Bengaluru : ದಿನಾಂಕ:26ರ ಬೆಳಿಗ್ಗೆ 09:52 ಗಂಟೆಯ ಸಮಯದಲ್ಲಿ ಸಾರ್ವಜನಿಕರೊಬ್ಬರು ಯಶವಂತಪುರ ಪೊಲೀಸ್ ಠಾಣೆ (Yeshwanthpur Police Station) ವ್ಯಾಪ್ತಿಯ ಎಂ.ಎಸ್ ರಾಮಯ್ಯ ಕಾಲೇಜಿನ ಗೇಟ್ (MS Ramaiah Gatge) ನಂಬರ್-2ರ ಸಮೀಪ ಕಾಣೆಯಾಗಿದ್ದ ಬಾಲಕನೊಬ್ಬ ಪತ್ತೆಯಾಗಿರುವುದಾಗಿ ‘ನಮ್ಮ 112’ ತುರ್ತು ಸಹಾಯವಾಣಿಗೆ ಕರೆ ಮಾಡಿ ಮಾಹಿತಿಯನ್ನು ನೀಡಿರುತ್ತಾರೆ.
ಕೂಡಲೇ ಕಾರ್ಯಪ್ರವೃತ್ತರಾದ ‘ನಮ್ಮ-112’ ಸಿಬ್ಬಂದಿ ಸದಾಶಿವನಗರ ಪೊಲೀಸ್ ಠಾಣೆಯ ಹೊಯ್ಸಳ-13 ರಲ್ಲಿ ಕರ್ತವ್ಯದಲ್ಲಿದ್ದ ಂSI ನರಸಿಂಹಮೂರ್ತಿ ಮತ್ತು ಂಊಅ ನವೀನ್ ಕುಮಾರ್ ರವರಿಗೆ ಮಾಹಿತಿಯನ್ನು ರವಾನಿಸಲಾಗಿದ್ದು, ಪೊಲೀಸ್ ಅಧಿಕಾರಿ/ಸಿಬ್ಬಂದಿಯವರು ಕೇವಲ 14 ನಿಮಿಷದಲ್ಲಿ ಸ್ಥಳಕ್ಕೆ ಬಂದು, ಬಾಲಕನ ಕುರಿತು ಅಗತ್ಯ ಮಾಹಿತಿಯನ್ನು ಸಂಗ್ರಹಿಸಲಾಗಿ, ಬಾಲಕನ ಹೆಸರು ತೇಜಸ್ 8ವರ್ಷ ಎಂದು ತಿಳಿದುಬಂದಿದ್ದು, ಈತ ತಪ್ಪಿಸಿಕೊಂಡು ಬಂದಿರುವುದಾಗಿ ತಿಳಿದು ಬಂದಿರುತ್ತದೆ. ಬಾಲಕನ ತಾಯಿ ಬಾಲಕನನ್ನು ಹುಡುಕಿಕೊಂಡು ಮತ್ತಿಕೆರೆಯ ಕಡೆಗೆ ಹೋಗಿರುವುದಾಗಿ ಸಾರ್ವಜನಿಕರಿಂದ ತಿಳಿದು ಬಂದಿದ್ದು, ಪೊಲೀಸರು ಬಾಲಕನ ತಾಯಿಯನ್ನು ಪತ್ತೆಮಾಡಿ, ಬಾಲಕನನ್ನು ಸುರಕ್ಷಿತವಾಗಿ ತಾಯಿಗೆೆ ಒಪ್ಪಿಸಲಾಯಿತು.
ಈ ಘಟನೆ ಮಕ್ಕಳ ಸುರಕ್ಷತೆಯಲ್ಲಿ ತ್ವರಿತ ಪ್ರತಿಕ್ರಿಯೆ, ಎಚ್ಚರಿಕೆ ಮತ್ತು ಸಮನ್ವಯದ ಮಹತ್ವವನ್ನು ಸ್ಪಷ್ಟಪಡಿಸುತ್ತದೆ. ಬೆಂಗಳೂರು ನಗರ ಪೊಲೀಸ್ ಇಲಾಖೆಯ ತಕ್ಷಣದ ಮಧ್ಯಪ್ರವೇಶವು ಆತಂಕಕಾರಿ ಪರಿಸ್ಥಿತಿಯನನು ತಪ್ಪಿಸಿ, ಮಗುವಿನ ಸುರಕ್ಷಿತ ಮರಳುವಿಕೆಯನ್ನು ಖಚಿತಪಡಿಸಿತು. ಇದರಿಂದ ತುರ್ತು ಪ್ರತಿಕ್ರಿಯೆ ಸೇವೆಗಳ ಮೇಲಿನ ಸಾರ್ವಜನಿಕ ವಿಶ್ವಾಸ ಮತ್ತುಷ್ಟು ಬಲಗೊಂಡಿದೆ.

