ಮನಸೆಳೆದ ಉನ್ನತ್ ತಂಡದ ಭರತನಾಟ್ಯ

ಹಾಸನದ ಹಾಸನಾಂಬ (hasanamba temple ) ಕಲಾಕ್ಷೇತ್ರದಲ್ಲಿ ನಾಟ್ಯಕಲಾ ನಿವಾಸ್ ಆಯೋಜಿಸಿದ ೧೯ ನೇ ವರ್ಷದ ವಾರ್ಷಿಕೋತ್ಸವದ ನೃತ್ಯೋತ್ಸವದಲ್ಲಿ  (nrithyotsava) ಸುಮಾರು ೧೫೦ ಮಕ್ಕಳು ಭಾಗವಹಿಸಿ ಯಶಸ್ವಿ ಪ್ರದರ್ಶನ ನೀಡಿದರು. ಬೆಂಗಳೂರು ಡಿ. ಡಿ. ಚಂದನ (DD Chandana) ಕಾರ್ಯಕ್ರಮ ಮುಖ್ಯಸ್ಥರು ಎಚ್. ಎನ್. ಆರತಿ, ಕನ್ನಡ ಚಿತ್ರರಂಗದ ಪೋಷಕ ನಟರು ಸುಂದರ್ ವೀಣಾ , ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಎಚ್. ಪಿ ತಾರಾನಾಥ್, ಸ್ಕೌಟ್ಸ್ & ಗೈಡ್ ಹಾಸನ ವಿಭಾಗದ ಜಂಟಿ ಕಾರ್ಯದರ್ಶಿ ಸೋಫಿ ಫೆರ್ನಾಂಡಿಸ್ ಇವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ನಾಟ್ಯಕಲಾ ನಿವಾಸ್ ಸಂಸ್ಥೆ ನೀಡುವ ಸಮಾಜ ಸೇವಾ ತಿಲಕ ಪ್ರಶಸ್ತಿಯನ್ನು ಆರತಿ ಹಾಗು ಸೋಫಿ ಫೆರ್ನಾಂಡಿಸ್ ಸ್ವೀಕರಿಸಿ ಸಂಸ್ಥೆಯ ಮಕ್ಕಳನ್ನು ಉದ್ದೇಶಿಸಿ ಮಕ್ಕಳ ಮಾನಸಿಕ ಬೆಳವಣಿಗೆ ನೃತ್ಯಾಭ್ಯಾಸ ತುಂಬಾ ಫಲಕಾರಿ ಎಂದು ಅಭಿಪ್ರಾಯಪಟ್ಟರು. ಸುಂದರ್ ತಮ್ಮ ಕಲಾಜೀವನದ ಅನುಭವ ಹಂಚಿಕೊಂಡರು. ಕಲೆಯಿಂದ ಅವರಿಗೆ ದೊರೆತ ಮನ್ನಣಿ ಲಾಭ ಪ್ರಯೋಜನೆಗಳನ್ನು ಹಂಚಿಕೊಂಡರು

.

