‘ಕರ್ನಾಟಕ ಸಾಹಿತ್ಯ ಅಕಾಡೆಮಿ’, ಮತ್ತು ‘ಸೌಹಾರ್ದ ಕರ್ನಾಟಕ’ಗಳಿಂದ ಜಂಟಿಯಾಗಿ ಮೇ 30-31, 2026 ರಂದು ಬೆಂಗಳೂರಿನ ಕಬ್ಬನ್ ಪಾರ್ಕಿನೊಳಗಿರುವ (Cubbon Park) ಸಚಿವಾಲಯ ನೌಕರರ ಕ್ಲಬ್ ಸಭಾಂಗಣದಲ್ಲಿ ‘ಜನಮುಖಿ ಸಾಹಿತ್ಯ ; (Janamukhi Sahithya) ಯುವ ಬರಹಗಾರರು’ ರಾಜ್ಯಮಟ್ಟದ ಕಾರ್ಯಾಗಾರವನ್ನು (State Level Workshop) ಹಮ್ಮಿಕೊಳ್ಳಲಾಗಿದೆ.
ಕಾರ್ಯಾಗಾರದ ಉದ್ಘಾಟನೆಯನ್ನು ನಾಡೋಜ ಬರಗೂರು ರಾಮಚಂದಪ್ಪ ಮಾಡಲಿದ್ದು, ಅತಿಥಿಗಳಾಗಿ ಸಾಹಿತಿ ಸಂಧ್ಯಾರಾಣಿ, ಕರಿಯಪ್ಪ.ಎನ್. ರಿಜಿಸ್ಟಾರ್, ಕರ್ನಾಟಕ ಸಾಹಿತ್ಯ ಅಕಾಡೆಮಿ, ಸುಮಾ ಸತೀಶ್ ಸದಸ್ಯ ಸಂಚಾಲಕರು, ಕರ್ನಾಟಕ ಸಾಹಿತ್ಯ ಅಕಾಡೆಮಿ, ಮಾವಳ್ಳಿ ಶಂಕರ್, ಸಂಚಾಲಕರು, ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ವಾದ), ಡಾ. ಎಸ್.ವೈ.ಗುರುಶಾಂತ್, ಸಂಯೋಜಕರು, ಸೌಹಾರ್ದ ಕರ್ನಾಟಕ ಇವರು ಭಾಗವಹಿಸಲಿದ್ದಾರೆ.


