ರಾಜಾಜಿನಗರ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ (AKBMS) ಅಧ್ಯಕ್ಷರಾದ ಎಸ್.ರಘುನಾಥ್ (S.Raghunath) ರವರ ಹುಟ್ಟುಹಬ್ಬವನ್ನು ಅಭಿಮಾನಿಗಳು, ಸ್ನೇಹಿತರು ಅಚರಣೆ ಮಾಡಿದರು. ಅಧ್ಯಕ್ಷರಾದ ಎಸ್.ರಘುನಾಥ್ ರವರಿಗೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಹಿರಿಯ ಉಪಾಧ್ಯಕ್ಷರಾದ ಆರ್.ಲಕ್ಷ್ಮೀಕಾಂತ್, ಬಿಜೆಪಿ ಮುಖಂಡ (BJP Leaders) ದತ್ತಾತ್ರಿ, ಜಗ್ಗನಾಥ್ ಜಿಲ್ಲಾ ಪ್ರತಿನಿಧಿಗಳಾದ ಎಸ್.ಎಸ್.ಪ್ರಸಾದ್, ನಾಗೇಶ್ ಮತ್ತು ರಾಮ್ ಪ್ರಸಾದ್, ಎ.ಎನ್.ಪುರುಷೋತ್ತಮ್ ರವರು ಸನ್ಮಾನ ಮಾಡಿ ಶುಭ ಕೋರಿದರು.
ಇದೇ ಸಂದರ್ಭದಲ್ಲಿ ಎಸ್.ರಘುನಾಥ್ ರವರು ಮಾತನಾಡಿ ತ್ರಿಮತಸ್ಥರು ಎಲ್ಲರು ಒಂದೇ ಆಚಾರ್ಯರುಗಳಾದ ಅದಿ ಶಂಕರರು, ರಾಮಾನುಜರು, ಮಾಧ್ವಚಾರ್ಯರು ಸಾರಿದ ಸಂದೇಶವನ್ನು ಎಲ್ಲರು ಪಾಲಿಸಬೇಕು. ಬ್ರಾಹ್ಮಣ ಎಂದರೆ ನಾವೆಲ್ಲರು ಒಂದೇ ನಮ್ಮಲ್ಲಿ ಭೇದಬಾವ ಬೇಡ. ಬ್ರಾಹ್ಮಣರು ಸಂಘಟಿತ ರಾಗಬೇಕು. ನಮ್ಮಲ್ಲಿ ಈ ಪಂಗಡ, ಅ.ಪಂಗಡ ಎಂಬ ಕಿತ್ತಾಟ ಬೇಡ.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ತ್ರಿಮತಸ್ಥರನ್ನ ಒಟ್ಟಾಗಿ ತೆಗೆದುಕೊಂಡು ಹೋಗುತ್ತಿದೆ.
ಬ್ರಾಹ್ಮಣ ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು Productivity ಆರ್ಥಿಕ ಸಹಾಯ ಮಾಡಲು 100ದತ್ತನಿಧಿ ಯೋಜನೆ ಆರಂಭಸಲಾಗಿದೆ ಇದರಲ್ಲಿ ಲಕ್ಷಾಂತರ ರೂಪಾಯಿಗಿಂತ ಹೆಚ್ಚು ದೇಣಿಗೆ ಸಂಗ್ರಹಿಸಲಾಗಿದೆ.
ಬಂದ ಬಡ್ಡಿ ಹಣದಲ್ಲಿ ಬ್ರಾಹ್ಮಣ ಸಮುದಾಯ ಶ್ರೇಯೋಭಿವೃದ್ಧಿಗೆ ವಿನಿಯೋಗಿಸಲಾಗುವುದು ಎಂದು ಹೇಳಿದರು.
ಬಿಜೆಪಿ ಮುಖಂಡರುಗಳಾದ ರವೀಂದ್ರನ್, ಮಲ್ಲಿಕಾರ್ಜುನ್, ರಾಮಮೂರ್ತಿ, ಬಿ.ಎನ್.ಶ್ರೀನಿವಾಸ್, ವೆಂಕಟೇಶ್ ಬಾಬು,ಪ್ರದೀಪ್ ,ಸುಕುಮಾರ್, ಅಭಿಮಾನಿಗಳು ಸ್ನೇಹಿತರು ಪಾಲ್ಗೊಂಡಿದ್ದರು.

