ಕಣ್ಣಿನ ಪೊರೆ ದೊಡ್ಡ ಕಾಯಿಲೆಯಲ್ಲ ಸಾಕ್ಷ್ಯ ಆಸ್ಪತ್ರೆಯ ಮುಖ್ಯಸ್ಥರಾದ ಪವನ್ ಕುಲಕರ್ಣಿ
ಹುಳಿಯಾರು: ಕಣ್ಣಿನ ಪೊರೆ(Cataract|) ದೊಡ್ಡ ಕಾಯಿಲೆಯಲ್ಲ. ಭಯ ಪಡೆದೆ ಸೂಕ್ತ ಚಿಕಿತ್ಸೆ ಮಾಡಿಸಿಕೊಂಡರೆ, ಯಾವುದೇ ಸಮಸ್ಯೆ ಬರುವುದಿಲ್ಲ ಎಂದು ಹುಳಿಯಾರು ಸಾಕ್ಷ್ಯ ಆಸ್ಪತ್ರೆಯ ಮುಖ್ಯಸ್ಥರಾದ ಪವನ್ ಕುಲಕರ್ಣಿ ಹೇಳಿದರು.
ಹುಳಿಯಾರಿನ ಸಾಕ್ಷ್ಯ ಆಸ್ಪತ್ರೆಯಲ್ಲಿ ವಿಶ್ವ ವೈದ್ಯರ ದಿನಾಚರಣೆ ಅಂಗವಾಗಿ ಗುರುವಾರ ಏರ್ಪಡಿಸಿದ್ದ ನೇತ್ರ ಉಚಿತ ತಪಾಸಣೆ ಶಿಬಿರದ(Trend) ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
40 ವರ್ಷ ದಾಟಿದ ಬಳಿಕ ಜನರಲ್ಲಿ ಕಣ್ಣಿನ ಸಮಸ್ಯೆ ಬರುವುದು ಸಾಮಾನ್ಯ. ಸಾಕಷ್ಟು ಮಂದಿಗೆ ಪೊರೆ ಬರುವ ಸಾಧ್ಯತೆಯೂ ಇರುತ್ತದೆ. ಕಣ್ಣಿನಲ್ಲಿ ಪೊರೆ ಬರುವುದು ಪ್ರಾಣಾಪಾಯದ ಕಾಯಿಲೆಯಲ್ಲ. ಪೊರೆ ಬಂದವರನ್ನು ಚಿಕಿತ್ಸೆ ಮಾಡಿಸದೆ ಮನೆಯಲ್ಲಿ ಕೂರಿಸುವ ಪ್ರವೃತ್ತಿಯಿಂದ ಹೊರಬರಬೇಕು. ಶಸ್ಟ್ರಚಿಕಿತ್ಸೆ ಮಾಡಿಸಿ ಅವರನ್ನು ಎಂದಿನಂತೆ ಚಟುವಟಿಕೆಯಲ್ಲಿ ತೊಡಗಿಸಬೇಕು ಎಂದು ಹೇಳಿದರು.
ಪ್ರತಿಯೊಬ್ಬರೂ ಕಣ್ಣಿನ ಬಗ್ಗೆ ನಿರ್ಲಕ್ಷಿಸದೆ ಕಾಳಜಿ ವಹಿಸಬೇಕು. ಕಾಲ ಕಾಲಕ್ಕೆ ತಪಾಸಣೆ ಮಾಡಿಸಬೇಕು. ಬಡವರಿಗೆ ನೆರವಾಗಲೆಂದು ಸಾಕ್ಷ್ಯ ಆಸ್ಪತ್ರೆಯಿಂದ ರಾಷ್ಟ್ರೀಯ ಮತ್ತು ನಾಡ ಹಬ್ಬಗಳಲ್ಲಿ ಕಣ್ಣಿನ ಉಚಿತ ತಪಾಸಣಾ ಕಾರ್ಯಾಗಾರ ಮಾಡುತ್ತಿದ್ದು, ಅದರ ಉಪಯೋಗ ಪಡೆಯಬಹುದು ಎಂದರು.
ಸಾಕ್ಷ್ಯ ಆಸ್ಪತ್ರೆಯ ಮುಖ್ಯಸ್ಥರಾದ ಲಕ್ಷ್ಮೀ ಡಾ.ಕೃಪಾ, ಜೀವನ್, ರಮೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
2HULIYAR1: ಹುಳಿಯಾರಿನ ಸಾಕ್ಷ್ಯ ಆಸ್ಪತ್ರೆಯಲ್ಲಿ ವಿಶ್ವ ವೈದ್ಯರ ದಿನಾಚರಣೆ ಅಂಗವಾಗಿ ಗುರುವಾರ ಏರ್ಪಡಿಸಿದ್ದ ನೇತ್ರ ಉಚಿತ ತಪಾಸಣೆ ಶಿಬಿರದ ಉದ್ಘಾಟನೆ.

