ದಿ.ಕೆ ಎಸ್ ಅಶ್ವತ್ಥ್ ಅವರ ಪತ್ನಿ ಶ್ರೀಮತಿ.ಶಾರದಮ್ಮನವರ ನಿಧನ

BENGALURU : ಕನ್ನಡ ಚಿತ್ರರಂಗ ಬಹು ಜನಪ್ರಿಯ ನಟರಾಗಿದ್ದ ದಿ.ಕೆ ಎಸ್ ಅಶ್ವತ್ಥ್ ಅವರು ಯಾರಿಗೆ ತಾನೇ ತಿಳಿದಿಲ್ಲ. ಅವರ ಧರ್ಮ ಪತ್ನಿ ಶ್ರೀಮತಿ ಶಾರದಮ್ಮನವರು ಮಾತ್ರ ಬಂಧು ಬಳಗದವರಿಗೆ ಮಾತ್ರ ಪರಿಚಯವಿತ್ತು. 96 ವರ್ಷಗಳಾಗಿದ್ದ ಶ್ರೀಮತಿ.ಶಾರದಮ್ಮನವರು ಇಂದು ನಿಧನರಾಗಿದ್ದಾರೆ. ಅವರ ಆತ್ಮಕ್ಕೆ ಪ್ರಾರ್ಥನೆ ಸಲ್ಲಿಸುತ್ತೇನೆ.
ಒಂದು ಹಳೆಯ ಫೋಟೋ ಕೆ ಎಸ್ ಅಶ್ವತ್ಥ್ ಅವರ ಕುಟುಂಬದ್ದು ಹಂಚಿಕೊಂಡಿದ್ದೇನೆ. ಮೈಸೂರಿನ ಶಿವರಾಂಪೇಟೆಯ ದಿನಗಳು. ಶ್ರೀ.ಕೆ ಎಸ್ ಅಶ್ವತ್ಥ್ ಅವರು ಒಂದು ಟಾಂಗಾದಲ್ಲಿ ಬಹುತೇಕ ಒಂದು ಆನಂದ ಬಣ್ಣದ ಜುಬ್ಬಾ ಹಾಕಿಕೊಂಡು ಬಂದಿಳಿದರೆ ನಮಗೆಲ್ಲಾ ಸಂಭ್ರಮ. ಯಾವುದಾದರೂ ಕುಟುಂಬದ ಕಾರ್ಯಕ್ರಮಗಳು ನಡೆದಾಗ ಶ್ರೀಮತಿ.ಶಾರದಮ್ಮನವರು ಬಂದಾಗ ನನ್ನ ಅಮ್ಮನನ್ನು ಗುರುತಿಸಿ ಏನೇ ಪುಟ್ಟಿ ಹೇಗಿದ್ಯಾ ಅಂತ ಮಾತನಾಡಿಸುತ್ತಿದ್ದರು. ನಾವು ಶ್ರೀಮತಿ ಮತ್ತು ಶ್ರೀ.ಕೆ ಎಸ್ ಅಶ್ವತ್ಥ್ ದಂಪತಿಗಳ ಕಾಲಿಗೆ ನಮಸ್ಕಾರ ಮಾಡಿ ಆಶೀರ್ವಾದ ಪಡೆಯುತ್ತಿದ್ದೆವು.
ಶ್ರೀ.ಕೆ ಎಸ್ ಅಶ್ವತ್ಥ್ ಅವರ ಕುಟುಂಬ ಸರಸ್ವತಿಪುರಂ ಬಡಾವಣೆಯ ಕಲಾಶ್ರೀ ಮನೆಗೆ ಬಂದ ನಂತರ ಅವರ ವಾಕಿಂಗ್, ಕೆಲವೊಮ್ಮೆ ಒಂದು ನಾಯಿಯ ಜೊತೆ ವಾಕಿಂಗ್, ಅವರ ವಾಕಿಂಗ್ ಸ್ಟಿಕ್ ಎಲ್ಲವನ್ನೂ ನೋಡಿದ ಮೈಸೂರಿನ ಜನರು ಅನೇಕ. ನಮ್ಮ ಸ್ಮಾರ್ತ ಉಲುಚುಕಮ್ಮೆ ಸಮುದಾಯ ಹೆಮ್ಮೆ ಇವರ ಕುಟುಂಬ. ಗತಕಾಲದ
ಮೈಸೂರಿನ ದಿನಗಳು ನಿಜಕ್ಕೂ ಗ್ರೇಟ್. ಹಿರಿಯರ ಕಣ್ಮರೆ ನಿಜಕ್ಕೂ ದುಃಖದ ಸಂಗತಿ. ಅವರ ಕುಟುಂಬಕ್ಕೆ ದೇವರು ಶಕ್ತಿ ನೀಡಲಿ.

Hot this week

ದೇವನಹಳ್ಳಿ ತಾಲೂಕು ಕಚೇರಿಯಲ್ಲಿ ಆಮೆಗತಿಯ ಮಾಹಿತಿ ಹಕ್ಕು ಪ್ರಕ್ರಿಯೆ:

ದೇವನಹಳ್ಳಿ: ಸರ್ಕಾರದ ಆಡಳಿತದಲ್ಲಿ ಪಾರದರ್ಶಕತೆ ತರಲು ಜಾರಿಗೆ ಬಂದ ಮಾಹಿತಿ ಕ್ಕು...

