ಬೆಂಗಳೂರು: ಶಶಿಕಾಂತ್ ಬೆಳ್ಳೂರ ಕಂದಾಯ(Revenue) ವಸೂಲಿಗಾರರಾಗಿ ವಾರ್ಡ್ -41ರಲ್ಲಿ ಕಾರ್ಯನಿರ್ವಹಿಸುತ್ತಿದ್ದು. ಇವರ ನಿವಾಸ ಕುದುರೆಗೆರೆಯಲ್ಲಿ ಇದ್ದು ಮನೆ ಬಳಕೆ ಮಾಡಲು ಬೋರ್ ವೆಲ್ ಕೊರೆಸಿ, ವಾಣಿಜ್ಯ ಬಳಕೆಗಾಗಿ ಮಾಡುತ್ತಿರುವುದು ಮತ್ತು ರಾಜಕಾರಣಿ , ಸರ್ಕಾರ ಉನ್ನತಧಿಕಾರಿಗಳನ್ನು ಏಕವಚನದಲ್ಲಿ ಮಾತಾಡುತ್ತಿರುವ ಇವನ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ವಂದೇ ಮಾತರಂ ಸಮಾಜ ಸೇವಾ ಸಂಸ್ಥೆಯ ರಾಜ್ಯಾಧ್ಯಕ್ಷರಾದ ಸಿ.ಎಂ.ಶಿವಕುಮಾರ್ ನಾಯಕ ರವರು ಪಶ್ಚಿಮ ಮಹಾನಗರ ಪಾಲಿಕೆ ಆಯುಕ್ತರಿಗೆ ದೂರು ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಸಿ.ಎಂ.ಶಿವಕುಮಾರ್ ನಾಯಕ ರವರು ಮಾತನಾಡಿ ಶಶಿಕಾಂತ್ ಬೆಳ್ಳೂರು ಪಾಲಿಕೆಯಲ್ಲಿ ಕಂದಾಯ ವಸೂಲಿಗಾರರಾಗಿದ್ದು ರಾಜ್ಯ ಸರ್ಕಾರದ ಆಧೀನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಸರ್ಕಾರ ಕೈ ಕೆಳಗೆ ಕೆಲಸ ಮಾಡುವವರು ಖಾಸಗಿ ಸಂಸ್ಥೆಯ(Private office) ಕೆಲಸ ಮತ್ತು ಗುತ್ತಿಗೆ ಕೆಲಸ(Contract work) ಇನ್ನಿತರೆ ಲಾಭ ಬರುವ ಕೆಲಸ ಹುದ್ದೆ ನಿರ್ವಹಿಸುವ ಕೆಲಸ ಮಾಡಬಾರದು ಎಂದು ನಿಯಮಾವಳಿ ಇದ್ದರೂ, ಆದ್ವಿಕ್ ವಾಟರ್ ಸಪೈ ಎಂದು ವಾಟರ್ ಸರಬರಾಜು ಖಾಸಗಿ ಸಂಸ್ಥೆ ತೆರದು ಅದರಲ್ಲಿ ವಾಟರ್ ಟ್ಯಾಂಕರ್ ಗಾಡಿ, ಟ್ರಾಕ್ಟರ್ ಮೂಲಕ ಮದುವೆ, ಕಟ್ಟಡ ಕಟ್ಟಲು, ಮನೆಗಳಿಗೆ ಟ್ಯಾಂಕರಿಗೆ 800ರೂಪಾಯಿ ಮತ್ತು ಟ್ರಾಕ್ಟರ್ 500ರೂಪಾಯಿ ನಿಗದಿ(Fix) ಮಾಡಿ ಮಾರಾಟ ಮಾಡುತ್ತಿದ್ದಾರೆ. ಸರ್ಕಾರಿ ಹುದ್ದೆಯಲ್ಲಿ ಇದ್ದು ನೀರು ಮಾರಾಟ ಮಾಡುತ್ತಿದ್ದಾನೆ.
ಸರ್ಕಾರಿ ನೌಕರರ ಖಾಸಗಿ ನೀರು ಮಾರಾಟ ಮಾಡುವುದು ತಪ್ಪು ಮತ್ತು ಮನೆ ಬಳಕೆ ಮಾಡುವ ಬೋರ್ ವೇಲ್ ಆನ್ನು ವಾಣಿಜ್ಯ ಉದ್ದೇಶಕ್ಕೆ ನೀರು ಬಳಕೆ ಮಾಡಿರುವುದು .
ಇವನು ಹತ್ತಿರ ಯಾರೇ ಮಾತನಾಡಿದರು ನಾನು ಅವರು ಗೊತ್ತು ನನ್ನನ್ನು ಏನು ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಾನೆ ಹಾಗೂ ಮಾಜಿ ಸಂಸದರು, ಬಮೂಲ್ ಅಧ್ಯಕ್ಷರಾದ ಡಿ.ಕೆ.ಸುರೇಶ್ ಮತ್ತು ಪಶ್ಚಿಮ ವಲಯ ಆಯುಕ್ತರಾದ ಕೆ.ವಿ.ರಾಜೇಂದ್ರನ್ ರವರ ಕುರಿತು ಏಕವಚನದಲ್ಲಿ ಮಾತನಾಡುತ್ತಾನೆ ಹಾಗೂ ಕೆಲಸ ಸಮಯದಲ್ಲಿ ವಾಟರ್ ಟ್ಯಾಂಕರ್ ಓಡಿಸುವುದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾನೆ.
ಇವನ ಮೇಲೆ ಗುರುತರ ಅಪಾದನೆಗಳು ಇರುವ ಶಶಿಕಾಂತ್ ಬೆಳ್ಳೂರು ಅವರನ್ನು ಅಮಾನತ್ತು ಮಾಡಬೇಕು ಹಾಗೂ ವಾಟರ್ ಮಾಫಿಯದಲ್ಲಿ ತೊಡಗಿರುವ ಇವನ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಬೇಕು ಎಂದು ನಮ್ಮ ಮನವಿ ಎಂದು ಹೇಳಿದರು.
