ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ ಜನರಿಗೆ ಮತ್ತಷ್ಟು ಹತ್ತಿರವಾಗುತ್ತಿದೆ, ಜುಲೈ ನಿಂದ ಕರಡು ಇ-ಖಾತಾ ಪ್ರತಿಗಳನ್ನು ಮನೆ ಬಾಗಲಿಗೆ ತಲುಪಿಸುವ ಯೋಜನೆ ಶುರುವಾಗುತ್ತಿದೆ,
ಕಂದಾಯ ಸಚಿವರ ಕ್ಷೇತ್ರದಲ್ಲಿ 25,000 ಇ-ಖಾತಾಗಳು ಸಿದ್ಧವಾಗಿವೆ, ಅಭಿಯಾನವು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಾಯೋಗಿಕವಾಗಿ ಆರಂಭವಾಗಲಿದೆ,
ಬೆಂಗಳೂರಿನ ಸುಮಾರು 25 ಲಕ್ಷ ಆಸ್ತಿಗಳಿದ್ದು, ಕೇವಲ ಐದು ಲಕ್ಷ ಜನರು ಮಾತ್ರ ಇ-ಖಾತಾ ಪಡೆದಿದ್ದಾರೆ, ಉಳಿದವರಿಗೂ ಇ-ಖಾತಾ ವಿತರಣೆ ಮಾಡಬೇಕಿದೆ, ಕರಡು ಇ ಖಾತಾ ಮನೆ ಬಾಗಿಲಿಗೆ ವಿತರಣೆ ಅಭಿಯಾನವು ಒಂದು ತಿಂಗಳ ಕಾಲ ನಡೆಯಲಿದೆ,
ಯೋಜನೆ ಮಹತ್ವದ ಅನುಷ್ಠಾನ ಕುರಿತು ಡಿಸಿಎಂ ಡಿಕೆಶಿ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು, ಸಭೆಯಲ್ಲಿ ಸಚಿವರಾದ ಕೆಜಿ ಜಾರ್ಜ್, ಕೃಷ್ಣಬೈರೇಗೌಡ, ಜಮೀರ್ ಅಹ್ಮದ್ ಖಾನ್ ಮತ್ತು ಬೈರತಿ ಸುರೇಶ್ ಉಪಸ್ಧಿತರಿದ್ದು ಸಲಹೆಗಳನ್ನು ನೀಡಿದ್ದಾರೆ,
