳಿದರೆ ಕಂಪ್ಲೇಂಟ್ ಮಾಡಿ ನಿಮ್ಮ ಹಣ ವಾಪಸ್ ಕೊಡುತ್ತಾರೆ ಎಂದು ಹೇಳುತ್ತಾರೆ, ಟೋಲ್ನವರು ಕಟ್ ಮಾಡಿರುವ ನೂರು ರೂಪಾಯಿ ವಸೂಲು ಮಾಡಲು ಒಂದು ದಿವಸ ಟೈಮ್ ವೇಸ್ಟ್ ಮಾಡಿಕೊಂಡು ಖರ್ಚು ಮಾಡಿಕೊಂಡು ಓಡಾಡಬೇಕು.

Oscar Krishna: ನಮಗೂ ಈ ಅನುಭವ ಆಗಿದೆ. ಇವರನ್ನ ಮಟ್ಟ ಹಾಕಲೇಬೇಕು.

Hot this week

ನಿತ್ಯ ಪಂಚಾಂಗ 14.08.2026ಶುಕ್ರವಾರ FRIDAY.

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 14.08.2026ಶುಕ್ರವಾರ FRIDAY. ಸಂವತ್ಸರ: ಪರಾಭವ. SAMVATSARA : PARABHAVA. ಆಯಣ: ದಕ್ಷಿಣಾಯಣ. AYANA:...

ಸ್ವಾನಂದಾಶ್ರಮ: ಭಕ್ತಿ, ಸಂಸ್ಕೃತಿ, ಸೇವೆ ಮತ್ತು ಹೊಯ್ಸಳ ವೈಭವದ ಸಂಗಮ

ಆಗಸ್ಟ್ 16ರಿಂದ ವರದ ಗಣಪತಿ ವ್ರತಾಚರಣೆ ಬೆಂಗಳೂರು: ಕನಕಪುರ ರಸ್ತೆಯ ಅಗರ–ತಾತಗುಣಿಯಲ್ಲಿ(Thathaguni) ನೆಲೆಗೊಂಡಿರುವ...

ಮೇಕೆದಾಟು ಯೋಜನೆಗೆ ವೇಗ ನೀಡಲು ಅಧಿಕಾರಿಗಳಿಗೆ ಸಚಿವ ಎನ್.ಚಲುವರಾಯಸ್ವಾಮಿ ಸೂಚನೆ

ಬೆಂಗಳೂರು: ನೂತನವಾಗಿ ಜಲಸಂಪನ್ಮೂಲ ಸಚಿವರಾಗಿ(New Minister of Water Resources) ಅಧಿಕಾರ...

ತೇಜಸ್ವಿ ಜನ್ಮದಿನೋತ್ಸವ ಅಂಗವಾಗಿ ‘ಕರ್ವಾಲೊ’ ಕೃತಿ ಆಧಾರಿತ ಡಿಜಿಟಲ್ ಚಿತ್ರಕಲಾ ಸ್ಪರ್ಧೆಗೆ ಅರ್ಜಿ ಆಹ್ವಾನ

ಬೆಂಗಳೂರು : ಕನ್ನಡದ ಖ್ಯಾತ ಸಾಹಿತಿ ಹಾಗೂ ಚಿಂತಕ ಕೆ.ಪಿ. ಪೂರ್ಣಚಂದ್ರ ತೇಜಸ್ವಿ(K.P.Purnachandra...

ಗಣ್ಯರ ನಿಧನಕ್ಕೆ ವಿಧಾನಸಭೆಯಲ್ಲಿ ಸಂತಾಪ

ಬೆಂಗಳೂರು : ಇಂದು ವಿಧಾನಸಭೆಯ ಅಧಿವೇಶನದಲ್ಲಿ(Legislative Assembly Session) ಇತ್ತೀಚೆಗೆ ನಿಧನರಾದ...

Topics

ನಿತ್ಯ ಪಂಚಾಂಗ 14.08.2026ಶುಕ್ರವಾರ FRIDAY.

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 14.08.2026ಶುಕ್ರವಾರ FRIDAY. ಸಂವತ್ಸರ: ಪರಾಭವ. SAMVATSARA : PARABHAVA. ಆಯಣ: ದಕ್ಷಿಣಾಯಣ. AYANA:...

ಸ್ವಾನಂದಾಶ್ರಮ: ಭಕ್ತಿ, ಸಂಸ್ಕೃತಿ, ಸೇವೆ ಮತ್ತು ಹೊಯ್ಸಳ ವೈಭವದ ಸಂಗಮ

ಆಗಸ್ಟ್ 16ರಿಂದ ವರದ ಗಣಪತಿ ವ್ರತಾಚರಣೆ ಬೆಂಗಳೂರು: ಕನಕಪುರ ರಸ್ತೆಯ ಅಗರ–ತಾತಗುಣಿಯಲ್ಲಿ(Thathaguni) ನೆಲೆಗೊಂಡಿರುವ...

ಮೇಕೆದಾಟು ಯೋಜನೆಗೆ ವೇಗ ನೀಡಲು ಅಧಿಕಾರಿಗಳಿಗೆ ಸಚಿವ ಎನ್.ಚಲುವರಾಯಸ್ವಾಮಿ ಸೂಚನೆ

ಬೆಂಗಳೂರು: ನೂತನವಾಗಿ ಜಲಸಂಪನ್ಮೂಲ ಸಚಿವರಾಗಿ(New Minister of Water Resources) ಅಧಿಕಾರ...

ತೇಜಸ್ವಿ ಜನ್ಮದಿನೋತ್ಸವ ಅಂಗವಾಗಿ ‘ಕರ್ವಾಲೊ’ ಕೃತಿ ಆಧಾರಿತ ಡಿಜಿಟಲ್ ಚಿತ್ರಕಲಾ ಸ್ಪರ್ಧೆಗೆ ಅರ್ಜಿ ಆಹ್ವಾನ

ಬೆಂಗಳೂರು : ಕನ್ನಡದ ಖ್ಯಾತ ಸಾಹಿತಿ ಹಾಗೂ ಚಿಂತಕ ಕೆ.ಪಿ. ಪೂರ್ಣಚಂದ್ರ ತೇಜಸ್ವಿ(K.P.Purnachandra...

ಗಣ್ಯರ ನಿಧನಕ್ಕೆ ವಿಧಾನಸಭೆಯಲ್ಲಿ ಸಂತಾಪ

ಬೆಂಗಳೂರು : ಇಂದು ವಿಧಾನಸಭೆಯ ಅಧಿವೇಶನದಲ್ಲಿ(Legislative Assembly Session) ಇತ್ತೀಚೆಗೆ ನಿಧನರಾದ...

ಸಚಿವಾಲಯ ಗ್ರಂಥಾಲಯದಲ್ಲಿ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ: ಮಾಸಿಕ ರೂ. 10,900 ಸ್ಟೈಫಂಡ್

ಬೆಂಗಳೂರು: ಕರ್ನಾಟಕ ಸರ್ಕಾರದ ಸಚಿವಾಲಯ ಗ್ರಂಥಾಲಯದಲ್ಲಿ(Karnataka Government Secretariat Library) 'ಅಪ್ರೆಂಟಿಸ್...

Related Articles