ನಂತರ ನಡೆದ ನೃತ್ಯ ಕಾರ್ಯಕ್ರಮವು ಮೈಸೂರು ಮಹಾರಾಜರ ಅಪರೂಪದ ರಚನೆ , ಚಿಂತಯೇ ಸದಾ ವರನ ವದನಂ ಎಂಬೋ , ಸಿಂಧೂನಾಮಕ್ರಿಯೆ ರಾಗದಲ್ಲಿ , ದೇಶಾದಿತಾಳದಲ್ಲಿ , ನಾಟ್ಯಕಲಾ ನಿವಾಸದ ಗುರುಗಳಾದ ಶ್ರೀ ವಿದ್ವಾನ್ ಉನ್ನತ್ ಇವರ ಹೊಸ ವಿಶಿಷ್ಟ ಸಂಯೋಜನೆಗಳು ಸಂಸ್ಥೆಯಮಕ್ಕಳಿಂದ ಉತ್ತಮ ಪ್ರದರ್ಶನ ಕಂಡಿತು. ಗಾಯನದಲ್ಲಿ ಕೇರಳದ ಶ್ರೀ ವಿನೀತ್ ಪುರವಂಕರ, ಮೃದಂಗದಲ್ಲಿ ಮೈಸೂರು ವಿದ್ವಾನ್ ವಿಕ್ರಂ ಭಾರದ್ವಾಜ್, ಕೊಳಲಿನಲ್ಲಿ ಮೈಸೂರು ವಿದ್ವಾನ್ ಸಮೃದ್ದ್ ಶ್ರೀನಿವಾಸ್, ಪಿಟೀಲಿನಲ್ಲಿ ವಿದ್ವಾನ್ ಯಶಸ್ವೀ ತುಮಕೂರು ಹಾಗೂ ರಿದಮ್ ಪ್ಯಾಡ್ ನಲ್ಲಿ ವಿದ್ವಾನ್ ಶ್ರೀ ವಿನಯ್ ರಂಗದೊಳ್ ಸಹಕರಿಸಿದರು. ಮೈಸೂರು ಆಸ್ಥಾನ ಕವಿ ಶ್ರೀ ಸದಾಶಿವ್ ರಾವ್ ಅವರ ಭೈರವಿ ರಾಗದ ಶ್ರೀ ಪಾರ್ಥಸಾರಥಿ ಶ್ರೀ ವಿದ್ವಾನ್ ಉನ್ನತ್ ಇವರ ಕ್ಲಿಷ್ಟಕರ ಸಂಯೋಜನೆಯ ನೃತ್ಯದಲ್ಲಿ ಮೈಸೂರು ವಿದ್ವಾನ್ ಪವನ್ ಕುಮಾರ್. ಆರ್ , ಶ್ರೀ ಭುವನ್ ಕುಮಾರ್ ಇವರುಗಳ ತ್ರಿವಳಿ ನೃತ್ಯ ಜನಮನ ಗೆದ್ದಿತು. ಮುತ್ತೈಯ್ಯ ಭಾಗವತರ ಕನ್ನಡದ ಪ್ರಪ್ರಥಮ ಕೃತಿ ಶ್ರೀ ದುರ್ಗಾದೇವಿ, ಸರಸಂಗಿ ರಾಗದ ಶ್ರೀ ಸಾಧಾಶಿವಮ್, ಮೈಸೂರು ವಾಸುದೇವಚಾರ್ಯರ ಶ್ರೀ ರಾಗದ ತಿಲ್ಲಾನ ಮನಮೋಹಕವಾಗಿತ್ತು

Hot this week

25 ಕೆಜಿ 370 ಗ್ರಾಂ ಗಾಂಜಾ, 20 ಗ್ರಾಂ MDMA, 07 ಗ್ರಾಂ ಹೈಡ್ರೋಗಾಂಜಾ ವಶ- 6 ಮಂದಿ ARREST

ಬೆಂಗಳೂರು ನಗರದ ಬೊಮ್ಮನಹಳ್ಳಿ, (Bommanahalli), ಸಿಟಿ ಮಾರ್ಕೆಟ್, ಡಿ.ಜೆ.ಹಳ್ಳಿ (DJ Halli)...

ಐಷಾರಾಮಿ ಕಾರುಗಳ ಕಳವು ಮಾಡುತ್ತಿದ್ದ ಮಹಿಳೆ ಸೇರಿದಂತೆ ಇಬ್ಬರ ಬಂಧನ

ತಮಿಳುನಾಡಿನ ಚೆನ್ನೆನಲ್ಲಿ (Chennai) ವಾಸವಿರುವ ಪರ‍್ಯಾದುದಾರರು ಟೊಯೋಟಾ (Toyota) ಫಾರ್ಚುನರ್ (Car)...

ಸರ್ಕಾರಿ ಶಾಲೆಗಳಲ್ಲಿ ಮೊಟ್ಟೆ ವಿತರಣೆಯಿಂದ ಶಿಕ್ಷಕರಿಗೆ ಆರ್ಥಿಕ ಹೊರೆಯಾಗುವುದಿಲ್ಲ. 

ಸರ್ಕಾರಿ ಶಾಲೆಗಳಲ್ಲಿ ಮೊಟ್ಟೆ ವಿತರಣೆಯಿಂದ ಶಿಕ್ಷಕರಿಗೆ ಆರ್ಥಿಕ ಹೊರೆಯಾಗುವುದಿಲ್ಲ.  ಮೊಟ್ಟೆ ದರ ನಿಗಧಿ...

