ಆಹಾರ ರೀಟೇಲ್ ರೆಫ್ರಿಜರೇಷನ್ ಗೆ ಹೊಸ ಆಯಾಮದ ಗುರಿ: ರಿನ್ಯಾಕ್ ಇಂಡಿಯಾ ಲಿಮಿಟೆಡ್ ಹಾಗೂ ಎಪ್ತಾ ಸಹಭಾಗಿತ್ವ

ಭಾರತದ ಆಹಾರ ರೀಟೇಲ್ ರೆಫ್ರಿಜರೇಷನ್ ಗೆ ಹೊಸ ಆಯಾಮದ ಗುರಿ: ರಿನ್ಯಾಕ್ ಇಂಡಿಯಾ ಲಿಮಿಟೆಡ್ ಹಾಗೂ ಎಪ್ತಾ ಸಹಭಾಗಿತ್ವ
ಭಾರತದ ರೆಫ್ರಿಜರೇಷನ್ ಉದ್ಯಮಕ್ಕೆ ಹೊಸ ಆಯಾಮ ನೀಡುವ ಗುರಿಯೊಂದಿಗೆ ರಿನ್ಯಾಕ್ ಇಂಡಿಯಾ ಲಿಮಿಟೆಡ್ ಇಂದು ಇಟಲಿಯ ಎಪ್ತಾ ಕಂಪನಿಯೊಂದಿಗೆ ಕಾರ್ಯತಾಂತ್ರಿಕ ಸಹಭಾಗಿತ್ವವನ್ನು ಅಧಿಕೃತವಾಗಿ ಘೋಷಿಸಿದೆ. ರೀಟೇಲ್ ಉದ್ಯಮಕ್ಕೆ ವಾಣಿಜ್ಯಿಕ ರೆಫ್ರಿಜರೇಷನ್ ಪರಿಹಾರಗಳನ್ನು ಲಭ್ಯವಾಗಿಸುವಲ್ಲಿ ಎಪ್ತಾವು ಯೂರೋಪಿನ ಮುಂಚೂಣಿ ಕಂಪನಿಯಾಗಿದ್ದು, ಹೋಟೆಲ್, ರೆಸ್ಟೋರೆಂಟ್, ಕೆಫೆ (ಹೊ.ರೆ.ಕ್ಯ), ಆಹಾರ ಹಾಗೂ ತಂಪು ಪಾನೀಯ ವಲಯಗಳಿಗೆ ಸೇವೆಗಳನ್ನು ಒದಗಿಸುವುದರಲ್ಲೂ ಅಗ್ರಶ್ರೇಣಿಯಲ್ಲಿದೆ.
ಇಲ್ಲಿನ ಶಾಂಘ್ರಿಲಾ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಸಹಭಾಗಿತ್ವದ ಕುರಿತು ಪ್ರಕಟಿಸಲಾಯಿತು. ಭಾರತದ ಶೀತಲೀಕರಣ ಪೂರೈಕೆ ಸರಪಳಿ ವ್ಯವಸ್ಥೆಯ ಉನ್ನತೀಕರಣದ ಅಗತ್ಯಗಳನ್ನು ಪೂರೈಸುವ ಗುರಿಯೊಂದಿಗೆ  ಎರಡು ಪ್ರಮುಖ ಕಂಪನಿಗಳಾದ ಭಾರತದ ರಿನ್ಯಾಕ್ ಹಾಗೂ ಇಟಲಿಯ ಎಪ್ತಾದ ಸಹಭಾಗಿತ್ವವನ್ನು ಪ್ರಕಟಿಸಿದ ಸಂದರ್ಭದಲ್ಲಿ ಉದ್ಯಮದ ಪರಿಣತರು ಹಾಗೂ ಇನ್ನಿತರ  ಹಿತಾಸಕ್ತಿದಾರರು ಉಪಸ್ಥಿತರಿದ್ದರು.
