ಲಯತರಂಗ ಸಂಗಿತ ಸ್ಪರ್ಧೆಯಲ್ಲಿ 16 ಮಕ್ಕಳು ವಿನ್,3 ಶಾಲೆಗಳಿಗೆ ಅತ್ಯುತ್ತಮ ಪ್ರಶಸ್ತಿ

ಬೆಂಗಳೂರು: ಮಕ್ಕಳು ಸಂಗೀತದಲ್ಲಿ ಹೆಚ್ಚು ಆಸಕ್ತಿಯನ್ನು ಚಿಕಗಕವರಾಗಿದ್ದಾಗಲೆ ಬೆಳೆಸಿಕೊಂಡರೆ ಎಲ್ಲಾ ಕ್ಷೇತ್ರದಲ್ಲಿ ಹೆಚ್ಚು ಸಾಧನೆ ಮಾಡಲು ಸಹಕಾರಿಯಾಗುತ್ತದೆ ಎಂದು ವಿದ್ವಾನ್ ಅನಂತ ಭಾಗವತಾರ್ ತಿಳಿಸಿದರು.
 ರೋಟರಿ ಬೆಂಗಳೂರು ಕಬ್ಬನ್ ಪಾರ್ಕ್ 3191 ಸಮಾಜಸೇವ ಸಂಸ್ಥೆ 2025ನೇ ಸಾಲಿನ ಲಾಯಾ ತರಂಗ ಸಂಗಿತ ಹಬ್ಬ ಆಚರಣೆಯ ಸಮರೋಪ ಸಮಾರಂಭದಲ್ಲಿ  ನಡೆದ ಕರ್ನಾಟಿಕ್ -ಹಿಂದುಸ್ಥಾನಿ, ಜಾನಪದ ಗೀತೆ, ಗುಂಪು ಗೀತೆಗಳು, ಭಾವಗೀತೆ,ಚಿತ್ರಗೀತೆಗಳ ಸ್ಪರ್ಧೆಗಳ್ಳಲ್ಲಿ ಅತ್ಯುತ್ತಮವಾಗಿ
ಪ್ರದರ್ಶನ ನೀಡಿ 15 ಸ್ಪರ್ಧಾಳು ಗೆದ್ದವರಿಗೆ ಬಹುಮಾನ ನೀಡಿ ಮಾತನಾಡಿದರು. ಮಕ್ಕಳಿಗೆ ಕಲಿಕೆಯ ಬಗ್ಗೆ ಆಸಕ್ತಿ ಬರಬೇಕು ಆಗ ಮಾತ್ರ ಏನನ್ನು ಬೇಕಾದರೂ ಸಾದನೆ ಮಾಡಲು ಸಾಧ್ಯ ಎಂದರು.ಅಂತ ಕೆಲಸವನ್ನು ಇಲ್ಲಿತುವ ಮಕ್ಕಳು ಮುಂದೆ ಮಾಡುತ್ತಾರೆ. ಅವೆಲ್ಲಾ ಗುಣಗಳು ಇವೆ ಎಂದರು.
ಇನ್ನು ಸಂಗೀತ ಸ್ಫರ್ಧೆಯಲ್ಲಿ  ಪ್ರತಿ ವಿಭಾಗದ ಸ್ಪರ್ಧೆಯಲ್ಲಿ 3 ಬಹುಮಾನ ಪಡೆದರೆ, ಜೆಎಸ್ಎಸ್  ಅತ್ಯುತ್ತಮ ಶಾಲೆಯಾಗಿ  ಮೊದಲನೆ ಬಹುಮಾನ ಪಡೆದರೆ, ಪ್ರಾರ್ಥನ ಶಾಲೆಗೆ 2ನೇ ಬಹುಮಾನ, ಕಾರ್ಮೆಲ್ ಶಾಲೆ 3ನೇ ಬಹುಮಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಇದೇ ವೇಳೆ ಗೆದ್ದಿರುವ ಮಕ್ಕಳಿಗೆ ಸಂಸ್ಥೆಯಿಂದ ಗಿಫ್ಟ್ ವೋಚರ್ ಸಹಾ ನೀಡಲಾಯಿತು.
