AVL​​GI ಗಿರಿನಗರ ವಿಂಗ್‌ನಿಂದ ಅದ್ಹಾರ್ ಶಾಲೆಗೆ ದಾನ

AVL​​GI (Arya Vysya Ladies Group International) ಎಂಬುದು ಶ್ರೀಮತಿ ಎರಗಂ ವಿ. ಕವಿತಾ ಅವರಿಂದ ಸ್ಥಾಪಿತವಾದ, ಆರ್ಯ ವೈಶ್ಯ ಮಹಿಳೆಯರಿಗಾಗಿ ನಿರ್ಮಿತ ಅಂತರಾಷ್ಟ್ರೀಯ ಮಹಿಳಾ ವೇದಿಕೆ (International Ladies Plaftorm) ಯಾಗಿದೆ. ಈ ಗುಂಪು ದಿನನಿತ್ಯ ಮಹಿಳೆಯರ ಶ್ರೇಯಸ್ಸು, ಜ್ಞಾನ ಹಂಚಿಕೆ, ಸಾಮಾಜಿಕ ಬದ್ಧತೆ ಹಾಗೂ ಸಾಂಸ್ಕೃತಿಕ (Cultural)  ಚಟುವಟಿಕೆಗಳ ಮೂಲಕ ಮಹಿಳಾ ಸಬಲೀಕರಣದತ್ತ ಕೆಲಸ ಮಾಡುತ್ತಿದೆ.

AVL​​GI ಯಲ್ಲಿ ಪ್ರತಿದಿನ ವಿಭಿನ್ನ ವಿಷಯಾಧಾರಿತ ಸಂವಾದಗಳು ಹಾಗೂ ಕಾರ್ಯಕ್ರಮಗಳು ನಡೆಯುತ್ತವೆ —
ಸೋಮವಾರ: ಆರೋಗ್ಯ
ಮಂಗಳವಾರ: ಶಿಕ್ಷಣ
ಬುಧವಾರ: ಮನೋರಂಜನೆ
ಗುರುವಾರ: ಮಾರುಕಟ್ಟೆ ದಿನ
ಶುಕ್ರವಾರ: ಸಂಪ್ರದಾಯಗಳು
ಶನಿವಾರ: ಅಡುಗೆ
ಭಾನುವಾರ: ಸೌಂದರ್ಯ ವಿಷಯಗಳು
ಪ್ರತಿ ತಿಂಗಳು ಒಮ್ಮೆ ಜ್ಯೋತಿಷ್ಯ ದಿನ (Horoscope Day) ಹಾಗೂ ವಿವಿಧ ಹಬ್ಬಗಳಲ್ಲಿ ವಿಶೇಷ ಸ್ಪರ್ಧೆಗಳನ್ನೂ ಆಯೋಜಿಸಲಾಗುತ್ತದೆ. ತಜ್ಞರಿಂದ ನೇರ LIVE ಸೆಷನ್‌ಗಳ ಮೂಲಕ ಸದಸ್ಯರಿಗೆ ನೈಜ ಜೀವನದ ಅರಿವು ಮತ್ತು ಪ್ರೇರಣೆಯನ್ನು ನೀಡಲಾಗುತ್ತದೆ.

ಇದೀಗ AVL​​GI ಗಿರಿನಗರ ವಿಂಗ್ “See Through The Heart – Support Adhaar” ಯೋಜನೆ ಮೂಡಿ ₹31,000 ಸಂಗ್ರಹಿಸಿ, ಅದ್ಹಾರ್ ವಿಶೇಷ ಶಾಲೆಗೆ ಫೋಲ್ಡಬಲ್ ಸಿಂಗಲ್ ಕಾಟ್, ಕುರ್ಚಿಗಳು, ಮೇಜುಗಳು, ಗೋದ್ರೆಜ್ ಬೀರು ಮತ್ತು ಓಪನ್ ಸ್ಟೀಲ್ racks ಸೇರಿದಂತೆ ಅಗತ್ಯ ವಸ್ತುಗಳನ್ನು ದಾನವಾಗಿ ನೀಡಿದೆ.

ಅದ್ಹಾರ್ ಶಾಲೆ ದೃಷ್ಟಿಹೀನ ಮಹಿಳೆ ಅಮೃತವಳ್ಳಿ ಅವರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ವಿಶೇಷ ಅಗತ್ಯಗಳಿರುವ ಮಕ್ಕಳಿಗೆ ಶಿಕ್ಷಣ, ಪ್ರೇರಣೆ ಹಾಗೂ ಜೀವನದ ಹಾದಿ ತೋರಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ.

AVL​​GI ಗಿರಿನಗರ ವಿಂಗ್ ಅಧ್ಯಕ್ಷೆ ಸಿತಾರಾ ಅಭಿಲಾಶ್ ಹಾಗೂ ಅವರ ತಂಡದ ಸದಸ್ಯರ ಸಾಮಾಜಿಕ ಬದ್ಧತೆ ಮತ್ತು ಸೇವಾ ಮನೋಭಾವಕ್ಕೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.

AVL​​GI ನ ಸ್ಥಾಪಕಿ ಹಾಗೂ ಅಂತಾರಾಷ್ಟ್ರೀಯ ಅಧ್ಯಕ್ಷೆ ಶ್ರೀಮತಿ ಕವಿತಾ ಎರಗಂ ಅವರಿಗೆ ಈ ಅರ್ಥಪೂರ್ಣ ಸೇವಾ ವೇದಿಕೆಯನ್ನು ನೀಡಿದಕ್ಕಾಗಿ ಹೃತ್ಪೂರ್ವಕ ಕೃತಜ್ಞತೆಗಳು.