ರಿನ್ಯಾಕ್ ಇಂಡಿಯಾ ಲಿಮಿಟೆಡ್ ನ ಸಹ-ಸ್ಥಾಪಕ ಹಾಗೂ ಜಂಟಿ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಪಿ.ಸುಕುಮಾರ್ ಅವರು ಈ ಸಂದರ್ಭದಲ್ಲಿ ಮಾತನಾಡಿ, “ಈ ಸಹಭಾಗಿತ್ವದಿಂದಾಗಿ ಜಾಗತಿಕ ನಾವೀನ್ಯತೆ ಹಾಗೂ ಸ್ಥಳೀಯ ನೈಪುಣ್ಯ ಒಂದೆಡೆ ಸೇರಿದಂತಾಗಿದೆ” ಎಂದರು. ಮುಂದುವರಿದು, “ಎಪ್ಟಾದ ವಿಶ್ವದರ್ಜೆಯ ಶೀತಲೀಕರಣ ತಾಂತ್ರಿಕತೆ ಹಾಗೂ ರಿನ್ಯಾಕ್ ಕಂಪನಿಯು ಭಾರತದಾದ್ಯಂತ ಹೊಂದಿರುವ ವಿಶ್ವಾಸಾರ್ಹ ಉಪಸ್ಥಿತಿಯ ನೆರವಿನಿಂದ ನಾವು ಭಾರತದ ರೀಟೇಲ್ ಕ್ಷೇತ್ರಕ್ಕೆ ಹೆಚ್ಚು ಸ್ಮಾರ್ಟ್ ಆದ, ಅಧಿಕ ಇಂಧನ ದಕ್ಷತೆಯಿಂದ ಕೂಡಿದ ವ್ಯವಸ್ಥೆಯನ್ನು ರೂಪಿಸಲಿದ್ದೇವೆ. ಈ ನಿಟ್ಟಿನಲ್ಲಿ, ಆಕರ್ಷಕ ಪ್ರದರ್ಶಕತೆ ಹಾಗೂ ವಿಶ್ವಾಸಾರ್ಹ ಕಾರ್ಯಾಚರಣೆಗೂ ಒತ್ತು ನೀಡಲಿದ್ದೇವೆ” ಎಂದು ವಿವರಿಸಿದರು.
ಎಪ್ತಾ ರೆಫ್ರಿಜರೇಷನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಶ್ರೀ ಆಂಡ್ರಿಯಾ ಕ್ಯಾವಲೆಟ್ ಅವರು ಮಾತನಾಡಿ, “ಭಾರತವು ಪ್ರಸ್ತುತ ಬೆಳವಣಿಗೆ ಹೊಂದುತ್ತಿರುವ ಅತ್ಯಂತ ಆಸಕ್ತಿ ಮೂಡಿಸುವ ಮಾರುಕಟ್ಟೆಯಾಗಿದೆ. ರಿನ್ಯಾಕ್ ನೊಂದಿಗಿನ ಈ ಸಹಭಾಗಿತ್ವವು ಅತ್ಯಾಧುನಿಕ ಯೂರೋಪಿಯನ್ ರೆಫ್ರಿಜರೇಷನ್ ವ್ಯವಸ್ಥೆಗಳನ್ನು ಸ್ಥಳೀಯತೆಯೊಂದಿಗೆ ಅಳವಡಿಸಲು ಸಹಾಯಕವಾಗಲಿದೆ.  ನಮ್ಮ ಉತೃಷ್ಟ ಗುಣಮಟ್ಟದ ಮಾರಾಟ ನಂತರದ ಸೇವೆಗಳು (ಆಫ್ಟರ್-ಸೇಲ್ಸ್ ಸಪೋರ್ಟ್) ರೀಟೇಲ್ ಉದ್ಯಮಿಗಳು ಹಾಗೂ ಗ್ರಾಹಕರು ಇಬ್ಬರಿಗೂ ಅನುಕೂಲ ಉಂಟುಮಾಡಲಿವೆ” ಎಂದು ಅಭಿಪ್ರಾಯಪಟ್ಟರು.

