ಕರ್ನಾಟಕದ ಡಿಜಿಟಲ್ ಆಡಳಿತ ವ್ಯವಸ್ಥೆಯಲ್ಲಿ ಸೈಬರ್ ಭದ್ರತೆಯನ್ನು ಬಲಪಡಿಸುವ ಕಾರ್ಯತಂತ್ರಗಳ ಕುರಿತು ಚರ್ಚಿಸಲು 30ಕ್ಕೂ ಹೆಚ್ಚು ಇಲಾಖೆಗಳು, ನಿಗಮಗಳು, ಮಂಡಳಿಗಳು ಮತ್ತು ರಾಜ್ಯ ಸಂಸ್ಥೆಗಳ 80ಕ್ಕೂ ಹೆಚ್ಚು ಹಿರಿಯ ಸರ್ಕಾರಿ ಅಧಿಕಾರಿಗಳು ಈ ಕಾರ್ಯಾಗಾರದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

ಕಾರ್ಯಾಗಾರದಲ್ಲಿ ಭವಿಷ್ಯಕ್ಕಾಗಿ ಸೈಬರ್ ಸನ್ನದ್ಧ ಕರ್ನಾಟಕ* ಮತ್ತು ಇ-ಆಡಳಿತಕ್ಕಾಗಿ ಸೈಬರ್ ಸ್ಥಿತಿಸ್ಥಾಪಕತ್ವ ಎಂಬ ಪ್ರಮುಖ ವಿಷಯಗಳ ಕುರಿತು ದಿಕ್ಸೂಚಿ ಭಾಷಣಗಳು ನಡೆದವು. ಇದೇ ಸಮಯದಲ್ಲಿ ನಾಗರಿಕರ ದತ್ತಾಂಶವನ್ನು ರಕ್ಷಿಸುವುದು, ಸೈಬರ್ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸುವುದು ಮತ್ತು ಸರ್ಕಾರದ ಡಿಜಿಟಲ್ ಮೂಲಸೌಕರ್ಯದ ಭದ್ರತೆಯನ್ನು ಹೆಚ್ಚಿಸಲು ಸಂಘಟಿತ ಕ್ರಮಗಳ ಅಗತ್ಯತೆಯನ್ನು ಈ ವೇಳೆ ಪ್ರಮುಖವಾಗಿ ಒತ್ತಿಹೇಳಲಾಯಿತು.

ತಾಂತ್ರಿಕ ಅವಧಿಗಳಲ್ಲಿ ರಾಜ್ಯ ದತ್ತಾಂಶ ಕೇಂದ್ರದ (State Data Centre) ಸೈಬರ್ ಭದ್ರತೆಯ ಅತ್ಯುತ್ತಮ ಅಭ್ಯಾಸಗಳು ಹಾಗೂ ಕರ್ನಾಟಕದ ಏಕೀಕೃತ ಸೈಬರ್ ಭದ್ರತಾ ಕಾರ್ಯತಂತ್ರದ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು. ಜೊತೆಗೆ, ಪಾಲ್ಗೊಂಡಿದ್ದ ವಿವಿಧ ಇಲಾಖೆಗಳು ತಮ್ಮ ಪ್ರಸ್ತುತ ಸೈಬರ್ ಭದ್ರತಾ ಉಪಕ್ರಮಗಳು ಮತ್ತು ಎದುರಿಸುತ್ತಿರುವ ಕಾರ್ಯಾಚರಣೆಯ ಸವಾಲುಗಳ ಕುರಿತು ಪ್ರಸ್ತುತಿಗಳನ್ನು ನೀಡಿದವು.
ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಆರು ವಿಶೇಷ ವಿಷಯಾಧಾರಿತ ಚರ್ಚಾಗೋಷ್ಠಿಗಳನ್ನು ಆಯೋಜಿಸಲಾಗಿದ್ದು, ಅಪಾಯ-ಆಧಾರಿತ ಭದ್ರತಾ ಮೇಲ್ವಿಚಾರಣೆ, SDC ಮತ್ತು KSWAN ಭದ್ರತೆ*,
ಸೆಕ್ಯುರಿಟಿ ಆಪರೇಷನ್ಸ್ ಸೆಂಟರ್ (SOC) ಮತ್ತು ರಾಜ್ಯ CSIRT, ಸುರಕ್ಷಿತ ವಿನ್ಯಾಸ ಮತ್ತು ಶೂನ್ಯ ನಂಬಿಕೆ (Zero Trust) ತತ್ವಗಳು, ದತ್ತಾಂಶ ವರ್ಗೀಕರಣ ಹಾಗೂ DPDP ಸನ್ನದ್ಧತೆ ಮತ್ತು ಸೈಬರ್ ಭದ್ರತಾ ಸಾಮಥ್ರ್ಯ ವೃದ್ಧಿ ವಿಷಯಗಳ ಕುರಿತು ವಿಸ್ತøತವಾಗಿ ಚರ್ಚಿಸಲಾಯಿತು.
ಈ ಎಲ್ಲಾ ಚರ್ಚೆಗಳ ಮುಕ್ತಾಯದಲ್ಲಿ, ಸರ್ಕಾರಿ ಇಲಾಖೆಗಳಲ್ಲಿ ಸೈಬರ್ ಭದ್ರತೆಯನ್ನು ಮತ್ತಷ್ಟು ಬಲಪಡಿಸಲು ಆದ್ಯತೆಯ ಶಿಫಾರಸುಗಳು ಮತ್ತು ಅನುμÁ್ಠನ ಕ್ರಮಗಳನ್ನು ಒಳಗೊಂಡ ಮಹತ್ವದ “ಜಂಟಿ ಕ್ರಿಯಾ ಯೋಜನೆ”ಯನ್ನು (Joint Action Plan) ಸಿದ್ಧಪಡಿಸಲಾಯಿತು.
ಸಹಯೋಗ, ಜ್ಞಾನ ಹಂಚಿಕೆ ಮತ್ತು ನಿರಂತರ ಸಾಮಥ್ರ್ಯ ವೃದ್ಧಿಯ ಮೂಲಕ ಸುರಕ್ಷಿತ, ಸ್ಥಿತಿಸ್ಥಾಪಕ ಹಾಗೂ ಭವಿಷ್ಯಕ್ಕೆ ಸನ್ನದ್ಧವಾದ ಡಿಜಿಟಲ್ ಆಡಳಿತ ವ್ಯವಸ್ಥೆಯನ್ನು ನಿರ್ಮಿಸಲು ಕರ್ನಾಟಕ ಸರ್ಕಾರವು ಸಂಪೂರ್ಣ ಬದ್ಧವಾಗಿದೆ ಎಂದು ಕಾರ್ಯಾಗಾರದಲ್ಲಿ ಪುನರುಚ್ಚರಿಸಲಾಯಿತು

