ಬೆಂಗಳೂರು:ಮಹದೇವಪುರ ವಿಧಾನಸಭಾ ಕ್ಷೇತ್ರದ, ಇಮ್ಮಾಡಿಹಳ್ಳಿ (Immadihalli) ಕುವೆಂಪು (Kuvempu) ಶತಮಾನೋತ್ಸವ ಸರ್ಕಾರಿ ಶಾಲೆ ಅವರಣದಲ್ಲಿ 30ವರ್ಷಕ್ಕಿಂತ ಹಳೆಯದಾದ ಗಟ್ಟಿಮುಟ್ಟಾದ ಮರಗಳನ್ನು (Trees) ಸಂಪೂರ್ಣ ಕಡೆಯಲಾಗಿದೆ ಕಾರಣ ಕೇಳಿದರೆ ಅಕ್ಕಪಕ್ಕದ ಕಟ್ಟಡಗಳು ಕಾಣುವುದಿಲ್ಲ ಎಂಬ ಸಬೂಬು ನೀಡುತ್ತಾರೆ.
ಮನೆ ಕಟ್ಟಡಗಳ ಕಡೆ ಮರದ ಕೊಂಬೆಗಳು ಇದ್ದರೆ ಅದನ್ನ ಟ್ರಿಮಿಂಗ್ ಮಾಡಬಹುದಾಗಿತ್ತು ಅದರೆ ಸಂಪೂರ್ಣ ಮರವನ್ನು ಕಡಿದಿದ್ದಾರೆ. ಸರ್ಕಾರಿ ಶಾಲೆ ಅವರಣದಲ್ಲಿ ಖಾಸಗಿಯವರು ಬಂದು ಮರವನ್ನು ಕಡಿಯಬಹುದ ಅಥವಾ ಶಾಲೆಯ ಆಡಳಿತ ಮಂಡಳಿ ಒಪ್ಪಿಗೆ ನೀಡಿದ್ದಾರ ಹಾಗೂ ಪಾಲಿಕೆಯಿಂದ ಅನುಮತಿ ಪಡೆದಿದ್ದಾರ ಎಂಬ ಪ್ರಶ್ನೆಗಳು ನಾಗರಿಕರಲ್ಲಿ ಮೂಡಿದೆ.
ರಾಜ್ಯ ಸರ್ಕಾರ ಮತ್ತು ಪಾಲಿಕೆ ಪರಿಸರ ಉಳಿಸಬೇಕು ಎಂಬ ಅಭಿಯಾನ ಹಮ್ಮಿಕೊಂಡಿದೆ ಇಲ್ಲಿ ಸದೃಢವಾದ ಮರಗಳನ್ನು ಕಡಿಯಲಾಗಿದೆ. ಶಾಲೆಯ ಮಕ್ಕಳಿಗೆ ತಂಪಾದ ಹವಮಾನ, ಉತ್ತಮ ಗಾಳಿ ನೀಡುತ್ತಿದ್ದ ಮರಗಳನ್ನು ಕಡಿದು ಪರಿಸರ ನಾಶ ಮಾಡುತ್ತಿದ್ದಾರೆ.
ಸ್ಥಳೀಯ ಶಾಸಕರಾದ ಶ್ರೀಮತಿ ಮಂಜುಳಾ ಅರವಿಂದ್ ಲಿಂಬಾವಳಿ, ಮಾಜಿ ಶಾಸಕರಾದ ಅರವಿಂದ್ ಲಿಂಬಾವಳಿ ಮತ್ತು ವಾಲಿಕೆ ಆಯುಕ್ತರು ಇತ್ತ ಗಮನಹರಿಸಬೇಕು ಮರಗಳನ್ನು ಕಡಿದವರ ಮೇಲೆ ಕೊಡಲೆ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರ ಮನವಿ.

