ಪುರಿ ಜಗನ್ನಾಥನ ವಿಗ್ರಹದ ರೋಚಕ ಸಂಗತಿ. ನಿಮಗೆ ತಿಳಿದಿದೆಯೇ?

ಒಮ್ಮೆ ಪುರಿಯಲ್ಲಿ ಆಳ್ವಿಕೆ ನಡೆಸುತ್ತಿದ್ದ ಇಂದ್ರದ್ಯುಮ್ನ ಎಂಬ ರಾಜನು

ನೀರಿನಲ್ಲಿ ತೇಲಿಬಂದ ಅಂಜೂರ ಹಣ್ಣಿನ ಮರದ ದಿಮ್ಮಿಯನ್ನು ನೋಡುತ್ತಾನೆ.

ಆದೇ ದಿನ ರಾತ್ರಿ ಸ್ವತಃ ಶ್ರೀ_ವಿಷ್ಣುವೇ ಅವನ ಕನಸಿನಲ್ಲಿ ಬಂದು *ಆ ಮರದಲ್ಲಿ ತನ್ನ ವಿಗ್ರಹವನ್ನು ಮಾಡಿ ಪ್ರತಿಸ್ಥಾಪಿಸು* ವಂತೆ ಆದೇಶಿಸುತ್ತಾನೆ.

ಅಜ್ಞಾನುಸಾರ ರಾಜ ಆ ಸಮಯದಲ್ಲಿ ಇದ್ದಂತಹ ಪ್ರಖ್ಯಾತ ಶಿಲ್ಪಿಗಳನ್ನು ಕರೆಸುತ್ತಾನೆ.
ಆದರೆ ಅಂಜೂರದ ಮರದಿಂದ ವಿಗ್ರಹವನ್ನು ನಿರ್ಮಿಸಲು ಸಾಧ್ಯವಿಲ್ಲ
ಇದು ನಮ್ಮಿಂದಾಗದ ಕೆಲಸ ಎಂದು ಬಂದಂತಹ ಶಿಲ್ಪಿಗಳು ಹೇಳುತ್ತಾರೆ.

ಚಿಂತಾಕ್ರಾಂತನಾದ ಇಂದ್ರದ್ಯುಮ್ನನ ಎದುರು ವಿಷ್ಣುವಿನ ಕೋರಿಕೆಯಂತೆ ಓರ್ವ ವೃದ್ಧನ ವೇಷದಲ್ಲಿ ಬಂದ ದೇವಶಿಲ್ಪಿ
ಶ್ರೀ ವಿರಾಟ್ ವಿಶ್ವಕರ್ಮ,
ಕೆಲವು ಷರತ್ತುಗಳನ್ನು ಮುಂದಿಟ್ಟು ವಿಗ್ರಹ ನಿರ್ಮಿಸಿಕೊಡುವುದಾಗಿ ಹೇಳುತ್ತಾನೆ.

ಷರತ್ತುಗಳು:

*ಹೇಳಿದ ಅವಧಿಯೊಳಗೆ ನಿರ್ಮಾಣ ಕಾರ್ಯ ಮುಗಿಸಿ ತಾನೇ ಹೊರ ಬರುವವರೆಗೂ ದೇವಸ್ಥಾನದ ಬಾಗಿಲು ಮುಚ್ಚಿರಬೇಕು.*

*ಹೇಳಿದ ಅವಧಿ ಮುಗಿಯುವುದರೊಳಗೆ ಯಾರೂ ಸಹ ತಾವಿರುವ ದೇವಸ್ಥಾನದ ಬಾಗಿಲನ್ನು ತೆರೆಯಕೂಡದು.*

*ಒಂದೊಮ್ಮೆ ಬಾಗಿಲನ್ನು ತೆರೆಯುವ ಕಾರ್ಯಕ್ಕೆ ಯಾರಾದರೂ ಪ್ರಯತ್ನ ಪಟ್ಟರೆ ನಿರ್ಮಾಣ ಕಾರ್ಯ ನಿಲ್ಲಿಸಲಾಗುವುದು.*

ಷರತ್ತುಗಳಿಗೆ ಒಪ್ಪಿದ ರಾಜ.