ರೋ.ಬೆಂ.ಕ.ಪಾ 3191ರ  ಲಾಯಾ ತರಂಗ   ಕಾರ್ಯಕ್ರಮದ ಅಧ್ಯಕ್ಷರಾದ ರವಿ  ಚಕ್ರವರ್ತಿಯವರು   ಲಾಯಾ ತರಂಗ 2025 ಸಂಗಿತ ಹಬ್ಬ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಸಂಗೀತ ಬಹಳ ಅವಶ್ಯಕವಾಗಿ ಬೇಕಾಗುತ್ತದೆ,  ಸಂಗೀತ ಒದೊಂದು ರೀತಿಯಲ್ಲಿ ಪ್ಯಾಷನ್ ಆಗಿದೆ. ನಮ್ಮ ತಾಯಿಯೂ ಸಹಾ ಸಂಗೀತ ಕಲಾವಿದೆ. ಸಂಗೀತದಲ್ಲಿ ಎಲ್ಲವನ್ನು ಕರಗತ ಮಾಡಿಕೊಂಡು ಸಂಗಿತ ಕಲಿಯಬೇಕು. ಅನೇಕ ಮಕ್ಕಳು ಸ್ಪರ್ಧೆಗೆ ಬಂದಿದ್ದಾರೆ. ಕಲಿಯಲು ಇದೊಂದು ಮಕ್ಕಳಿಗೆ ಸದಾವಕಾಶವಾಗಿದೆ. ಪಠ್ಯದ ಜೊತೆ ಪಠ್ಯತೇತರ ಚಟುವಟಿಕೆಯಲ್ಲಿ ಭಾಗವಹಿಸುವುದು ಮುಖ್ಯ. ಹೀಗಾಗಿ ಅವರಿಗೆ ಆರೋಗ್ಯ,ಜ್ಞಾನ,ಕ್ರಿಯಾಶೀಲತೆ,ಚುರುಕು,ಬುದ್ದಿವಂತಿಕೆ ಹೆಚ್ಚಾಗುತ್ತದೆ. ಸಂಗೀತ ಒಂದು ರೀತಿಯಲ್ಲಿ ಥೆರಪಿ ಇದ್ದಹಾಗೆ, ಎತ್ತರದ ಮಟ್ಟಕ್ಕೆ ಬೆಳೆಯಲು ಸಹಕಾರಿಯಾಗುತ್ತದೆ. ಮಕ್ಕಳು ಚಿಕ್ಕವರಾಗಿದ್ದಾಗಲೇ ಸಂಗೀತ ಕಲಿತರೆ ಒಳ್ಳೆಯದು ಎಂದರು.
ರೋಟರಿ 3191ನ ಕಾರ್ಯಕ್ರಮದ ಉಸ್ತುವಾರಿ, ಸಲಹೆಗಾರ ಅಧ್ಯಕ್ಷ ಹರಿ ಪಬ್ಬತಿ ಮಾತನಾಡಿ, ಸಂಗಿತದಲ್ಲಿ ಯುವ ಟ್ಯಾಲೆಂಟ್ ಗಳನ್ನು ನೋಡಲು ಸಂಗೀತ ಸ್ಪರ್ಧೆ ಮಾಡಿಕೊಂಡು ಬರಲಾಗುತ್ತದೆ., ಲಯತರಂಗದಂತಹ ಕಾರ್ಯಕ್ರಮಗಳು ಇಂದಿನ ಮಕ್ಕಳಿಗೆ ಬೇಕಾಗಿದೆ. ಮಕ್ಕಳು ಹಾಡುವುದನ್ನು ಕೇಳಲು ಹಿತವಾಗಿರುತ್ತದೆ. ಒಬ್ಬಬ್ಬ ಮಕ್ಕಳು ಸಹಾ ಅಚ್ಚುಕಟ್ಟಾಗಿ ಗುರುಗಳತ್ತಿರ ಸಂಗೀತ ಕಲಿತುಕೊಂಡು ವೇದಿಕೆ ಮೇಲೆ ಪ್ರದರ್ಶನ ನೀಡಿದರು.
