ಬೆಂಗಳೂರು, ಜೂ29: ಉದ್ಯಮಿ ಹಾಗೂ ದೀರ್ಘಕಾಲದ ರೋಟೇರಿಯನ್ ಡಾ. ಅನಿಲ್ ಗುಪ್ತ ಅವರು 2026–27ರ ಸಾಲಿಗೆ ರೋಟರಿ ಜಿಲ್ಲೆ 3191ರ ಜಿಲ್ಲಾ ಗವರ್ನರ್ ಆಗಿ ಅಧಿಕಾರ ಸ್ವೀಕರಿಸಿದರು.
ಜಲ ಸಂರಕ್ಷಣೆ, ಅರಣ್ಯೀಕರಣ, ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಯುವ ಸಬಲೀಕರಣಕ್ಕೆ ಆದ್ಯತೆ ನೀಡುವುದಾಗಿ ಹೇಳಿದರು.
ವೈಟ್ಫೀಲ್ಡ್ನ ದಿ ಡೆನ್ ಹೋಟೆಲ್ನಲ್ಲಿ(Whitefield The Den Hotel) ನಡೆದ “ಅನಿಕೇತನ – ಎ ಸೆಲೆಬ್ರೇಷನ್ ಆಫ್ ಲೀಡರ್ಶಿಪ್, ಸರ್ವಿಸ್ ಅಂಡ್ ಇಂಪ್ಯಾಕ್ಟ್” ಕಾರ್ಯಕ್ರಮದಲ್ಲಿ ರೋಟರಿ ಇಂಟರ್ನ್ಯಾಷನಲ್ ನಿರ್ದೇಶಕ ಕೆ.ಪಿ. ನಾಗೇಶ್ ಅವರು ಡಾ. ಅನಿಲ್ ಗುಪ್ತ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಟಾಟಾ ಪವರ್ನ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ಪ್ರವೀರ್ ಸಿನ್ಹಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ರೋಟೇರಿಯನ್ಸ್, ರೋಟರಾಕ್ಟರ್ಸ್, ಇಂಟರಾಕ್ಟರ್ಸ್, ಕೈಗಾರಿಕಾ ಹಾಗೂ ಸಮುದಾಯದ ಪ್ರಮುಖರು ಉಪಸ್ಥಿತರಿದ್ದರು.
ವೈಟ್ಫೀಲ್ಡ್ನ ದಿ ಡೆನ್ ಹೋಟೆಲ್ನಲ್ಲಿ(Whitefield The Den Hotel) ನಡೆದ “ಅನಿಕೇತನ – ಎ ಸೆಲೆಬ್ರೇಷನ್ ಆಫ್ ಲೀಡರ್ಶಿಪ್, ಸರ್ವಿಸ್ ಅಂಡ್ ಇಂಪ್ಯಾಕ್ಟ್” ಕಾರ್ಯಕ್ರಮದಲ್ಲಿ ರೋಟರಿ ಇಂಟರ್ನ್ಯಾಷನಲ್ ನಿರ್ದೇಶಕ ಕೆ.ಪಿ. ನಾಗೇಶ್ ಅವರು ಡಾ. ಅನಿಲ್ ಗುಪ್ತ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಟಾಟಾ ಪವರ್ನ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ಪ್ರವೀರ್ ಸಿನ್ಹಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ರೋಟೇರಿಯನ್ಸ್, ರೋಟರಾಕ್ಟರ್ಸ್, ಇಂಟರಾಕ್ಟರ್ಸ್, ಕೈಗಾರಿಕಾ ಹಾಗೂ ಸಮುದಾಯದ ಪ್ರಮುಖರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಅನಿಲ್ ಗುಪ್ತ, “ರೋಟರಿ ಕೈಗೊಳ್ಳುವ ಸೇವಾ ಕಾರ್ಯಗಳು ಮುಂದಿನ ಹಲವು ವರ್ಷಗಳವರೆಗೆ ಸಮಾಜಕ್ಕೆ ಶಾಶ್ವತ ಪ್ರಯೋಜನ ನೀಡುವಂತಿರಬೇಕು. ಪ್ರತಿಯೊಂದು ಕ್ಲಬ್ ದೊಡ್ಡ ಕನಸು ಕಾಣಬೇಕು, ಧೈರ್ಯದಿಂದ ಗುರಿ ಸಾಧಿಸಲು ಮುಂದಾಗಬೇಕು. “ಸ್ಕಿಲ್ಸ್ ಟುಡೇ, ಸಕ್ಸೆಸ್ ಟುಮಾರೋ” ಕಾರ್ಯಕ್ರಮದಡಿ ಬೆಂಗಳೂರು ಹೊರವಲಯದ ಪ್ರತಿಭಾವಂತರಿಗೆ ಉಚಿತ ಜಪಾನೀಸ್ ಭಾಷಾ ತರಬೇತಿ, ಸಾಂಸ್ಕೃತಿಕ ಪರಿಚಯ ಹಾಗೂ ಜಪಾನ್ನ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗಾವಕಾಶ ಕಲ್ಪಿಸಲು ಮೊಸೈಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದರು.