ಭಾರತದ ಶೀತಲೀಕರಣ ಪೂರೈಕೆ (ಕೋಲ್ಡ್  ಚೈನ್) ವ್ಯವಸ್ಥೆಯ ಬಲವರ್ಧನೆ:
ಭಾರತದ ರೀಟೇಲ್ ಮತ್ತು ಆರ್.ಟಿ.ಇ. (ರೆಡಿ-ಟು-ಈಟ್) ವಲಯಗಳಿಗೆ ಅತ್ಯಂತ ನಿರ್ಣಾಯಕವಾದ ಸಂದರ್ಭದಲ್ಲಿ ಈ ಸಹಭಾಗಿತ್ವವು ಏರ್ಪಟ್ಟಿದೆ. ದೇಶದಲ್ಲಿ 2024ರಲ್ಲಿ 5.75 ಶತಕೋಟಿ ಡಾಲರ್ (ರೂ 49,609 ಕೋಟಿ ಇದ್ದ ಆರ್.ಟಿ.ಇ. ಮಾರುಕಟ್ಟೆ ವಹಿವಾಟು 2033ರ ವೇಳೆಗೆ 11.7 ಶತಕೋಟಿ ಡಾಲರ್ (ರೂ 1,00,912 ಕೋಟಿ) ತಲುಪುವ ಅಂದಾಜಿದೆ. ಹೀಗಾಗಿ, ಸಹಜವಾಗಿಯೇ ವಿಶ್ವಾಸಾರ್ಹವಾದ, ದಕ್ಷತೆಯಿಂದ ಕೂಡಿದ ಹಾಗೂ ನೋಡಲು ಒಪ್ಪಓರಣವೆನ್ನಿಸುವ ರೆಫ್ರಿಜರೇಷನ್ ಪರಿಹಾರಗಳಿಗೆ ಬೇಡಿಕೆ ತೀವ್ರವಾಗಿ ಹೆಚ್ಚುತ್ತಿದೆ.

ರಿನ್ಯಾಕ್ ಮತ್ತು ಎಪ್ತಾ ಕಂಪನಿಗಳು ಇಂಧನ ದಕ್ಷತೆಯ, ಅಧಿಕ ಗೋಚರತೆಯ (ಹೈ ವಿಸಿಬಿಲಿಟಿ) ಹಲವು ನಮೂನೆಯ ಪ್ಲಗ್-ಇನ್ ಕೂಲರ್ ಗಳ ಮೂಲಕ ಈ ಅಗತ್ಯಗಳನ್ನು ಪೂರೈಸಲು ಮುಂದಾಗಿದ್ದು, ಬೆಂಗಳೂರಿನಲ್ಲಿ ಹೊಸದಾಗಿ ಆರಂಭಿಸಲಾಗಿರುವ ರಿನ್ಯಾಕ್ ಎಕ್ಸ್ ಪೀರಿಯನ್ಸ್ ಸೆಂಟರ್ ನಲ್ಲಿ ಇವುಗಳನ್ನು ಪ್ರದರ್ಶಿಸಲಾಗಿದೆ.

ಕಂಪನಿಯ ಇತರ ಉತ್ಪನ್ನಗಳು:
-ಎಪ್ತಾ ಪ್ರೀಮಿಯಂ ವಿಸಿಬಿಲಿಟಿ ಕೂಲರ್ ಗಳು: ರಾಕ್, ಕ್ರಿಸ್ಟಲ್, ಗ್ಲ್ಯಾಡ್, ಒಪೇರಾ, ಆರ್ಮೊನಿಯಾ, ಡಿಲೈಟ್ ಮತ್ತು ಮೆಲೊಡಿ ಸೀರೀಸ್
-ರಿನ್ಯಾಕ್  ಯುನಿಟ್ ಗಳು: ಪ್ರಿಸರ್ವಾ ಮತ್ತು ಸಫೈರ್ ಶ್ರೇಣಿಗಳು