ಕಾರ್ಯಕ್ರಮದ ನಿರ್ದೇಶಕ ಸುಧಾಕರ್ ಮಧ್ಯಸ್ಥ ಮಾತನಾಡಿ, ಸಂಗೀತ ಸ್ಪರ್ಧೆಗೆ ಬೆಂಗಳೂರು ದಕ್ಷಿಣ ವಿಧಾನಸಭಾದಲ್ಲಿರುವ 15 ಶಾಲೆಗಳಿಂದ 120 ಮಕ್ಕಳು ಭಾಗವಹಿಸಿದ್ಸರು. ಅದರಲ್ಲಿ  ಅಂತಿಮವಾಗಿ 16 ಜನ ಆಯ್ಕೆಯಾಗಿ ಗೆದಿದ್ದಾರೆ. ವೇದಿಕೆ ಮೇಲೆ ಸಂಗೀತ ಸರಸ್ವತಿ ನೆಲೆಸಿದ್ದಾಳೆ ಎಂಬಂತೆ ಭಾಸವಾಯಿತು. ಚಿಕ್ಕವರಾಗಿದ್ದಾಗಲೇ ಸಂಗೀತ ಆಭ್ಯಾಸ ಮಾಡಿಸಬೇಕು. ಅದರಿಂದ ಜ್ಞಾನ,ಕೊಡುತ್ತದೆ.ಸಂಗೀತ ಎಂದರೆ ಒಂದು ರೀತಿ ಲವ್ ತರ.  16 ವರ್ಷಗಳಿಂದ ಸಂಗೀತ ಸ್ಪರ್ಧೆ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ಮುಂದೆ ವಿಶೇಷವಾಗಿ ಆಚರಣೆ ಮಾಡಲಾಗುತ್ತದೆ.ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಸಮನಾಂತರ ಪ್ರಶಸ್ತಿ ಪತ್ರ ನೀಡಲಾಯಿತು.
ಇನ್ಮು ಸಂಗೀತ ಸ್ಪರ್ಧೆಗೆ ತೀರ್ಪುಗಾರರಾಗಿ ಖ್ಯಾತ ಸಂಗೀತ ಕಲಾವಿದರಾದ ಗಾಯತ್ರಿ, ಪರಮೇಶ್ವರ ಹೆಗ್ಡೆ ಭಟ್ಕಳ, ರಾಹುಲ್ ಕೆ ರವೀಂದ್ರನ್ ಭಗವಹಿಸಿದ್ಸರು.
ಕಾರ್ಯಕ್ರಮದಲ್ಲಿ ರೋಟರಿ ಬೆಂಗಳೂರು ಕಬ್ಬನ್ ಪಾರ್ಕ್ 3191ರ ಅಧ್ತಕ್ಷರಾದ ಸಂಗೀತ ಅಯ್ಯರ್ ಗೌಡ, ಕಾರ್ಯದರ್ಶಿ ರೇಖ, ರೋಟರಿಯ ಮಾಜಿ ರಾಜ್ಯಪಾಲ  ಉದಯ್ ಸೇರಿದಂತೆ ಮಕ್ಕಳ ಪೋಷಕರು,ಸಂಗೀತ ಕಲಾವಿದರು ರೊಟೇರಿಯನ್ಸ್ ಭಾಗವಹಿಸಿದ್ದರು.