ದೇವಳದ ಬಾಗಿಲನ್ನು ಮುಚ್ಚಿ ವಿಗ್ರಹ ನಿರ್ಮಾಣ ಕಾರ್ಯಕ್ಕೆ ಅನುವು ಮಾಡಿಕೊಡಲಾಯಿತು…

ದಿನಗಳು ಉರುಳಿದವು,
ಇಂದ್ರದ್ಯುಮ್ನ ಮತ್ತು ಅವನ ರಾಣಿಗೆ
*ದೇವಸ್ಥಾನದ ಬಳಿ ಯಾವುದೇ ಶಬ್ದ ಕೇಳಿ ಬರುತ್ತಿಲ್ಲ* ಎನ್ನುವ ಕಳವಳ ಪ್ರಾರಂಭವಾಯಿತು.

ಪ್ರಸಿದ್ಧ ಶಿಲ್ಪಿಗಳೆಲ್ಲರೂ ತಮ್ಮಿಂದಾಗದ ಕೆಲಸ ಎಂದು ಕೈ ಚೆಲ್ಲಿದಾಗ,
ಓರ್ವ ವೃದ್ಧ ತಾವಾಗಿಯೇ ಬಂದು ಅಂಜೂರದ ಹಣ್ಣಿನ ಮರದಲ್ಲಿ ವಿಗ್ರಹ ನಿರ್ಮಿಸುವುದಾಗಿ ಹೇಳಿ ಒಳಗೆ ಹೋಗಿದ್ದಾರೆಂದರೆ
ಅವರು ಸಾಮಾನ್ಯ ವ್ಯಕ್ತಿಯಂತೂ ಆಗಿರಲು ಸಾಧ್ಯವಿಲ್ಲ ಎನ್ನುವ ಕೂತುಹಲ ಒಂದು ಕಡೆಯಾದರೆ,
ನಿರ್ಮಾಣಕ್ಕೆ ಯೋಗ್ಯವಲ್ಲದ ಮರದಿಂದ ಸುಂದರವಾದ ವಿಗ್ರಹವನ್ನು ಹೇಗೆ ನಿರ್ಮಿಸುತ್ತಿರಬಹುದು ಎನ್ನುವ ಕೂತುಹಲ ಇನ್ನೊಂದು ಕಡೆ…

ಅವಧಿಗೂ ಮುನ್ನ
ಒಂದು ದಿನ ರಾಣಿಯ ತಡೆಯಲಾಗದ ಕೂತುಹಲಮತ್ತು ನಿರೀಕ್ಷೆಗಳಿಂದ ದೇವಸ್ಥಾನದ ಬಾಗಿಲನ್ನು ತೆರೆದೇ ಬಿಡುತ್ತಾಳೆ.
ಅಪೂರ್ಣ ವಿಗ್ರಹದ ಎದುರೇ ನಿಂತಿದ್ದ ವೃದ್ಧ ವೇಷದಲ್ಲಿದ್ದ ದೇವಶಿಲ್ಪಿಯು ಕ್ಷಣ ಮಾತ್ರದಲ್ಲಿ ಮಾಯವಾಗಿ ಬಿಡುತ್ತಾನೆ…!!!.

