ಬೆಂಗಳೂರು : ತಿರುಮಲ ತಿರುಪತಿ ದೇವಸ್ಥಾನಗಳು (TTD) ಹಿಂದೂಧರ್ಮ ಪ್ರಚಾರ ಪರಿಷತ್ (Hindu Dharma Prachara Parishat) ವತಿಯಿಂದ
ಸೆಪ್ಟೆಂಬರ್ 8 ರಿಂದ 11ರ ವರೆಗೆ ಜರುಗುವ ಧಾರ್ಮಿಕ/ಸಾಂಸ್ಕೃತಿಕ ಕಾರ್ಯಕ್ರಮಗಳು :
ಭಜನಾ ಕಾರ್ಯಕ್ರಮ (ಪ್ರತಿದಿನ ಸಂಜೆ 6-00 ರಿಂದ 7-00) : ಸೆಪ್ಟೆಂಬರ್ 8-ಮತ್ತಿಕೆರೆಯ
ಶ್ರೀ ಲಕ್ಷ್ಮೀ ವೆಂಕಟೇಶ್ವರ ಭಜನಾ ಮಂಡಳಿ, ಸೆಪ್ಟೆಂಬರ್ 9-ವಿಜಯನಗರದ
ಪವಿತ್ರ ಗಾನ ವೃಂದ, ಸೆಪ್ಟೆಂಬರ್ 10-ಬಸವೇಶ್ವರನಗರದ
ಶ್ರೀ ಹಯವದನ ಭಜನಾ ಮಂಡಳಿ.
ಪ್ರವಚನ ಕಾರ್ಯಕ್ರಮ
(ಪ್ರತಿದಿನ ಸಂಜೆ 7-00 ರಿಂದ 8-00) : ಸೆಪ್ಟೆಂಬರ್ 8, 9 ಮತ್ತು 10ರಂದು ಶ್ರೀ ಕಂಬಾಲೂರು ಶ್ರೀವತ್ಸಾಚಾರ್ಯ ಇವರಿಂದ “ಭಾಗವತ ಮಹಾತ್ಮೆ” ಧಾರ್ಮಿಕ ಪ್ರವಚನ.
ಹರಿನಾಮ ಸಂಕೀರ್ತನೆ :
ಸೆಪ್ಟೆಂಬರ್ 11, ಶುಕ್ರವಾರ, ಸಂಜೆ 6-30 ರಿಂದ 8-00. ಗಾಯನ : ಕು|| ರಚನಾ ಶರ್ಮಾ, ಪಿಟೀಲು : ಶ್ರೀ ಎಂ.ಎನ್. ಸತ್ಯನಾರಾಯಣ, ಮೃದಂಗ : ಶ್ರೀ ಶ್ರೀನಿವಾಸ್ ಅನಂತರಾಮಯ್ಯ ಇವರುಗಳು ನಡೆಸಿಕೊಡಲಿದ್ದಾರೆ ಎಂದು ಟಿ ಟಿ ಡಿ ಹೆಚ್.ಡಿ.ಪಿ.ಪಿ. ಸಂಚಾಲಕರಾದ ಡಾ|| ಪಿ. ಭುಜಂಗರಾವ್ ತಿಳಿಸಿದ್ದಾರೆ. ಕಾರ್ಯಕ್ರಮ ನಡೆಯುವ ಸ್ಥಳ :
ಶ್ರೀ ಮಾರುತಿ ಮಹಾಗಣಪತಿ ದೇವಸ್ಥಾನ (ಪುಣ್ಯಧಾಮ), 1ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು-560010.
ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 60 ವಿದ್ಯಾರ್ಥಿಗಳಿಂದ ಭರತನಾಟ್ಯ ವೈಭವ

