ಬೆಂಗಳೂರು :ಬೆಂಗಳೂರು ಜಲ ಮಂಡಳಿಯ(Bangalore Water Supply and Sewerage Board) ವಿವಿಧ ಉಪ ವಿಭಾಗಗಳಾದ ಪಶ್ಚಿಮ -1-2, ಪಶ್ಚಿಮ -2-2, ಪಶ್ಚಿಮ 3-2, ಪಶ್ಚಿಮ 4-2, ಉತ್ತರ 1-2, ಉತ್ತರ 2-2, ಉತ್ತರ 3-2, ದಕ್ಷಿಣ 4-2, ದಕ್ಷಿಣ 1-2, ದಕ್ಷಿಣ2-2, ದಕ್ಷಿಣ 3-2, ಉತ್ತರ 4-2 ಉಪವಿಭಾಗಗಳಲ್ಲಿ ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿನ ವಿಳಂಬ, ಗೃಹ ಬಳಕೆಯಿಂದ ಗೃಹೇತರ ಬಳಕೆ ಪರಿವರ್ತನೆ ( Conversion from Domestic use to Non Domestic use.)ವಿಳಂಬ ಮತ್ತಿತರ ಕುಂದು ಕೊರತೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಜೂನ್ 18 ರಂದು ಬೆಳಿಗ್ಗೆ 9.30 ಗಂಟೆಯಿಂದ 11 ಗಂಟೆಯವರೆಗೆ ನೀರಿನ ಅದಾಲತ್ನ್ನು ಹಮ್ಮಿಕೊಳ್ಳಲಾಗಿದೆ.
ಕೇತಮಾರನಹಳ್ಳಿ, ಮಹಾಲಕ್ಷ್ಮಿ ಲೇಔಟ್, ರಾಜಾಜಿನಗರ-1, 2, ನಂದಿನಿ ಲೇಔಟ್ – 1, ಹೆಗ್ಗನಹಳ್ಳೀ, ಹೇರೋಹಳ್ಳಿ, ಮಾಗಡಿ ರಸ್ತೆ-2, ಹೊಸಹಳ್ಳಿ ಪಂಪ್ ಹೌಸ್, ಮೈಸೂರು ರಸ್ತೆ, ನಾಗರಬಾವಿ, ಅನ್ನಪೂರ್ಣೇಶ್ವರಿ ನಗರ, ಸರ್.ಎಂ.ವಿ.ಲೇಔಟ್ -1&2, ಆರ್.ಟಿ.ನಗರ, ಸಂಜಯನಗರ, ಆನಂದನಗರ, ಮನೋರಾಯನಪಾಳ್ಯ, ಹೆಚ್.ಬಿ.ಆರ್. ನಾಗವಾರ, ರಾಚೇನಹಳ್ಳಿ, ಕೋಗಿಲು, ಬನಶಂಕರಿ 6 ನೇ ಹಂತ, ಗುಬ್ಬಲಾಳ, ವಸಂತವಲ್ಲಭನಗರ, ಅಂಜನಾಪುರ, ಬ್ಯಾಂಕ್ ತಲಘಟ್ಟಪುರ, ಗೊಟ್ಟಿಗೆರೆ, ಹೆಚ್ ಎಸ್ ಆರ್ ಲೇಔಟ್, ಮಂಗಮ್ಮನಪಾಳ್ಯ, ಕೂಡ್ಲು, ಹರಳೂರು, ಬಿ.ಟಿ.ಎಂ. ಲೇಔಟ್ -1, 2&3, ಅಬ್ಬಿಗೆರೆ, ಬಾಹುಬಲಿನಗರ ಸೇವಾ ಠಾಣೆಗಳಲ್ಲಿ ನೀರಿನ ಅದಾಲತ್ ನಡೆಯಲಿದೆ.
ಸಾರ್ವಜನಿಕರು ಕುಂದು ಕೊರತೆಗಳಿಗೆ ಸಂಬಂಧಿಸಿದಂತೆ ಮಂಡಳಿಯ 24/7 ದೂರು ನಿರ್ವಹಣಾ ಕೇಂದ್ರದ ಸಹಾಯವಾಣಿ 1916ಗೆ ಕರೆ ಮಾಡಿ ದೂರುಗಳನ್ನು ದಾಖಲಿಸಬಹುದು. ಹಾಗೂ ವಾಟ್ಸ್ಆಫ್ ಸಂಖ್ಯೆ 8762228888 ಸಂದೇಶದ ಮೂಲಕ ದೂರನ್ನು ಸಲ್ಲಿಸಬಹುದಾಗಿದೆ ಎಂದು ಬೆಂಗಳೂರು ಜಲಮಂಡಳಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