ರಾಣಿಯ ಈ ನಡೆಯಿಂದ ವಿಚಲಿತನಾದ
ರಾಜಾ ಇಂದ್ರದ್ಯುಮ್ನ ಮತ್ತೊಮ್ಮೆ ವಿಷ್ಣುವಿನ ಮೊರೆ ಹೋಗುತ್ತಾನೆ…

ಆ ದಿನ ರಾತ್ರಿ, ರಾಜನ ಕನಸಿನಲ್ಲಿ ಬಂದ ವಿಷ್ಣು,
*ಇದು ನನ್ನ ವಿರಾಟ್ ರೂಪ ಈಗ ಇರುವಂತೆಯೇ ವಿಗ್ರಹವನ್ನು ಪ್ರತಿಷ್ಠಾಪಿಸು* ಎಂದು ಹೇಳುತ್ತಾನೆ…!!!.

ರಾಜ ಶ್ರಿ ವಿಷ್ಣುವಿನ ಅಣತಿಯಂತೆಯೇ ವಿಗ್ರಹವನ್ನು ಪುರಿಯಲ್ಲಿ ಪ್ರತಿಷ್ಠಾಪಿಸುತ್ತಾನೆ.

ಆ ವಿಗ್ರಹದ ರೂಪವೇ ನಾವಿಂದು ನೋಡುತ್ತಿರುವ *ಪುರಿ ಜಗನ್ನಾಥ.*

_*ಓಂ ನಮೋ ಭಗವತೇ ಜಗನ್ನಾಥಾಯ.*_
🙏🙏

Hot this week

ಹಾಸನ ಮಹಾರಾಜ ಪಾರ್ಕಿನಲ್ಲಿ ಪ್ರೇಕ್ಷಕರನ್ನು ರಂಜಿಸಿದ ಗಾಯನೋತ್ಸವ

ಹಾಸನ: ನಗರದ ಮಹಾರಾಜ ಪಾರ್ಕಿನಲ್ಲಿ (Hassan - Maharaj Park) ಭಾನುವಾರ...

ಸ್ವಾನಂದಾಶ್ರಮದಲ್ಲಿ ಶ್ರೀ ಏಕಾಕ್ಷರ ಮಹಾಗಣಪತಿ ಪ್ರತಿಷ್ಠಾಪನಾ ಮಹೋತ್ಸವ

ಬೆಂಗಳೂರು ನಗರದ ದಕ್ಷಿಣ ಅಂಚಿನ ಕನಕಪುರ ರಸ್ತೆಯ (Agara) ಅಗರ(K–ತಾತಗುಣಿಯಲ್ಲಿ ನೆಲೆಗೊಂಡಿರುವ...

ಪ್ರೊ. ಕೆ.ಟಿ. ಪಾಂಡುರಂಗಿ ಹಾಗೂ ಪಂಡಿತ ಗುರುರಾಜಾಚಾರ್ಯ ಪಾಂಡುರಂಗಿ ಅವರ ಶತಮಾನೋತ್ಸವ ಸಂಭ್ರಮ

ಬೆಂಗಳೂರಿನಲ್ಲಿ ಎರಡು ದಿನಗಳ ವೈಭವದ ಜ್ಞಾನ-ಭಕ್ತಿ ಮಹೋತ್ಸವ ಭಾರತೀಯ ತತ್ತ್ವಶಾಸ್ತ್ರ, ದ್ವೈತ ವೇದಾಂತ...

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿಜಯ ನಿವೃತ್ತ ಶಿಕ್ಷಕರ ಸಂಘದ ವತಿಯಿಂದ ಸನ್ಮಾನ

ಬೆಂಗಳೂರು: ಪ್ರತಿಭೆ, ಪರಿಶ್ರಮ ಹಾಗೂ ಶೈಕ್ಷಣಿಕ ಸಾಧನೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ವಿಜಯ...

ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಬಿಜೆಪಿ ವತಿಯಿಂದ ಸ್ವಚ್ಛತಾ ಕಾರ್ಯ

ಬೆಂಗಳೂರು: ನಗರದ ಮೈಸೂರು ಬ್ಯಾಂಕ್ ವೃತ್ತದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ...

