ಬೆಂಗಳೂರು, ಜುಲೈ 06 : ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ಅಧೀನದಲ್ಲಿರುವ ರೇಷ್ಮೆ ಕೃಷಿ ಮಹಾವಿದ್ಯಾಲಯ(College of Sericulture), ಚಿಂತಾಮಣಿಯಲ್ಲಿ ನಡೆಸಲಾಗುವ ಎರಡು ವರ್ಷಗಳ ಡಿಪ್ಲೊಮಾ(Diploma) (ಕೃಷಿ) ಪ್ರವೇಶಾತಿಗೆ 2026-27ನೇ ಶೈಕ್ಷಣಿಕ ವರ್ಷದ ಕೋರ್ಸ್ಗೆ ಅರ್ಜಿ(Application) ಸಲ್ಲಿಸುವ ಕೊನೆಯ ದಿನಾಂಕವನ್ನು ಜುಲೈ 21 ರವರೆಗೆ ವಿಸ್ತರಿಸಲಾಗಿದೆ.
ಈ ಹಿಂದೆ ಅರ್ಜಿ ಸಲ್ಲಿಸಲು ಜೂನ್ 30 ರವರೆಗೆ ಅವಕಾಶ ನೀಡಲಾಗಿತ್ತು. ಆದರೆ, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ಅವಧಿಯನ್ನು ಈಗ ಜುಲೈ 21 ರವರೆಗೆ ವಿಸ್ತರಿಸಲಾಗಿದೆ.
ಹೆಚ್ಚಿನ ವಿವರ ಹಾಗೂ ಪ್ರವೇಶಾತಿ ಪ್ರಕ್ರಿಯೆಗಾಗಿ ಆಸಕ್ತರು ಕುಲಸಚಿವರ ಕಛೇರಿ, ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ.(GKVK), ಬೆಂಗಳೂರು-560065 ಅಥವಾ ಡೀನ್ (ರೇಷ್ಮೆ ಕೃಷಿ), ರೇಷ್ಮೆ ಕೃಷಿ ಮಹಾವಿದ್ಯಾಲಯ, ಚಿಂತಾಮಣಿ ಇವರನ್ನು ಸಂಪರ್ಕಿಸಬಹುದು. ಹಾಗೂ ವೆಬ್ಸೈಟ್ : www.uasbangalore.edu.in ಅಥವಾ ದೂರವಾಣಿ ಸಂಖ್ಯೆ: 080-23330149, 080-23330984, 9449866914, 9916869534. ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