Hot this week

ದೇವನಹಳ್ಳಿ ತಾಲೂಕು ಕಚೇರಿಯಲ್ಲಿ ಆಮೆಗತಿಯ ಮಾಹಿತಿ ಹಕ್ಕು ಪ್ರಕ್ರಿಯೆ:

ದೇವನಹಳ್ಳಿ: ಸರ್ಕಾರದ ಆಡಳಿತದಲ್ಲಿ ಪಾರದರ್ಶಕತೆ ತರಲು ಜಾರಿಗೆ ಬಂದ ಮಾಹಿತಿ ಕ್ಕು...

ಜನಿವಾರ ತೆಗೆಸಿದ ಕೃತ್ಯ ‘ಪೆಹಲ್ಗಾಂ’ ಮಾದರಿಯ ದಬ್ಬಾಳಿಕೆ:

ಬ್ರಾಹ್ಮಣ ಮಹಾಸಭಾ ತೀವ್ರ ಖಂಡನೆ ​ಇತ್ತೀಚೆಗೆ ನಡೆದ ಸಿಇಟಿ (CET) ಪರೀಕ್ಷಾ ಸಮಯದಲ್ಲಿ...

ಕಾರ್ಮಿಕ ದಿನಾಚರಣೆ: ವಾಯ್ಸ್ ಆಫ್ ಸದಾಶಿವನಗರದಿಂದ 170ಪೌರ ಕಾರ್ಮಿಕರಿಗೆ ಸನ್ಮಾನ*

ಬೆಂಗಳೂರು,ಮೇ.1: ವಿಶ್ವ ಕಾರ್ಮಿಕರ ದಿನಾಚರಣೆ (Vishva Karmikara dinacharane)  ಪ್ರಯುಕ್ತ ಸದಾಶಿವನಗರ...

ರಂಗಪ್ರವೇಶ — ಕುಮಾರಿ ಲಕ್ಷ್ಮಿ ಅನನ್ಯ ತಾಟವರ್ತಿ

ಭಾರತೀಯ ಶಾಸ್ತ್ರೀಯ ನೃತ್ಯದ ಲೋಕದಲ್ಲಿ ರಂಗಪ್ರವೇಶ ಎಂದರೆ ಕೇವಲ ಒಂದು ಪ್ರದರ್ಶನವಲ್ಲ—ಅದು ಒಂದು ಘೋಷಣೆ....

Topics

ದೇವನಹಳ್ಳಿ ತಾಲೂಕು ಕಚೇರಿಯಲ್ಲಿ ಆಮೆಗತಿಯ ಮಾಹಿತಿ ಹಕ್ಕು ಪ್ರಕ್ರಿಯೆ:

ದೇವನಹಳ್ಳಿ: ಸರ್ಕಾರದ ಆಡಳಿತದಲ್ಲಿ ಪಾರದರ್ಶಕತೆ ತರಲು ಜಾರಿಗೆ ಬಂದ ಮಾಹಿತಿ ಕ್ಕು...

ಜನಿವಾರ ತೆಗೆಸಿದ ಕೃತ್ಯ ‘ಪೆಹಲ್ಗಾಂ’ ಮಾದರಿಯ ದಬ್ಬಾಳಿಕೆ:

ಬ್ರಾಹ್ಮಣ ಮಹಾಸಭಾ ತೀವ್ರ ಖಂಡನೆ ​ಇತ್ತೀಚೆಗೆ ನಡೆದ ಸಿಇಟಿ (CET) ಪರೀಕ್ಷಾ ಸಮಯದಲ್ಲಿ...

ಕಾರ್ಮಿಕ ದಿನಾಚರಣೆ: ವಾಯ್ಸ್ ಆಫ್ ಸದಾಶಿವನಗರದಿಂದ 170ಪೌರ ಕಾರ್ಮಿಕರಿಗೆ ಸನ್ಮಾನ*

ಬೆಂಗಳೂರು,ಮೇ.1: ವಿಶ್ವ ಕಾರ್ಮಿಕರ ದಿನಾಚರಣೆ (Vishva Karmikara dinacharane)  ಪ್ರಯುಕ್ತ ಸದಾಶಿವನಗರ...

ರಂಗಪ್ರವೇಶ — ಕುಮಾರಿ ಲಕ್ಷ್ಮಿ ಅನನ್ಯ ತಾಟವರ್ತಿ

ಭಾರತೀಯ ಶಾಸ್ತ್ರೀಯ ನೃತ್ಯದ ಲೋಕದಲ್ಲಿ ರಂಗಪ್ರವೇಶ ಎಂದರೆ ಕೇವಲ ಒಂದು ಪ್ರದರ್ಶನವಲ್ಲ—ಅದು ಒಂದು ಘೋಷಣೆ....

“ವಿಶ್ವ ನೃತ್ಯ ದಿನಾಚರಣೆ”

ಆರ್ಟ್ ಕಲ್ಚರಲ್ ಎಜುಕೇಶನಲ್ ಎನ್ಲೈಟ್ ಫೌಂಡೇಶನ್ ಸಂಸ್ಥಾಪಕಿ ಅಂಬಿಕಾ ಸಿ(Ambika .c)...

ಶ್ರೀ ಶ್ರೀನಿವಾಸ ದೇವರಿಗೆ ಮಹಾಭಿಷೇಕ ಪವಮಾನಪುರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ

ಬೆಂಗಳೂರು : ಪವಮಾನಪುರ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ...

ತ್ಯಾಗರಾಜನಗರ ರಾಯರ ಮಠದಲ್ಲಿ ಶ್ರೀ ನರಸಿಂಹ ಜಯಂತಿ

ಬೆಂಗಳೂರು : ತ್ಯಾಗರಾಜನಗರದ 11ನೇ ಅಡ್ಡರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ...

Related Articles