ಬಂಡೆ ಒಡೆಯೋರಿಗೆ ರೈತರ ಕಷ್ಟ ತಿಳಿಯಲ್ಲ

ಬೆಂಗಳೂರು: ಕೃಷಿ ಮಾಡಿದವರಿಗೆ ಮಾತ್ರ ರೈತರ ಕಷ್ಟ ತಿಳಿಯುತ್ತೆ ಹೊರತು ಬಂಡೆ ಒಡೆಯುವವರಿಗೆ ರೈತರ ನೋವು ತಿಳಿಯುವುದಿಲ್ಲ(Stone Throwers do not Understand Farmers Suffering.) ಎಂದು ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ (Narayan Swamy )ಅವರು ಹೇಳಿದ್ದಾರೆ.
ಬಿಡದಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಟೌನ್‍ಶಿಪ್‍ಗೆ ಭೂಸ್ವಾಧೀನ ಮಾಡಿಕೊಳ್ಳಲು ಮುಂದಾಗಿರುವ ಜಮೀನು ಫಲವತ್ತಾಗಿದೆ. ಇಲ್ಲಿನ ರೈತರನ್ನು ನೋಡಿದರೆ ಅವರು ಎಷ್ಟು ಕೆಲಸ ಮಾಡುತ್ತಾರೆ ಎಂದು ತಿಳಿಯುತ್ತದೆ ಎಂದರು.
ಟೌನ್‍ಶಿಪ್ ವಿರೋಧಿಸಿ ಪ್ರತಿಭಟನೆ ನಡೆಯುತ್ತಿದೆ. ನೀವು ಎಷ್ಟು ಉತ್ಸುಕರಾಗಿದ್ದೀರೋ ವಿರೋಧಿಸಲು ಭಾರತೀಯ ಜನತಾ ಪಕ್ಷವೂ ಸಹ ಉತ್ಸುಕವಾಗಿದೆ. ವಿರೋಧ ಪಕ್ಷದ ಎಲ್ಲ ನಾಯಕರೂ ನಿಮ್ಮ ರಕ್ಷಣೆಗೆ ಬಂದಿದ್ದೇವೆ. ಈ ಭಾಗದಲ್ಲಿ ಎಲ್ಲೂ ಕೂಡ ಅರ್ಧ ಎಕರೆ ಭೂಮಿ ಪಾಳು ಬಿದ್ದಿಲ್ಲ. ಆದರೆ ಇಂತಹ ಜಮೀನನ್ನು ಸರ್ಕಾರ ಒತ್ತಾಯವಾಗಿ ರೈತರಿಂದ ಕಸಿಯಲು ಮುಂದಾಗಿದೆ ಎಂದು ದೂರಿದರು.
ಈ ಭಾಗದಲ್ಲಿ ತೆಂಗು, ಅಡಿಕೆ, ಮಾವು, ಸಪೆÇೀಟ, ರೇμÉ್ಮ ಬೆಳೆಯುತ್ತಾರೆ. ಡೇರಿ ಉದ್ಯಮ ಇದೆ. ಇಂತಹ ರೈತರನ್ನು ಟೌನ್‍ಶಿಪ್ ನೆಪದಲ್ಲಿ ಒಕ್ಕಲೆಬ್ಬಿಸಲು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ (D. K. Shivakumar)ಅವರು ಮುಂದಾಗಿದ್ದಾರೆ. ನೀವು ನಿಜವಾದ ರೈತನ ಮಗ ಆಗಿದ್ದರೆ ಈ ರೀತಿ ಒಕ್ಕಲೆಬ್ಬಿಸುವ ಕೆಲಸ ಮಾಡಬಾರದು ಎಂದರು.
ಇಲ್ಲಿನ ರೈತರನ್ನು ಒಕ್ಕಲೆಬ್ಬಿಸಿ ಎಲ್ಲಿಗೆ ಕಳಿಸುತ್ತೀರಿ. ಹಣ ಇಟ್ಟುಕೊಂಡು ಅವರು ಕಾರು, ಬೈಕು ತಗೋಬಹುದು. ಆದರೆ ಹಣ ಎಲ್ಲ ಖರ್ಚಾದ ಮೇಲೆ ತಮ್ಮ ಜಮೀನಿನಲ್ಲಿ ನಿರ್ಮಿಸಿದ ಕಾರ್ಖಾನೆಗಳಲ್ಲಿ ಸೆಕ್ಯುರಿಟಿ ಗಾರ್ಡ್ ಆಗುತ್ತಾರೆ. ಆದ್ದರಿಂದ ಅವರನ್ನು ಬಿಟ್ಟುಬಿಡಿ. ರೈತರ ಶಾಪ ತಡೆಯುವ ಶಕ್ತಿ ಸರ್ಕಾರಕ್ಕೆ, ಮುಖ್ಯಮಂತ್ರಿಗಳಿಗೆ ಇಲ್ಲ ಎಂದು ಹೇಳಿದರು.
ಬಿಡದಿಯಲ್ಲಿ ಇಂತಹ ಟೌನ್‍ಶಿಪ್ ಬಿಟ್ಟು ಬೇರೆ ಕಡೆ ಮಾಡಲಿ. ಚಿಕ್ಕಬಳ್ಳಾಪುರ, ದೇವನಹಳ್ಳಿ ಕಡೆ ಸಾವಿರಾರು ಎಕರೆ ಬರಡು ಭೂಮಿ ಸಿಗುತ್ತದೆ. ಆಗ ಅಲ್ಲಿನ ಭೂಮಿಗೂ ಬೆಲೆ ಸಿಗಲಿದೆ ಎಂದು ನುಡಿದರು.
ಒತ್ತಾಯಪೂರ್ವಕವಾಗಿ ಭೂಮಿ ಕಸಿದು ರೈತರನ್ನು ಕಷ್ಟಕ್ಕೆ ಒಡ್ಡಬೇಡಿ. ರಿಯಲ್ ಎಸ್ಟೇಟ್ ಮಾಡಲು ಬೇರೆ ಮಾರ್ಗ ಇದೆ ಎಂದು ಹೇಳಿದರು.

