ಕಲೆ, ತಂತ್ರಜ್ಞಾನದ ಸಂಗಮ “ಕಲೋತ್ಸವ” ಯಶಸ್ವಿ: ವಿವಿಧ ಕಾಲೇಜು ವಿದ್ಯಾರ್ಥಿಗಳ ಪ್ರತಿಭೆ ಅನಾವರಣ

0
24

ಬೆಂಗಳೂರು : ವಿಜಯನಗರದ ವಾಸವಿ ಜ್ಞಾನಪೀಠ ಪ್ರಥಮ ದರ್ಜೆ (Vasavi Jnanpith First Grade College) ಕಾಲೇಜಿನಲ್ಲಿಂದು ವಿವಿಧ ಕಾಲೇಜುಗಳ ವಿದ್ಯಾರ್ಥಿಗಳ ಸಹಯೋಗದೊಂದಿಗೆ ಕಲೆ, ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮಹಾಭಾರತದ ಪ್ರಸಂಗವನ್ನು ಮನಮೋಹಕ (Charming) ವಾಗಿ ಮರುಸೃಷ್ಟಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ವಿದ್ಯಾರ್ಥಿಗಳ ಅದ್ಭುತ ಅಭಿನಯ, (Amazing performance by students)
ಸಂಭಾಷಣೆ ಹಾಗೂ ವೈಭವಯುತ ವೇದಿಕೆ ನಿರ್ವಹಣೆ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದಿತು. ಸಂಸ್ಕೃತಿ, ಸಂಗೀತ, ತಂತ್ರಜ್ಞಾನದ ಸಂಗಮ “ಕಲೋತ್ಸವ”ವನ್ನು (Kalothsava) ಅತ್ಯಂತ ಅದ್ದೂರಿಯಾಗಿ ಆಚರಿಸಲಾಯಿತು.
ವಿವಿಧ 10 ಕಾಲೇಜುಗಳ ವಿದ್ಯಾರ್ಥಿಗಳು ಈ ಉತ್ಸವದಲ್ಲಿ ಭಾಗವಹಿಸಿದ್ದರು. ಪ್ರತಿಭೆಗಳನ್ನು ಗುರುತಿಸುವ ಮಹತ್ವದ ವೇದಿಕೆಯಲ್ಲಿ ಕಾಲೇಜು ವಿದ್ಯಾರ್ಥಿಗಳು ವೈವಿಧ್ಯಮ ಸಂಗೀತ, ನೃತ್ಯ, ನಾಟಕ ಪ್ರದರ್ಶಿಸಿ ಸಂಭ್ರಮಿಸಿದರು. ಜೊತೆಗೆ ವಿದ್ಯಾರ್ಥಿಗಳಿಗೆ ಆಧುನಿಕ ಕೌಶಲ್ಯವಾದ ವೆಟ್ ಡಿಸೈನಿಂಗ್, ಬ್ಯಾನರ್, ಪೋಸ್ಟರ್ ವಿನ್ಯಾಸ, ವ್ಯಾಪಾರ ವಲಯ ಕುರಿತ ರಸ ಪ್ರಶ್ನೆ, ಮಾರುಕಟ್ಟೆ ಸವಾಲುಗಳು, ವ್ಯಾಪಾರ ಕ್ಷೇತ್ರದ ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಿ ತಮ್ಮೊಳಗೆ ಅಡಗಿರುವ ಪ್ರತಿಭೆಯನ್ನು ವಿದ್ಯಾರ್ಥಿಗಳು ಅನಾವರಣಗೊಳಿಸಿದರು.
ವಾಸವಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ.ಆರ್. ವಿಜಯ ಸಾರಥಿ ಮಾತನಾಡಿ, ಕಲೋತ್ಸವ ಅತ್ಯಂತ ವಿನೂತನವಾಗಿ ಮೂಡಿ ಬಂತು. ಮಹಾಭಾರತದ ನಾಟಕ ಪ್ರದರ್ಶಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಈ ವರ್ಷ ವಾಸವಿ ಕಾಲೇಜಿನ 616 ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಮೂಲಕ ಉದ್ಯೋಗ ದೊರಕಿಸಿಕೊಡಲಾಗಿದೆ. ಜೊತೆಗೆ ಕ್ರೀಡೆಗೆ ಆದ್ಯತೆ ನೀಡುವ ದೃಷ್ಟಿಯಿಂದ ಜೂನ್ ಇಲ್ಲವೆ ಜುಲೈನಲ್ಲಿ ಅಂತರ್ ಕಾಲೇಜು ವಾಸವಿ ಕಪ್ ಕ್ರಿಕೆಟ್ ಟೂರ್ನಿ ಆಯೋಜಿಸಲಾಗುವುದು. ಗೆದ್ದ ತಂಡಕ್ಕೆ 1 ಲಕ್ಷ ರೂ, ರನ್ನರ್ ಅಪ್ ತಂಡಕ್ಕೆ 50 ಸಾವಿರ ರೂ ನಗದ ಬಹುಮಾನ ನೀಡಲಾಗುವುದು. ಕೆಜಿಯಿಂದ ಪಿಜಿವರೆಗೆ ಉತ್ತಮ ಶಿಕ್ಷಣದ ಜೊತೆಗೆ ಸ್ವಾಲಂಬಿ ಬದುಕು ರೂಪಿಸಲು ಒತ್ತು ನೀಡಲಾಗಿದೆ ಎಂದರು.
ಪದವಿ ಕಾಲೇಜು ಪ್ರಾಂಶುಪಾಲರಾದ ಪದ್ಮ, ಡಾ. ರಂಗ ಸ್ವಾಮಿ, ಪಿಯು ಕಾಲೇಜು ಪ್ರಾಂಶುಪಾಲರು, ಶಿಕ್ಷಕರು, ಸಿಬ್ಬಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here