ಆಧುನಿಕ ಸೂಪರ್ ಮಾರ್ಕೆಟ್ ಗಳು, ಕನ್ವೀನಿಯನ್ಸ್ ಸ್ಟೋರ್ ಗಳು, ಹೊ.ರೆ.ಕ್ಯ.ಗಳು (ಹೋಟೆಲ್, ರೆಸ್ಟೊರೆಂಟ್, ಕೆಫೆ)ಗಳ ಅಗತ್ಯಗಳಿಗೆ ತಕ್ಕಂತೆ ಇವನ್ನು ರೂಪಿಸಲಾಗಿದೆ. ಕಾರ್ಯಾಚರಣೆ, ಕಣ್ಸೆಳೆಯುವ ಸೊಬಗು ಹಾಗೂ ಸುಸ್ಥಿರತೆಯಿಂದ ಗಮನ ಸೆಳೆಯಲಿರುವ ಈ ಉತ್ಪನ್ನಗಳಿಗೆ ದೇಶಾದ್ಯಂತ ಇರುವ ರಿನ್ಯಾಕ್ ಜಾಲವು ಸೇವಾ ಬೆಂಬಲಗಳನ್ನು ಒದಗಿಸಲಿದೆ.

Hot this week

ವಿಧಾನಪರಿಷತ್ ಸಭಾಪತಿಗಳಾಗಿ ಸಲೀಂ ಅಹ್ಮದ್ ಆಯ್ಕೆ

ಬೆಂಗಳೂರು: ವಿಧಾನ ಪರಿಷತ್‍ನ(Legislative Council) ನೂತನ ಸಭಾಪತಿಗಳಾಗಿ ಸಲೀಂ ಅಹ್ಮದ್(Saleem Ahamed)...

ಮುಂದಿನ ದಿನಗಳಲ್ಲಿ ವಿಧಾನಸಭೆ ಕಾರ್ಯಕಲಾಪವನ್ನು ಕಾಗದ ರಹಿತ ಮಾಡಲಾಗುವುದು: ಜಿ.ಎಸ್.ಪಾಟೀಲ

ಬೆಂಗಳೂರು: ಆದಷ್ಟು ಬೇಗ ವಿಧಾನಸಭೆಯ ಕಾರ್ಯಕಲಾಪವನ್ನು(Proceeding/Activites) ಕಾಗದ ರಹಿತವನ್ನಾಗಿ ಮಾಡಲು ಇ-ಸಂವಿಧಾನ...

ವಿಧಾನಸಭೆ ಸಭಾಧ್ಯಕ್ಷರಾಗಿ ಅವಿರೋಧವಾಗಿ ಗುರುಪಾದಗೌಡ ಸಂಗನಗೌಡ ಪಾಟೀಲ ಆಯ್ಕೆ

ಬೆಂಗಳೂರು: ಇಂದು ಬೆಳಿಗ್ಗೆ ವಿಧಾನಸಭೆಯಲ್ಲಿ ಜರುಗಿನ ಸಭಾಧ್ಯಕ್ಷರ ಚುನಾವಣೆಯಲ್ಲಿ ರೋಣ ವಿಧಾನಸಭಾ...

ಭಾರತ್ ಜೋಡೋ ಯುವ ಸಂಘ’ಕ್ಕೆ ಆಕರ್ಷಕ ಲೋಗೋ ವಿನ್ಯಾಸ ಸ್ಪರ್ಧೆ: ಸಾರ್ವಜನಿಕರು, ಕಲಾವಿದರಿಂದ ಅರ್ಜಿ ಆಹ್ವಾನ

ಬೆಂಗಳೂರು : ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು...