ಹನೂರು ವನ್ಯಜೀವಿ ವಲಯದಲ್ಲಿ ನಡೆಸಲಾದ ಕಳ್ಳಬೇಟೆ ಕಾರ್ಯಾಚರಣೆಯ ಕುರಿತ ವರದಿ

 15.08.2026 ರಂದು ಕಾವೇರಿ ವನ್ಯಜೀವಿ ವಿಭಾಗದ ಹನೂರು ವನ್ಯಜೀವಿ ವಲಯದಲ್ಲಿ ನಡೆಸಲಾದ...

Topics

25 ಕೆಜಿ 370 ಗ್ರಾಂ ಗಾಂಜಾ, 20 ಗ್ರಾಂ MDMA, 07 ಗ್ರಾಂ ಹೈಡ್ರೋಗಾಂಜಾ ವಶ- 6 ಮಂದಿ ARREST

ಬೆಂಗಳೂರು ನಗರದ ಬೊಮ್ಮನಹಳ್ಳಿ, (Bommanahalli), ಸಿಟಿ ಮಾರ್ಕೆಟ್, ಡಿ.ಜೆ.ಹಳ್ಳಿ (DJ Halli)...

ಐಷಾರಾಮಿ ಕಾರುಗಳ ಕಳವು ಮಾಡುತ್ತಿದ್ದ ಮಹಿಳೆ ಸೇರಿದಂತೆ ಇಬ್ಬರ ಬಂಧನ

ತಮಿಳುನಾಡಿನ ಚೆನ್ನೆನಲ್ಲಿ (Chennai) ವಾಸವಿರುವ ಪರ‍್ಯಾದುದಾರರು ಟೊಯೋಟಾ (Toyota) ಫಾರ್ಚುನರ್ (Car)...

ಸರ್ಕಾರಿ ಶಾಲೆಗಳಲ್ಲಿ ಮೊಟ್ಟೆ ವಿತರಣೆಯಿಂದ ಶಿಕ್ಷಕರಿಗೆ ಆರ್ಥಿಕ ಹೊರೆಯಾಗುವುದಿಲ್ಲ. 

ಸರ್ಕಾರಿ ಶಾಲೆಗಳಲ್ಲಿ ಮೊಟ್ಟೆ ವಿತರಣೆಯಿಂದ ಶಿಕ್ಷಕರಿಗೆ ಆರ್ಥಿಕ ಹೊರೆಯಾಗುವುದಿಲ್ಲ.  ಮೊಟ್ಟೆ ದರ ನಿಗಧಿ...

ಹನೂರು ವನ್ಯಜೀವಿ ವಲಯದಲ್ಲಿ ನಡೆಸಲಾದ ಕಳ್ಳಬೇಟೆ ಕಾರ್ಯಾಚರಣೆಯ ಕುರಿತ ವರದಿ

 15.08.2026 ರಂದು ಕಾವೇರಿ ವನ್ಯಜೀವಿ ವಿಭಾಗದ ಹನೂರು ವನ್ಯಜೀವಿ ವಲಯದಲ್ಲಿ ನಡೆಸಲಾದ...

ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಆಕ್ಷೇಪಾರ್ಹ ವಿಷಯಗಳ ಪ್ರಸಾರಕ್ಕೆ ಕಡಿವಾಣ ಹಾಕಿ

ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕ್ಕೆ ಕರ್ನಾಟಕ ವರ್ಕಿಂಗ್ ಡಿಜಿಟಲ್ ಅಂಡ್ ಸೋಶಿಯಲ್ ಮೀಡಿಯಾ...

ಗ್ರ್ಯಾಂಡ್ ಕಪ್ 2026ರಲ್ಲಿ ಮಿಂಚಿದ ಭಾರತದ ಉದಯೋನ್ಮುಖ ಕರಾಟೆ ಪ್ರತಿಭೆಗಳು

ಬೆಂಗಳೂರು: ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಕರಾಟೆ ಪಟುಗಳು, (Karate) ತರಬೇತುದಾರರು,...

ಭಾರತೀಯ ರಾಯಭಾರ ಕಚೇರಿಯ ಡಾ. ಈಶ್ ಸಿಂಘಾಲ್ ರಿಗೆ ಭಾವಪೂರ್ಣ ಬೀಳ್ಕೊಡುಗೆ

ದೋಹಾ, ಕತಾರ್ — ಕತಾರ್‌ನಲ್ಲಿ (Qatar) ತಮ್ಮ ಸೇವಾವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ...

Related Articles