“ಕಲ್ ಕಾ ಸಪ್ನಾ – ಒನ್ ಬಿಲಿಯನ್ ಲೀಟರ್ ಪಾನಿ ಹೋ ಅಪ್ನಾ” ಯೋಜನೆಯಡಿ ರಾಜ್ಯದ ನೀರಿನ ಸಂರಕ್ಷಣೆಗೆ ಒತ್ತು ನೀಡಲಾಗಿದ್ದು, ಮೊದಲ ಹಂತದಲ್ಲಿ 20 ಕೆರೆಗಳನ್ನು “ಲೇಕ್-ಇನ್-ಲೇಕ್” ಮಾದರಿಯಲ್ಲಿ ಪುನರುಜ್ಜೀವನಗೊಳಿಸಲಾಗುತ್ತಿದೆ. ಇದು ರೈತರು ಹಾಗೂ ಗ್ರಾಮೀಣ ಸಮುದಾಯ ಎದುರಿಸುತ್ತಿರುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಉದ್ದೇಶ ಹೊಂದಿದೆ. ಅರಣ್ಯ ಇಲಾಖೆ ಸಹಯೋಗದಲ್ಲಿ ಕೋಲಾರ ಜಿಲ್ಲೆಯಲ್ಲಿ 4,000 ಎಕರೆ ಪ್ರದೇಶದಲ್ಲಿ ಐದು ವರ್ಷಗಳಲ್ಲಿ ಸುಮಾರು 5 ಲಕ್ಷ ಸಸಿಗಳನ್ನು ನೆಡುವ ಬೃಹತ್ ಅರಣ್ಯೀಕರಣ ಕಾರ್ಯಕ್ರಮ ಆರಂಭಿಸುತ್ತಿದ್ದು, ಇದರಿಂದ ಜೀವ ವೈವಿಧ್ಯ ಸಂರಕ್ಷಣೆ, ಪರಿಸರ ಸಮತೋಲನ ಹಾಗೂ ಹವಾಮಾನ ಬದಲಾವಣೆಯ ಪರಿಣಾಮ ತಗ್ಗಿಸಲು ನೆರವಾಗಲಿದೆ. ಪೋಲಿಯೋ ನಿರ್ಮೂಲನೆ, ಶಿಕ್ಷಣ, ಮಹಿಳಾ ಸಬಲೀಕರಣ, ಯುವಜನಾಂಗದ ಪಾಲ್ಗೊಳ್ಳುವಿಕೆ ಹಾಗೂ ಸ್ಥಳೀಯ ಮತ್ತು ಅಂತರರಾಷ್ಟ್ರೀಯ ಸಹಭಾಗಿತ್ವದ ವಿಸ್ತರಣೆಗೆ ನೆರವಾಗಲಿದೆ ಎಂದರು.
ವಿದ್ಯುನ್ಮಾನ ಮತ್ತು ಸಂಪರ್ಕ ವಿಷಯದಲ್ಲಿ ಎಂಜಿನಿಯರಿಂಗ್ ಹಾಗೂ ಮ್ಯಾನೇಜ್ಮೆಂಟ್ನಲ್ಲಿ ಪದವಿ ಪಡೆದಿರುವ ಡಾ. ಅನಿಲ್ ಗುಪ್ತ ಅವರು ನಾಯಕತ್ವ ಅಭಿವೃದ್ಧಿ, ಸಂಸ್ಥಾ ಪರಿವರ್ತನೆ ಮತ್ತು ಉದ್ಯಮಶೀಲತೆಯಲ್ಲಿ ವಿಶಿಷ್ಟ ಸಾಧನೆ ಮಾಡಿದ್ದಾರೆ.