Topics

ವಿಧಾನಪರಿಷತ್ ಸಭಾಪತಿಗಳಾಗಿ ಸಲೀಂ ಅಹ್ಮದ್ ಆಯ್ಕೆ

ಬೆಂಗಳೂರು: ವಿಧಾನ ಪರಿಷತ್‍ನ(Legislative Council) ನೂತನ ಸಭಾಪತಿಗಳಾಗಿ ಸಲೀಂ ಅಹ್ಮದ್(Saleem Ahamed)...

ಮುಂದಿನ ದಿನಗಳಲ್ಲಿ ವಿಧಾನಸಭೆ ಕಾರ್ಯಕಲಾಪವನ್ನು ಕಾಗದ ರಹಿತ ಮಾಡಲಾಗುವುದು: ಜಿ.ಎಸ್.ಪಾಟೀಲ

ಬೆಂಗಳೂರು: ಆದಷ್ಟು ಬೇಗ ವಿಧಾನಸಭೆಯ ಕಾರ್ಯಕಲಾಪವನ್ನು(Proceeding/Activites) ಕಾಗದ ರಹಿತವನ್ನಾಗಿ ಮಾಡಲು ಇ-ಸಂವಿಧಾನ...

ವಿಧಾನಸಭೆ ಸಭಾಧ್ಯಕ್ಷರಾಗಿ ಅವಿರೋಧವಾಗಿ ಗುರುಪಾದಗೌಡ ಸಂಗನಗೌಡ ಪಾಟೀಲ ಆಯ್ಕೆ

ಬೆಂಗಳೂರು: ಇಂದು ಬೆಳಿಗ್ಗೆ ವಿಧಾನಸಭೆಯಲ್ಲಿ ಜರುಗಿನ ಸಭಾಧ್ಯಕ್ಷರ ಚುನಾವಣೆಯಲ್ಲಿ ರೋಣ ವಿಧಾನಸಭಾ...

ಕರ್ನಾಟಕದ ಇಬ್ಬರು ಅಧಿಕಾರಿಗಳಿಗೆ ‘ರಾಷ್ಟ್ರಪತಿಗಳ ಅಗ್ನಿಶಾಮಕ ಶ್ಲಾಘನೀಯ ಸೇವಾ ಪದಕ’ ಗೌರವ

ಬೆಂಗಳೂರು: 2026ನೇ ಸಾಲಿನ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಪ್ರತಿಷ್ಠಿತ “ರಾಷ್ಟ್ರಪತಿಗಳ ಅಗ್ನಿಶಾಮಕ ಸೇವಾ...

ರಾಜ್ಯದ ಜನರ ಅಭಿವೃದ್ಧಿಗೆ ಟೀಮ್ ಕರ್ನಾಟಕವಾಗಿ ಕೆಲಸ ಮಾಡೋಣ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕರೆ

224 ಶಾಸಕರೂ ನನಗೆ ಒಂದೇ, ವಿರೋಧ ಪಕ್ಷದವರನ್ನು ವಿಶ್ವಾಸಕ್ಕೆ ಪಡೆದು ಕೆಲಸ...

ತಂತ್ರಜ್ಞಾನ ಎಷ್ಟೇ ಬೆಳೆದರು ರಕ್ತ ತಯಾರಿಸಲು ಸಾಧ್ಯವಿಲ್ಲ – ನ್ಯಾಯಮೂರ್ತಿ ಎಸ್.ಜಿ. ಪಂಡಿತ್

ದಿವಂಗತ ನಿರ್ಮಲಾ ಬಾಳಿಗಾ ನೆನಪಿನಲ್ಲಿ ರಕ್ತದಾನ ಶಿಬಿರ ಸಂಪನ್ನಬೆಂಗಳೂರು: ರಕ್ತದಾನವನ್ನು(Blood Donation) "ಮಹಾದಾನ"...

Related Articles