Topics

ಹಾಸನ ಮಹಾರಾಜ ಪಾರ್ಕಿನಲ್ಲಿ ಪ್ರೇಕ್ಷಕರನ್ನು ರಂಜಿಸಿದ ಗಾಯನೋತ್ಸವ

ಹಾಸನ: ನಗರದ ಮಹಾರಾಜ ಪಾರ್ಕಿನಲ್ಲಿ (Hassan - Maharaj Park) ಭಾನುವಾರ...

ಸ್ವಾನಂದಾಶ್ರಮದಲ್ಲಿ ಶ್ರೀ ಏಕಾಕ್ಷರ ಮಹಾಗಣಪತಿ ಪ್ರತಿಷ್ಠಾಪನಾ ಮಹೋತ್ಸವ

ಬೆಂಗಳೂರು ನಗರದ ದಕ್ಷಿಣ ಅಂಚಿನ ಕನಕಪುರ ರಸ್ತೆಯ (Agara) ಅಗರ(K–ತಾತಗುಣಿಯಲ್ಲಿ ನೆಲೆಗೊಂಡಿರುವ...

ಪ್ರೊ. ಕೆ.ಟಿ. ಪಾಂಡುರಂಗಿ ಹಾಗೂ ಪಂಡಿತ ಗುರುರಾಜಾಚಾರ್ಯ ಪಾಂಡುರಂಗಿ ಅವರ ಶತಮಾನೋತ್ಸವ ಸಂಭ್ರಮ

ಬೆಂಗಳೂರಿನಲ್ಲಿ ಎರಡು ದಿನಗಳ ವೈಭವದ ಜ್ಞಾನ-ಭಕ್ತಿ ಮಹೋತ್ಸವ ಭಾರತೀಯ ತತ್ತ್ವಶಾಸ್ತ್ರ, ದ್ವೈತ ವೇದಾಂತ...

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿಜಯ ನಿವೃತ್ತ ಶಿಕ್ಷಕರ ಸಂಘದ ವತಿಯಿಂದ ಸನ್ಮಾನ

ಬೆಂಗಳೂರು: ಪ್ರತಿಭೆ, ಪರಿಶ್ರಮ ಹಾಗೂ ಶೈಕ್ಷಣಿಕ ಸಾಧನೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ವಿಜಯ...

ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಬಿಜೆಪಿ ವತಿಯಿಂದ ಸ್ವಚ್ಛತಾ ಕಾರ್ಯ

ಬೆಂಗಳೂರು: ನಗರದ ಮೈಸೂರು ಬ್ಯಾಂಕ್ ವೃತ್ತದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ...

ವಿಕಸಿತ ಭಾರತ ಸಂಕಲ್ಪ ಸಮಾವೇಶ – ನಿರ್ಮಲಾ ಸೀತಾರಾಮನ್

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಯವರ ಸರ್ಕಾರವು 12...

ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಮಹತ್ವ ಹೆಚ್ಚುತ್ತಿದೆ: ರಾಜ್ಯಪಾಲ ಗೆಹ್ಲೋಟ್

ದಾವಣಗೆರೆ / Davanagere: ಜೀವನಶೈಲಿ ಸಂಬಂಧಿತ ರೋಗಗಳು, ಮಾನಸಿಕ ಒತ್ತಡ ಮತ್ತು...

ಸಂಪುಟ ಸೇರಲು ಮ್ಯಾನೇಜ್ ಮೆಂಟ್ ಕೋಟ -ಪೇಮೆಂಟ್ ಕೋಟ: BY ವಿಜಯೇಂದ್ರ

ಗ್ಯಾರಂಟಿ ಫಲಾನುಭವಿಗಳ ಸಂಖ್ಯೆ ಇಳಿಸುವ ದುಸ್ಸಾಹಸಕ್ಕೆ ಮುಂದಾದ ಕಾಂಗ್ರೆಸ್ ಸರಕಾರ: ವಿಜಯೇಂದ್ರ...

Related Articles