Hot this week

ದೇವನಹಳ್ಳಿ ತಾಲೂಕು ಕಚೇರಿಯಲ್ಲಿ ಆಮೆಗತಿಯ ಮಾಹಿತಿ ಹಕ್ಕು ಪ್ರಕ್ರಿಯೆ:

ದೇವನಹಳ್ಳಿ: ಸರ್ಕಾರದ ಆಡಳಿತದಲ್ಲಿ ಪಾರದರ್ಶಕತೆ ತರಲು ಜಾರಿಗೆ ಬಂದ ಮಾಹಿತಿ ಕ್ಕು...

ಜನಿವಾರ ತೆಗೆಸಿದ ಕೃತ್ಯ ‘ಪೆಹಲ್ಗಾಂ’ ಮಾದರಿಯ ದಬ್ಬಾಳಿಕೆ:

ಬ್ರಾಹ್ಮಣ ಮಹಾಸಭಾ ತೀವ್ರ ಖಂಡನೆ ​ಇತ್ತೀಚೆಗೆ ನಡೆದ ಸಿಇಟಿ (CET) ಪರೀಕ್ಷಾ ಸಮಯದಲ್ಲಿ...

ಕಾರ್ಮಿಕ ದಿನಾಚರಣೆ: ವಾಯ್ಸ್ ಆಫ್ ಸದಾಶಿವನಗರದಿಂದ 170ಪೌರ ಕಾರ್ಮಿಕರಿಗೆ ಸನ್ಮಾನ*

ಬೆಂಗಳೂರು,ಮೇ.1: ವಿಶ್ವ ಕಾರ್ಮಿಕರ ದಿನಾಚರಣೆ (Vishva Karmikara dinacharane)  ಪ್ರಯುಕ್ತ ಸದಾಶಿವನಗರ...

ರಂಗಪ್ರವೇಶ — ಕುಮಾರಿ ಲಕ್ಷ್ಮಿ ಅನನ್ಯ ತಾಟವರ್ತಿ

ಭಾರತೀಯ ಶಾಸ್ತ್ರೀಯ ನೃತ್ಯದ ಲೋಕದಲ್ಲಿ ರಂಗಪ್ರವೇಶ ಎಂದರೆ ಕೇವಲ ಒಂದು ಪ್ರದರ್ಶನವಲ್ಲ—ಅದು ಒಂದು ಘೋಷಣೆ....

Topics

ದೇವನಹಳ್ಳಿ ತಾಲೂಕು ಕಚೇರಿಯಲ್ಲಿ ಆಮೆಗತಿಯ ಮಾಹಿತಿ ಹಕ್ಕು ಪ್ರಕ್ರಿಯೆ:

ದೇವನಹಳ್ಳಿ: ಸರ್ಕಾರದ ಆಡಳಿತದಲ್ಲಿ ಪಾರದರ್ಶಕತೆ ತರಲು ಜಾರಿಗೆ ಬಂದ ಮಾಹಿತಿ ಕ್ಕು...

ಜನಿವಾರ ತೆಗೆಸಿದ ಕೃತ್ಯ ‘ಪೆಹಲ್ಗಾಂ’ ಮಾದರಿಯ ದಬ್ಬಾಳಿಕೆ:

ಬ್ರಾಹ್ಮಣ ಮಹಾಸಭಾ ತೀವ್ರ ಖಂಡನೆ ​ಇತ್ತೀಚೆಗೆ ನಡೆದ ಸಿಇಟಿ (CET) ಪರೀಕ್ಷಾ ಸಮಯದಲ್ಲಿ...

ಕಾರ್ಮಿಕ ದಿನಾಚರಣೆ: ವಾಯ್ಸ್ ಆಫ್ ಸದಾಶಿವನಗರದಿಂದ 170ಪೌರ ಕಾರ್ಮಿಕರಿಗೆ ಸನ್ಮಾನ*

ಬೆಂಗಳೂರು,ಮೇ.1: ವಿಶ್ವ ಕಾರ್ಮಿಕರ ದಿನಾಚರಣೆ (Vishva Karmikara dinacharane)  ಪ್ರಯುಕ್ತ ಸದಾಶಿವನಗರ...

ರಂಗಪ್ರವೇಶ — ಕುಮಾರಿ ಲಕ್ಷ್ಮಿ ಅನನ್ಯ ತಾಟವರ್ತಿ

ಭಾರತೀಯ ಶಾಸ್ತ್ರೀಯ ನೃತ್ಯದ ಲೋಕದಲ್ಲಿ ರಂಗಪ್ರವೇಶ ಎಂದರೆ ಕೇವಲ ಒಂದು ಪ್ರದರ್ಶನವಲ್ಲ—ಅದು ಒಂದು ಘೋಷಣೆ....

“ವಿಶ್ವ ನೃತ್ಯ ದಿನಾಚರಣೆ”

ಆರ್ಟ್ ಕಲ್ಚರಲ್ ಎಜುಕೇಶನಲ್ ಎನ್ಲೈಟ್ ಫೌಂಡೇಶನ್ ಸಂಸ್ಥಾಪಕಿ ಅಂಬಿಕಾ ಸಿ(Ambika .c)...

ಶ್ರೀ ಶ್ರೀನಿವಾಸ ದೇವರಿಗೆ ಮಹಾಭಿಷೇಕ ಪವಮಾನಪುರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ

ಬೆಂಗಳೂರು : ಪವಮಾನಪುರ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ...

ತ್ಯಾಗರಾಜನಗರ ರಾಯರ ಮಠದಲ್ಲಿ ಶ್ರೀ ನರಸಿಂಹ ಜಯಂತಿ

ಬೆಂಗಳೂರು : ತ್ಯಾಗರಾಜನಗರದ 11ನೇ ಅಡ್ಡರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ...

Related Articles