Hot this week

ಪದ್ಮನಾಭನಗರದಲ್ಲಿ ಧಾರ್ಮಿಕ ಜಾಗೃತಿ ಮೆರವಣಿಗೆ

ಬೆಂಗಳೂರು: ಸುರಭಾರತಿ ಸಾಂಸ್ಕೃತಿಕ ಪ್ರತಿಷ್ಠಾನ, (SuraBharathi Cultural Prathistana) ಹೊರಮಾವು (Horamavu)...

ವೈದ್ಯರು ಕಣ್ಣಿಗೆ ಕಾಣುವ ದೇವರು, ಜನರ ನಂಬಿಕೆ ಉಳಿಸಿಕೊಳ್ಳಿ : ಡಿ.ಕೆ. ಶಿವಕುಮಾರ್

ವೈದ್ಯರು ಕಣ್ಣಿಗೆ ಕಾಣುವ ದೇವರು. (Doctors are Gods) ಕಷ್ಟ ಇದ್ದರೂ...

ವೈದ್ಯಕೀಯ ವೃತ್ತಿಯಲ್ಲಿ ನೈತಿಕತೆ, ಕರುಣೆ, ಸೇವಾ ಮನೋಭಾವ ಅತ್ಯಗತ್ಯ: ರಾಜ್ಯಪಾಲ ಗೆಹ್ಲೋಟ್

ವೈದ್ಯಕೀಯ ವೃತ್ತಿಯು ಕೇವಲ ಉದ್ಯೋಗವಲ್ಲ, ಅದು ಸೇವೆ ಮತ್ತು ಕರುಣೆಯ ಕ್ಷೇತ್ರವಾಗಿದ್ದು,...

ಕುಡಿತಿನಿ ಪ್ರದೇಶದ ಭೂಸ್ವಾಧಿನದಲ್ಲಿ ಭಾರೀ ಮೋಸ: ಜೂ. 18 – ಬಳ್ಳಾರಿ ಸಂಪೂರ್ಣ ಬಂದ್

Bellary : ಭಾರೀ ಕೈಗಾರಿಕೆಗಳ ಸ್ಥಾಪನೆಯ ಉದ್ದೇಶಕ್ಕೆಂದು ಬಳ್ಳಾರಿ ಜಿಲ್ಲೆಯ ಕುಡಿತಿನಿ...

Topics

ಪದ್ಮನಾಭನಗರದಲ್ಲಿ ಧಾರ್ಮಿಕ ಜಾಗೃತಿ ಮೆರವಣಿಗೆ

ಬೆಂಗಳೂರು: ಸುರಭಾರತಿ ಸಾಂಸ್ಕೃತಿಕ ಪ್ರತಿಷ್ಠಾನ, (SuraBharathi Cultural Prathistana) ಹೊರಮಾವು (Horamavu)...

ವೈದ್ಯಕೀಯ ವೃತ್ತಿಯಲ್ಲಿ ನೈತಿಕತೆ, ಕರುಣೆ, ಸೇವಾ ಮನೋಭಾವ ಅತ್ಯಗತ್ಯ: ರಾಜ್ಯಪಾಲ ಗೆಹ್ಲೋಟ್

ವೈದ್ಯಕೀಯ ವೃತ್ತಿಯು ಕೇವಲ ಉದ್ಯೋಗವಲ್ಲ, ಅದು ಸೇವೆ ಮತ್ತು ಕರುಣೆಯ ಕ್ಷೇತ್ರವಾಗಿದ್ದು,...

ಕುಡಿತಿನಿ ಪ್ರದೇಶದ ಭೂಸ್ವಾಧಿನದಲ್ಲಿ ಭಾರೀ ಮೋಸ: ಜೂ. 18 – ಬಳ್ಳಾರಿ ಸಂಪೂರ್ಣ ಬಂದ್

Bellary : ಭಾರೀ ಕೈಗಾರಿಕೆಗಳ ಸ್ಥಾಪನೆಯ ಉದ್ದೇಶಕ್ಕೆಂದು ಬಳ್ಳಾರಿ ಜಿಲ್ಲೆಯ ಕುಡಿತಿನಿ...

ನಿತ್ಯ ಪಂಚಾಂಗ 17.06.2026 ಬುಧವಾರ WEDNESDAY.

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 17.06.2026 ಬುಧವಾರ WEDNESDAY. ಸಂವತ್ಸರ: ಪರಾಭವ. SAMVATSARA : PARABHAVA. ಆಯಣ:...

ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್: ಅರ್ಜಿ ಆಹ್ವಾನ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ದಿನಪತ್ರಿಕೆಗಳು/ಮಾಧ್ಯಮ ಸಂಸ್ಥೆಗಳಲ್ಲಿ...

ವಿವಿಧ ದೇಶಗಳ ಗೌರವಾನ್ವಿತ ರಾಯಭಾರಿಗಳ ನಿಯೋಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಕಿರಣ್ ಮಜುಂದಾರ್ ಶಾ, ಸುರೇಶ್, ಗೀತಾಂಜಲಿ...

Related Articles