ಜನಿವಾರ ತೆಗೆಸಿದ ಕೃತ್ಯ ‘ಪೆಹಲ್ಗಾಂ’ ಮಾದರಿಯ ದಬ್ಬಾಳಿಕೆ:

ಬ್ರಾಹ್ಮಣ ಮಹಾಸಭಾ ತೀವ್ರ ಖಂಡನೆ ​ಇತ್ತೀಚೆಗೆ ನಡೆದ ಸಿಇಟಿ (CET) ಪರೀಕ್ಷಾ ಸಮಯದಲ್ಲಿ...

ಕಾರ್ಮಿಕ ದಿನಾಚರಣೆ: ವಾಯ್ಸ್ ಆಫ್ ಸದಾಶಿವನಗರದಿಂದ 170ಪೌರ ಕಾರ್ಮಿಕರಿಗೆ ಸನ್ಮಾನ*

ಬೆಂಗಳೂರು,ಮೇ.1: ವಿಶ್ವ ಕಾರ್ಮಿಕರ ದಿನಾಚರಣೆ (Vishva Karmikara dinacharane)  ಪ್ರಯುಕ್ತ ಸದಾಶಿವನಗರ...

ರಂಗಪ್ರವೇಶ — ಕುಮಾರಿ ಲಕ್ಷ್ಮಿ ಅನನ್ಯ ತಾಟವರ್ತಿ

ಭಾರತೀಯ ಶಾಸ್ತ್ರೀಯ ನೃತ್ಯದ ಲೋಕದಲ್ಲಿ ರಂಗಪ್ರವೇಶ ಎಂದರೆ ಕೇವಲ ಒಂದು ಪ್ರದರ್ಶನವಲ್ಲ—ಅದು ಒಂದು ಘೋಷಣೆ....

Topics

ದೇವನಹಳ್ಳಿ ತಾಲೂಕು ಕಚೇರಿಯಲ್ಲಿ ಆಮೆಗತಿಯ ಮಾಹಿತಿ ಹಕ್ಕು ಪ್ರಕ್ರಿಯೆ:

ದೇವನಹಳ್ಳಿ: ಸರ್ಕಾರದ ಆಡಳಿತದಲ್ಲಿ ಪಾರದರ್ಶಕತೆ ತರಲು ಜಾರಿಗೆ ಬಂದ ಮಾಹಿತಿ ಕ್ಕು...

ಜನಿವಾರ ತೆಗೆಸಿದ ಕೃತ್ಯ ‘ಪೆಹಲ್ಗಾಂ’ ಮಾದರಿಯ ದಬ್ಬಾಳಿಕೆ:

ಬ್ರಾಹ್ಮಣ ಮಹಾಸಭಾ ತೀವ್ರ ಖಂಡನೆ ​ಇತ್ತೀಚೆಗೆ ನಡೆದ ಸಿಇಟಿ (CET) ಪರೀಕ್ಷಾ ಸಮಯದಲ್ಲಿ...

ಕಾರ್ಮಿಕ ದಿನಾಚರಣೆ: ವಾಯ್ಸ್ ಆಫ್ ಸದಾಶಿವನಗರದಿಂದ 170ಪೌರ ಕಾರ್ಮಿಕರಿಗೆ ಸನ್ಮಾನ*

ಬೆಂಗಳೂರು,ಮೇ.1: ವಿಶ್ವ ಕಾರ್ಮಿಕರ ದಿನಾಚರಣೆ (Vishva Karmikara dinacharane)  ಪ್ರಯುಕ್ತ ಸದಾಶಿವನಗರ...

ರಂಗಪ್ರವೇಶ — ಕುಮಾರಿ ಲಕ್ಷ್ಮಿ ಅನನ್ಯ ತಾಟವರ್ತಿ

ಭಾರತೀಯ ಶಾಸ್ತ್ರೀಯ ನೃತ್ಯದ ಲೋಕದಲ್ಲಿ ರಂಗಪ್ರವೇಶ ಎಂದರೆ ಕೇವಲ ಒಂದು ಪ್ರದರ್ಶನವಲ್ಲ—ಅದು ಒಂದು ಘೋಷಣೆ....

“ವಿಶ್ವ ನೃತ್ಯ ದಿನಾಚರಣೆ”

ಆರ್ಟ್ ಕಲ್ಚರಲ್ ಎಜುಕೇಶನಲ್ ಎನ್ಲೈಟ್ ಫೌಂಡೇಶನ್ ಸಂಸ್ಥಾಪಕಿ ಅಂಬಿಕಾ ಸಿ(Ambika .c)...

ಶ್ರೀ ಶ್ರೀನಿವಾಸ ದೇವರಿಗೆ ಮಹಾಭಿಷೇಕ ಪವಮಾನಪುರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ

ಬೆಂಗಳೂರು : ಪವಮಾನಪುರ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ...

ತ್ಯಾಗರಾಜನಗರ ರಾಯರ ಮಠದಲ್ಲಿ ಶ್ರೀ ನರಸಿಂಹ ಜಯಂತಿ

ಬೆಂಗಳೂರು : ತ್ಯಾಗರಾಜನಗರದ 11ನೇ ಅಡ್ಡರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ...

Related Articles